ವಿಷಯಕ್ಕೆ ಹೋಗಿ

ಹೀಗೊಂದು ವ್ಯಾಟ್ಸ್ ಆಪ್ ಪ್ರೇಮ ವಿವಾಹ

ಹುಡುಗ ವಿಶೇಷಚೇತನ ಎಂಬುದು ಗೊತ್ತಾಗಿದ್ದೆ ಮದುವೆ ಮಾತುಕತೆಗೆ ಬಂದಾಗ
(ವರದಿ:ಡಿ.ಆರ್.ನರೇಂದ್ರ ಬಾಬು-ಹುಳಿಯಾರು)
ಹುಳಿಯಾರು:ಇಬ್ಬರ ನಡುವೆ ಸಾಮಾಜಿಕ ಜಾಲತಾಣದ ವಾಟ್ಸಪ್ ಮೂಲಕ ಪರಿಚಯವಾಗಿ, ಪರಿಚಯ ನಂತರ ಸ್ನೇಹಕ್ಕೆ ಬೆಳೆದು, ಪ್ರೇಮಕ್ಕೆ ತಿರುಗಿ, ಪ್ರೇಮ ಮದುವೆ ಹಂತಕ್ಕೆ ಬಂದು ನಿಂತಾಗ ಮದುವೆಯ ಮಾತುಕತೆ ಸಮಯದಲ್ಲಿ ತಾನು ಇಷ್ಟಪಟ್ಟ ಹುಡುಗ ಎರಡೂ ಕಾಲಿಲ್ಲದ ದಿವ್ಯಾಂಗನೆಂದು ತಿಳಿದರೂ ಸಹ ಪ್ರೇಮ ಕುರುಡು ಎಂದು ಸಾಬೀತುಪಡಿಸಿದ ಹುಡುಗಿ ತಾನು ಮೆಚ್ಚಿದ ಹುಡುಗನೊಂದಿಗೆ ಇಷ್ಟಪಟ್ಟು ಮದುವೆಯಾದ ಘಟನೆ ಗುರುವಾರ ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಅಂಬರಾಪುರದಲ್ಲಿ ನಡೆದಿದೆ..
        ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗೆ ಈಗಾಗಲೇ ಜನ ಮಾರುಹೋಗಿದ್ದು ದಿನದ ಸಮಯವೆಲ್ಲಾ ವ್ಯರ್ಥವಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಇಂದು ನಡೆದಿರುವ ಮದುವೆ ಸಾಮಾಜಿಕ ತಾಣವೂ ಕೂಡ ಹೇಗೆ ಸಂಬಂಧ ಬೆಸಯಬಲ್ಲದು ಎಂಬುದನ್ನು ಸಾಕ್ಷೀಕರಿಸಿದೆ
             
