ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾಮೊಹಿಕ ವಿವಾಹದಲ್ಲಿ ಮದುವೆಯಾದ ಜೋಡಿಗಳು

ಹುಳಿಯಾರಿನ ರೋಟರಿ ಸಂಸ್ಥೆ, ಕಮ್ಯೂನಿಟಿ ಕಾರ್ಪ್ಸ್ ಹಾಗೂ ಬೆಂಗಳೂರು ರೋಟರಿ ಮಿಡ್ಟೌನ್ ಸಹಯೋಗದಲ್ಲಿ ನಡೆ ವಿವಾಹ ಮಹೋತ್ಸವದಲ್ಲಿ ಮೇ.೨೯ ರ ಭಾನುವಾರ ವಿವಾಹ ಬಂಧನಕೊಳಗಾದ ಜೋಡಿಗಳು.

ಸಾಮೂಹಿಕ ವಿವಾಹ: ಹಸೆಮಣೆ ಏರಿದ 12 ಜೋಡಿಗಳು

ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಹುಳಿಯಾರಿನ ರೋಟರಿ ಸಂಸ್ಥೆ , ಕಮ್ಯೂನಿಟಿ ಕಾರ್ಪ್ಸ್ ಹಾಗೂ ಬೆಂಗಳೂರು ರೋಟರಿ ಮಿಡ್ಟೌನ್ ಸಹಯೋಗದಲ್ಲಿ 28ನೇ ಸಾಮೂಹಿಕ ವಿವಾಹ ಶರಣರ ಸಮ್ಮುಖದಲ್ಲಿ ನೆರವೇರಿತು. ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಮೃತ್ಯಂಜಯ ದೇಶಿಕೇಂದ್ರ ಸ್ವಾಮಿಗಳು ವಿವಾಹ ಬಂಧನಕೊಳಗಾದ ಜೋಡಿಗಳನ್ನು ಕುರಿತಂತೆ ದುಷ್ಚಟಗಳನ್ನು ಬದಿಗೊತ್ತಿ ಬಾಳಬೇಕು, ಆಗ ನಮ್ಮ ಬದುಕು ಹಸನಾಗುತ್ತದೆ,ಗುರುಹಿರಿಯರು ಹಾಕಿದ ಮಾರ್ಗದಲ್ಲಿ ನಡೆದರೆ ಅದರಿಂದ ನಮ್ಮ ಜೀವನ ಉತ್ತಮ ರೀತಿಯಲ್ಲಿ ರೂಪಗೊಳ್ಳತ್ತದೆ ಎಂದರು. ಧರ್ಮನಿಷ್ಠರು,ನೀತಿವಂತರು ಆಗಿ ಸಹಬಾಳ್ವೆಯಿಂದ ಹೊಂದಿಕೊಂಡರೆ ಅದರಿಂದ ಮುಕ್ತಿ ಲಭಿಸುತ್ತದೆ. ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಾರ್ವಜನಿಕ ಸೇವಾ ಕಾರ್ರದಲ್ಲಿ ತೊಡಗಿರುವ ರೋಟರಿ ಸಂಸ್ಥೆಗೆ ಸೇವಾಮನೋಭಾವ ಉಳ್ಳವರು ಸದಸ್ಯರಾಗಿ ಸೇರ್ಪಡೆಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಮುಂದಾಗಬೇಕು ಎಂದು ಆಶೀರ್ವವಚನ ನೀಡಿದರು . ಇಂದಿನ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 12 ವಧು-ವರರು ಹಸೆಮಣೆ ಏರುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ನೂತನ ವಧೂವರರಿಗೆ ದಾನಿಗಳಿಂದ ರೇಷ್ಮೇಸೀರೆ,ಬಟ್ಟೆಬರೆ,ಕಾಲುಂಗುರ,ತಾಳಿ ನೀಡಲಾಯಿತು. ಹುಳಿಯಾರು ರೋಟರಿ ಸಂಸ್ಥೆ ಅಧ್ಯಕ್ಷ ಟಿ,ಜಿ.ಮಂಜುನಾಥ ಗುಪ್ತಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲೆ ಶಿವಗಿರಿ ಕ್ಷೇತ್ರದ ಸೂರ್ಯ ನಾರಾಯಣ ಮಹಾಸ್ವಾಮಿಗಳು,ದಾನಿಗಳಾದ ಶ್ರೀನಿವಾಸ ಶೆಟ್ಟಿ

