ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು ಠಾಣೆಯಲ್ಲಿ ರಂಜಾನ್ ಶಾಂತಿಸಭೆ

ಹುಳಿಯಾರು ಠಾಣೆಯಲ್ಲಿ ರಂಜಾನ್ ಶಾಂತಿಸಭೆ- ಶಾಂತಿಯುತವಾಗಿ ಹಬ್ಬ ಆಚರಿಸಲು ಪಿಎಸ್ಐ ಧರ್ಮಾಂಜಿ ಕರೆ ---------------------------- ಹುಳಿಯಾರು: ಮುಂಬರುವ ರಂಜಾನ್ ಹಾಗೂ ಯುಗಾದಿ ಹಬ್ಬದ ನಿಮಿತ್ತ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪಿಎಸೈ  ಧರ್ಮಾಂಜಿ ಹಾಗೂ ಪಿಎಸ್ಐ  ಜಗದೀಶ್ ರವರು ಸಮುದಾಯಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಸಾರ್ವಜನಿಕರ ಶಾಂತಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ  ಪಿಎಸೈ ಧರ್ಮಾಂಜಿ ಹಬ್ಬದ ಆಚರಣೆಗಳಲ್ಲಿ ಯಾರೊಬ್ಬರಿಗೂ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು, ರಂಜಾನ್ ಹಬ್ಬದ ಅಚರಣೆಗೆ ಎಲ್ಲರೂ ಸಹಕರಿಸಿ  ಸೌಹಾರ್ದಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು.ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಎಲ್ಲರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ಸಂಚಾರಕ್ಕೆ ಅಡಚಣೆ ಯಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.                 ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಬ್ಬದ ಸಮಯದಲ್ಲಿ ಹಿಂದೂ ಮುಸ್ಲಿಂ ಬಾಂಧವರಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಪರಸ್ಪರ ಸೌಹಾರ್ದತೆಯಿಂದ ಆಚರಣೆ ಮಾಡುತ್ತ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.ಹಬ್ಬಗಳಲ್ಲಿ ಮೆರವಣಿಗೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಠಾಣೆಯ ಗಮನಕ್ಕ...

ಹುಳಿಯಾರು ಪಟ್ಟಣ ಪಂಚಾಯಿತಿಯ 2025- 26 ನೇ ಸಾಲಿನ ಆಯವ್ಯಯ ಮಂಡನೆ : ₹40,48,515 ರೂಪಾಯಿಗಳ ಉಳಿತಾಯ ಬಜೆಟ್

ಹುಳಿಯಾರು ಪಟ್ಟಣ ಪಂಚಾಯಿತಿಯ 2025- 26 ನೇ ಸಾಲಿನ ಆಯವ್ಯಯ ಮಂಡನೆ : ₹40,48,515 ರೂಪಾಯಿಗಳ ಉಳಿತಾಯ ಬಜೆಟ್ ಕಳೆದ ಸಾಲಿನ ಆಯವ್ಯಯದ ಆಗು-ಹೋಗುಗಳ ಬಗ್ಗೆ ಮಾಹಿತಿ ನೀಡಲು ಒತ್ತಾಯ... ಸಭೆಗೆ ಗೈರಾದ ಪಟ್ಟಣ ಪಂಚಾಯಿತಿ ಇಂಜಿನಿಯರ್ ಮೇಲೆ ದೂರುಗಳ ಸುರಿಮಳೆ ಪಟ್ಟಣ ಪಂಚಾಯಿತಿಯ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ 200 ಲಕ್ಷ ರೂ ಮೀಸಲು. ಆಯವ್ಯಯದ ಪ್ರಮುಖ ಅಂಕಿ ಅಂಶ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳ ಬಗ್ಗೆ  ವಿವರಣೆ ನೀಡಿದ ಅಧ್ಯಕ್ಷೆ ಶ್ರೀಮತಿ ರತ್ನಮ್ಮ ------------------------------ ✍️ ನರೇಂದ್ರಬಾಬು-ಹುಳಿಯಾರು       9448760070 ------------------------------- ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿಯ 2025- 26 ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ಶ್ರೀಮತಿ ರತ್ನಮ್ಮ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು 33,08,62,000 ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ 41,00,75,729 ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು 40,48,515 ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು.                                                 ಮಂಗಳ...

ಪ್ರತಿ ಚೀಲಕ್ಕೂ ಹೆಚ್ಚುವರಿ ರಾಗಿ ವಸೂಲಿ ಮಾಡುವಂತಿಲ್ಲ- ಹಮಾಲಿ ಖರ್ಚು ಎಂದು ಹಣ ಪಡೆಯುವಂತಿಲ್ಲ : ರೈತ ಸಂಘ ತಾಕೀತು