ಸಾಮಾಜಿಕ ಜಾಲತಾದ ಮೂಲಕ ಪ್ರೇಮಾಂಕುರಗೊಂಡು ಸತಿ ಪತಿಗಳಾದ ಜ್ಯೋತಿ ಮತ್ತು ನಾಗರಾಜ
ಸಾಮಾಜಿಕ ಜಾಲತಾಣದ ಮೂಲಕ ಪ್ರೇಮಿಗಳಾದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಅಂಬರಾಪುರದ ವಾಸಿ ನಾಗರಾಜು ಹಾಗೂ ವಧು ಜ್ಯೋತಿಯ ವಿವಾಹ ತಾಂಡ್ಯದ (ಕಲಗೇರಿ) ಈಶ್ವರನ ದೇವಾಲಯದಲ್ಲಿ ಆತ್ಮೀಯರ ಹಾಗೂ ಬಂಧು ಬಾಂಧವರ ಸಮ್ಮುಖದಲ್ಲಿ ನಡೆದಿದೆ.
      ನಾಗರಾಜುವಿನದು ಹುಳಿಯಾರು ಹೋಬಳಿ ಅಂಬರಾಪುರವಾಗಿದ್ದು ಈತ ಪದವಿಯವರೆಗೂ ಬೋರನಕಣಿವೆ,ಬೆಳಗುಲಿ,ರಂಗೇನಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಸಿದ್ದಾನೆ. ಮಂಡಿಯ ಕೆಳಭಾಗದಿಂದ ಕಾಲೇಇಲ್ಲದೆ ನಾಗರಾಜು ಹುಟ್ಟಾ ಅಂಗವಿಕಲನಾಗಿದ್ದು ಕೂಡ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕೆಂಬ ಛಲಹೊತ್ತಿ ಪದವಿ ಕಲಿಯುವ ಸಮಯದಲ್ಲೆ ಕಂಪ್ಯೂಟರ್ ತರಬೇತಿ ಪಡೆದ.ಕಾಲಿಲ್ಲದೆ ಅವರಿವರನ್ನು ಆಶ್ರಯಿಸಿ ಬದುಕಿನಲ್ಲಿ ಒಂದು ಹಂತ ತಲುಪುವುದರೊಳಗೆ ಹೈರಾಣೆದ್ದು ಹೋಗಿದ್ದ.
          ಆದರೂ ಕೂಡ ತಾನು ನಂಬಿದ್ದ ಧ್ಯೇಯ ವಾಕ್ಯ 'ನಡೆಯುವಾಗ ಎಡುವುದು,ಬೀಳುವುದು ಸಹಜ ಆದರೆ ಬಿದ್ದ ಜಾಗದಲ್ಲೇ ಬಿದ್ದಿರುವುದು ತಪ್ಪು"ಎಂಬುದನ್ನು ಅರ್ಥಸಿಕೊಂಡು ತನ್ನದೆ ಆದ ಬದುಕು ಕಟ್ಟಿಕೊಂಡ.ಗ್ರಾಮಪಂಚಾಯ್ತಿಗಳಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ನಂತರ ತಾಲ್ಲೂಕ್ ಪಂಚಾಯ್ತಿ ಆನಂತರ ಜಿಲ್ಲಾಪಂಚಾಯ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿ ತೊಡಗಿಕೊಂಡ.
              ಬದುಕು ಒಂದುಹಂತಕ್ಕೆ ಬಂದು ನಿಂತಾಗ ಅವಶ್ಯಕತೆಗೆ ಎಂದು ಕೊಂಡ ಸ್ಮಾರ್ಟ್ ಫೋನ್ ಈತನ ಬದುಕನ್ನೆ ಬದಲಿಸುತ್ತೆ ಅನ್ನುವ ಕಲ್ಪನೆಯೂ ಇಲ್ಲದ ಆತ ವಾಟ್ಸಪ್ ಹಾಗೂ ಫೇಸ್ ಬುಕ್ಕಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಮೂಲಕ ಪರಿಚಿತರಾದ ಕಡೂರಿನ ಜ್ಯೋತಿಯೊಂದಿಗೆ ಚಾಟಿಂಗ್ ಮೂಲಕ ಮಾತುಕಥೆಗೆ ಶುರುಮಾಡಿದ.ಕಡೆಗದೂ ಅವರಿಬ್ಬರ ನಡುವೆ ಪ್ರೇಮಾಂಕುರವಾಗುವಂತೆ ಮಾಡಿ ವಿವಾಹದವರೆಗೂ ತಂದು ನಿಲ್ಲಿಸಿತು.
ಆತನನ್ನು ವಿವಾಹ ಆಗಲೇಬೇಕೆಂದು ನೋಡಲು ಬಂದಾಗಲೇ ಆಕೆಗೆ ನಾನು ಪ್ರೀತಿಸುವಾತನ ಎರಡೂ ಕಾಲು ಸ್ವಾಧೀನ ಇಲ್ಲವೆಂದು ತಿಳಿದುಬಂದಿದ್ದು. ಆದರೆ ಅಂಗವಿಕಲತೆಗೆ ಸೆಡ್ಡು ಹೊಡೆದ ಯುವತಿ ನಾಗರಾಜನನ್ನು ಒಪ್ಪಿ ಇಂದು ಸರಳವಾಗಿ ವಿವಾಹವಾಗುವ ಮೂಲಕ ಮಾದರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
         ಜ್ಯೋತಿ ಚಿಕ್ಕಮಗಳೂರು ಜಲ್ಲೆಯ ಕಡೂರು ನಿವಾಸಿಯಾಗಿದ್ದು ಬಡ ಕುಟುಂಬದಿಂದ ಬಂದಿದ್ದು ತಂದೆತಾಯಿಯಿಲ್ಲದೆ ಈಕೆ ಪ್ರಸ್ತುತ ತುಮಕೂರು ನಗರದ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ.
        ಸದ್ಯ ಈಗ ತುಮಕೂರು ನಗರದಲ್ಲಿ ವಾಸಿಯಾಗಿರುವ ನಾಗರಾಜ ಕೂಡ ಸಾಮಾಜಿಕ ಜಾಲ ತಾಣದ ಮೂಲಕ ತನ್ನ ವೈವಾಹಿಕ ಜೀವನದ ಬದುಕು ಕಟ್ಟಿ ಕೊಂಡು ವ್ಯಾಟ್ಸ್ ಆಪ್ ಗೆ ಥ್ಯಾಂಕ್ಸ್ ಅನ್ನುತ್ತಾನೆ .
ಸತಿಪತಿಗಳಿಗೆ ಶುಭಹಾರೈಸಿದ ತಾಲ್ಲೂಕ್ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್.ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿ ,ಮತ್ತಿತರ ಹಿತೈಷಿಗಳು
        ಸಾಮಾಜಿಕ ಜಾಲತಾದ ಮೂಲಕ ಪ್ರೇಮಾಂಕುರಗೊಂಡು ಸತಿ ಪತಿಗಳಾದ ಜ್ಯೋತಿ ಮತ್ತು ನಾಗರಾಜ ನವ ದಂಪತಿಗಳಿಗೆ ತಾಲ್ಲೂಕ್ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್. ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿ ಸೇರಿದಂತೆ ಮುದುವೆಗೆ ಬಂದಿದ್ದ ಜನ ಇವರ ಮುಂದಿನ ಬದುಕು ಸುಖಕರವಾಗಿರಲಿ ಎಂದು ಶುಭ ಹಾರೈಸಿ ಆಶೀರ್ವದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...