ಬೋರನಕಣಿವೆಯಲ್ಲಿ ರಾಜ್ಯಮಟ್ಟದ ಕಾರ್ಯಗಾರ

ಇಂದು ನಮ್ಮಲ್ಲಿ ಸಂಪತ್ತಿನ ದುರುಪಯೋಗವಾಗುತ್ತಿದೆ ಅದಕ್ಕೆ ಪುರುಷ ಅಹಂಕಾರವೇ ಕಾರಣವಾಗಿದೆ,ಇದು ಸರಿಯಾಗಬೇಕಾದರೆ ಸಂಪತ್ತಿನ ಜವಾಬ್ದಾರಿಯನ್ನು ಸ್ತ್ರೀ ಹೊಂದಬೇಕು.ಗಾಂಧೀಜಿ ಹೇಳಿರುವಂತೆ ಆಹಿಂಸೆ ಎನ್ನುವುದು ಒಂದು ಅಸ್ತ್ರ ,ಅದನ್ನು ಸ್ತ್ರೀ ಹಿಡಿದಾಗ ಶಾಂತಿ ಎಂಬ ರಾಜ್ಯದ ನಿರ್ಮಾಣವಾಗುತ್ತದೆ ಎಂದು ಸಾಹಿತಿ ಪ್ರೋ.ಎಸ್.ಜಿ.ಸಿದ್ದರಾಮಯ್ಯ ನುಡಿದರು. ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಬೋರನ ಕಣಿವೆ ಸೇವಾಚೇತನದ ಸಹಯೋಗದಲ್ಲಿ ಮಹಿಳೆ ಮತ್ತು ವಿಜ್ಞಾನ ಯೋಜನೆಯಡಿ ಅಂಗನವಾಡಿ ಕಾರ್ಯರ್ಕತೆಯರು ಮತ್ತು ಸ್ತ್ರೀ ಶಕ್ತಿಸಂಘಟಕರಿಗಾಗಿ ಬೋರನಕಣಿವೆ ಸಮೀಪದ ಸೇವಾಚೇತನ ಕೇಂದ್ರದಲ್ಲಿ ಶನಿವಾರದಂದು ನಡೆದ ರಾಜ್ಯ ಮಟ್ಟದ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ವೈಜ್ಞಾನಿಕ ಮನೋಧರ್ಮವನ್ನು ಸ್ತ್ರೀ ಆಳವಡಿಸಿಕೊಂಡಾಗ ತನ್ನ ಮನೆಯವರಿಂದ ನಮ್ಮ ಭೂಮಿಗೆ ಉಪಯುಕ್ತವಾಗುವಂತೆ ಮಾಡುತ್ತಾಳೆ,ಇದರಿಂದ ಉತ್ತಮ ಸಂಸ್ಕೃತಿಯನ್ನು ವೃದ್ದಿಸಬಹುದು. ಜೊತೆಯಲ್ಲಿ ಜಗತ್ತಿನಲ್ಲೇ ದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರದ ನಿರ್ಮೂಲನೆಯಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಸಿರಿಯಜ್ಜಿ,ಸಾಲುಮರದ ತಿಮ್ಮಕ್ಕ ಅವರ ಆದರ್ಶದ ಪಾಲನೆ ಆಗಬೇಕಿದೆ.ಬದುಕಿನ ಆಶುದ್ದತೆಯನ್ನು ತೊಡೆದುಹಾಕಲು ವೈಜ್ಞಾನಿಕ ಮನೋಧರ್ಮದೆಡೆಗೆ ನಮ್ಮ ಪಯಣ ಸಾಗಬೆಕಿದೆ ಎಂದ ಅವರು ಹಿಂದೆ ಊರ

ಬೋರನ ಕಣಿವೆ ಸೇವಾ ಚೇತನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಗಾರ

ಹುಳಿಯಾರು ಸಮೀಪದ ಬೋರನ ಕಣಿವೆ ಸೇವಾ ಚೇತನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಸೋಮಶೇಕರ್ ಸಸಿಯನ್ನು ನೆಡುವ ಮೂಲಕ ಉದ್ಘಾಟಿಸಿದರು, ಚಲನಚಿತ್ರ ನಟ ಅಶೋಕ್,ಸಾಹಿತಿ ಸಿದ್ರಾಮಯ್ಯ,ಪ್ರಜಾಪ್ರಗತಿ ನಾಗಣ್ಣ,ತಹಸಿಲ್ದಾರ್ ಕಾಂತರಾಜು ಇನ್ನಿತರರಿದ್ದಾರೆ.

