ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗ್ರಾಮದ ಸ್ವಚ್ಚತೆ ಮರೆತ ಗ್ರಾ.ಪಂ. ವಿರುದ್ದ ಪ್ರತಿಭಟನೆ

ಗ್ರಾಮದ ಅಭಿವೃದ್ದಿ,ಸ್ವಚ್ಚತೆಯ ಬಗ್ಗೆ ಕಾಳಜಿವಹಿಸಬೇಕಾದ ಗ್ರಾಮ ಪಂಚಾಯ್ತಿಯವರು ಗ್ರಾಮಕ್ಕೆ ಬರುವ ಸೌಲಭ್ಯಗಳಿಗೆ ತೊಡೆರುಕಾಲು ಹಾಕುವುದಲ್ಲದೆ, ಗ್ರಾಮದ ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯವಹಿಸಿ ತಮಗೂ ಈ ಗ್ರಾಮಕ್ಕೂ ಸಂಬಂಧವಿಲ್ಲ ಎಂಬಂತೆ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ ಹೋಬಳಿಯ ದೊಡ್ಡಬಿದರೆ ಸಾರ್ವಜನಿಕರು ಗುರುವಾರ ಪ್ರತಿಭಟಿಸಿ ಗ್ರಾ.ಪಂ. ಕಾರ್ಯಾಲಕ್ಕೆ ಮುತ್ತಿಗೆ ಹಾಕಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾ.ಪಂ ಮುಂದೆ ಪ್ರತಿಭಟಿಸುತ್ತಿದ್ದ ಗ್ರಾಮಸ್ಥರ ಮನವೊಲಿಕೆಗೆ ಮುಂದಾದ ಪಿಎಸೈ ರಾಜು. ದೊಡ್ಡಬಿದರೆ ಗ್ರಾಮದಲ್ಲಿ ನೆಪಮಾತ್ರಕ್ಕೆ ಗ್ರಾ.ಪಂ.ಯಿದೆಯೇ ಹೊರತು ಯಾವುದೇ ಅಭಿವೃದ್ದಿ ಕಾರ್ಯಗಳಿಗಾಗಲಿ, ಸರ್ಕಾರ ದಿಂದ ಬರುವ ಸವಲತ್ತುಗಳಿಗಾಗಲಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ,ಊರಿನ ಪ್ರತಿಬೀದಿಯ ಚರಂಡಿಗಳ ತುಂಬೆಲ್ಲ ಹೂಳು ತುಂಬಿಕೊಂಡು ಕ್ರಿಮಿಕೀಟಗಳ ಸಂಖ್ಯೆಗೆ ಹೆಚ್ಚಾಗಿವೆ,ಅಲ್ಲದೆ ಬೀದಿ ಬದಿಯ ಕಂಬಗಳಲ್ಲಿ ಬೀದಿದೀಪಗಳಿಲ್ಲದೆ ರಾತ್ರಿ ಸಮಯದಲ್ಲಿ  ಸಂಚರಿಸುವುದು ಕಷ್ಟಕರವಾಗಿದೆ.ಈ ಬಗ್ಗೆ ಪಂಚಾಯ್ತಿಯ ಪಿಡಿಓಗೆ ತಿಳಿಸಿದರೆ ಸರಿ ಸರಿ ಮಾಡಿಸುವುದಾಗಿ ಹೇಳಿ ಕೈತೊಳೆದುಕೊಳ್ಳುತ್ತಾರೆ,ತಮ್ಮಿಂದ ಆಯ್ಕೆಯಾದ ಸದಸ್ಯರು ಇತ್ತ ತಿರುಗಿನೋಡುವುದಿಲ್ಲ, ತಮ್ಮ ಗ್ರಾಮಕ್ಕೆ ಬರುವ ಅನೇಕ ಸೌಲಭ್ಯಗಳನ್ನು ಅನುಷ್ಠಾನಗೊಳಿಸದೇ ಇಲ್ಲ ಸಲ್ಲದ ಸಬೂಬು ಹೇ

