ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಜೀವನದಲ್ಲಿ ಬೆಳೆಯಲು ಸಾಧ್ಯ" : ಡಾ|| ರೆ. ಮ. ನಾಗಭೂಷಣ್

ಹುಳಿಯಾರು : "ಹೈನುಗಾರಿಕೆಯಲ್ಲಿ ವರ್ಗೀಸ್ ಕುರಿಯನ್‌ವರ ಪಾತ್ರವನ್ನು ನಾವೆಲ್ಲರೂ ಇಂದಿಗೂ ನೆನೆಯಬೇಕು. ಪ್ರಸ್ತುತ ಭಾರತದ ಜನಸಂಖ್ಯೆಗೆ ಎಲ್ಲರಿಗೂ ಹಾಲಿನ ಉತ್ಪನ್ನಗಳನ್ನು ಒದಗಿಸುವ ಅಗತ್ಯತೆಯಿದೆ. ಹಾಗಾಗಿ ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ" ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕ್‌ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ರೆ.ಮ.ನಾಗಭೂಷಣ್ ತಿಳಿಸಿದರು .                          ಸಮೀಪದ ಬೆಳಗುಲಿ ಗ್ರಾಮದಲ್ಲಿ ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ರ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು "ಕರುಣ - ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ" ದ ಬಗ್ಗೆ  ಮಾಹಿತಿ ನೀಡಿದ ಅವರು ಹಸುಗಳ ವಿವಿಧ ತಳಿಗಳನ್ನು ತಿಳಿಸುತ್ತಾ, "ಅವುಗಳಿಗೂ ಮನುಷ್ಯರಂತೆ ಪೌಷ್ಟಿಕಯುತವಾದ ಸಮತೋಲನ ಆಹಾರವನ್ನು ನೀಡಲು ಅವಶ್ಯಕತೆ ಇದೆ" ಎಂದರು.                           ಪಶು ಸಂಗೋಪನೆಯನ್ನು ಮಾಡಿ ಯಶಸ್ವಿಯಾದವರ ಉದಾಹರಣೆಗಳನ್ನು ನೀಡಿದರು. ಮುಂದುವರಿದು, "ಯ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಕಡೆಗೂ ಪತ್ತೆಯಾದ ಬಾಡಿಗೆ ವಸೂಲಾತಿಯ ಡಿಸಿಬಿ ರಿಜಿಸ್ಟರ್

ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸೇರಿದ ಮಳಿಗೆಗಳ ಬಾಡಿಗೆ ವಸುಲಾತಿಯ ಜಮಾ ಖರ್ಚಿನ ಪುಸ್ತಕ ಅಂದರೆ ಬೇಡಿಕೆ- ವಸೂಲಿ- ಬಾಕಿ ವಹಿ ನಮೂದಿಸುವ ಡಿಸಿಬಿ ರಿಜಿಸ್ಟರ್ ಕಡೆಗೂ ಪತ್ತೆಯಾಗಿದೆ.              ಹೌದು ಇತ್ತೀಚಿಗಷ್ಟೇ ಕೆಲವೊಂದು ಮಳಿಗೆಗಳಿಗೆ ಬಾಡಿಗೆ ಬಾಕಿ ಇದೆ ಎಂದು ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ನಾವುಗಳು ಬಾಡಿಗೆ ಪಾವತಿಸಿದ್ದರು ಸಹ ಜಮಾ ಖರ್ಚು ಮಾಡಿಲ್ಲ . ಪಂಚಾಯಿತಿಯವರು ನಿರ್ವಹಣೆ ಮಾಡಬೇಕಾಗಿರುವ ಡಿಸಿಬಿ ರಿಜಿಸ್ಟರ್ ತೋರಿಸಿ, ಅದರಲ್ಲಿ ಬಾಡಿಗೆ ಬಾಕಿ ಇದ್ದಲ್ಲಿ ಕಟ್ಟುತ್ತೇವೆ ಎಂದು ಮಳಿಗೆದಾರರು ಡಿಸಿಬಿ ರಿಜಿಸ್ಟರ್ ತೋರಿಸಿಲೇಬೇಕು ಎಂದು ಪಟ್ಟು ಹಿಡಿದಿದ್ದರು. ನಾವು ನಿರ್ವಹಿಸುವ ಡಿಸಿಬಿ ಬುಕ್ ಇದೇ ಎಂದು ತೋರಿಸಿದ್ದ ನೋಟ್‌ ಪುಸ್ತ ಕ              ಮಳಿಗೆ ಬಾಡಿಗೆ ವಸೂಲಾತಿ ಬಗ್ಗೆ ಅಯಾ ತಿಂಗಳು ಜಮಾ ಖರ್ಚು ಮಾಡಬೇಕಾಗಿದ್ದ ಅಧಿಕೃತ ಡಿಸಿಬಿ ರಿಜಿಸ್ಟರ್ ಆಡಿಟ್‌ಗೆ ಕೊಟ್ಟಿದ್ದೇವೆಂದು ಹೇಳಿ  ಬದಲಿಗೆ ಬಿಲ್ ಕಲೆಕ್ಟರ್ ಲಾಂಗ್ ನೋಟ್ ಬುಕ್ ನಲ್ಲಿ ಬರೆದುಕೊಂಡು ಜಮ ಖರ್ಚು ನಿರ್ವಹಿಸುತ್ತಿದ್ದ ಬಗ್ಗೆ ಬಾಡಿಗೆದಾರರು ಪ್ರಶ್ನಿಸಿದ್ದ ಸಂದರ್ಭದಲ್ಲಿ ಇದೇ ರೀತಿಯ ಪುಸ್ತಕವನ್ನು ನಾವು ನಿರ್ವಹಿಸಿಕೊಂಡು ಬಂದಿದ್ದು ಇದರ ಬದಲು ಬೇರೆ ಯಾವುದೇ ಪುಸ್ತಕ ನಮ...

