ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಲೆಗಳಲ್ಲಿ ಕಲಿಕೆಯ ಜೊತೆಗೆ ಕೃಷಿ ಚಟುವಟಿಕೆಗೂ ಒತ್ತುನೀಡಬೇಕು

         ಶಾಲೆಗಳಲ್ಲಿ ಕಲಿಕೆಯ ಜೊತೆಗೆ ಕೃಷಿ ಚಟುವಟಿಕೆಗೂ ಒತ್ತುನೀಡಬೇಕು.ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಿಕ್ಷಕರುಗಳು ಶಾಲಾ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕೈತೋಟ ಮಾಡಿದಲ್ಲಿ ತರಕಾರಿ ಬೆಳದಲ್ಲಿ ಬಿಸಿಯೂಟಕ್ಕು ಬಳಸಿಕೊಳ್ಳಬಹುದಾಗಿದೆ ಎಂದು ಕೆಂಕೆರೆ ಗ್ರಾಮಪಂಚಾಯ್ತಿ ಸದಸ್ಯ ಲೋಕೇಶ್ ಸಲಹೆ ನೀಡಿದರು.        ಹುಳಿಯಾರು ಸಮೀಪದ ಕುರಿಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶಾಲಾ ಕೈತೋಟದ ರಚನೆಗೆ ಗಿಡ ನೆಡುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.         ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹುಳಿಯಾರು ಮೇಲ್ವಿಚಾರಕ ಸಂತೋಷ್ ಮಾತನಾಡಿ ಇಲ್ಲಿ ಅಡುಗೆಗೆ ಬೇಕಾದ ಬಗೆಬಗೆಯ ತರಕಾರಿ ಬೆಳೆಯಲಾಗುತ್ತದೆ. ಕೈತೋಟದಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತದಲ್ಲದೆ ಕೃಷಿ ಕಲಿಕೆಗೂ ಪ್ರೇರಣೆ ನೀಡಿದಂತಾಗುತ್ತದೆ ಎಂದರು.       ಶಾಲೆಯ  ಆವರಣದಲ್ಲಿ   ಗಿಡ ನಾಟಿ ಮಾಡಲು ಸಂಸ್ಥೆಯ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.    ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ಬಾಲಚಂದ್ರ,ಮುಖ್ಯ ಶಿಕ್ಷಕ ದೇವರಾಜು, ಸೇವಾ ಪ್ರತಿನಿಧಿಗಳಾದ ಗೌರಮ್ಮ,ಪುಷ್ಪಾವತಿ, ಒಕ್ಕೂಟದ ಅಧ್ಯಕ್ಷ ಬಸವರಾಜ್ ಮೊದಲಾದವರಿದ್ದರು.

ನಮ್ಮೂರ ಹಾಸ್ಟಲ್ ಸ್ಥಳಾಂತರ ಕೂಡದು.

ಪ್ರಾರಂಭವಾಗುವವರೆಗೂ ಸ್ಥಳ ಬಿಟ್ಟು ಕದಲೆವು;ಹೈಸ್ಕೂಲ್ ವಿದ್ಯಾರ್ಥಿಗಳು ಭಾಗಿ ಹಾಸ್ಟಲ್ ಸ್ಥಳಾಂತರ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕೆ ಎಸಗುವ ವಂಚನೆ -------------- ಹುಳಿಯಾರು : ಅಧಿಕಾರಿಗಳು ಕುಂಟುನೆಪ ಒಡ್ಡಿ ಸ್ಥಳಾಂತರ ಮಾಡಲು ಹೊರಟಿರುವ ನಮ್ಮೂರಿನ ಹಾಸ್ಟಲ್ ಸ್ಥಳಾಂತರಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.ಅಲ್ಲದೆ ಈಗ ಹಾಸ್ಟಲ್ ಸೇರಲು ಸಿದ್ಧವಾಗಿರುವ ನಮ್ಮೂರ ಸುತ್ತಮುತ್ತಲ ಗ್ರಾಮಗಳ ೪೫ ಮಕ್ಕಳಿಗೆ ಇಲ್ಲಿ ಹಾಸ್ಟಲ್ ತೆರೆಸಿ ಅವಕಾಶ ಕಲ್ಪಿಸಿಯೇ ತೀರುವೆವು.ಅಲ್ಲಿಯವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಸ್ಥಳಿಯ ಪಂಚಾಯ್ತಿ ಪ್ರತಿನಿಧಿಗಳು, ಗ್ರಾಮಸ್ಥರು,ಸಂಘಸಂಸ್ಥೆಗಳ ಪ್ರತಿನಿಧಿಗಳು,ಫೋಷಕರುಗಳು ಆಹೋರಾತ್ರಿ ಧರಣಿ ಪ್ರಾರಂಭಿಸಿರುವ ಘಟನೆ ಹುಳಿಯಾರು ಹೋಬಳಿಯ ಹೊಯ್ಸಳ ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರನಕಣಿವೆಯಲ್ಲಿ ಜರುಗಿದೆ. ಹುಳಿಯಾರು ಹೋಬಳಿ ಬೋರನಕಣಿವೆಯಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಸ್ಥಳಾಂತರ ವಿರೋಧಿಸಿ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಸೋಮವಾರದಿಂದ ಅಹೋರಾತ್ರಿ ಧರಣಿ ಪ್ರಾರಂಭವಾಗಿದ್ದು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಪೋಷಕರುಗಳು ಅವರೊಂದಿಗೆ ಸ್ಥಳಿಯ ಪಂಚಾಯ್ತಿ ಪ್ರತಿನಿಧಿಗಳು ಧರಣಿ ಕೂತಿದ್ದಾರೆ. ಬೋರನಕಣಿವೆಯಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್

ಹುಳಿಯಾರು ಹೋಬಳಿಯಲ್ಲಿ ನೀರಿನ ಘಟಕಗಳ ನಿರ್ವಹಣೆ ಕೊರತೆ

ಕೆಟ್ಟುಹೋಗಿ ವಾರವಾದರೂ ದುರಸ್ತಿಯಾಗದ ಶುದ್ದ ಕುಡಿಯುವ ನೀರಿನ ಘಟಕಗಳು ವರದಿ:ಡಿ.ಆರ್..ನರೇಂದ್ರಬಾಬು ಹುಳಿಯಾರು: ಹುಳಿಯಾರು ಸೇರಿದಂತೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳ ನಿರ್ವಹಣೆ ಸಂಪೂರ್ಣ ವಿಫಲವಾಗಿದ್ದು ಇವರುಗಳ ನಿರ್ಲಕ್ಷ್ಯದಿಂದ ಅನೇಕ ಘಟಕಗಳು ಶೀಘ್ರ ದುರಸ್ತಿ ಕಾಣದೆ ಸ್ಥಗಿತಗೊಳ್ಳುತ್ತಿರುವುದರಿಂದ ಜನ ಫ್ಲೋರೈಡ್ ಯುಕ್ತ ನೀರನ್ನೆ ಕುಡಿಯುವ ಪರಿಸ್ಥಿತಿ ತಲೆದೋರಿದೆ.         ಹುಳಿಯಾರಿನಲ್ಲಿ ಸ್ಥಾಪಿಸಲಾಗಿರುವ ಘಟಕಗಳಂತೂ ಮೂರು ದಿನ ಸರಿಯಿದ್ದರೆ ನಾಲ್ಕುದಿನ ಕೆಟ್ಟು ನಿಲ್ಲುತ್ತದೆ.ಹುಳಿಯಾರೊಂದೆ ಅಲ್ಲದೆ ಎಲ್ಲಾಹಳ್ಳಿಗಳಲ್ಲೂ ಇದೇ ಸಮಸ್ಯೆಯಾಗಿದ್ದು ಈ ಬಗ್ಗೆ ಇಲಾಖಾ ಅಧಿಕಾರಿಗಳು ಗಮನ ಮಾಡುವ ಅಗತ್ಯವಿದೆ.           ಸಮೀಪದ ತಿರುಮಲಾಪುರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತು ವಾರವಾದರೂ ನಿರ್ವಹಣೆ ಮಾಡುವವರ ನಿರ್ಲಕ್ಷ್ಯದಿಂದ ದುರಸ್ತಿಯಾಗದೆ ಗ್ರಾಮಸ್ಥರು ಕುಡಿಯುವ ನೀರಿಗೆ ಯಥಾಪ್ರಕಾರ ಟ್ಯಾಂಕ್ ನೀರಿಗೆ ಮೊರೆಹೋಗುವಂತಾಗಿದೆ. ತಿರುಮಲಾಪುರದಲ್ಲಿನ ನೀರಿನ ಘಟಕ ಸ್ಥಗಿತಗೊಂಡಿದ್ದು ನೀರಿಗಾಗಿ ಖಾಲಿಕೊಡ ಹಿಡಿದುನಿಂತಿರುವ ಮಹಿಳೆಯರು.           ಈ ಗ್ರಾಮದಲ್ಲಿ ಕಳೆದ ಹದಿನೈದು ದಿನದ ಹಿಂದಷ್ಟೆ ಶುದ್ಧನೀರಿನ ಘಟಕ ಸ್ಥಾಪಿಸಲಾಗಿದ್ದು ತರಾತುರಿಯಲ್ಲಿ ಚಾಲನೆ ಮಾಡಲಾಯಿತು.ಕೇವಲ ಎರಡೇ