ಗೌಡಗೆರೆಯಲ್ಲಿಅನ್ನ ಭಾಗ್ಯ ಯೋಜನೆಯಿಂದ ವಂಚನೆ:ದೂರು-(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದ್ದು)

ಬರಗೂರು ಹಾಲು ಉತ್ಪಾದಕರ ಸಂಘದ ಸುದ್ದಿ:(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದ್ದು)

ರೋಟರಿ ಮೂಲಕ ಸಮಾಜಸೇವೆಗೆ ತೊಡಗಿ: ಹೆಚ್.ಕೆ.ವಿ.ರೆಡ್ಡಿ

ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವುದರಿಂದ ಮನಸ್ಸಿಗೆ ಸಮಾಧಾನ ಸಂತಸ ಸಿಗಲಿದ್ದು, ಪ್ರತಿಯುಬ್ಬರೂ ಸ್ವಲ್ಪಕಾಲವಾದರೂ ಸಮಾಜ ಸೇವೆಗೆ ಮೀಸಲಿಡಿ ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಹೆಚ್.ಕೆ.ವಿ.ರೆಡ್ಡಿ ಕಿವಿ ಮಾತು ಹೇಳಿದರು. ಹುಳಿಯಾರಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಮಾಜಿ ಜಿಲ್ಲಾ ಗವರ್ನರ್ ಹೆಚ್.ಕೆ.ವಿ.ರೆಡ್ಡಿ ಉದ್ಘಾಟಿಸಿದರು.ಎನ್.ಎಸ್.ನಾಗರಾಜು,ಗಂಗಾಧರ್ ರಾವ್,ರವೀಶ್,ಮಂಜುನಾಥ ಗುಪ್ತ,ಹನುಮಂತಯ್ಯ ಇದ್ದಾರೆ.               ಹುಳಿಯಾರಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕೇವಲ ನಾಲ್ಕು ಮಂದಿಯಿಂದ   ಸ್ಥಾಪಿತವಾದ ರೋಟರಿ ಸಂಸ್ಥೆ ಇಂದು ಪ್ರಪಂಚದಾದ್ಯಂತ ಮೂವತ್ನಾಲ್ಕು ಸಾವಿರ ಶಾಖೆಗಳನ್ನು ಹೊಂದಿ ಹನ್ನೆರೆಡುವರೆ ಲಕ್ಷ ಸದಸ್ಯರನ್ನು ಒಳಗೊಂಡು ಸಮಾಜ ಸೇವೆಯಲ್ಲಿ ನಿರತವಾಗಿದೆ.ಇನ್ನೂರಆರು ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಈ ಅಂತರರಾಷ್ಟ್ರೀಯ ಸಂಸ್ಥೆಗೆ ಸದಸ್ಯರಾಗುವ ಮೂಲಕ ಸೇವಾ ಕಾರ್ಯದಲ್ಲಿ ನಿರತರಾಗಿ ಎಂದು ಕರೆ ನೀಡಿದರು.                   ರೋಟರಿ ಉಪರಾಜ್ಯಪಾಲ ನಾಗರಾಜ್ ಮಾತನಾಡಿ, ಈಡಿ ಪ್ರಪಂಚದಲ್ಲಿ ಲಿಂಗ ,ಜಾತಿ ,ವಯಸ್ಸಿನ ತಾರತಮ್ಯವಿಲ್ಲದೆ ಯಾವುದೇ ಅಡ್ಡ ಗೋಡೆಗಳಿಲ್ಲದೆ ಎಲ್ಲರೂ ತೊಡಗಿಕೊಂಡು ಸೇವೆಸಲ್ಲಿಸಲು ಅವಕಾಶ ಒದಗಿಸಿರುವ ಏಕೈಕ ಸಂಸ್ಥೆ ರೋಟರಿ. ಇನ್ನಿತರ ಸಂಘಸಂಸ್ಥೆಗಳಲ್ಲಿ ಅಧ್ಯಕ