ವಿಷಯಕ್ಕೆ ಹೋಗಿ

ವಕೀಲರು ರಾಷ್ಟ್ರ ನಿರ್ಮಾತೃಗಳು & ಸಂವಿಧಾನ ರಕ್ಷಕರು.

ಪ್ರತಿ ವರ್ಷ ಡಿಸೆಂಬರ್ 3 ರಂದು ವಕೀಲರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ...ಪ್ರತಿಯೊಂದು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವದಿಂದ ಪ್ರಾರಂಭವಾಗಿ ಆಯಾ ದೇಶದ ಸಂವಿಧಾನ ರಚಿಸುವಲ್ಲಿ ಮತ್ತು ರಚಿಸಿದ ಸಂವಿಧಾನವನ್ನು ರಕ್ಷಿಸುವಲ್ಲಿ ವಕೀಲವೃಂದದ್ದೆ ಸಿಂಹಪಾಲು.ಇಂತಹ ಶ್ರೇಷ್ಠ ವೃತ್ತಿ ವರ್ಗವನ್ನು ಗೌರವಿಸುವ ಸಲುವಾಗಿ & ಡಾ. ಬಾಬು ರಾಜೇಂದ್ರ ಪ್ರಸಾದ್ ರವರ ಜನ್ಮ ದಿನದ ಸವಿನೆನಪಿಗಾಗಿ ಈ ದಿನವನ್ನ ವಕೀಲರ ದಿನವನ್ನಾಗಿ ಆಚರಿಸಲಾಗುತ್ತದೆ.


              ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವ ವಹಿಸಿದವರಲ್ಲಿ ಬಹುತೇಕ ಮಂದಿ ವಕೀಲರೇ ಆಗಿದ್ದರು ಅಥವಾ ಆಳವಾಗಿ ಕಾನೂನಿನ ಬಗ್ಗೆ ಅಧ್ಯಯನ ನಡೆಸಿದವರಾಗಿದ್ದರು.ಉದಾಹರಣೆಗೆ ಲಾಲ ಲಜಪತ್ ರಾಯ್,ಮಹಾತ್ಮ ಗಾಂಧಿ,ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಬ್ ಭಾಯಿ ಪಟೇಲ್,ದಾದಾ ಬಾಯಿ ನವರೋಜಿ,ಸುರೇಂದ್ರ ನಾಥ್ ಬ್ಯಾನರ್ಜಿ,ಮದನಮೋಹನ್ ಮಾಳವೀಯ,ಲೋಕಮಾನ್ಯ ಬಾಲಗಂಗಾಧರ ನಾಥ ತಿಲಕ್,ಸಿ.ರಾಜ್ ಗೋಪಾಲ ಚಾರಿ ಈಗೆ ಹಲವಾರು ಮಹಾನೀಯರು ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದರು...

ಹಾಗೂ ಸ್ವಾತಂತ್ರ್ಯ ನಂತರದ ಸ್ವಾಭಿಮಾನಿ & ಸ್ವಾವಲಂಬಿ ಭಾರತ ನಿರ್ಮಾಣದ ಮಾರ್ಗದರ್ಶಿಯಾದ ನಮ್ಮ ಹೆಮ್ಮೆಯೆ ಸಂವಿಧಾನವನ್ನು ರಚಿಸುವಲ್ಲಿಯು ಕಾನೂನು ತಜ್ಞರ ಪಾತ್ರ ಅದ್ವಿತೀಯವಾದದ್ದು ಅದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್,ಬೆನಗಲ್ ನರಸಿಂಗ್ ರಾವ್,ಕೆ.ಎಮ್ ಮುನ್ಷಿ,ಎನ್ ಗೋಪಾಲ ಸ್ವಾಮಿ,ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್,ಮೊಹಮ್ಮದ್ ಸಾದುಲ್ಲ,ಬಿ,ಎಲ್,ಮಿತ್ತರ್ ಇತರರ ಕೊಡುಗೆ ಅನನ್ಯ.