ಹುಳಿಯಾರನ್ನು ತಾಲೂಕು ಕೇಂದ್ರ ಮಾಡುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ ಸಿಬಿಎಸ್

ಹುಳಿಯಾರು : ಹುಳಿಯಾರಿನಲ್ಲಿ ಸೂಕ್ತ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದ್ದು ಪಕ್ಕದಲ್ಲಿಯೇ ಹಾಸ್ಪಿಟಲ್ ಇದೆ, ಬಸ್ ನಿಲ್ದಾಣ ಇದೆ, ಮತ್ತೆ ಈ ರೋಡಿನಲ್ಲಿ ಸದಾ ಜನಜಂಗುಳಿ ಇದ್ದೇ ಇರುತ್ತದೆ. ಉಪಯುಕ್ತ ಸ್ಥಳದಲ್ಲಿ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು ಯಾರು ಹಸಿವಿನಿಂದ ಇರುತ್ತಾರೋ ಅವರೆಲ್ಲ  ಅತಿ ಕಡಿಮೆ ವೆಚ್ಚದಲ್ಲಿ ಊಟ ಉಪಹಾರ ದೊರೆಯುವ  ಈ ಕ್ಯಾಂಟೀನಿನ ಉಪಯೋಗ ಪಡೆದುಕೊಳ್ಳಿ ಎಂದು ಶಾಸಕ ಸಿಬಿ ಸುರೇಶ್ ಬಾಬು ತಿಳಿಸಿದರು.                   ಹುಳಿಯಾರಿನ ಟೆಲಿಫೋನ್ ಎಕ್ಸ್ಚೇಂಜ್ ಪಕ್ಕದಲ್ಲಿ ಜಿಲ್ಲಾಡಳಿತ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹುಳಿಯಾರು ಅಭಿವೃದ್ಧಿ ಪಥದಲ್ಲಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳು ಇದ್ದು, ತಾಲೂಕು ಆಗುವ ಎಲ್ಲಾ ಅರ್ಹತೆ ಹೊಂದಿದೆ. ಹುಳಿಯಾರನ್ನು ತಾಲೂಕಾಗಿ ಮಾಡಿದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಸಾಧ್ಯವಾಗಲಿದ್ದು ಹುಳಿಯಾರನ್ನು ತಾಲೂಕು ಮಾಡುವಂತೆ ಗೃಹ ಸಚಿವರಲ್ಲಿ ಈಗಾಗಲೇ ನಾನು ಮನವಿ ಮಾಡಿದ್ದೇನೆ ಎಂದರು.              ಪಟ್ಟಣದಲ್ಲಿ ಎಂಟು ಕೋಟಿ ವೆಚ್...

