ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಸೂಡಿಯಲ್ಲಿ ರಕ್ತದಾನ ಶಿಬಿರ ಯಶಸ್ವಿ

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ನೇಮಕ ಮಾಡದಿದ್ದಲ್ಲಿ ಜು.೧೫ ಕ್ಕೆ ಧರಣಿ ಹುಳಿಯಾರು: ಜಿಲ್ಲೆಯ ಗಡಿಭಾಗದಲ್ಲಿರುವ ಹುಳಿಯಾರು ಹೋಬಳಿಗೆ ಸೇರಿರುವ ದಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೩ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿಯಿದೆ .ಅಲ್ಲದೆ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಗೆ ಜರೂರಾಗಿ ಬೇಕಾಗಿರುವ ೧೦೮ ಅಂಬ್ಯೂಲೆನ್ಸ್ ಕೂಡ ಇಲ್ಲವಾಗಿದ್ದು ಸಾಕಷ್ಟು ಸಮಸ್ಯೆ ಎದುರಾಗಿದೆ.ಆರೋಗ್ಯಇಲಾಖೆ ಈ ಕೂಡಲೇ ಇಲ್ಲಿನ ಸಮಸ್ಯೆ ನಿವಾರಿಸದಿದ್ದಲ್ಲಿ ಜುಲೈ.೧೫ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಸೂಡಿ ಮಾಜಿ ಗ್ರಾಪಂ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಎಚ್ಚರಿಸಿದರು. ಹುಳಿಯಾರು ಹೋಬಳಿಯ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ದಬ್ಬಗುಂಟೆ ರವಿಕುಮಾರ್ ಉದ್ಘಾಟಿಸಿದರು.ದಸೂಡಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಜಯಪ್ರಕಾಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಸನ್ನಕುಮಾರ್,ತುಮಕೂರು ಬೆಳ್ಳಿ ರಕ್ತನಿಧಿ ಕೇಂದ್ರದ ಡಾ.ಪ್ರದೀಪ್ , ಆರೋಗ್ಯ ಸಹಾಯಕ ಚಂದ್ರಶೇಖರ್, ದಸೂಡಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಶೋಭಾ, ಸದಸ್ಯರುಗಳಾದ ಓಂಕಾರಪ್ಪ,ದಬ್ಬಗುಂಟೆ ಜಯಣ್ಣ ಮೊದಲಾದವರಿದ್ದರು.           ಹುಳಿಯಾರು ಹೋಬಳಿಯ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿ
ಹುಳಿಯಾರು ಪಟ್ಟಣ ಸೇರಿದಂತೆ ಬಳ್ಳೆಕಟ್ಟೆ,ಕಂಪನಹಳ್ಳಿ,ಯಳನಾಡು,ಯಾಕೂಬ್ ಸಾಬ್ ಪಾಳ್ಯ,ಯಗಚೀಹಳ್ಳಿ ಮುಂತಾದೆಡೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸೋಮವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಹುಳಿಯಾರಿನಲ್ಲಿ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಂ ಬಾಂಧವರು  ಮುಂಜಾನೆಯೇ ಜಾಮಿಯಾ, ನೂರಾನಿ, ಮದೀನಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಬೆಳಿಗ್ಗೆ ಹತ್ತರ ವೇಳೆಗೆ ಈದ್ಗಾಮೈದಾನದಲ್ಲಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಮೌಲಾನ ಹಜರತ್ ಆಸೀಫ್ ಅಲಿ ಅವರ ಧಾರ್ಮಿಕ ಭೋದನೆಯಲ್ಲಿ ಹಬ್ಬದ ಸಂದೇಶ ನೀಡಿ ರಂಜಾನ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಮುತುವಲ್ಲಿ ಜಬೀಉಲ್ಲಾ, ನೂರಾನಿ ಮಸೀದಿಯ ಮುತುವಲ್ಲಿ ಬೈಜು ಸಾಬ್ ,ಜಿಲ್ಲಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯಮೊದಲಾದವರು ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರುಗಳು , ಅಪಾರ ಸಂಖ್ಯೆಯ ಮುಸ್ಲಿಂಬಾಂಧವರು ಉಪಸ್ಥಿತರಿದ್ದರು. ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.ಮಕ್ಕಳು, ಮಹಿಳೆಯರು ಮೆಹಂದಿ ಹಾಕಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸ

