ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ ಅದುರಿದ ಭೂಮಿ:ಭಯಭೀತರಾದ ಜನ

ಹುಳಿಯಾರು ಸೇರಿದಂತೆ ಗಡಿಭಾಗದ ಹೊಸದುರ್ಗ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ ಅಲ್ಪ ತೀವ್ರತೆಯ ಭೂ ಕಂಪವಾಗಿದ್ದು,ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲಾಗಿದೆ.
ಮೇಲನಹಳ್ಳಿಯ ಗ್ರಾಮದಲ್ಲಿ ಮನೆಯಿಂದ ಭಯಭೀತರಾಗಿ ಆಚೆ ಓಡಿಬಂದ ಜನ ಭೂಕಂಪನದ ಬಗ್ಗೆ ಚರ್ಚಿಸುತ್ತಿರುವುದು.
ಇಂದು ಮುಂಜಾನೆ ೬.೪೦ರ ಸಮಯದಲ್ಲಿ ಹುಳಿಯಾರು ಮತ್ತಿತರ ಕೆಲ ಗ್ರಾಮಗಳಲ್ಲಿ ಐದಾರು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ್ದು ಮನೆಯಲ್ಲಿದ್ದವರು ಇದರ ತೀವ್ರತೆಗೆ ಭಯಭೀತರಾಗಿ ಆಚೆ ಓಡಿಬಂದಿದ್ದಾರೆ. ಮನೆಯಲ್ಲಿ ಮಲಗಿದ್ದವರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ,ಗಾಬರಿಯಿಂದ ಏನಾಗಿದೆ ಎತ್ತಾಗಿದೆ ಎಂದು ತಿಳಿಯದೆ ಆಚೆ ಓಡಿಬಂದಿದ್ದಾರೆ.ಒಳಗಿದ್ದವರನ್ನು ಕೂಗಿ ಕರೆದಿದ್ದಾರೆ.ಭೂಕಂಪನದ ತೀವ್ರತೆ ಮಹಡಿ ಮೇಲಿದ್ದವರಿಗೆ ಹೆಚ್ಚಿಗೆ ಅನುಭವಕ್ಕೆ ಬಂದಿದ್ದು ಇಳಿದು ಓಡಿದ್ದಷ್ಟೆ ಗೊತ್ತು ಎನ್ನುತ್ತಾರೆ.ಕೆಲವೇ ಸೆಂಕೆಂಡುಗಳಷ್ಟು ಕಾಲದ ಕಂಪನವಾದ್ದರಿಂದ ಕೆಲವರಿಗೆ ಏನಾಯಿತೆಂದು ತಿಳಿಯದೆ ಆತಂಕದಲ್ಲಿದ್ದರು.ಅಕ್ಕಪಕ್ಕದವರ ಜೊತೆ ತಾವು ಅನುಭಸಿದ್ದನ್ನು ಹೇಳಿಕೊಂಡು ಮುಂದೇನು ಎಂದು ಅವರಿವರಿಗೆ ಫೋನ್ ಮಾಡುತ್ತಿದ್ದ ದೃಶ್ಯ ಕಂಡುಬಂತು.ಒಟ್ಟಾರೆ ಎಲ್ಲೆಡೆಯೂ ಭೂಕಂಪನದ್ದೆ ಮಾತಾಗಿದ್ದು .ಭೂಕಂಪನದಿಂದಾಗಿ ಹೋಬಳಿಯಲ್ಲಿ ಯಾವುದೇ ಸಾವು ನೋವು,ಮತ್ತಿತರ ಅವಘಡಗಳು ಸಂಭವಿಸಿರುವುದು ವರದಿಯಾಗಿಲ್ಲ.

