ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಿರುಮಲಾಪುರದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಮೊದಲನೇ ಕಾರ್ತಿಕ ಸೋಮವಾರದ ಪೂಜಾ ಕಾರ್ಯಕ್ರಮ

ಹುಳಿಯಾರು ಸಮೀಪದ ಜೋಡಿ ತಿರುಮಲಾಪುರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಆರಂಭವಾಗಿದ್ದು ಇಂದು ಕಾರ್ತಿಕ ಪ್ರಥಮ ಸೋಮವಾರ ಅಂಗವಾಗಿ ಸಂಧ್ಯಾಮಂಟಪದಲ್ಲಿನ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ,ಏಕವಾರ ರುದ್ರಾಭಿಷೇಕ, ಸಹಸ್ರನಾಮ ಬಿಲ್ವಾರ್ಚನೆ ನಡೆಯಿತು. ಶ್ರೀ ಚಂದ್ರಮೌಳೇಶ್ವರ ಸ್ವಾಮಿ, ಪಾರ್ವತಮ್ಮನವರು,ಸುಬ್ರಮಣ್ಯಸ್ವಾಮಿ, ಜ್ಯೋತಿರ್ಲಿಂಗೇಶ್ವರ ಸ್ವಾಮಿ ,ಕಾಶಿ ವಿಶ್ವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಜರುಗಿತು. ಮಹಾಮಂಗಳಾರತಿ ನಂತರ ಗ್ರಾಮಸ್ಥರು ಸೇರಿದಂತೆ ಆಗಮಿಸಿದ ಭಕ್ತಾಧಿಗಳಿಗೆ  ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಜರುಗಿತು.

ಹುಳಿಯಾರು ಕೆರೆ ಅಂಗಳದ ನಿವಾಸಿಗಳ ಬದುಕು ಮೂರಾಬಟ್ಟೆ

ಹುಳಿಯಾರು ಕೆರೆ ಅಂಗಳದ ನಿವಾಸಿಗಳ ಬದುಕು ಮೂರಾಬಟ್ಟೆ ... ಜಲಾವೃತಗೊಳ್ಳುತ್ತಿರುವ ಮನೆಯಿಂದಾಗಿ, ಮನೆ ಕಳೆದುಕೊಂಡು ಮುಂದೇನು ಎಂಬ ಆತಂಕದಲ್ಲಿ ನಿರಾಶ್ರಿತರು .. ------------- ✍️ವರದಿ :*ನರೇಂದ್ರಬಾಬು ಹುಳಿಯಾರು* ಹುಳಿಯಾರು :ಹುಳಿಯಾರು ಶಂಕರಾಪುರದ ಕೆರೆ ಅಂಗಳದಲ್ಲಿ ಮನೆ ಕಟ್ಟಿ ಜೀವನ ಸಾಗಿಸುತ್ತಿರುವವರಿಗೆ ಕಳೆದ ಎರಡು ದಶಕಗಳಿಂದಲೂ ಉದ್ಭವವಾಗದ ನೀರಿನ ಸಮಸ್ಯೆ ಇದೀಗ ಉಲ್ಬಣಗೊಂಡಿದ್ದು, ಮಳೆಯಿಂದಾಗಿ ಹುಳಿಯಾರು ಕೆರೆ ತುಂಬಿದಂತೆಲ್ಲ,ಕೆರೆಅಂಗಳದಲ್ಲಿರುವ ಮನೆಗಳೆಲ್ಲ ಜಲಾವೃತಗೊಳ್ಳುತ್ತಿದೆ. ದಿನೇ ದಿನೇ ಜಲಾವೃತಗೊಳ್ಳುತ್ತಿರುವ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗದೆ, ಬೇರೆ ಸ್ಥಳವು ಇಲ್ಲದೆ, ಕೆರೆ ಅಂಗಳದ ನಿವಾಸಿಗಳ ಬದುಕು ಮೂರಾ ಬಟ್ಟೆಯಾಗಿದೆ. ವಾಸ ಮಾಡಲು ಯೋಗ್ಯವಿಲ್ಲ : ಹುಳಿಯಾರು ಶಂಕರಾಪುರದ ಕೆರೆ ಅಂಗಳದಲ್ಲಿ ಹಲವಾರು ವರ್ಷಗಳಿಂದಲೂ ಸುಮಾರು ನೂರಕ್ಕೂ ಹೆಚ್ಚು ಬಡ ಹಾಗೂ ನಿರ್ಗತಿಕ ಕುಟುಂಬಗಳು ಯಾವುದೇ ಮೂಲಭೂತ ಸೌಕರ್ಯ ಇಲ್ಲದ, ವಾಸ ಮಾಡಲು ಯೋಗ್ಯವಲ್ಲದ ಸ್ಥಳದಲ್ಲಿ,ಹೀನಾಯ ಸ್ಥಿತಿಯಲ್ಲಿ ಗುಡಿಸಲು ಹಾಗೂ ತಗಡಿನ ಶೆಡ್ಡಿನ ಮನೆ ನಿರ್ಮಾಣ ಮಾಡಿಕೊಂಡಿದ್ದು, ಅಲ್ಲಿಯೇ ವಾಸವಾಗಿದ್ದುಕೊಂಡು ಹೇರ್ ಪಿನ್, ಕೂದಲು, ಛತ್ರಿ ರಿಪೇರಿ, ಬೀಗ ರಿಪೇರಿ ಹೀಗೆ ಸಣ್ಣ ಪುಟ್ಟ ವ್ಯಾಪಾರ ಮತ್ತು ಕೂಲಿ ನಾಲಿ ಮಾಡಿಕೊಂಡು, ಅದರಿಂದ ಬರುವ ಪುಡಿಗಾಸಿನಿಂದಲೇ ಕುಟುಂಬ ಪೋಷಿಸುತ್ತಿದ್ದಾರೆ. ಇಲ್ಲ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಜಾಗತಿಕ ಕೈ ತೊಳೆಯುವ ದಿನ"(Global Hand Washing Day) ಆಚರಣೆ

