ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ ಅದುರಿದ ಭೂಮಿ:ಭಯಭೀತರಾದ ಜನ

ಹುಳಿಯಾರು ಸೇರಿದಂತೆ ಗಡಿಭಾಗದ ಹೊಸದುರ್ಗ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ ಅಲ್ಪ ತೀವ್ರತೆಯ ಭೂ ಕಂಪವಾಗಿದ್ದು,ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲಾಗಿದೆ.
ಮೇಲನಹಳ್ಳಿಯ ಗ್ರಾಮದಲ್ಲಿ ಮನೆಯಿಂದ ಭಯಭೀತರಾಗಿ ಆಚೆ ಓಡಿಬಂದ ಜನ ಭೂಕಂಪನದ ಬಗ್ಗೆ ಚರ್ಚಿಸುತ್ತಿರುವುದು.
ಇಂದು ಮುಂಜಾನೆ ೬.೪೦ರ ಸಮಯದಲ್ಲಿ ಹುಳಿಯಾರು ಮತ್ತಿತರ ಕೆಲ ಗ್ರಾಮಗಳಲ್ಲಿ ಐದಾರು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ್ದು ಮನೆಯಲ್ಲಿದ್ದವರು ಇದರ ತೀವ್ರತೆಗೆ ಭಯಭೀತರಾಗಿ ಆಚೆ ಓಡಿಬಂದಿದ್ದಾರೆ. ಮನೆಯಲ್ಲಿ ಮಲಗಿದ್ದವರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ,ಗಾಬರಿಯಿಂದ ಏನಾಗಿದೆ ಎತ್ತಾಗಿದೆ ಎಂದು ತಿಳಿಯದೆ ಆಚೆ ಓಡಿಬಂದಿದ್ದಾರೆ.ಒಳಗಿದ್ದವರನ್ನು ಕೂಗಿ ಕರೆದಿದ್ದಾರೆ.ಭೂಕಂಪನದ ತೀವ್ರತೆ ಮಹಡಿ ಮೇಲಿದ್ದವರಿಗೆ ಹೆಚ್ಚಿಗೆ ಅನುಭವಕ್ಕೆ ಬಂದಿದ್ದು ಇಳಿದು ಓಡಿದ್ದಷ್ಟೆ ಗೊತ್ತು ಎನ್ನುತ್ತಾರೆ.ಕೆಲವೇ ಸೆಂಕೆಂಡುಗಳಷ್ಟು ಕಾಲದ ಕಂಪನವಾದ್ದರಿಂದ ಕೆಲವರಿಗೆ ಏನಾಯಿತೆಂದು ತಿಳಿಯದೆ ಆತಂಕದಲ್ಲಿದ್ದರು.ಅಕ್ಕಪಕ್ಕದವರ ಜೊತೆ ತಾವು ಅನುಭಸಿದ್ದನ್ನು ಹೇಳಿಕೊಂಡು ಮುಂದೇನು ಎಂದು ಅವರಿವರಿಗೆ ಫೋನ್ ಮಾಡುತ್ತಿದ್ದ ದೃಶ್ಯ ಕಂಡುಬಂತು.ಒಟ್ಟಾರೆ ಎಲ್ಲೆಡೆಯೂ ಭೂಕಂಪನದ್ದೆ ಮಾತಾಗಿದ್ದು .ಭೂಕಂಪನದಿಂದಾಗಿ ಹೋಬಳಿಯಲ್ಲಿ ಯಾವುದೇ ಸಾವು ನೋವು,ಮತ್ತಿತರ ಅವಘಡಗಳು ಸಂಭವಿಸಿರುವುದು ವರದಿಯಾಗಿಲ್ಲ.