ಹೀಗೊಂದು ವ್ಯಾಟ್ಸ್ ಆಪ್ ಪ್ರೇಮ ವಿವಾಹ

ಹುಡುಗ ವಿಶೇಷಚೇತನ ಎಂಬುದು ಗೊತ್ತಾಗಿದ್ದೆ ಮದುವೆ ಮಾತುಕತೆಗೆ ಬಂದಾಗ (ವರದಿ:ಡಿ.ಆರ್.ನರೇಂದ್ರ ಬಾಬು-ಹುಳಿಯಾರು) ಹುಳಿಯಾರು: ಇಬ್ಬರ ನಡುವೆ ಸಾಮಾಜಿಕ ಜಾಲತಾಣದ ವಾಟ್ಸಪ್ ಮೂಲಕ ಪರಿಚಯವಾಗಿ, ಪರಿಚಯ ನಂತರ ಸ್ನೇಹಕ್ಕೆ ಬೆಳೆದು, ಪ್ರೇಮಕ್ಕೆ ತಿರುಗಿ, ಪ್ರೇಮ ಮದುವೆ ಹಂತಕ್ಕೆ ಬಂದು ನಿಂತಾಗ ಮದುವೆಯ ಮಾತುಕತೆ ಸಮಯದಲ್ಲಿ ತಾನು ಇಷ್ಟಪಟ್ಟ ಹುಡುಗ ಎರಡೂ ಕಾಲಿಲ್ಲದ ದಿವ್ಯಾಂಗನೆಂದು ತಿಳಿದರೂ ಸಹ ಪ್ರೇಮ ಕುರುಡು ಎಂದು ಸಾಬೀತುಪಡಿಸಿದ ಹುಡುಗಿ ತಾನು ಮೆಚ್ಚಿದ ಹುಡುಗನೊಂದಿಗೆ ಇಷ್ಟಪಟ್ಟು ಮದುವೆಯಾದ ಘಟನೆ ಗುರುವಾರ ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಅಂಬರಾಪುರದಲ್ಲಿ ನಡೆದಿದೆ..         ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗೆ ಈಗಾಗಲೇ ಜನ ಮಾರುಹೋಗಿದ್ದು ದಿನದ ಸಮಯವೆಲ್ಲಾ ವ್ಯರ್ಥವಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಇಂದು ನಡೆದಿರುವ ಮದುವೆ ಸಾಮಾಜಿಕ ತಾಣವೂ ಕೂಡ ಹೇಗೆ ಸಂಬಂಧ ಬೆಸಯಬಲ್ಲದು ಎಂಬುದನ್ನು ಸಾಕ್ಷೀಕರಿಸಿದೆ               ಸಾಮಾಜಿಕ ಜಾಲತಾದ ಮೂಲಕ ಪ್ರೇಮಾಂಕುರಗೊಂಡು ಸತಿ ಪತಿಗಳಾದ ಜ್ಯೋತಿ ಮತ್ತು ನಾಗರಾಜ ಸಾಮಾಜಿಕ ಜಾಲತಾಣದ ಮೂಲಕ ಪ್ರೇಮಿಗಳಾದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಅಂಬರಾಪುರದ ವಾಸಿ ನಾಗರಾಜು ಹಾಗೂ ವಧು ಜ್ಯೋತಿಯ ವಿವಾಹ ತಾಂಡ್ಯದ (ಕಲಗೇರಿ) ಈಶ್ವರನ ದೇವಾಲಯದಲ್ಲಿ ಆತ್ಮೀಯರ ಹಾಗೂ ಬಂಧು ಬಾಂಧವರ ಸಮ್ಮ