ಹುಳಿಯಾರು, ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಜಾಗತಿಕ ಕೈ ತೊಳೆಯುವ ದಿನ”Global Hand Washing Day)ವನ್ನು ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯುಎಸಿ ಸಹಯೋಗದೊಂದಿಗೆ ಆಚರಿಸಲಾಯಿತು.  ಕಾಲೇಜಿನ ವಿದ್ಯಾರ್ಥಿಗಳಿಗೆ ಕೈ ತೊಳೆಯುವ ಪ್ರಾಮುಖ್ಯತೆ ಹಾಗೂ Transaction ಕಾಪಾಡಿಕೊಳ್ಳಲು ಕೈ ತೊಳೆಯುವುದು ಬಹಳ ಅಗತ್ಯವೆಂದು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಶ್ರೀಮತಿ ಸಂಗೀತ.ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಾಗತಿಕ ಕೈ ತೊಳೆಯುವ ದಿನವನ್ನು ಅಂತರರಾಷ್ಟ್ರೀಯ ನೈರ್ಮಲ್ಯ ವರ್ಷವಾದ 2008 ರಲ್ಲಿ  ಎಲ್ಲರಲ್ಲೂ ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ಬೆಳೆಸುವುದು ಹಾಗೂ ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಗ್ರಂಥಪಾಲಕರಾದ ಡಾ. ಲೋಕೇಶ್ ನಾಯಕ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೈ ನೈರ್ಮಲ್ಯದ ಕುರಿತು ತಮ್ಮ ಮನೆಯಲ್ಲಿ ಹಾಗೂ ಸುತ್ತಮುತ್ತಲಿನವರಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.  ಐಕ್ಯೂಎಸಿ ಸಂಚಾಲಕರಾದ ಪ್ರೊ. ಮಂಜುನಾಥ್ ಅವರು ಮಾತನಾಡಿ ಕೊರೋನ, ಅತಿಸಾರ, ನ್ಯೂಮೋನಿಯಾದಂತಹ ರೋಗಗಳ ವಿರುದ್ಧ ರಕ್ಷಿಸುವಲ್ಲಿ ಕೈ ನೈರ್ಮಲ್ಯ ಬಹಳ ಮಹತ್ವದ್ದು ಎಂದರು.  ಕನ್ನ

ಹುಳಿಯಾರಿನಲ್ಲಿ ವಿಶ್ವ ಕೈ ತೊಳೆಯುವ ದಿನ ಆಚರಣೆ

ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರ  ಮತ್ತು ಪಟ್ಟಣ ಪಂಚಾಯಿತಿ ಹುಳಿಯಾರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕೈತೊಳೆಯುವ ದಿನವನ್ನು ಆಚರಿಸಲಾಯಿತು .   ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೆಂಕಟರಾಮಯ್ಯ ಮಾತನಾಡಿ ಕೈ ತೊಳೆದುಕೊಳ್ಳುವ ಬಗ್ಗೆ ಜನರಿಗೆ ಮನವರಿಕೆ ಮಾಡಿ ಜಾಗೃತಿ ಉಂಟುಮಾಡಿದ್ದರು. ಮುಂದುವರೆದು ಮಾತನಾಡಿದ ಅವರು ಮಾನವನಿಗೆ ಬರುವ ಹಲವು ರೋಗಗಳಲ್ಲಿ ಕೈ ತೊಳೆಯದೆ ಆಹಾರ ಸೇವಿಸುವುದೇ ಕಾರಣ. ಕೈತೊಳೆಯದೆ ಆಹಾರ ಸ್ವೀಕರಿಸುವುದರಿಂದ ಅನೇಕ ವೈರಸ್ ಮತ್ತು ಬ್ಯಾಕ್ಟೀರಿಯಗಳು ನಮಗೆ ಗೊತ್ತಿಲ್ಲದಂತೆ ಬಾಯಿಯ ಮೂಲಕ ದೇಹಕ್ಕೆ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೈ ತೊಳೆಯುವುದು ಹಾಗೂ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕೈ ತೊಳೆಯುವ ದಿನ ಆಚರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೈ ತೊಳೆಯುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷತೆ ಮಾಡಿ ತೋರಿಸಲಾಯಿತು ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಭೂತಪ್ಪ ಕಂದಾಯ ಅಧಿಕಾರಿ ಪ್ರದೀಪ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಣೇಶ್ ಸೇರಿದಂತೆ ಹಲವರಿದ್ದರು.

