ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೈತ ಉತ್ಪಾದಕ ಕಂಪನಿಯಲ್ಲಿ ರೈತರು ಸಕ್ರಿಯವಾಗಿ ತೊಡಗಿಸಿಕೊಂಡರೆ ಅಧಿಕ ಲಾಭ ಪಡೆಯಲು ಸಾಧ್ಯ: ಶೀನಪ್ಪ

ಹುಳಿಯಾರು : ರೈತರಿಂದ ರೈತರಿಗಾಗಿ, ರೈತರಿಗೋಸ್ಕರ, ರೈತರೇ ಮಾಲೀಕರಾಗಿರುವ ಕಂಪನಿ ರೈತ ಉತ್ಪಾದಕ ಕಂಪನಿಯಾಗಿದ್ದು ಇದರ ಏಳಿಗೆಯನ್ನು ರೈತರೇ ಮಾಡಬೇಕಿದ್ದು, ರೈತರು ಉತ್ಪಾದಕ ಕಂಪನಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಕಂಪನಿ ಉತ್ತಮವಾಗಿ ಬೆಳೆದು ಅಧಿಕ ಲಾಭ ಪಡೆಯಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಅಭಿಪ್ರಾಯ ಪಟ್ಟರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಜರುಗಿದ ಚಿಕ್ಕನಾಯಕನಹಳ್ಳಿ ರೈತ ಉತ್ಪಾದಕ ಕಂಪನಿಯ 4ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.                    ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಯಳನಾಡು ಅರಸೀಕೆರೆ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿಯವರು   ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ಕಾರದಿಂದ ಸ್ಥಾಪಿಸಿದವಾದ ಈ ರೈತ ಉತ್ಪಾದಕ ಕಂಪನಿಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಇದಕ್ಕೆ ಧರ್ಮಸ್ಥಳದ ಕೊಡುಗೆ ಅಪಾರವಾಗಿದ್ದು ಇದರಿಂದ ಹಳ್ಳಿಗಳ ಉದ್ದಾರ  ಸಾಕಾರಗೊಳ್ಳಲಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇಂತಹ ಕಾರ್ಯಕ್ರ...

ಹುಳಿಯಾರಿನ ವಿದ್ಯಾವಾರಿಧಿಯಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.                      ಸ್ಕೂಲ್‌ನ ಕಾರ್ಯದರ್ಶಿ ಕವಿತಾಕಿರಣ್ ಅವರು ಮಾತನಾಡಿ ಭಾರತವು ಶ್ರೇಷ್ಠ ಸಂಸ್ಕೃತಿಗಳ ಆಗರವಾಗಿದ್ದು ಅವುಗಳಲ್ಲಿ ಹಬ್ಬಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ.ಇಂತಹ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಸಹ ಒಂದು. ಈ ಹಬ್ಬದ ಉದ್ದೇಶ ಸರ್ವ ಜನರು ಸುಖ ಸಂತೋಷ ಸಮೃದ್ಧಿಯಿಂದ ಬದುಕಬೇಕು ಮತ್ತು ನಮ್ಮೊಳಗಿರುವ ರಾಗ ದ್ವೇಷಗಳನ್ನು ಕಿತ್ತೊಗೆದು ಉತ್ತಮ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಬೇಕು ಎಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ ಎಂದರು.                     ಪುರಾಣ ಕಾಲದಲ್ಲಿ ಭೂಮಿಯ ಮೇಲೆ ದುಷ್ಟರ ಉಪಟಳ ಹೆಚ್ಚಾದಾಗ ಅವರ ಸಂಹಾರಕ್ಕಾಗಿ ವಿಷ್ಣು ವಿವಿಧ ಅವತಾರಗಳಲ್ಲಿ ಅವತರಿಸಿ ಜಗತ್ತಮನ್ನು ಕಾಪಾಡಿದ ವಿಷಯ ಎಲ್ಲರಿಗೂ ತಿಳಿದಿದೆ. ಕೃಷ್ಣನ ಅವತಾರದಲ್ಲಿ ಭೂಮಿ ಮೇಲೆ ಅವತರಿಸಿದಂತಹ ವಿಷ್ಣು ಕಂಸನಂತಹ ರಾಕ್ಷಸನನ್ನು ಕೊಂದು ನಂದಗೋಕುಲವನ್ನು ಕಾಪಾಡಿದ ದೇವರಾಗಿ ನಮ್ಮ ನಿಮ್ಮೆಲ್ಲರ ಮುಂದೆ ನಿಲ್ಲುತ್ತಾನೆ ಎಂದು ವಿವರಿಸಿದರು.                 ಶಾಲೆಯ...