ಯಳನಡು ಮಹಾಸಂಸ್ಥಾನ ಮಠದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲ್ಲೂಕು ಪ್ರಾರಂಭಿಕ ವರ್ಗ-2025

ಹುಳಿಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪ್ರಾರಂಭಿಕ ವರ್ಗವು ಹುಳಿಯಾರು ಹೋಬಳಿಯ ಯಳನಡು ಮಹಾಸಂಸ್ಥಾನ ಮಠದಲ್ಲಿ ದಿನಾಂಕ 15-05-2025 ಗುರುವಾರದಿಂದ 18-05-2025 ಭಾನುವಾರದವರೆಗೆ ನಡೆಯಲಿದೆ .              ಈ ವರ್ಗದಲ್ಲಿ ಕರಾಟೆ, ದೊಣ್ಣೆವರೆಸೆ, ಯೋಗಾಸನ ಇತ್ಯಾದಿ ಶಾರೀರಕ ಅಭ್ಯಾಸಗಳನ್ನು ಕಲಿಸಲಾಗುತ್ತದೆ. ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಶಿಕ್ಷಣವನ್ನು ನೀಡಲಾಗುತ್ತದೆ.              ಈ ವರ್ಗಕ್ಕೆ 9ನೇ ತರಗತಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳು, 14 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ ಉದ್ಯೋಗಸ್ಥರು ಭಾಗವಹಿಸಬಹುದಾಗಿದ್ದು ಹೆಚ್ಚಿನ ವಿವರಗಳಿಗೆ  ಹರ್ಷ- 9008207243, ಭರತ್‌ - 8971438241 ಹಾಗೂ ಶ್ರೀನಿವಾಸ - 9060871266 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘದ ಸ್ವಯಂಸೇವಕ ಪ್ರಶಾಂತ್‌ ದಸೂಡಿ ತಿಳಿಸಿದ್ದಾರೆ. ----------------------------- ವರ್ಗದ ದಿನಾಂಕ : 15-05-2025 ಗುರುವಾರದಿಂದ 18-05-2025 ಭಾನುವಾರದವರೆಗೆ ವರ್ಗದ ಸ್ಥಳ : ಯಳನಡು ಮಹಾಸಂಸ್ಥಾನ ಮಠ, ಯಳನಡು ----------------------------

ಇಂದಿನಿಂದ ಬೆಳಗುಲಿಯಲ್ಲಿ ಒಂದು ವಾರದವರೆಗೆ ಎನ್‌ಎಸ್‌ಎಸ್‌ ಶಿಬಿರ

ಹುಳಿಯಾರು : ಸಮೀಪದ ಬೆಳಗುಲಿ ಗ್ರಾಮದಲ್ಲಿ 2024-25ರ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ವಾರ್ಷಿಕ ವಿಶೇಷ ಶಿಬಿರವನ್ನು ಮೇ. 10 ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ.               ಮೇ. 10 ರ ಶನಿವಾರ ಶಿಬಿರ ಪ್ರಾರಂಭವಾಗಲಿದ್ದು ಶಾಸಕರಾದ ಸಿ ಬಿ ಸುರೇಶ್‌ ಬಾಬು ಉದ್ಘಾಟಿಸಲಿದ್ದಾರೆ . ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೀರಣ್ಣ ಎಸ್ ಸಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಮೌನೇಶ್ವರ ಶ್ರೀನಿವಾಸರಾವ್ ವಿಶೇಷ ಆಹ್ವಾನಿತರಾಗಿದ್ದಾರೆ.             ಮೇ. 11 ರ ಭಾನುವಾರ  "ಗ್ರಾಮ ಕಲೆಗಳ ಗಾನ ವೈಭವ-ಜಾನಪದ ಕಲೆಗಳ ಅನಾವರಣ" ದ ಬಗ್ಗೆ ಎಲ್‌.ಹನುಮಯ್ಯ ಅಧ್ಯಾಪಕರು ಮತ್ತು ಗಾಯಕರು ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ ಇವರಿಂದ ಉಪನ್ಯಾಸ ನಡೆಯಲಿದೆ.            ಮೇ. 12 ರ ಸೋಮವಾರ "ಗುಡಿ ಕೈಗಾರಿಕೆಗಳು ಮತ್ತು ಅದರ ಪ್ರಾಮುಖ್ಯತೆ" ಯ ಬಗ್ಗೆ ಎಲ್‌ ಆರ್‌ ಚಂದ್ರಶೇಖರ್‌ ಕೈಗಾರಿಕೋಧ್ಯಮಿಗಳು, ಗಾಂಧಿಪೇಟೆ ಇವರಿಂದ ಉಪನ್ಯಾಸ ನಡೆಯಲಿದೆ.           ಮೇ. 13 ರ ಮಂಗಳವಾರ  "ಕರುಣ - ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ...

