ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟದ ಹೂ ಮತ್ತು ಹಣ್ಣಿನ ವ್ಯಾಪಾರಿಯಾಗಿದ್ದ ದಿವಂಗತ ಮೂರ್ತಣ್ಣನವರ(ನರಸಿಂಹಮೂರ್ತಿಯವರ)ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ರಕ್ತದಾನ ಮತ್ತು ಅನ್ನದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ನಮನ ಸಲ್ಲಿಸಲಾಯಿತು. ದಾನ ಧರ್ಮದ ಮೂಲಕ ಎಲ್ಲರಿಗೂ ಸಹ ಆತ್ಮೀಯರಾಗಿ, ಎಲ್ಲರನ್ನೂ ತುಂಬಾ ಗೌರವದಿಂದ ಕಾಣುತ್ತಿದ್ದ ಮೂರ್ತಣ್ಣನವರು ಆತ್ಮಕ್ಕೆ ಸದ್ಗತಿಯನ್ನು ಕೋರಿ ನಮಿಸಲಾಯಿತು. ರಕ್ತದಾನ ಮಾಡಿದಂತಹ ಎಲ್ಲಾ ಹದಿನೈದು ಮಂದಿ ರಕ್ತದಾನಿಗಳಿಗೆ ಮತ್ತು ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ॥ಮಧುರಂಜನ್ ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ,ಮತಿಘಟ್ಟ ಪಿಡಿಓ ಸಿದ್ಧರಾಮಯ್ಯ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಲಯದ ಸಿಬ್ಬಂದಿ ವರ್ಗದವರಿಗೆ *ಮೂರ್ತಣ್ಣ ಹೂ ಮತ್ತು ಹಣ್ಣಿನ ಅಂಗಡಿ* ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು.
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070