ಚಿನಾಹಳ್ಳಿ ತಾಲ್ಲೂಕಿಗೆ ಹೇಮೆ:102.60 ಕೋಟಿ ಅಂದಾಜು ವೆಚ್ಚದಲ್ಲಿ 26 ಕೆರೆಗೆ ನೀರು
---------------------------------------------
ಸಚಿವರಿಂದ ಬೋರನಕಣೆವೆಗೂ ನೀರು ಹರಿಸುವ ಭರವಸೆ
-------------------------------------
ಸೋಮವಾರ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ತಲ್ಲೂಕಿನ ಕುಡಿಯುವ ನೀರಿವ ಸಮಸ್ಯೆ ಪ್ರಸ್ತಾವನೆಯಾಗಿದ್ದರ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ತಾವು ತಾಲ್ಲೂಕಿನ ಸಾಸಲು,ಪೆಮ್ಮಲದೇವರಹಳ್ಳಿ,ಶೆಟ್ಟಿಕೆರೆ ಮುಖಾಂತರ ಸಾಲು ಕೆರೆಗಳ ಮೂಲಕ ಬೋರನಕಣೆವೆ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಬಗ್ಗೆ ಪ್ರಶ್ನಿಸಿದಕ್ಕೆ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿಯವರು ನೀಡಿದ ಉತ್ತರ ಒಟ್ಟಾರೆ ತೃಪ್ತಿದಾಯಕವಾಗಿದೆ ಎಂದರು.
ನೀರಿನ ಅಲಭ್ಯತೆ ಹಾಗೂ ಕೆಲವೊಂದು ತಾಂತ್ರಿಕ ಕಾರಣದಿಂದ ಉದ್ದೇಶಿತ ಯೋಜನೆಯಲ್ಲಿ ಬೋರನಕಣಿವೆ ಕೈ ಬಿಡಲಾಗಿದ್ದು ಇದನ್ನು ಹೊರತುಪಡಿಸಿದರೆ ತಾಲ್ಲೂಕಿನ 26 ಕೆರೆಗಳಲ್ಲಿ 22 ಕೆರೆಗಳಿಗೆ ನೈಸಗಿ೯ಕ ಕಾಲುವೆ ಮುಖಾಂತರ ಹಾಗು 4 ಕೆರೆಗಳಿಗೆ ಏತ ನೀರಾವರಿ ಮುಖಾಂತರ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಬೋರನಕಣಿವೆಗೆ ನೀರು ಹರಿಸುವ ಕುರಿತಂತೆ ಹುಳಿಯಾರು ಭಾಗದಲ್ಲಿ ವಷಾ೯ತರಗಳಿಂದ ನಡೆಯುತ್ತಿರುವ ಪ್ರತಿಭಟನೆ,ವಿಧಾನಸೌಧದಲ್ಲೆ
ಈ ಕುರಿತು ಜಿಪಂ ಸದಸ್ಯೆ ಮಂಜುಳಾ ಗವಿರಂಗಯ್ಯ,ತಾಪಂ ಉಪಾಧ್ಯಕ್ಷೆ ಬೀಬಿಪಾತಿಮಾ,ಗ್ರಾಪಂ ಅಧ್ಯಕ್ಷ ಸೈ ಅನ್ಸರ್ ಅಲಿ,ತಾಪಂ ಸದಸ್ಯರಾದ ಕವಿತಾಪ್ರಕಾಶ್,ಮುಖಂಡರುಗಳಾದ ವಕೀಲ ರಮೇಶ್ ಬಾಬು,ಪ್ರಸನ್ನಕುಮಾರ್,ಅಹ್ಮದ್ ಖಾನ್,ಸೈಯದ್ ಜಲಾಲ್,ನಂದಿಹಳ್ಳಿ ಶಿವಣ್ಣ,ಡಿಶ್ ಬಾಬು ಮುಂತಾದವರು ಪತ್ರಿಕಾಹೇಳಕೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
---------------------------------------------
ಸಚಿವರಿಂದ ಬೋರನಕಣೆವೆಗೂ ನೀರು ಹರಿಸುವ ಭರವಸೆ
-------------------------------------
ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಯೋಜನೆಗಾಗಿ ಕಾವೇರಿ ನೀರಾವರಿ ನಿಗಮದಿಂದ 102.60ಕೋಟಿ ವೆಚ್ಚದಲ್ಲಿ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಸಕಾ೯ರ ಒಪ್ಪಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಯೋಜನೆ ಅನುಷ್ಠನಗೊಳಿಸುವ ಉದ್ದೇಶ ಸಕಾ೯ರದಲ್ಲಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ತಲ್ಲೂಕಿನ ಕುಡಿಯುವ ನೀರಿವ ಸಮಸ್ಯೆ ಪ್ರಸ್ತಾವನೆಯಾಗಿದ್ದರ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ತಾವು ತಾಲ್ಲೂಕಿನ ಸಾಸಲು,ಪೆಮ್ಮಲದೇವರಹಳ್ಳಿ,ಶೆಟ್ಟಿಕೆರೆ ಮುಖಾಂತರ ಸಾಲು ಕೆರೆಗಳ ಮೂಲಕ ಬೋರನಕಣೆವೆ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಬಗ್ಗೆ ಪ್ರಶ್ನಿಸಿದಕ್ಕೆ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿಯವರು ನೀಡಿದ ಉತ್ತರ ಒಟ್ಟಾರೆ ತೃಪ್ತಿದಾಯಕವಾಗಿದೆ ಎಂದರು.