ಇಂದಿನಿಂದ ಬೆಳಗುಲಿಯಲ್ಲಿ ಒಂದು ವಾರದವರೆಗೆ ಎನ್‌ಎಸ್‌ಎಸ್‌ ಶಿಬಿರ

ಹುಳಿಯಾರು : ಸಮೀಪದ ಬೆಳಗುಲಿ ಗ್ರಾಮದಲ್ಲಿ 2024-25ರ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ವಾರ್ಷಿಕ ವಿಶೇಷ ಶಿಬಿರವನ್ನು ಮೇ. 10 ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ. ಮೇ. 10 ರ ಶನಿವಾರ ಶಿಬಿರ ಪ್ರಾರಂಭವಾಗಲಿದ್ದು ಶಾಸಕರಾದ ಸಿ ಬಿ ಸುರೇಶ್‌ ಬಾಬು ಉದ್ಘಾಟಿಸಲಿದ್ದಾರೆ. ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೀರಣ್ಣ ಎಸ್ ಸಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಮೌನೇಶ್ವರ ಶ್ರೀನಿವಾಸರಾವ್ ವಿಶೇಷ ಆಹ್ವಾನಿತರಾಗಿದ್ದಾರೆ.   ಮೇ. 11 ರ ಭಾನುವಾರ ವಿಷಯ - "ಗ್ರಾಮ ಕಲೆಗಳ ಗಾನ ವೈಭವ-ಜಾನಪದ ಕಲೆಗಳ ಅನಾವರಣ" ದ ಬಗ್ಗೆ ಎಲ್‌.ಹನುಮಯ್ಯ ಅಧ್ಯಾಪಕರು ಮತ್ತು ಗಾಯಕರು ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ ಇವರಿಂದ ಉಪನ್ಯಾಸ ನಡೆಯಲಿದೆ. ಮೇ. 12 ರ ಸೋಮವಾರ "ಗುಡಿ ಕೈಗಾರಿಕೆಗಳು ಮತ್ತು ಅದರ ಪ್ರಾಮುಖ್ಯತೆ" ಯ ಬಗ್ಗೆ ಎಲ್‌ ಆರ್‌ ಚಂದ್ರಶೇಖರ್‌ ಕೈಗಾರಿಕೋಧ್ಯಮಿಗಳು, ಗಾಂಧಿಪೇಟೆ ಇವರಿಂದ ಉಪನ್ಯಾಸ ನಡೆಯಲಿದೆ. ಮೇ. 13 ರ ಮಂಗಳವಾರ ವಿಷಯ - "ಕರುಣ - ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ" ದ ಬಗ್ಗೆ ಡಾ. ರೆ.ಮ. ನಾಗಭೂಷಣ್‌ ಸಹಾಯಕ ನಿರ್ದೇಶಕರು ಪಶುಪಾಲನಾ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ, ಚಿ ನಾ ಹಳ್ಳಿ ಇವರು ಮಾಹಿತಿ ನೀಡಲಿದ್ದಾರೆ. ಮೇ....

ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯಲು ಸಿಬಿಲ್ ಸ್ಕೋರ್ ಅತ್ಯಗತ್ಯ

ಹುಳಿಯಾರು :  ಬ್ಯಾಂಕುಗಳಲ್ಲಿ ಯಾವುದೇ ಸಾಲ ಸೌಲಭ್ಯ ಪಡೆಯಬೇಕಾದರೆ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತವೆ, ಹಾಗಾಗಿ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿಸಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಂದೀಕೆರೆ ಶಾಖೆಯ ವ್ಯವಸ್ಥಾಪಕರಾದ ಆರ್.ತಿಪ್ಪೇಸ್ವಾಮಿ ತಿಳಿಸಿದರು.                         ತಿಮ್ಮನಹಳ್ಳಿಯ ಸತ್ಯ ಸಂಜೀವಿನಿ ಒಕ್ಕೂಟ ಹಾಗೂ ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರದಿಂದ ತಿಮ್ಮನಹಳ್ಳಿಯಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.               ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡಿ ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ನೂರು ಸ್ವಸಹಾಯ ಸಂಘಗಳಿದ್ದು ಆ ಸಂಘದ ಸದಸ್ಯರ ಜೊತೆಗೆ ಅವರ ಕುಟುಂಬದವರನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಯೋಜನೆಗಳಾದ  ಜನ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ಬ್ಯಾಂಕುಗಳ ಮುಖಾಂತರ ನೋಂದಾಯಿಸಿಕೊಳ್ಳಬೇಕೆಂದು ಕರೆ ನೀಡಿದರು.                 ಸತ್ಯ ಸ...