ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸುವಂತೆ ಎಬಿವಿಪಿ ಆಗ್ರಹ

ಹುಳಿಯಾರು ಪಟ್ಟಣದಲ್ಲಿ ಒಂದು ಡಿಜಿಟಲ್ ಲೈಬ್ರರಿಯನ್ನು ತೆರೆದು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಹೆಚ್.ಆರ್.ಗುರುಪ್ರಸಾದ್ ಒತ್ತಾಯಿಸಿದರು. ಎಬಿವಿಪಿ ಸದಸ್ಯರೊಂದಿಗೆ ಹುಳಿಯಾರು ಪಟ್ಟಣ ಪಂಚಾಯಿತಿಗೆ ತೆರಳಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಹುಳಿಯಾರಿನಲ್ಲಿ ಸುಮಾರು 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹುಳಿಯಾರು ತಾಲ್ಲೂಕ್ ಆಗುವ ನಿರೀಕ್ಷೆಯಿದ್ದರೂ ಸಹ ಹುಳಿಯಾರು ನಗರದಲ್ಲಿ ಒಂದು ಡಿಜಿಟಲ್ ಲೈಬ್ರರಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕೆಲವು ಗ್ರಾಮಗಳಲ್ಲಿಯೇ ಈಗಾಗಲೇ ಡಿಜಿಟಲ್ ಗ್ರಂಥಾಲಯಗಳಿದ್ದರೂ ಸಹ ಪಟ್ಟಣವಾಗಿರುವ ಹುಳಿಯಾರಿನಲ್ಲಿ ಒಂದು ಸುವ್ಯವಸ್ಥಿತ ಗ್ರಂಥಾಲಯ ಇಲ್ಲದಿರುವುದು ವಿದ್ಯಾರ್ಥಿಗಳ ಕಲಿಕೆ ಸಾಮರ್ಥ್ಯವನ್ನು ಕುಸಿಯುವಂತೆ ಮಾಡಿದೆ.ಶೀಘ್ರವೇ ಹುಳಿಯಾರಿನಲ್ಲಿ ಒಂದು ಡಿಜಿಟಲ್ ಲೈಬ್ರರಿಯನ್ನು ತೆರೆದು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪರವಾಗಿ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಎಚ್. ಆರ್ ಗುರುಪ್ರಸಾದ್ ಅವರೊಂದಿಗೆ ಎಬಿವಿಪಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಮುಖರಾದ ದೀಪಕ್ ಕೆಂಕೆರೆ, ಕಾರ್ಯಕರ್ತರಾದ ಶಾಂತ್ ಕುಮಾರ್, ಸಿದ್

ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿದ ವಿದ್ಯಾವಾರಿಧಿ ಶಾಲೆ

ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಪರಿಸರ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು .                     ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.   ಶಾಲೆಯ ಆಡಳಿತಾಧಿಕಾರಿಯಾದ ಅಮಿತ್ ಅವರು ಪರಿಸರ ದಿನದ ಬಗ್ಗೆ ಮಾತನಾಡುತ್ತಾ ಮೊದಲಿಗೆ ಭೂಮಿತಾಯಿಯನ್ನು ಸ್ಮರಿಸುತ್ತಾ ಮಾಲಿನ್ಯಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳನ್ನು ಸೂಚಿಸಿ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ಗಿಡಗಳನ್ನು ನೆಡುವುದರ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಒಂದು ಅರ್ಥಪೂರ್ಣ ಬದುಕನ ನಿರ್ಮಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು . ಮುಂದೆ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಈಗಿನಿಂದಲೇ ಅರಿತು ಅದರಿಂದ ಆಗುವ ದುಷ್ಪರಿಣಾಮಗಳನ್ನು ಪರಿಹರಿಸುವ ಮಾರ್ಗಗಳನ್ನು ತಿಳಿದು ನಾವೆಲ್ಲರೂ ಜಾಗೃತರಾಗಿ ಮುಂದಿನ ಪೀಳಿಗೆಗೆ ಸಮೃದ್ಧ ಪರಿಸರವನ್ನು ನೀಡಬೇಕು ಎಂದು ಮಕ್ಕಳಿಗೆ ಹಿತವಚನಗಳನ್ನ ನೀಡಿ ಪರಿಸರ ಪ್ರಜ್ಞೆಯನ್ನು ಮೂಡಿಸಿದರು.  ಶಾಲೆಯ ವಿಜ್ಞಾನ ಶಿಕ್ಷಕರಾದ ಪದ್ಮಾಕರ್ ಮಾತನಾಡಿ ಇಂದಿನ ಉಷ್ಣಾಂಶ ಏರಳಿತ  ಪರಿಸರ ಮಾಲಿನ್ಯದ  ಹೆಚ್ಚಳದ ಬಗ್ಗೆ ತಿಳಿಸುತ್ತಾ  ಪ್ರಕೃತಿಯಲ್ಲಿ ಆಗುತ್ತಿರುವ ಅವಮಾನ ವೈ ಪರಿತ್ಯ ರೋಗರುಜನೆಗಳ ಸಂಖ್ಯೆ ಹೆಚ್ಚಳದಿಂದಾಗಿ ಬದುಕಲು ದುಸ್ತರವಾಗಿದೆ ಹಾಗಾಗಿ ಮುಂ