ಇಂದು ಚಿಕ್ಕನಾಯಕನಹಳ್ಳಿಯ ನೆಹರು ಸರ್ಕಲ್‌ನಲ್ಲಿ ಒಂದು ದಿನದ ಜನಾಗ್ರಹ ಉಪವಾಸ ಸತ್ಯಾಗ್ರಹ

"ಮೌಲ್ಶಾಧಾರಿತ ರಾಜಕಾರಣ, ಭ್ರಷ್ಠಾಚಾರ ಮುಕ್ತ ಆಡಳಿತಕ್ಕಾಗಿ" ಕರ್ನಾಟಕ ರಾಷ್ರ್ಟಸಮಿತಿ ಪಕ್ಷ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಇಂದು ದಿನಾಂಕ 02-10-2022ರ ಗಾಂಧೀಜಯಂತಿಯಂದು ಚಿಕ್ಕನಾಯಕನಹಳ್ಳಿಯ ನೆಹರು ಸರ್ಕಲ್‌ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ.   ಈ ಕೆಳಕಂಡ ಸಮಸ್ಶೆಗಳ ಪರಿಹಾರಕ್ಕಾಗಿ.     1.ಸರ್ಕಾರಿಕಛೇರಿಗಳಲ್ಲಿನ ವ್ಶಾಪಕ ಭ್ರಷ್ಠಾಚಾರ. 2.ಅಕ್ರಮ ಮದ್ಶಮಾರಾಟ.   3.ಸರ್ಕಾರಿ ಕಾಮಗಾರಿಗಳಲ್ಲಿನ ಅಪಾರದರ್ಶಕತೆ ಮತ್ತು ಕಳಪೆಗುಣಮಟ್ಟ.  4."ಭಾರತಮಾಲಾ ರಸ್ತೆ ಯೋಜನೆ"ಗಾಗಿ ರೈತರ ಭೂಮಿವಶಪಡಿಸಿಕೊಳ್ಳುವುದನ್ನು ವಿರೋಧಿಸಿ.   5.ಗಣಿಭಾಧಿತಪ್ರದೇಶಕ್ಕೆ ಮೀಸಲಾದ ಹಣ ಕಂಟ್ರಾಕ್ಟ್ ದಂಧೆಗೆ ದುರ್ಬಳಕೆಯಾಗುವುದನ್ನು ವಿರೋಧಿಸಿ. 6.ರೈತರ ಭೂಮಿಯ ಹಕ್ಕನ್ನು ಭ್ರಷ್ಠ ಕಂದಾಯ ಇಲಾಖೆ ಅಧಿಕಾರಿಗಳಿಂದ ರಕ್ಷಿಸುವ ಬಗ್ಗೆ. 7.ನ್ಶಾಯಬೆಲೆ ಅಂಗಡಿಗಳಲ್ಲಿ ಬಡವರ ಪಾಲಿಗೆ ಕನ್ನಹಾಕುವುದನ್ನು ವಿರೋಧಿಸಿ. 8.ಚಳ್ಳಕೆರೆ - ಹಿರಿಯೂರು-ಹುಳಿಯಾರು- ಚಿಕ್ಕನಾಯಕನಹಳ್ಳಿ- ಕಿಬ್ಬನಹಳ್ಳಿಕ್ರಾಸ್-ತುರುವೇಕೇರೆ- ಚೆನ್ನರಾಯಪಟ್ಟಣ ರೈಲು ಮಾರ್ಗ ಅನುಷ್ಠಾನಕ್ಕಾಗಿ. 9.ಸರ್ಕಾರಿ ಕಾಮಗಾರಿಗಳಲ್ಲಿನ ಅಪಾರದರ್ಶತೆˌ ವಿವಿಧ ಯೋಜನೆಗಳಿಗಾಗಿ ರೈತರ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ. 10.ಎತ್ತಿನಹೊಳೆ ಯೋಜನೆಯ ಅವೈಙ್ಞಾನಿಕ ಕಾಮಗಾರಿ ವಿರೋಧಿಸಿ. ಒಂದು ದಿನದ ಜನಾಗ್ರಹ