ನೀರಿನ ಅಲಭ್ಯತೆ ಹಾಗೂ ಕೆಲವೊಂದು ತಾಂತ್ರಿಕ ಕಾರಣದಿಂದ ಉದ್ದೇಶಿತ ಯೋಜನೆಯಲ್ಲಿ ಬೋರನಕಣಿವೆ ಕೈ ಬಿಡಲಾಗಿದ್ದು ಇದನ್ನು ಹೊರತುಪಡಿಸಿದರೆ ತಾಲ್ಲೂಕಿನ 26 ಕೆರೆಗಳಲ್ಲಿ 22 ಕೆರೆಗಳಿಗೆ ನೈಸಗಿ೯ಕ ಕಾಲುವೆ ಮುಖಾಂತರ ಹಾಗು 4 ಕೆರೆಗಳಿಗೆ ಏತ ನೀರಾವರಿ ಮುಖಾಂತರ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಯೋಜನೆಯಿಂದ ಬೋರನಕಣಿವೆ ಕೈ ಬಿಟ್ಟಿರುವುದರಿಂದಾಗುವ ಆಗಬಹುದಾದ ಅನಾನುಕೂಲ ಹಾಗೂ ಸಾಧಕಭಾದಕಗಳ ಬಗ್ಗೆ ತಾವು ಆ ಕೂಡಲೆ ಸಚಿವರಿಗೆ ಮನವರಿಕೆ ಮಾಡಿದಲ್ಲದೆ ಉದ್ದೇಶಿತ ಯೋಜನೆಯಲ್ಲೆ ಬೋರನಕಣಿವೆ ಜಲಾಶಯಕ್ಕೆ ನೀರು ಹರಿಸಲು ಕಾರ್ಯಯೋಜನೆ ರೂಪಿಸಬೇಕೆಂದು ಸದನದಲ್ಲೆ ಒತ್ತಾಯಿಸಿರುವುದಾಗಿ ತಿಳಿಸಿದರು.
ಬೋರನಕಣಿವೆಗೆ ನೀರು ಹರಿಸುವ ಕುರಿತಂತೆ ಹುಳಿಯಾರು ಭಾಗದಲ್ಲಿ ವಷಾ೯ತರಗಳಿಂದ ನಡೆಯುತ್ತಿರುವ ಪ್ರತಿಭಟನೆ,ವಿಧಾನಸೌಧದಲ್ಲೆ
ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ರವರೊಂದಿಗೆ ತಾವು ನಡೆಸಿದ ಮಾತುಕಥೆಯನ್ನು ವಿವರಿಸಿದ್ದರ ಹಿನ್ನಲೆಯಲ್ಲಿ ಸಚಿವರು ಬೋರನಕಣಿವೆಗೂ ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದರು.ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನಗೊಳ್ಳುವವರೆಗೂ ಮತ್ತು ಉದ್ದೇಶಿತ ಯೋಜನೆಯಲ್ಲೆ ನೀರು ಹರಿಸುವವರೆಗೂ ತಾವೂ ವಿಶ್ರಮಿಸುವುದಿಲ್ಲವೆಂದು ಈ ಸಂದರ್ಭದಲ್ಲಿ ಸ್ಪಷ್ಠಪಡಿಸಿದರು.
ಅಭಿನಂದನೆ:ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶಾಶ್ವತ ಯೋಜನೆ ರೂಪಿಸಿ ಯೋಜನೆ ಅನುಷ್ಠಾನಗೊಳ್ಳಲು ಕಾರಣಕರ್ತರಾದ ಶಾಸಕ ಸಿ.ಬಿ.ಸುರೇಶ್ ಬಾಬು,ಸಮಸ್ಯೆ ಅರಿತು ಒಪ್ಪಿಗೆ ನೀಡಿದ ನೀರು ಹರಿಸಲು 102.60ಕೋಟಿ ಮೀಸಲಿಟ್ಟಿರುವ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಲ್ಲಿನ ಸಮಸ್ಯಗೆ ಸ್ಪಂದಿಸಿದ ಸಚಿವ ಸುರೇಶ್ ಕುಮಾರ್ ಅಲ್ಲದೆ ಸುಮಾರು 50ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ತಿಂಗಳುಗಟ್ಟಲೆ ಹೋರಾಟ ನಡೆಸಿದ ರೈತಸಂಘದ ಕಾರ್ಯಕರ್ತರುಗಳು,ಪಕ್ಷಾತೀತವಾಗಿ ಹೋರಾಟ ಮಾಡಿದ ಎಲ್ಲರನ್ನೂ ಹುಳಿಯಾರು ಹೋಬಳಿ ಜಾತ್ಯಾತೀತ ಜನತದಳ ಅಭಿನಂದಿಸಿದೆ.
ಈ ಕುರಿತು ಜಿಪಂ ಸದಸ್ಯೆ ಮಂಜುಳಾ ಗವಿರಂಗಯ್ಯ,ತಾಪಂ ಉಪಾಧ್ಯಕ್ಷೆ ಬೀಬಿಪಾತಿಮಾ,ಗ್ರಾಪಂ ಅಧ್ಯಕ್ಷ ಸೈ ಅನ್ಸರ್ ಅಲಿ,ತಾಪಂ ಸದಸ್ಯರಾದ ಕವಿತಾಪ್ರಕಾಶ್,ಮುಖಂಡರುಗಳಾದ ವಕೀಲ ರಮೇಶ್ ಬಾಬು,ಪ್ರಸನ್ನಕುಮಾರ್,ಅಹ್ಮದ್ ಖಾನ್,ಸೈಯದ್ ಜಲಾಲ್,ನಂದಿಹಳ್ಳಿ ಶಿವಣ್ಣ,ಡಿಶ್ ಬಾಬು ಮುಂತಾದವರು ಪತ್ರಿಕಾಹೇಳಕೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