               ಹುಳಿಯಾರು,ಕಂಪನಹಳ್ಳಿ,ಯಗಚೀಹಳ್ಳಿ,ಗಾಣಧಾಳು,ಹೊಯ್ಸಳಕಟ್ಟೆ,ಕಲ್ಲೇನಹಳ್ಳಿ,ಬೆಳ್ಳಾರ,ದಸೂಡಿ, ದಬ್ಬಗುಂಟೆ,ಮರೆನಾಡುಪಾಳ್ಯ,ರಂಗನಕೆರೆ,ಸೋಮನಹಳ್ಳಿ,ಮೇಲನಹಳ್ಳಿ,ಹನುಮಂತನಪಾಳ್ಯ,ಕೆಂಕೆರೆ, ತಮ್ಮಡಿಹಳ್ಳಿ, ಮರಾಟಿಪಾಳ್ಯ,ಹೊಸಹಳ್ಳಿ, ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯದಲ್ಲೂ ಇದೇ ಅನುಭವವಾಗಿದ್ದು ಎಲ್ಲಡೆಯೂ ಇದೇ ಸಮಯದಲ್ಲಿ ಭೂ ಕಂಪನವಾಗಿದೆ.ಅಲ್ಲದೆ ಹುಳಿಯಾರಿನಿಂದ ಹದಿನೈದು ಕಿಮೀ ವ್ಯಾಪ್ತಿಯ ಹೊಸದುರ್ಗ ತಾಲ್ಲೂಕಿಗೆ ಸೇರುವ ಕಂಚೀಪುರ, ಚಿಕ್ಕಬ್ಯಾಲದಕೆರೆ,ದೊಡ್ದಬ್ಯಾಲದಕೆರೆ,ಅರಿಶಿನಗುಂಡಿ, ಬ್ಯಾರಮಡು, ಹಾಲುಮಾದೇನಹಳ್ಳಿ, ಪಿಲಾಜಹಳ್ಳಿ ಸೇರಿದಂತೆ ಕೆಲ ಗ್ರಾಮದಲ್ಲಿ ಕಂಪನದ ಅನುಭವವಾಗಿರುವುದಾಗಿ ತಿಳಿದುಬಂದಿದೆ.
   
       ಭೂಕಂಪನದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲವಾದರೂ ಹುಳಿಯಾರು ಸುತ್ತಮುತ್ತ ಕೆಲ ಮನೆಗಳಲ್ಲಿ ಪಾತ್ರೆಗಳು ಬಿದ್ದುದಾಗಿ,ಮಲಗಿದ್ದ ಮಂಚ ಅಲುಗಾಡಿದ್ದಾಗಿ,ತೀರು ಬಿದ್ದಿದ್ದಾಗಿ,ಮನೆಗಳ ಶೀಟು ಅದಿರಿದ್ದಾಗಿ,ಮಣ್ಣಿನ ಮನೆಯ ಗೋಡೆಗಳಿಂದ ಮಣ್ಣು ಉದುರಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಆದರೆ ಹುಳಿಯಾರಿಗೆ ೨೦ ಕಿಮೀ ದೂರವಿರುವ ಹೊಸದುರ್ಗ ತಾಲ್ಲೂಕಿನ ಕಂಚೀಪುರ, ಚಿಕ್ಕಬ್ಯಾಲದಕೆರೆ,ದೊಡ್ದಬ್ಯಾಲದಕೆರೆ ಮುಂತಾದೆಡೆ ಇಲ್ಲಿಗಿಂತ ಸ್ವಲ್ಪ ಹೆಚ್ಚಿನ ತೀವ್ರತೆಯ ಭೂಕಂಪವಾಗಿದ್ದು ಕೆಲವು ಮನೆ ಹಾಗು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

        ಇದುವರೆಗೂ ಹುಳಿಯಾರು ಭಾಗಕ್ಕೆ ಭೂಕಂಪನ ಮಾಪಕ ಕೇಂದ್ರದ ಅಧಿಕಾರಿಗಳ್ಯಾರು ಭೇಟಿ ನೀಡಿಲ್ಲ. ಭೂಮಿ ಕಂಪಿಸಿದ್ದಕ್ಕೆ ಪ್ರಮುಖ ಕಾರಣ ತಿಳಿದುಬಂದಿಲ್ಲ
---------------------------
ಮುಂಜಾನೆ ಎದ್ದುಕೂತಿದ್ದವನಿಗೆ ಬಾಗಿಲು,ಕಿಟಕಿಯೆಲ್ಲ ಅಲ್ಲಾಡಿದ್ದ ಅನುಭವವಾಯ್ತು.ಜೋರಾಗಿ ಶಬ್ಧವಾಯ್ತು.ತಕ್ಷಣ ಆಚೆ ಬಂದು ಮನೆ ಸುತ್ತಾ ಏನಾಯ್ತೆಂದು ನೋಡಿದೆ.ತಕ್ಷಣವೇ ಮನೆಯಲ್ಲಿದ್ದವರನೆಲ್ಲಾ ಆಚೆ ಕರೆದೆ.ನನ್ನಹಾಗೆಯೇ ಎಲ್ಲಾ ಮನೆಯವರು ಆಚೆ ಬಂದಿದ್ದರಿಂದ ಇದು ಭೂಕಂಪ ಅಂತ ಗೊತ್ತಾಯ್ತು.-ಹುಳಿಯಾರು ಕುಮಾರ್-ಟೌನ್ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ.
------------

