ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಹಿಳೆಯರು ಮೈಕ್ರೋ ಫೈನಾನ್ಸ್‌ನಿಂದ ದೂರವಿದ್ದು, ಬ್ಯಾಂಕ್ ಸಾಲ ಬಳಸಬೇಕು: ಗಂಗೇಶ್ ಗುಂಜನ್

ಇತ್ತೀಚಿನ ಪೋಸ್ಟ್‌ಗಳು

ಕಣ್ಣೀರ ಕಥೆ : ಸೌಲಭ್ಯಗಳ ಕೊರತೆಯಿಂದ ನಲುಗಿದ 70ರ ಹರೆಯದ ಕರಿಯಮ್ಮ ಅಜ್ಜಿ

  ಕಣ್ಣೀರ ಕಥೆ: ಸೌಲಭ್ಯಗಳ ಕೊರತೆಯಿಂದ ನಲುಗಿದ 70ರ ಹರೆಯದ ಕರಿಯಮ್ಮ ಅಜ್ಜಿ ------------------------ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮನಹಳ್ಳಿ ಎಸ್.ಸಿ. ಕಾಲೋನಿಯ ಕರಿಯಮ್ಮ ಅಜ್ಜಿ (70) ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಅಜ್ಜಿಯ ಕಣ್ಣೀರಿನ ಕಥೆ, ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.  ಅಧಿಕಾರಿಗಳ ನಿರ್ಲಕ್ಷ್ಯ : ಈ ವೃದ್ಧಾಪ್ಯದಲ್ಲಿ ಅಜ್ಜಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳು ದೊರೆತಿಲ್ಲ ಎನ್ನಲಾಗಿದ್ದು ಮತದಾನದ ಹಕ್ಕು ಮಾತ್ರ ದೊರೆತಿದ್ದು, ಜೀವನಕ್ಕೆ ಅಗತ್ಯವಾದ ಇತರೆ ಎಲ್ಲಾ ಹಕ್ಕುಗಳನ್ನು ಪಡೆಯಲು ಅಧಿಕಾರಿಗಳು ನಿರ್ಲಕ್ಷ್ಯದಿಂದ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಸತಿ, ಶುದ್ಧ ಕುಡಿಯುವ ನೀರು, ವಯೋವೃದ್ಧ ಪಿಂಚಣಿ ಅಥವಾ ವಿಧವಾ ವೇತನ, ಶೌಚಾಲಯ ಮತ್ತು ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ನಾರಿಶಕ್ತಿ ಮುಂತಾದ ಪ್ರಮುಖ ಯೋಜನೆಗಳಿಂದ ಈ ಅಜ್ಜಿ ವಂಚಿತರಾಗಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ದಾಖಲೆಗಳ ಕೊರತೆಯೇ ಸಮಸ್ಯೆಯೇ : ಅಜ್ಜಿಯ ಬಳಿ ಗುರುತಿನ ಚೀಟಿಗಳಾದ ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್‌ಗಳೂ ಇಲ್ಲ. ಅವರ ಗಂಡ ನಿಧನರಾದ ನಂತರ ರೇಷನ್ ಕಾರ್ಡ್ ರದ್ದುಗೊಂಡಿದೆ. ಮಕ್ಕಳು ಇಲ್ಲದ ಅಜ್ಜಿ, ನೆರೆಹೊರೆಯವರ ಸಹಾಯದಿಂದ ದಿನ ದೂ...

ಹುಳಿಯಾರಿನಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ

**ರಕ್ಷಾಬಂಧನ: ಮಾನಸಿಕ ಶಾಂತಿಯ ಸಂಕಲ್ಪ** ಹುಳಿಯಾರು : ಇಲ್ಲಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಬಿ.ಕೆ. ಗೀತಕ್ಕನವರ ನೇತೃತ್ವದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು . ಈ ಪವಿತ್ರ ಹಬ್ಬದ ಪ್ರಯುಕ್ತ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ರಾಖಿ ಕಟ್ಟಿ ಶುಭ ಕೋರಲಾಯಿತು. ಈ ವೇಳೆ ಆಶ್ರಮದ ಸಂಚಾಲಕರಾದ ಬ್ರಹ್ಮಕುಮಾರಿ ಗೀತಕ್ಕ ಮಾತನಾಡಿ, ರಕ್ಷಾಬಂಧನ ಕೇವಲ ಸಹೋದರ ಸಂಬಂಧದ ಸಂಕೇತವಲ್ಲ, ಇದು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಗಳ ದ್ಯೋತಕ ಎಂದರು.   ಹಬ್ಬದ ಆಚರಣೆಯ ಭಾಗವಾಗಿ ಪಟ್ಟಣ ಪಂಚಾಯಿತಿ, ಎಸ್.ಬಿ.ಐ. ಬ್ಯಾಂಕ್, ಶಿರಾ ಟೌನ್ ಕೋ ಆಪರೇಟಿವ್ ಬ್ಯಾಂಕ್, ಕೆನರಾ ಬ್ಯಾಂಕ್, ಮೈಸೂರು ಬ್ಯಾಂಕ್ ಹಾಗೂ ಧರ್ಮಸ್ಥಳ ಮಂಜುನಾಥ ಕಚೇರಿ ಸೇರಿದಂತೆ ಹಲವೆಡೆಗೆ ತೆರಳಿ ಎಲ್ಲರಿಗೂ ರಾಖಿ ಕಟ್ಟಿ, ಸಿಹಿ ಹಂಚಿ ಶುಭ ಕೋರುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಬಿ.ಕೆ. ಗೀತಕ್ಕನವರು ಮಾತನಾಡುತ್ತಾ , ರಕ್ಷಾ ಬಂಧನ ಕೇವಲ ಒಂದು ದಾರ ಕಟ್ಟುವ ಹಬ್ಬವಲ್ಲ. ಇದು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಮತ್ತು ಪರಸ್ಪರ ರಕ್ಷಣೆಯ ಸಂಕಲ್ಪದ ಪ್ರತೀಕವಾಗಿದೆ. ರಕ್ಷಾ ಬಂಧನದ ಮೂಲ ಉದ್ದೇಶ ಪರಮಾತ್ಮನ ಶ್ರೀರಕ್ಷೆಯು ಸದಾ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ. ಈ ದಿನ ನಾವು ಸಮಾಜದ ಶಾಂತಿ ಮತ್ತು ಸೌಹಾರ್ದತೆಗಾಗಿ ಒಗ್ಗಟ್ಟಿನಿಂದ ದುಡಿಯುವ ಸಂಕ...

ಸಾಮಾಜಿಕ ಭದ್ರತಾ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿ: ಚೈತನ್ಯ ಕಂಚಿಬೈಲು

ಸಾಮಾಜಿಕ ಭದ್ರತಾ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿ: ಚೈತನ್ಯ ಕಂಚಿಬೈಲು ----------------------- ಹುಳಿಯಾರು : ಕೇಂದ್ರ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಜನಧನ ಖಾತೆ ಯೋಜನೆ ಮುಂತಾದವುಗಳು ಆರ್ಥಿಕ ಸೇರ್ಪಡೆಗಾಗುವ ದಿಕ್ಕಿನಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಎಲ್ಲ ನಾಗರಿಕರು ಬ್ಯಾಂಕುಗಳ ಮೂಲಕ ಇದರಲ್ಲಿ ನೊಂದಾಯಿಸಿಕೊಳ್ಳಬೇಕೆಂದು ತುಮಕೂರಿನ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ಚೈತನ್ಯ ಕಂಚಿಬೈಲು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಕಂದಿಕೆರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸಾದರಹಳ್ಳಿ ಗ್ರಾಮದಲ್ಲಿ ನಡೆದ ಜನ ಸುರಕ್ಷಾ ಶಿಬಿರದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದರು. ಈ ಯೋಜನೆಗಳು ಬಡವ, ಬಲ್ಲಿದ, ಶ್ರಿಮಂತ ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಲಾಭದಾಯಕವಾಗಿವೆ ಎಂದು ಅವರು ಹೇಳಿದರು. ಶಿಬಿರದ ಮುಖ್ಯ ಪ್ರಾಯೋಜಕರಾದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಂದಿಕೆರೆ ಶಾಖೆಯ ವ್ಯವಸ್ಥಾಪಕ ಆರ್. ತಿಪ್ಪೇಸ್ವಾಮಿ ಮಾತನಾಡುತ್ತ, ರೈತರು ಹಾಗೂ ಸ್ವಸಹಾಯ/ಸ್ತ್ರೀ ಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡಿದಲ್ಲಿ ಅವರು ಬೆಳೆಯುವುದರ ಜೊತೆಗೆ ಬ್ಯಾಂಕುಗಳು ಹಾಗೂ ದೇಶದ ಆರ್ಥಿಕತೆಗೂ ಸಹ ಬೆಂಬಲ ದೊರೆಯುತ್ತದೆ ಎಂದರು. ...

ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಸಂಭ್ರಮ

ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಸಂಭ್ರಮ ------------- ಭಾರತವು ದೇವಾನುದೇವತೆಗಳು ಅವತರಿಸಿದ ಏಕೈಕ ಕರ್ಮಭೂಮಿ ------------- ಹುಳಿಯಾರು : ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಜಿಲ್ಲಾ ಸಹ ಕಾರ್ಯವಾಹಿಯಾದ ಭರತ್ ಅವರು ರಕ್ಷಾ ಬಂಧನದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ ಕಲಿಯುಗದಲ್ಲಿ ಸಂಘಟನೆಯೇ ದೈವೀ ಶಕ್ತಿಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಭಗವದ್ಗೀತೆ ಜೀವನದ ಮಾರ್ಗದರ್ಶಿ : ಭಾರತವನ್ನು ಕರ್ಮಭೂಮಿ ಎಂದು ಬಣ್ಣಿಸಿದ ಅವರು ವಿಶ್ವದ ಇತರ ರಾಷ್ಟ್ರಗಳನ್ನು ಭೋಗಭೂಮಿ ಎಂದು ಕರೆಯಲಾಗುತ್ತದೆ. ಆದರೆ ದೇವಾನುದೇವತೆಗಳು ಅವತರಿಸಿದ ಏಕೈಕ ಪುಣ್ಯಭೂಮಿ ಭಾರತವಾಗಿದೆ ಎಂದರು. ಭಗವದ್ಗೀತೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಜೀವನವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಭಗವದ್ಗೀತೆ ಯುಸರ್ ಮ್ಯಾನುಯಲ್ ಇದ್ದಂತೆ. ನಾವು ಯಾವುದೇ ಉಪಕರಣ ತಂದಾಗ ಅದರ ಬಳಕೆಯ ವಿಧಾನವನ್ನು ತಿಳಿಸುವಂತೆ ಮನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿ ಭಗವದ್ಗೀತೆ ಇದೆ ಎಂದರು. ಯದ್ಭಾವಂ ತದ್ಭವತಿ ಅಂದರೆ ನಾವು ಹೇಗೆ ನೋಡುತ್ತೇವೋ ಹಾಗೆಯೇ ಪ್ರಪಂಚವು ಕಾಣುತ್ತದೆ ಎಂದ ಅವರು ರಕ್ಷಾ ಬಂಧನವನ್ನು ಕೇವಲ ಒಂದು ಸಿಹಿ ಬಂಧನವಾಗಿ ನೋಡದೆ ಅದರ ಆಳವಾದ ಅರ್ಥವನ್ನು ಅರಿತುಕೊಳ್ಳುವಂತೆ ...

