ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಾಯಿ ಎದೆಹಾಲು ಎಲ್ಲಕಿಂತ ಅಮೂಲ್ಯ : ವೈದ್ಯೆ ಚಂದನ

ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಶಿಶು ಮತ್ತು ಮಕ್ಕಳ ಕಲ್ಯಾಭಿವೃದ್ದಿ ಅಧಿಕಾರಿ ಅನೀಸ್ ಕೈಸರ್ ಉದ್ಘಾಟಿಸಿದರು.ಆಯುಶ್ ವೈದ್ಯೆ ಚಂದನ ,ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ,ಎಸಿಡಿಪಿಓ ಪರಮೇಶ್ವರಪ್ಪ,ಗ್ರಾ.ಪಂ.ಯ ಲಕ್ಷ್ಮಿದೇವಿ,ಕಲ್ಪನಾಬಾಯಿ ,ಶಿಕ್ಷಕಿ ಸವಿತಾ,ಲಕ್ಷ್ಮಮ್ಮ ಇದ್ದಾರೆ. ಇಂದಿನ ಆಧುನಿಕ ಜಗತ್ತಿನಲ್ಲಿ ಜನರು ಕೆಲವೊಂದು ವಸ್ತುಗಳ ಮಹತ್ವವನ್ನು ಮರೆತಿದ್ದು,ಅವುಗಳಿಂದ ಆಗುವಂತ ಉತ್ತಮ ಪ್ರಯೋಜನಗಳನ್ನು ತಿಳಿಯದೇ ಹೋಗಿದ್ದಾರೆ.ಅಲ್ಲದೆ ಹಿಂದಿನ ಅನೇಕ ಮಹಿಳೆಯರಿಗೆ ತಾಯಿತನ ಹಾಗೂ ತಾಯಿ ಎದೆಹಾಲಿನ ಅಮೂಲ್ಯತೆ ತಿಳಿದೇ ಹೋಗಿರುವ ಸನ್ನಿವೇಶದಲ್ಲಿ ಎದೆ ಹಾಲೇ ಅಮೂಲ್ಯವೆಂದು ಆಯುಶ್ ವೈದ್ಯೆ ಚಂದನ ತಿಳಿಸಿದರು. ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಿ ಎದೆಹಾಲಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾಯಿಯ ಎದೆಹಾಲು ಅಮೃತಕ್ಕೆ ಸಮನಾದುದು ಎದೆಹಾಲಿನಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಬೇಕಾಗುವಂತಹ ಅನೇಕ ಅಂಶಗಳು ಇದ್ದು,ಮಗು ದಷ್ಟ-ಪುಷ್ಟವಾಗಿ ಬೆಳೆಯಲು ಸಹಕಾರಿಯಾಗಿರುತ್ತದೆ.ಪ್ರತಿಯೊಬ್ಬ ವೈದ್ಯರು ಸಹ ಎದೆಹಾಲಿನ ಮಹತ್ವವನ್ನು ಒತ್ತಿ ಹೇಳುತ್ತಾ

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದ ಶ್ರೀಶಿವಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆದ ಮಾಸಿಕ ಕನ್ನಡ ಕವಿಕಾವ್ಯ ಪರಿಚಯ ಮಾಲೆ-1 ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಜಿ.ಎಸ್.ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.ಮಲ್ಲೇಶಣ್ಣ,ಹಿರಿಯ ಚಂದ್ರಣ್ಣ,ವಕೀಲ ಜಿ.ಎಸ್.ಚನ್ನಬಸಪ್ಪ, ಜಿ.ಎಂ.ನೀಲಕಂಠಯ್ಯ,ನಾರಾಯಣಪ್ಪ ಇದ್ದಾರೆ.   ಹುಳಿಯಾರು ಹೋಬಳಿ ಗಾಣಧಾಳು ಸಮೀಪದ ವಿಶ್ವಭಾರತಿ ಪ್ರೌಢಶಾಲೆಯಲ್ಲಿ ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ ಉಚಿತ ಸೈಕಲ್ ವಿತರಿಸಿದರು.ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ,ಗ್ರಾ.ಪಂ.ಮಾಜಿ ಸದಸ್ಯ ಜಯದೇವಪ್ಪ,ಮುಖ್ಯ ಶಿಕ್ಷಕ ನಾಗರಾಜು,ಗ್ರಾ.ಪಂ.ಸದಸ್ಯ ಗುಂಡಯ್ಯ ಗ್ರಾಮಸ್ಥರಾದ ನೀಲಕಂಠಯ್ಯ ಹಾಗೂ ಇತರರು .