               ಹುಳಿಯಾರು,ಕಂಪನಹಳ್ಳಿ,ಯಗಚೀಹಳ್ಳಿ,ಗಾಣಧಾಳು,ಹೊಯ್ಸಳಕಟ್ಟೆ,ಕಲ್ಲೇನಹಳ್ಳಿ,ಬೆಳ್ಳಾರ,ದಸೂಡಿ, ದಬ್ಬಗುಂಟೆ,ಮರೆನಾಡುಪಾಳ್ಯ,ರಂಗನಕೆರೆ,ಸೋಮನಹಳ್ಳಿ,ಮೇಲನಹಳ್ಳಿ,ಹನುಮಂತನಪಾಳ್ಯ,ಕೆಂಕೆರೆ, ತಮ್ಮಡಿಹಳ್ಳಿ, ಮರಾಟಿಪಾಳ್ಯ,ಹೊಸಹಳ್ಳಿ, ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯದಲ್ಲೂ ಇದೇ ಅನುಭವವಾಗಿದ್ದು ಎಲ್ಲಡೆಯೂ ಇದೇ ಸಮಯದಲ್ಲಿ ಭೂ ಕಂಪನವಾಗಿದೆ.ಅಲ್ಲದೆ ಹುಳಿಯಾರಿನಿಂದ ಹದಿನೈದು ಕಿಮೀ ವ್ಯಾಪ್ತಿಯ ಹೊಸದುರ್ಗ ತಾಲ್ಲೂಕಿಗೆ ಸೇರುವ ಕಂಚೀಪುರ, ಚಿಕ್ಕಬ್ಯಾಲದಕೆರೆ,ದೊಡ್ದಬ್ಯಾಲದಕೆರೆ,ಅರಿಶಿನಗುಂಡಿ, ಬ್ಯಾರಮಡು, ಹಾಲುಮಾದೇನಹಳ್ಳಿ, ಪಿಲಾಜಹಳ್ಳಿ ಸೇರಿದಂತೆ ಕೆಲ ಗ್ರಾಮದಲ್ಲಿ ಕಂಪನದ ಅನುಭವವಾಗಿರುವುದಾಗಿ ತಿಳಿದುಬಂದಿದೆ.
   
       ಭೂಕಂಪನದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲವಾದರೂ ಹುಳಿಯಾರು ಸುತ್ತಮುತ್ತ ಕೆಲ ಮನೆಗಳಲ್ಲಿ ಪಾತ್ರೆಗಳು ಬಿದ್ದುದಾಗಿ,ಮಲಗಿದ್ದ ಮಂಚ ಅಲುಗಾಡಿದ್ದಾಗಿ,ತೀರು ಬಿದ್ದಿದ್ದಾಗಿ,ಮನೆಗಳ ಶೀಟು ಅದಿರಿದ್ದಾಗಿ,ಮಣ್ಣಿನ ಮನೆಯ ಗೋಡೆಗಳಿಂದ ಮಣ್ಣು ಉದುರಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಆದರೆ ಹುಳಿಯಾರಿಗೆ ೨೦ ಕಿಮೀ ದೂರವಿರುವ ಹೊಸದುರ್ಗ ತಾಲ್ಲೂಕಿನ ಕಂಚೀಪುರ, ಚಿಕ್ಕಬ್ಯಾಲದಕೆರೆ,ದೊಡ್ದಬ್ಯಾಲದಕೆರೆ ಮುಂತಾದೆಡೆ ಇಲ್ಲಿಗಿಂತ ಸ್ವಲ್ಪ ಹೆಚ್ಚಿನ ತೀವ್ರತೆಯ ಭೂಕಂಪವಾಗಿದ್ದು ಕೆಲವು ಮನೆ ಹಾಗು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

        ಇದುವರೆಗೂ ಹುಳಿಯಾರು ಭಾಗಕ್ಕೆ ಭೂಕಂಪನ ಮಾಪಕ ಕೇಂದ್ರದ ಅಧಿಕಾರಿಗಳ್ಯಾರು ಭೇಟಿ ನೀಡಿಲ್ಲ. ಭೂಮಿ ಕಂಪಿಸಿದ್ದಕ್ಕೆ ಪ್ರಮುಖ ಕಾರಣ ತಿಳಿದುಬಂದಿಲ್ಲ
---------------------------
ಮುಂಜಾನೆ ಎದ್ದುಕೂತಿದ್ದವನಿಗೆ ಬಾಗಿಲು,ಕಿಟಕಿಯೆಲ್ಲ ಅಲ್ಲಾಡಿದ್ದ ಅನುಭವವಾಯ್ತು.ಜೋರಾಗಿ ಶಬ್ಧವಾಯ್ತು.ತಕ್ಷಣ ಆಚೆ ಬಂದು ಮನೆ ಸುತ್ತಾ ಏನಾಯ್ತೆಂದು ನೋಡಿದೆ.ತಕ್ಷಣವೇ ಮನೆಯಲ್ಲಿದ್ದವರನೆಲ್ಲಾ ಆಚೆ ಕರೆದೆ.ನನ್ನಹಾಗೆಯೇ ಎಲ್ಲಾ ಮನೆಯವರು ಆಚೆ ಬಂದಿದ್ದರಿಂದ ಇದು ಭೂಕಂಪ ಅಂತ ಗೊತ್ತಾಯ್ತು.-ಹುಳಿಯಾರು ಕುಮಾರ್-ಟೌನ್ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ.
------------