ಬೆಳಿಗ್ಗೆ ಎದ್ದವನೇ ತೋಟಕ್ಕೆ ಹೋಗಿದ್ದೆ.೬.೪೦ರ ಸಮಯದಲ್ಲಿ ನಿಂತಿದ್ದ ಜಾಗದಲ್ಲಿ ಗಡಗಡ ಶಬ್ಧಬಂತು.ಕೆಲವೊಮ್ಮೆ ದೊಡ್ಡಲಾರಿ ಹಾಗೂ ಟ್ರಾಕ್ಟರ್ ವೇಗವಾಗಿ ಹೋದಾಗ ಇದೇರೀತಿ ಶಬ್ದ ಬರ್ತಿತ್ತು.ಅದೇ ರೀತಿ ಇರಬೇಕು ಅಂದುಕೊಂಡು ಸುಮ್ಮನಾದೆ.ಅಲ್ಲೇ ಇರುವ ಮನೆಯವರೆಲ್ಲಾ ಆಚೆ ಓಡಿಬಂದು ಮನೆಯೆಲ್ಲಾ ಅದುರಿದ ಹಾಗಾಯ್ತು ಅಂದಾಗಲೇ ನನಗೆ ಭೂಕಂಪವಾಗಿದ್ದು ಗೊತ್ತಾಯ್ತು : ಪರಪ್ಪ-ಲಿಂಗಪ್ಪನಪಾಳ್ಯ.
-----------

ಮನೆಯಲ್ಲಿ ಮಲಗಿದ್ದೆ.ಮಂಚದಿಂದ ಎತ್ತಾಕಿದ್ದಂಗಾಯ್ತು.ನಮ್ಮ ಮನೆಯಾಕೆ ಬೇಗ ಆಚೆಗೆ ಬಾ ಅಂತ ಕೂಗಿದರು.ಗಾಬರಿಯಲ್ಲಿ ಎದ್ದು ಆಚೆಗೆ ಬಂದೆ.ನಮ್ಮ ಮನೆ ಸುತ್ತಮುತ್ತ ಜನ ಭೂಕಂಪ ಆಯ್ತು ಅಂದ್ರು.ಇದೇನು ಕೇಡುಗಾಲ ಬಂತಪ್ಪ ಅಂದುಕೊಂಡೆ : ಬಳ್ಳಾರಿ ವೀರಭದ್ರಯ್ಯ-ಕೆಂಕೆರೆ
----------------
ಭೂಕಂಪನ ಅನ್ನುವುದು ಭೂಮಿಯಡಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ.ಭೂಪದರದಲ್ಲಿ ಸಂವಹನ ಅಲೆಗಳ ಒತ್ತಡ(ಸಿಸ್ಮಿಕ್ ವೇವ್) ಜಾಸ್ತಿಯಾದಾಗ ಒಂದು ಹಂತದಲ್ಲಿ ಕಂಪನವಾಗುತ್ತದೆ.ಆಗ ಭೂಮಿ ನಡುಗುತ್ತದೆ. ತೀವ್ರತೆ ಜಾಸ್ತಿಯಾದಾಗ ಮಾತ್ರ ನಮ್ಮ ಅನುಭವಕ್ಕೆ ಬರುತ್ತದೆ.ಭೂಮಿಯನ್ನು ನೀರಿಗಾಗಿ ಸಾವಿರಾರು ಅಡಿ ಆಳಕ್ಕೆ ಬೋರ್ ಹಾಕುತ್ತಿರುವುದು ,ಗಣಿಗಾರಿಕೆಯಿಂದ ನಾಶ ಮಾಡುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ. :ಯಗಚೀಹಳ್ಳಿ ರಾಮಕೃಷ್ಣಪ್ಪ,ಮಧುಗಿರಿ ವಿಜ್ಞಾನ ಕೇಂದ್ರದ ಅಧ್ಯಕ್ಷರು.

-----------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.