ಮೇ.೩೦ ರಂದು ಫಲಾನುಭವಿಗಳ ಆಯ್ಕೆ

2011-12ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದ ಸುವರ್ಣ ಭೂಮಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರನ್ನು ಲಾಟರಿ ಪ್ರಕ್ರಿಯೆಮೂಲಕ ಇಂದು ಫಲಾನುಭಭವಿಗಳನ್ನು ಆಯ್ಕೆಮಾಡಲಾಗುವುದೆಂದು ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ. ಆಯ್ಕೆ ಪ್ರಕ್ರಿಯೆ ಹುಳಿಯಾರಿನ ಅಂಬೇಡ್ಕರ್ ಭವನ, ಕಂದಿಕೆರೆ ಗಣಪತಿ ಪೆಂಡಾಲ್,ಹಂದನಕೆರೆ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಬೆಳಿಗ್ಗೆ ಅಯಾ ವಿಭಾಗದ ನೊಡೆಲ್ ಅಧಿಕಾರಿಗಳ ಹಾಗೂ ತಾಲ್ಲೂಕ್ ಮಟ್ಟದ ಇಲಾಖಾ ಅಧಿಕಾರಿಗಳ ಸಮ್ಮಖದಲ್ಲಿ ಗುರಿಗಿಂತ ಹೆಚ್ಚಾಗಿ ಬಂದಿರಯವ ಅರ್ಜಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದೆಂದು ತಿಳಿಸಿದ್ದಾರೆ.

ಮೈಸೂರ್ ಹುಲಿ ಟಿಪ್ಪುಸುಲ್ತಾನ್ ನ 258 ನೇ ಪುಣ್ಯತಿಥಿ

ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಪ್ರತಿಯೋಬ್ಬರು ಅಳವಡಿಸಿಕೊಳ್ಳ ಬೇಕೆಂದು ಆಲ್ಹಜ್ ಸಯ್ಯದ್ ಜಬೀಸಾಬ್ ತಿಳಿಸಿದರು. ಹುಳಿಯಾರಿನ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ಮದೀನಾ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಟಿಪ್ಪುವಿನ 258ನೇ ಪುಣ್ಯತಿಥಿಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಯುವಕರು ಸಂಘಟಿತರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದುದು.. ತಾ.ಪಂ.ಉಪಾಧ್ಯಾಕ್ಷೆ ಬಿ.ಬಿ.ಫಾತೀಮಾ ಮಾತನಾಡಿ ದೇಶಕ್ಕೋಸ್ಕರ ಹೋರಾಡಿದ ವ್ಯಕ್ತಿಗಳ ಚರಿತ್ರೆಯ ಬಗ್ಗೆ ಇಂದಿನ ವಿಧ್ಯಾಥರ್ಿಗಳಿಗೆ ಅರಿವು ಮೂಡಿಸುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿನ ಪಠ್ಯಪುಸ್ತಕದಲ್ಲಿ ಆಳವಡಿಸಬೇಕಿದೆ. ಗ್ರಾ.ಪಂ.ಮಾಜಿ ಉಪಾಧ್ಯಾಕ್ಷ ಹೆಚ್.ಎನ್.ನಜುರುಲ್ಲಾಖಾನ್ ಮಾತನಾಡುತ್ತಾ ಸಾಮೂಹಿಕವಾಗಿ ಮಕ್ಕಳಿಗೆ ಖತ್ನ ಕಾರ್ಯ ಮಾಡಿರುವುದು ತುಂಬಾ ಸಂತೋಷ,ಅದೇ ರೀತಿ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಈ ಸಂಘದವರು ಆಯೋಜಿಸಲಿ. ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಮದ್ ಫಯಾಜ್ ವಹಿಸಿದ್ದು,ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಜಹೀರ್ ಸಾಬ್,ಸಯ್ಯದ್ ಜಲಾಲ್ ಸಾಬ್,ಸಜ್ಜಾದ್,ದಿಲ್ ದಾರ್ ಪಾಷ,ಇಲಾಹಿ ಹಾಗೂ ಸದಸ್ಯರು ಭಾಗವಹಿಸಿದ್ದು,ಕಾರ್ಯಕ್ರಮವನ್ನು ಎಸ್.ಅರ್.ಎಲ್ ಲಾರಿ ಮಾಲೀಕರಾದ ಮ