ಹುಳಿಯಾರು: ಅಂಗಾರಕ ಸಂಕಷ್ಟಹರ ಚತುರ್ಥಿ :ಕಿಕ್ಕಿರಿದು ನೆರದ ಭಕ್ತರು

          ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಅಂಗವಾಗಿ ಇಂದು ಮಂಗಳವಾರ ಸ್ವಾಮಿಗೆ ವಿಶೇಷ ಅಲಂಕಾರ,ಅಭಿಷೇಕ,ಪೂಜೆ ಹಾಗೂ ಹೋಮ ಹವನಾದಿಗಳು ನಡೆಯಿತು. ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಗಣಪತಿಗೆ ಬಾದಾಮಿ ಹಾಗೂ ಗೋಡುಂಬಿಯಿಂದ ಮಾಡಲಾಗಿದ್ದ ಅಲಂಕಾರ           ಸಂಕಷ್ಟಹರ ಚತುರ್ಥಿ ಮಂಗಳವಾರದಂದು ಬರುವುದು ವಿಶೇಷವಾಗಿದ್ದು, ಈ ನಿಮಿತ್ತ ವಿಶೇಷ ಹೋಮ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ರಾಮಚಂದ್ರಭಟ್ಟರ ನೇತೃತ್ವದಲ್ಲಿ ಮಹಾ ಗಣಪತಿ ಪೂಜೆ, ಪುಣ್ಯಾಹ, ಕಳಸಸ್ಥಾಪನೆ, ದೇವನಾಂದಿ, ಪಂಚಾಮೃತಾಭಿಷೇಕ, ನವಗ್ರಹ ಹೋಮ, ಸಂಕಷ್ಟಹರ ಗಣಪತಿ ಹೋಮ ನಡೆದು ಪುರ್ಣಾಹುತಿ ಹಾಗೂ ಮಹಾಮಂಗಳಾರತಿ ಸಮರ್ಪಿಸಿದ ನಂತರ ಅಮೃತಾನ್ನ ಪ್ರಸಾದ ವಿತರಿಸಲಾಯಿತು.          ಸಂಕಷ್ಟಹರ ಚತುರ್ಥಿ ಪ್ರತಿ ತಿಂಗಳು ಚತುರ್ದಶಿಯಂದು ಬರುವುದಿದ್ದು ಮಂಗಳವಾರ ಬರುವುದು ಕೆಲವೊಮ್ಮೆ ಮಾತ್ರ.ಅಂದು ಸಂಕಷ್ಟಹರ ವ್ರತ ಮಾಡಿದರೆ ಕುಟುಂಬದವರಿಗೆ ಆಯುಷ್ಯಾರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಮಹಿಳೆಯರು ಉಪವಾಸವಿದ್ದು ಸಂಕಷ್ಟ ವ್ರತಆಚರಿಸುತ್ತಾರೆ.ಅಂತೆಯೇ ಸಂಜೆ ಗಣಪತಿ ದರ್ಶನಕ್ಕೆ ಭಕ್ತರು ಸಾಗರದಂತೆ ಹರಿದು ಬಂದರು.         ಸಂಕಷ್ಟ ಚತುರ್ಥಿ ಅಂಗವಾಗಿ ಅರ್ಚಕ ರಾಜಣ್ಣ ಹಾಗೂ ಚೇತನ್ ಗಣಪತಿಗೆ ಬಾದಾಮಿ-ಗೋಡುಂಬಿಯ ವಿಶೇಷ ಅಲಂಕಾರ ಮಾಡಿದ್ದರು. ಸಂಜೆ ಗಣೇಶನಿಗೆ ವ್ರತದ ಅಂಗವಾಗಿ ಪೂಜಿಸಲಾಯ