                    ಜಗತ್ತಿನ ಬಹುತೇಕ ಸಂವಿಧಾನಗಳನ್ನ ಆಳವಾಗಿ ಅಧ್ಯಯನ ಮಾಡಿ ಆ ಸಂವಿಧಾನಗಳಲ್ಲಿ ಅಡಕವಾದ ಮತ್ತು ನಮ್ಮ ಭಾರತದ ವಾಸ್ತವಿಕತೆಗೆ ಅನುಗುಣವಾದ ಅಂಶಗಳನ್ನ ನಮ್ಮ ಸಂವಿಧಾನಕ್ಕೆ ಸೇರಿಸಿ ಬಹು ಸಧೃಡವಾದ ಸಂವಿಧಾನ ರಚಿಸಿದ ಕೀರ್ತಿಯ ಸಿಂಹಪಾಲು ವಕೀಲವೃತ್ತಿಗೆ ಸೇರುತ್ತದೆ ಎಂದರೆ ತಪ್ಪಾಗಲಾರದು.ವಕೀಲರು ಆಗಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಹಿಸಿದ್ದ ನಾಯಕತ್ವ, ಸಾಮರಸ್ಯತೆ,ಸಮನ್ವಯತೆ ಅಜರಾಮರ.ಇಂದು ನಾವು ನೋಡುತ್ತಿರುವ ಸಂವಿಧಾನ ದೇಶದ ಎಲ್ಲ ಕಾನೂನುಗಳ ಮೂಲ ಮತ್ತು ತಾಯಿಯೆಂದೆ ಹೇಳಬಹುದು.ಈ ಸಂವಿಧಾನದ ಆಶಯಕ್ಕೆ ಯಾವ ಕಾನೂನು ಕೂಡ ಧಕ್ಕೆ ತರುವಂತಿಲ್ಲ.ಬದಲಾಗುತ್ತಿರುವ ಕಾಲಕ್ಕೆ ಅನುಸಾರವಾಗಿ  ಅಧ್ಯಯನ ಮಾಡಿ ಸೂಕ್ತವಾಗಿ ವ್ಯಾಖ್ಯಾನ ಮಾಡುತ್ತಿರುವವರು ವಕೀಲರೆ.ಸಾಂವಿಧಾನಿಕ ಪೀಠಗಳನ್ನ ಅಲಂಕರಿಸಿ ಸೂಕ್ತ ತೀರ್ಪುಗಳನ್ನ ನೀಡುವವರೂ ಕೂಡ ಮೂಲತಃ ವಕೀಲರೇ ಆಗಿರುತ್ತಾರೆ.ಹಾಗಾಗಿ ವಕೀಲರ ಸ್ಥಾನಮಾನ ಮತ್ತು ಜವಾಬ್ದಾರಿ ಗಳನ್ನ ಯಾರು ಕೂಡ ಅಲ್ಲಗೆಳೆಯುವಂತಿಲ್ಲ.ಈ ರೀತಿಯ ವಕೀಲ ವೃಂದದ ಕೊಡುಗೆ ಮತ್ತು ಜವಾಬ್ದಾರಿ ಗಳನ್ನ ಅವಲೋಕಿಸುವ ಸಲುವಾಗಿ ಮತ್ತು ಡಾ.ಬಾಬು ರಾಜೇಂದ್ರಪ್ರಸಾದ್ ರವರ ಜನ್ಮ ದಿನದ ಸವಿನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 3 ರಂದು ವಕೀಲರ ದಿನ ವನ್ನಾಗಿ ದೇಶಾದ್ಯಂತ ಆಚರಿಸುವ ಮೂಲಕ. ಇಡೀ ವಕೀಲರ ವೃಂದಕ್ಕೆ ಗೌರವ ಸಮರ್ಪಿಸಲಾಗುತ್ತಿದೆ.


               ವಕೀಲ ವೃತ್ತಿ ಕೇವಲ ವೃತ್ತಿಯಲ್ಲ ಅದೊಂದು ಸಾಮಾಜಿಕ ಜವಾಬ್ದಾರಿ.ಈ ಮಾತು ಅಕ್ಷರಶಃ ಸತ್ಯ..ಸದಾ ಅಧ್ಯಯನ ಶೀಲರಾಗಿ ಇರುವಂತಹ ವೃತ್ತಿ ಎಂದರೆ ವಕೀಲ ವೃತ್ತಿ. ಪ್ರತಿ ದಿನ,ಪ್ರತಿ ಕ್ಷಣ ಹೊಸ ವಿಚಾರಗಳನ್ನು.ಹೊಸ ಅನುಭವಗಳನ್ನು ಪಡೆಯುತ್ತ ಹೋಗುವ ವೃತ್ತಿ ಇದು.ಅದಕ್ಕಾಗಿಯೇ ವಕೀಲರನ್ನ ಮತ್ತು ಕಾನೂನು ಪಂಡಿತರನ್ನು Learned Counsel (ಪ್ರಾಜ್ಞ)ಎಂದು ಸಂಭೋದಿಸುತ್ತಾರೆ.ನ್ಯಾಯಾಧೀಶರು & ವಕೀಲರು ನ್ಯಾಯಾಂಗ ವ್ಯವಸ್ಥೆಯ ಎರಡು ಆಧಾರ ಸ್ಥಂಭಗಳೆಂದು ಕರೆಯುವ ವಾಡಿಕೆ ಇದೆ.ಪರಸ್ಪರ ಪ್ರೀತಿ,ವಿಶ್ವಾಸ,ಪ್ರಾಮಾಣಿಕತೆಯಿಂದ ನ್ಯಾಯಾಲಯದ ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವುದು ಈರ್ವರ ಜವಾಬ್ದಾರಿಯಾಗಿದೆ.