ಬೋರನಕಣಿವೆ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಶಿಬಿರ ಆಯೋಜನೆ

ಕೇಂದ್ರ ಸರ್ಕಾರದ ಯೋಜನೆಗಳ ಅರಿವಿಗೆ ಜನ ಸುರಕ್ಷಾ ಶಿಬಿರ: ಕುಮಾರಸ್ವಾಮಿ --------------- ಬೋರನಕಣಿವೆ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಶಿಬಿರ ಆಯೋಜನೆ -------------- ಹುಳಿಯಾರು : ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ದೇಶದ ಮೂಲೆ ಮೂಲೆಗಳಲ್ಲಿರುವ ಜನರಿಗೆ ಅರಿವು ಮೂಡಿಸುವುದು ಜನ ಸುರಕ್ಷಾ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ. ಕುಮಾರಸ್ವಾಮಿ ತಿಳಿಸಿದರು. ಅವರು ಬೋರನಕಣಿವೆಯ ಅಂಗನವಾಡಿ ಮತ್ತು ಹೊಯ್ಸಳಕಟ್ಟೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ಸಹಯೋಗದಲ್ಲಿ ಬೋರನಕಣಿವೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜನ ಸುರಕ್ಷಾ ಶಿಬಿರದಲ್ಲಿ ಮಾತನಾಡಿದರು. ಜನಧನ ಖಾತೆ ತೆರೆಯಲು ಪ್ರೋತ್ಸಾಹ : ಹೊಯ್ಸಳಕಟ್ಟೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ತಿರುಮಲೇಶ್ ಮಾತನಾಡಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಜನಧನ ಖಾತೆಯನ್ನು ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಹಣದ ಅವಶ್ಯಕತೆ ಇಲ್ಲದೆ ತೆರೆಯಬಹುದಾಗಿದೆ ಎಂದರು. ಜನರು ಕೇವಲ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಒಂದು ಫೋಟೋ ನೀಡಿ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆದು ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. ವಿಮಾ ಮತ್ತು ಪಿಂಚಣಿ ಯೋಜನೆಗಳ ಸದ್ಬಳಕೆಗೆ ಸಲಹೆ ; ಅಂಗನವಾಡಿ ಸೂಪರ್‌ವೈಸರ್ ಆರ್. ಲಕ್ಷ್ಮಮ್ಮ ಮಾತನಾಡಿ ಪ್ರಧಾನಮಂತ್ರಿ ಸುರಕ್ಷಾ, ಜೀವನ ಜ್ಯ...

ಚಿಕ್ಕನಾಯಕನಹಳ್ಳಿಯಲ್ಲಿ ವಿಶ್ವ ಜನಸಂಖ್ಯಾ ದಿನ ಹಾಗೂ ಡೆಂಗ್ಯೂ ವಿರೋಧಿ ಮಾಸಾಚರಣೆ

  ಚಿಕ್ಕನಾಯಕನಹಳ್ಳಿಯಲ್ಲಿ ವಿಶ್ವ ಜನಸಂಖ್ಯಾ ದಿನ ಹಾಗೂ ಡೆಂಗ್ಯೂ ವಿರೋಧಿ ಮಾಸಾಚರಣೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಅರಿವು ಕಾರ್ಯಕ್ರಮ --------------------------- ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಚಿಕ್ಕನಾಯಕನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಉಮೇಶ್ ಮಾತನಾಡಿ, ಜನಸಂಖ್ಯೆ ನಿಯಂತ್ರಣದ ಅಗತ್ಯತೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಜನಸಂಖ್ಯೆ ನಿಯಂತ್ರಣದಿಂದ ದೇಶ ಆರ್ಥಿಕವಾಗಿ ಸದೃಢವಾಗಬಹುದು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಅವರಲ್ಲಿ ಈ ಕುರಿತು ಜಾಗೃತಿ ಮೂಡಬೇಕು ಎಂದು ಹೇಳಿದರು. ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ.ವಿ. ವೆಂಕಟರಾಮಯ್ಯ ಮಾತನಾಡಿ ಪೌಷ್ಟಿಕ ಆಹಾರ ಬಳಕೆ, ರಕ್ತಹೀನತೆ ತಡೆ, ಕುಟುಂಬ ಕಲ್ಯಾಣ ಕ್ರಮಗಳು, ಬಾಲ್ಯವಿವಾಹ ತಡೆ, ಬಾಲ್ಯ ಗರ್ಭಧಾರಣೆ ಕುರಿತಾಗಿ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. 18 ವರ್ಷದೊಳಗಿನ ಹೆಣ್ಣುಮಕ್ಕಳ ಮತ್ತು 21 ವರ್ಷದೊಳಗಿನ ಗಂಡುಮಕ್ಕಳ ಮದುವೆ ತಪ್ಪು. ದೈಹಿಕ ಆಕರ್ಷಣೆಗೆ ಒಳಗಾಗದೆ, ಜಾಣತನದಿಂದ ಜೀವನ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ...