ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊನ್ನಮ್ಮಳ ಹತ್ಯೆ ಪೈಶಾಚಿಕ ಕೃತ್ಯ:ಸಚಿವ ಸುರೇಶ್ ಕುಮಾರ್

ಹೊನ್ನಮ್ಮಳ ಹತ್ಯೆ ಪೈಶಾಚಿಕ ಕೃತ್ಯ:ಸಚಿವ ಸುರೇಶ್ ಕುಮಾರ್ @ ಪ್ರಕರಣದಲ್ಲಿ ಎಎಸ್ಐ ಭಾಗಿಯಾಗಿದಲ್ಲಿ ಕೆಲಸದಿಂದ ವಜಾ @ 18 ಆರೋಪಿಗಳ ಬಂಧನ -------------------------------------------------------- ಹುಳಿಯಾರು: ಕಡೆ ಕ್ಷಣದಲ್ಲಿ ಗುಟುಕು ನೀರಿಗಾಗಿ ಮೊರೆಯಿಡುತ್ತಿದ್ದ ಹೊನ್ನಮ್ಮಳನ್ನು ಚರಂಡಿ ರಸ್ತೆಯಲ್ಲಿ ಎಳೆದಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೈ ಜುಮ್ ಎನ್ನಿಸುವ ಪೈಶಾಚಿಕ ಕೃತ್ಯವಾಗಿದ್ದು ಇದನ್ನು ಆಡಳಿತ ಎಂದೂ ಸಹಿಸುವುದಿಲ್ಲ ಎಂದು ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು. ದಲಿತ ಬಿಜೆಪಿ ನಾಯಕಿ ಹೊನ್ನಮ್ಮಳ ಹತ್ಯೆ ಸಂಬಂಧ ಭಾನುವಾರ ಗೋಪಾಲಪುರಕ್ಕೆ ಭೇಟಿ ನೀಡಿ ಘಟನೆಯ ಪ್ರತ್ಯಕ್ಷ ಸಾಕ್ಷಿ ಮೀನಾಕ್ಷಮ್ಮ ಅವರಿಂದ ಘಟನಾ ಮಾಹಿತಿ ಪಡೆದು ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊನ್ನಮ್ಮಳ ಹತ್ಯೆಯನ್ನು ಜನತೆ, ಸಮಾಜ, ಹಾಗೂ ಆಡಳಿತ ಕ್ಷಮಿಸಲಾಗದ ಘೋರ ಕೃತ್ಯವಾಗಿದ್ದು ಆಕೆಯನ್ನು ಹತ್ಯೆಗೈದವರ ಮನದಲ್ಲಿ ಎಂತಹ ರಾಕ್ಷಸ ಪ್ರವೃತ್ತಿ ಮನೆಮಾಡಿತ್ತು ಎಂದು ಊಹಿಸಲು ಅಸಾಧ್ಯ ಎಂದರು. ಲಭ್ಯ ಮಾಹಿತಿಯಂತೆ ಅಮಾನುಷವಾಗಿ ಹತ್ಯೆಯಾದ ಹೊನ್ನಮ್ಮಳ ಪ್ರಕರಣದಲ್ಲಿ ಮೇಲ್ನೋಟಕ್ಕೆ ಹಂದನಕೆರೆ ಎಎಸ್ಐಗಳು ಪ್ರಚೋದನೆ ನೀಡಿ ಅಪರಾಧದಲ್ಲಿ ಭಾಗಿಯಾಗಿರುವ ವರ್ತನೆಯಿದ್ದು ತನಿಖೆಯಲ್ಲಿ ಇವರು ಭಾಗಿಯಾಗಿರುವುದು ಸಾಬೀತಾದಲ್ಲಿ ಈಗಾಗ

ಸಾಲ ಸೌಲಭ್ಯ ಚುನಾವಣೆಗೆ ಸ್ಪಧಿ೯ಸಲು ಅಲ್ಲ: ಕೆ.ಎನ್.ರಾಜಣ್ಣ

ಸಹಕಾರ ಸಂಘದಿಂದ ಸಾಲ ನೀಡಿ ಆಥಿ೯ಕ ಸಹಕಾರ ಒದಗಿಸಿ ಕೈಕಸುಬುಗಳಿಗೆ ಉತ್ತೇಜನ ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ. ಹಾಗಾಗಿ ಸಹಕಾರ ಸಂಘದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿರುವ ಗ್ರಾಮಗಳಲ್ಲಿ ಸಾಲ ಸೌಲಭ್ಯ ನೀಡಲು ಒತ್ತು ನೀಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಿಳಿಸಿದರು. ಹುಳಿಯಾರು ಹೋಬಳಿ ದಸೂಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಏರ್ಪಡಿಸಿದ್ದ ವಿವಿಧ ಯೋಜನೆಯ ಸಾಲ ಸೌಲಭ್ಯ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿನಾಹಳ್ಳಿಯಿಂದ ಸ್ಪಧೆ೯ಇಲ್ಲ:ಮುಂದಿನ ವಿಧಾನಸಭಾ ಚುನಾವಣೆಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪಧಿ೯ಸುತ್ತಾರೆ. ಇದಕ್ಕಾಗಿ ತಾಲೂಕಿನ ಹಳ್ಳಿ ಹಳ್ಳಿ ಸುತ್ತಿ ಸಾಲ ಸೌಲಭ್ಯ ನೀಡುತ್ತಿದ್ದಾರೆ ಎಂಬ ಮಾತು ವಿರೋಧಿ ಗುಂಪು ಹುಟ್ಟು ಹಾಕುತ್ತಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ತಾವು ಯಾವುದೇ ಕಾರಣಕ್ಕೂ ಮಧುಗಿರಿ ಬಿಟ್ಟು ಬೇರೆಲ್ಲೂ ಸ್ಪಧಿ೯ಸುವುದಿಲ್ಲ. ಈ ಬಗ್ಗೆ ಅನಗತ್ಯ ಅನುಮಾನ ಬೇಡ ಎಂದು ರಾಜಣ್ಣ ಅವರು ಸ್ಫಷ್ಠಪಡಿಸಿದರು. ದಸೂಡಿ ಗ್ರಾಮ ಜಿಲ್ಲೆಯ ಗಡಿ ಗ್ರಾಮವಲ್ಲದೆ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು ಆಥಿ೯ಕ ಅಸಮತೋಲನದಿಂದ ಇಲ್ಲಿನ ಜನ ಕಷ್ಟ-ಕಾರ್ಪಣ್ಯದಿಂದ ಮೇಲೆ ಬರಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಹಕಾರ ಸಂಘದಿಂದ ಸಾಲ ನೀಡಿ ಆಥಿ೯ಕ ಸಹಕಾರ ನೀಡಿ ಕೈಕಸುಬುಗಳಿಗೆ ಉತ್ತೇಜನ ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ. ಬರುವ

ಕೊಲೆ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ : ಮಾಜಿ ಶಾಸಕ ಕೆ.ಎಸ್.ಕೆ.

ಕೊಲೆ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ : ಮಾಜಿ ಶಾಸಕ ಕೆ.ಎಸ್.ಕೆ. -------------------- ---------------------------------------- ಹೊನ್ನಮ್ಮಳ ಹತ್ಯೆಯ ಹಿಂದೆ ರಾಜಕೀಯ ಷಡ್ಯಂತ್ರವಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ಜೆಡಿಎಸ್ ಮುಖಂಡರ ಕೈವಾಡವಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಗಂಭೀರ ಆರೋಪ ಮಾಡಿದರು. ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಕಳೆದ ರಾತ್ರಿ ಬಿಜೆಪಿ ಮುಖಂಡೆ ಹೊನ್ನಮ್ಮಳ ಹತ್ಯೆ ಖಂಡಿಸಿಸುವ ಸಲುವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜಕೀಯವಾಗಿ ಹೊನ್ನಮ್ಮ ಅವರನ್ನು ಮುಗಿಸಲು ಕಳ್ಳತನದ ಹಾಗೂ ಸುಳ್ಳು ಕೇಸು ದಾಕಲಿಸುವ ಮೂಲಕ ಆಕೆಯನ್ನು ಈ ಹಿಂದೆಯೇ ಮಾನಸಿಕವಾಗಿ ಕೊಂದಿದ್ದರು. ತನನ್ನು ಹತ್ಯೆ ಮಾಡಬಹುದೆಂದು ಅನುಮಾನ ಹೊಂದಿದ್ದ ಆಕೆ ಸಿಎಂ, ರಾಜ್ಯಪಾಲ, ಐಜಿಯವರಿಗೂ ಪ್ರಾಣರಕ್ಷಣೆಗೆ ಮನವಿ ಮಾಡಿದ್ದು ಹಂದನಕೆರೆ ಪೊಲೀಸ್ ವೈಪಲ್ಯದಿಂದಾಗಿ ಹತ್ಯೆಗೆ ಒಳಗಾದಳು ಎಂದು ವಿಶ್ಲೇಷಿಸಿದ್ದಾರೆ. ಹಂದನಕೆರೆ ಪೊಲೀಸರ ಮೇಲೆ ಜೆಡಿಎಸ್ ಮುಖಂಡರ ಪ್ರಭಾವದಿಂದಲೇ ಆಕೆ ದೂರು ನೀಡಿದರೂ ಸೂಕ್ತ ರಕ್ಷಣೆ ನೀಡದಿದ್ದೇ ಘಟನೆಗೆ ಕಾರಣವಾಗಿದೆ. ಅಲ್ಲಿನ ಎಎಸ್ಐಗಳಾದ ಕೃಷ್ಣನಾಯ್ಕ ಹಾಗೂ ಗಂಗಾಧರ್ ಅವರುಗಳೇ ಪರೋಕ್ಷವಾಗಿ ಕಾರಣರಾಗಿದ್ದು ಅವರುಗಳನ್ನೇ ಆರೋಪಿಗಳಾಗಿ ದಾಖಲು ಮಾಡುವಂತೆ ಒತ್ತಾಯಿಸಿದರು. ಒಂಟಿ ಹೆಣ್ಣಿನ ಮೇಲೆ ಬರೋಬ್ಬರಿ ಇಪ್ಪತ್ತು ಮಂದಿ ಹಾರಿಬಿದ್ದು ಕಪ