ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು: ಹಳ್ಳಿ ಪ್ರತಿಭೆ ರೇಖಾ ಬಸವರಾಜುರವರಿಗೆ ಡಾಕ್ಟರೇಟ್

ಹುಳಿಯಾರು: ಹಳ್ಳಿ ಪ್ರತಿಭೆ ರೇಖಾ ಬಸವರಾಜುರವರಿಗೆ ಡಾಕ್ಟರೇಟ್ --------------------------------- ಹುಳಿಯಾರು ಸಮೀಪದ ಕೆಂಕೆರೆಯ ಬರದಲೆಪಾಳ್ಯದ ಬಿ.ರೇಖಾ ದೂರಸಂಪರ್ಕ ಸಾಧನದ ಕುರಿತು ನಡೆಸಿದ ಸುದೀರ್ಘ ಸಂಶೋಧನೆಗೆ ಡಾಕ್ಟರೇಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಜರುಗಿದ ಜೈನ್ ವಿಶ್ವವಿದ್ಯಾಲಯದ ೮ನೇ ಘಟಿಕೋತ್ಸವದಲ್ಲಿ ಶ್ರೀಮತಿ ರೇಖಾರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸೆಕ್ಯೂರ್ ಸ್ಕೇಲೆಬಲ್ ಅಂಡ್ ಇಂಟರ್‌ಒಪರೇಬಲ್ ಇಂಟರ್-ಡೊಮೇನ್ ರೌಟಿಂಗ್ ಇನ್ ಹೆಟೆರೋಜಿನಸ್ ಮ್ಯಾನೆಟ್ಸ್ ಎಂಬ ಪ್ರೌಢ ಸಂಶೋಧನಾ ಪ್ರಬಂಧವನ್ನು ಡಾ. ಅಶೋಕ್‌ರವರ ಮಾರ್ಗದರ್ಶನದಲ್ಲಿ ಡಾ. ರೇಖಾ ಮಂಡಿಸಿದ್ದರು. ಇವರು ಪ್ರಸ್ತುತ ಬೆಂಗಳೂರಿನ ಎಸ್.ಜೆ.ಬಿ.ಐ.ಟಿ. ತಂತ್ರಜ್ಞಾನ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸಹ-ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರತಿಭೆ ಡಾ. ರೇಖಾ.ಬಿ ಬರದಲೇಪಾಳ್ಯದ ಬಸವರಾಜು ಮತ್ತು ಚನ್ನಬಸಮ್ಮ ದಂಪತಿಗಳ ಹಿರಿಯ ಮಗಳಾಗಿದ್ದು ಹುಟ್ಟೂರು ಕೆಂಕೆರೆಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ೫ ನೇ ತರಗತಿಯವರೆಗೆ ಓದಿದ್ದಾರೆ. ನಂತರ ತುಮಕೂರಿನ ನವೋದಯ ವಿದ್ಯಾಲಯದಲ್ಲಿ, ದಾವಣಗೆರೆಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್, ಬೆಂಗಳೂರಿನ ಬಿಎಮ್‌ಎಸ್‌ನಲ್ಲಿ ಎಮ್.ಟೆಕ್. ಮುಗಿಸಿದ್ದಾರೆ. ಇದೀಗ ಜೈನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಪ್ರತಿಭಾವಂತರ ಈ ಕುಟುಂಬದಲ್ಲ

ಅಕ್ರಮ ಇಟ್ಟಿಗೆ ಕಾರ್ಖಾನೆಗಳ ತನಿಖೆಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ತಂಡದ ಆಗಮನ

ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಬಗ್ಗೆ ದೂರು ------------------------------------------------- ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳ ತನಿಖೆಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ತಂಡದ ಆಗಮನ -------------------------------------------- ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳಿಂದ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿದ್ದು ಈ ಬಗ್ಗೆ ಗ್ರಾಮಸ್ಥರ ಪರವಾಗಿ ಲಂಚಮುಕ್ತ ನಿರ್ಮಾಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಾಲ್ಕು ಅಧಿಕಾರಿಗಳ ತಂಡ ರಚನೆಯಾಗಿದ್ದು ಸೋಮವಾರ ಸೆ.3 ರಿಂದ ಮೂರು ದಿನಗಳ ಕಾಲ ಅಧಿಕಾರಿಗಳ ತಂಡ ದೂರುದಾರರ ಸಮ್ಮುಖದಲ್ಲಿ ಸ್ಥಳ ತನಿಖೆ ನಡೆಸಲಿದೆ.         ಅಕ್ರಮ ಗಣಿಗಾರಿಕೆ ಹಾಗೂ ಅದಕ್ಕೂ ಮೀರಿ ಇಟ್ಟಿಗೆ ಕಾರ್ಖಾನೆಗಳು ಕೆರೆಯನ್ನು ಮಣ್ಣಿಗಾಗಿ ಬಗೆಯುತ್ತಿರುವ ಬಗ್ಗೆ ಧ್ವನಿ ಎತ್ತಿರುವ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ತನಿಖಾತಂಡ ಆಗಮಿಸಲಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪತ್ರ ದೂರಿನಲ್ಲಿ ಏನಿದೆ: ಹುಳಿಯಾರು ಹೋಬಳಿಯ