                     ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ನ್ಯಾಯಾಂಗ ವ್ಯವಸ್ಥೆಯು ಒಂದು.ಈಗಾಗಲೇ ಸುಮಾರು 24 ಲಕ್ಷ ವಕೀಲರು ನೋಂದಾಣಿ ಮಾಡಿಕೊಂಡು ನ್ಯಾಯಾಂಗದ ಹಲವಾರು ವಿಭಾಗಗಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ವಕೀಲ ವೃತ್ತಿಯನ್ನು "ನೋಬೆಲ್ ಪ್ರೊಫೆಷನ್" ಎಂದು ಕೊಂಡಾಡುವಂತಹ ಸಂಧರ್ಭದಲ್ಲಿ ವಕೀಲರು ಪ್ರಾಮಾಣಿಕತೆಯಿಂದ. ಸಾಮಾಜಿಕ ಕಳಳಿಯಿಂದ ವೃತ್ತಿಧರ್ಮ ಪಾಲಿಸಬೇಕಾಗಿದೆ.ಸಮಾಜದ ಡೊಂಕನ್ನು ತಿದ್ದುವಲ್ಲಿಯು ವಕೀಲರ ಪಾತ್ರ ಹಿರಿಯದ್ದೆ ಆಗಿದೆ ಆಗಾಗಿ ವಕೀಲರನ್ನು "ಸಾಮಾಜಿಕ ವೈದ್ಯರು" ಹಾಗೂ "ಸಾಮಾಜಿಕ ಎಂಜಿನಿಯರ್" ಗಳು ಎಂದು ಸಂಭೋಧಿಸಲಾಗಿದೆ.

ಪ್ರತಿಯೊಬ್ಬ ವಕೀಲರು ಕೂಡ ದೀನ ದಲಿತರ,ಶೋಷಿತರ,ಬಡವರ,ಅನ್ಯಾಯಕ್ಕೆ ಒಳಾಗಾದವರ ಧ್ವನಿಯಾಗಿ ಪ್ರಾಮಾಣಿಕತೆಯಿಂದ ನಿಸ್ವಾರ್ಥಪರತೆಯಿಂದ ತಮ್ಮ ವೃತ್ತಿ ನಿರ್ವಹಿಸಿದಲ್ಲಿ ಮಾತ್ರ ಭವ್ಯ ಭಾರತವನ್ನು ಕಟ್ಟಬಹುದು...


 ವಕೀಲ ವೃತ್ತಿಗೆ ಹೊಸದಾಗಿ ಬರುವ ಯುವ ವಕೀಲರಿಗೆ ಮಾರ್ಗದರ್ಶನ,ಪ್ರೋತ್ಸಾಹ,ಅವಕಾಶ ನೀಡುವುದು ಹಿರಿಯ ವಕೀಲರದ್ದಾದರೆ,ಗೌರವದಿಂದ ಸಿಕ್ಕಿದ ಅವಕಾಶಗಳನ್ನ ಶ್ರದ್ಧೆಯಿಂದ ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ವೃತ್ತಿ ನೈಪುಣ್ಯತೆ ಗಳಿಸುವುದು ಕಿರಿಯ ವಕೀಲರ ಕರ್ತವ್ಯವಾಗಿದೆ.

ಅಂದಿನಿಂದ ಇಂದಿನವರೆಗೂ ಸಮಾಜಕ್ಕೆ ನಾಯಕತ್ವ ವಹಿಸಿಕೊಂಡು ಬಂದಿರುವ ಕಾನೂನು ಕ್ಷೇತ್ರ ನಿಜಕ್ಕೂ ಮಹತ್ತರವಾದುದು.ಮತ್ತು ಈ ಕ್ಷೇತ್ರದ ಸಾಧನೆಯೂ ಶ್ಲಾಘನೀಯ.ಇದು ಈ ಮುಂದೆಯೂ ಹೀಗೆಯೇ ಮುಂದುವರೆಯಲಿ....


 ಪ್ರಶಾಂತ್ ದಸೂಡಿ

ವಕೀಲರು & ಕಾನೂನು ಸಲಹೆಗಾರರು..

ದೂರವಾಣಿ:8197579795

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...