ಪ್ರತಿ ಚೀಲಕ್ಕೂ ಹೆಚ್ಚುವರಿ ರಾಗಿ ವಸೂಲಿ ಮಾಡುವಂತಿಲ್ಲ- ಹಮಾಲಿ ಖರ್ಚು ಎಂದು ಹಣ ಪಡೆಯುವಂತಿಲ್ಲ : ರೈತ ಸಂಘ ತಾಕೀತು ಹುಳಿಯಾರು : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿ ಚೀಲಕ್ಕೂ ಸರ್ಕಾರ ನಿಗದಿಪಡಿಸಿದ ತೂಕದಷಟು ಮಾತ್ರವೇ ರಾಗಿ ತೂಕ ಮಾಡಬೇಕೆಂದು ಹಾಗೂ ಖರೀದಿ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳಿಗೂ ಅವಕಾಶ ಕೊಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು. ಹುಳಿಯಾರು ರಾಗಿಖರೀದಿ ಕೇಂದ್ರಕ್ಕೆ ಆಗಮಿಸಿದ ಸುಮಾರು 25ಕ್ಕೂ ಹೆಚ್ಚಿನ  ರೈತ ಸಂಘದ ಪದಾಧಿಕಾರಿಗಳು ಖರೀದಿ ಕೇಂದ್ರದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದರು. ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆಗೆದು ರಾಗಿ ಖರೀದಿಸುತ್ತಿರುವುದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ಖರೀದಿಸಲು ಮುಂದಾಗುತ್ತಿರುವುದು ಸರಿಯಷ್ಟೇ. ಪ್ರತಿ ಗೋಣಿಚೀಲದಲ್ಲಿ 50 ಕೆಜಿ ರಾಗಿ ಹಾಗೂ ಚೀಲದ ತೂಕ 650 ಗ್ರಾಂ ಸೇರಿ ಅಷ್ಟು ರಾಗಿಯನ್ನು ಮಾತ್ರವೇ ಹೆಚ್ಚುವರಿ ಪಡೆಯಲು  ಪ್ರಕಟಣೆಯಲ್ಲಿ ತಿಳಿಸಿದ್ದರೂ ಸಹ ಇಲ್ಲಿನ ಸಿಬ್ಬಂದಿ 52 ಕೆಜಿ ರಾಗಿ ತರಬೇಕು ಎಂದು ರೈತರಿಗೆ ತಾಕೀತು ಮಾಡುತ್ತಿದ್ದು ಹೆಚ್ಚುವರಿಯಾಗಿ ವಸೂಲಿ ಮಾಡಲು ಹೊರಟಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ...

ಪ್ರತಿ ಚೀಲಕ್ಕೂ ಹೆಚ್ಚುವರಿ ರಾಗಿ ವಸೂಲಿ ಮಾಡುವಂತಿಲ್ಲ- ಹಮಾಲಿ ಖರ್ಚು ಎಂದು ಹಣ ಪಡೆಯುವಂತಿಲ್ಲ : ರೈತ ಸಂಘ ತಾಕೀತು

ಪ್ರತಿ ಚೀಲಕ್ಕೂ ಹೆಚ್ಚುವರಿ ರಾಗಿ ವಸೂಲಿ ಮಾಡುವಂತಿಲ್ಲ- ಹಮಾಲಿ ಖರ್ಚು ಎಂದು ಹಣ ಪಡೆಯುವಂತಿಲ್ಲ : ರೈತ ಸಂಘ ತಾಕೀತು ಹುಳಿಯಾರು : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿ ಚೀಲಕ್ಕೂ ಸರ್ಕಾರ ನಿಗದಿಪಡಿಸಿದ ತೂಕದಷಟು ಮಾತ್ರವೇ ರಾಗಿ ತೂಕ ಮಾಡಬೇಕೆಂದು ಹಾಗೂ ಖರೀದಿ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳಿಗೂ ಅವಕಾಶ ಕೊಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು. ಹುಳಿಯಾರು ರಾಗಿಖರೀದಿ ಕೇಂದ್ರಕ್ಕೆ ಆಗಮಿಸಿದ ಸುಮಾರು 25ಕ್ಕೂ ಹೆಚ್ಚಿನ  ರೈತ ಸಂಘದ ಪದಾಧಿಕಾರಿಗಳು ಖರೀದಿ ಕೇಂದ್ರದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದರು. ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆಗೆದು ರಾಗಿ ಖರೀದಿಸುತ್ತಿರುವುದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ಖರೀದಿಸಲು ಮುಂದಾಗುತ್ತಿರುವುದು ಸರಿಯಷ್ಟೇ. ಪ್ರತಿ ಗೋಣಿಚೀಲದಲ್ಲಿ 50 ಕೆಜಿ ರಾಗಿ ಹಾಗೂ ಚೀಲದ ತೂಕ 650 ಗ್ರಾಂ ಸೇರಿ ರಾಗಿಯನ್ನು ಮಾತ್ರವೇ ಹೆಚ್ಚುವರಿ ಪಡೆಯಲು  ಪ್ರಕಟಣೆಯಲ್ಲಿ ತಿಳಿಸಿದ್ದರೂ ಸಹ ಇಲ್ಲಿನ ಸಿಬ್ಬಂದಿ 52 ಕೆಜಿ ರಾಗಿ ತರಬೇಕು ಎಂದು ರೈತರಿಗೆ ತಾಕೀತು ಮಾಡುತ್ತಿದ್ದು ಹೆಚ್ಚುವರಿಗಾಗಿ ವಸೂಲಿ ಮಾಡಲು ಹೊರಟಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಅಲ್ಲದೆ ಚೀಲವೊಂದ...