ಬೆಳಿಗ್ಗೆ ಎದ್ದವನೇ ತೋಟಕ್ಕೆ ಹೋಗಿದ್ದೆ.೬.೪೦ರ ಸಮಯದಲ್ಲಿ ನಿಂತಿದ್ದ ಜಾಗದಲ್ಲಿ ಗಡಗಡ ಶಬ್ಧಬಂತು.ಕೆಲವೊಮ್ಮೆ ದೊಡ್ಡಲಾರಿ ಹಾಗೂ ಟ್ರಾಕ್ಟರ್ ವೇಗವಾಗಿ ಹೋದಾಗ ಇದೇರೀತಿ ಶಬ್ದ ಬರ್ತಿತ್ತು.ಅದೇ ರೀತಿ ಇರಬೇಕು ಅಂದುಕೊಂಡು ಸುಮ್ಮನಾದೆ.ಅಲ್ಲೇ ಇರುವ ಮನೆಯವರೆಲ್ಲಾ ಆಚೆ ಓಡಿಬಂದು ಮನೆಯೆಲ್ಲಾ ಅದುರಿದ ಹಾಗಾಯ್ತು ಅಂದಾಗಲೇ ನನಗೆ ಭೂಕಂಪವಾಗಿದ್ದು ಗೊತ್ತಾಯ್ತು : ಪರಪ್ಪ-ಲಿಂಗಪ್ಪನಪಾಳ್ಯ.
-----------

ಮನೆಯಲ್ಲಿ ಮಲಗಿದ್ದೆ.ಮಂಚದಿಂದ ಎತ್ತಾಕಿದ್ದಂಗಾಯ್ತು.ನಮ್ಮ ಮನೆಯಾಕೆ ಬೇಗ ಆಚೆಗೆ ಬಾ ಅಂತ ಕೂಗಿದರು.ಗಾಬರಿಯಲ್ಲಿ ಎದ್ದು ಆಚೆಗೆ ಬಂದೆ.ನಮ್ಮ ಮನೆ ಸುತ್ತಮುತ್ತ ಜನ ಭೂಕಂಪ ಆಯ್ತು ಅಂದ್ರು.ಇದೇನು ಕೇಡುಗಾಲ ಬಂತಪ್ಪ ಅಂದುಕೊಂಡೆ : ಬಳ್ಳಾರಿ ವೀರಭದ್ರಯ್ಯ-ಕೆಂಕೆರೆ
----------------
ಭೂಕಂಪನ ಅನ್ನುವುದು ಭೂಮಿಯಡಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ.ಭೂಪದರದಲ್ಲಿ ಸಂವಹನ ಅಲೆಗಳ ಒತ್ತಡ(ಸಿಸ್ಮಿಕ್ ವೇವ್) ಜಾಸ್ತಿಯಾದಾಗ ಒಂದು ಹಂತದಲ್ಲಿ ಕಂಪನವಾಗುತ್ತದೆ.ಆಗ ಭೂಮಿ ನಡುಗುತ್ತದೆ. ತೀವ್ರತೆ ಜಾಸ್ತಿಯಾದಾಗ ಮಾತ್ರ ನಮ್ಮ ಅನುಭವಕ್ಕೆ ಬರುತ್ತದೆ.ಭೂಮಿಯನ್ನು ನೀರಿಗಾಗಿ ಸಾವಿರಾರು ಅಡಿ ಆಳಕ್ಕೆ ಬೋರ್ ಹಾಕುತ್ತಿರುವುದು ,ಗಣಿಗಾರಿಕೆಯಿಂದ ನಾಶ ಮಾಡುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ. :ಯಗಚೀಹಳ್ಳಿ ರಾಮಕೃಷ್ಣಪ್ಪ,ಮಧುಗಿರಿ ವಿಜ್ಞಾನ ಕೇಂದ್ರದ ಅಧ್ಯಕ್ಷರು.

-----------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...