ವಿಷಯಕ್ಕೆ ಹೋಗಿ

ಕಡೆಗೂ ಪತ್ತೆಯಾದ ಬಾಡಿಗೆ ವಸೂಲಾತಿಯ ಡಿಸಿಬಿ ರಿಜಿಸ್ಟರ್

ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸೇರಿದ ಮಳಿಗೆಗಳ ಬಾಡಿಗೆ ವಸುಲಾತಿಯ ಜಮಾ ಖರ್ಚಿನ ಪುಸ್ತಕ ಅಂದರೆ ಬೇಡಿಕೆ- ವಸೂಲಿ- ಬಾಕಿ ವಹಿ ನಮೂದಿಸುವ ಡಿಸಿಬಿ ರಿಜಿಸ್ಟರ್ ಕಡೆಗೂ ಪತ್ತೆಯಾಗಿದೆ.

             ಹೌದು ಇತ್ತೀಚಿಗಷ್ಟೇ ಕೆಲವೊಂದು ಮಳಿಗೆಗಳಿಗೆ ಬಾಡಿಗೆ ಬಾಕಿ ಇದೆ ಎಂದು ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ನಾವುಗಳು ಬಾಡಿಗೆ ಪಾವತಿಸಿದ್ದರು ಸಹ ಜಮಾ ಖರ್ಚು ಮಾಡಿಲ್ಲ . ಪಂಚಾಯಿತಿಯವರು ನಿರ್ವಹಣೆ ಮಾಡಬೇಕಾಗಿರುವ ಡಿಸಿಬಿ ರಿಜಿಸ್ಟರ್ ತೋರಿಸಿ, ಅದರಲ್ಲಿ ಬಾಡಿಗೆ ಬಾಕಿ ಇದ್ದಲ್ಲಿ ಕಟ್ಟುತ್ತೇವೆ ಎಂದು ಮಳಿಗೆದಾರರು ಡಿಸಿಬಿ ರಿಜಿಸ್ಟರ್ ತೋರಿಸಿಲೇಬೇಕು ಎಂದು ಪಟ್ಟು ಹಿಡಿದಿದ್ದರು.

ನಾವು ನಿರ್ವಹಿಸುವ ಡಿಸಿಬಿ ಬುಕ್ ಇದೇ ಎಂದು ತೋರಿಸಿದ್ದ ನೋಟ್‌ ಪುಸ್ತ

             ಮಳಿಗೆ ಬಾಡಿಗೆ ವಸೂಲಾತಿ ಬಗ್ಗೆ ಅಯಾ ತಿಂಗಳು ಜಮಾ ಖರ್ಚು ಮಾಡಬೇಕಾಗಿದ್ದ ಅಧಿಕೃತ ಡಿಸಿಬಿ ರಿಜಿಸ್ಟರ್ ಆಡಿಟ್‌ಗೆ ಕೊಟ್ಟಿದ್ದೇವೆಂದು ಹೇಳಿ  ಬದಲಿಗೆ ಬಿಲ್ ಕಲೆಕ್ಟರ್ ಲಾಂಗ್ ನೋಟ್ ಬುಕ್ ನಲ್ಲಿ ಬರೆದುಕೊಂಡು ಜಮ ಖರ್ಚು ನಿರ್ವಹಿಸುತ್ತಿದ್ದ ಬಗ್ಗೆ ಬಾಡಿಗೆದಾರರು ಪ್ರಶ್ನಿಸಿದ್ದ ಸಂದರ್ಭದಲ್ಲಿ ಇದೇ ರೀತಿಯ ಪುಸ್ತಕವನ್ನು ನಾವು ನಿರ್ವಹಿಸಿಕೊಂಡು ಬಂದಿದ್ದು ಇದರ ಬದಲು ಬೇರೆ ಯಾವುದೇ ಪುಸ್ತಕ ನಮ್ಮಲ್ಲಿಲ್ಲ. ನೀವು ಬಾಡಿಗೆ ಪಾವತಿಸಿದ್ದಲ್ಲಿ ಇದರಲ್ಲಿ ಜಮಾ ಬರೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.

              ಈ ಬಗ್ಗೆ ಕಂದಾಯ ಅಧಿಕಾರಿಯ ಪ್ರಶ್ನೆಸಿದರೆ ಡಿಸಿಬಿ ರಿಜಿಸ್ಟರ್ ನಾವು ನಿರ್ವಹಿಸಬೇಕಿದ್ದು ಸದ್ಯಕ್ಕೆ ಪಂಚಾಯಿತಿಯಲ್ಲಿ ಈ ಕಡತ ಏನಾಗಿದೆ ಎಂದು ತಿಳಿಯುತ್ತಿಲ್ಲ ಎಂದಿದ್ದರು. ಈ ಬಗ್ಗೆ ನಾವು ಸಹ ಮುಖ್ಯ ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದೇವೆ ಎಂದು ಉತ್ತರಿಸಿದ್ದರು.ಇದನ್ನು ಪ್ರಶ್ನಿಸಿ ಬಾಡಿಗೆದಾರರು ಅರ್ಜಿ ಸಲ್ಲಿಸಿ ದೂರು ನೀಡಿದ್ದರು.ಸದರಿ ವಿಚಾರ ಪತ್ರಿಕೆಯಲ್ಲಿ ಪ್ರಚಾರಪಡೆದ ನಂತರವಷ್ಟೆ ಪುಸ್ತಕ ಸಿಕ್ಕಿದೆ ಎಂದು ತಂದಿದ್ದಾರೆ.

ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಪತ್ತೆಯಾದ ಡಿಸಿಬಿ ಪುಸ್ತಕ

                       ಹಾಲಿ ಡಿಸಿಬಿ ರಿಜಿಸ್ಟರ್ ಗಮನಿಸಿದಲ್ಲಿ ಪರಿಪೂರ್ಣವಾಗಿ ನಿರ್ವಹಿಸದಿರುವುದು ಕಂಡುಬರುತ್ತದೆ. ಸದ್ಯಕ್ಕೆ ಸಿಕ್ಕಿರುವ ಡಿಸಿಬಿ ರಿಜಿಸ್ಟರ್ ಅಲ್ಲಿ 2019 ರಿಂದ 22 ರವರೆಗೆ ಮಾತ್ರ ಜಮಾಖರ್ಚು ನಮೂದಾಗಿದೆ. 22- 23, 23- 24,24- 25 ನೇ ಸಾಲಿನ ಬೇಡಿಕೆ /ವಸೂಲಿ ಬಗ್ಗೆ ಏನ್ನೊಂದು ನಮೂದು ಮಾಡಿಲ್ಲ.

             ಪ್ರಸಕ್ತ ಮಳಿಗೆಗಳ ಬಾಡಿಗೆ/ ಬೇಡಿಕೆ/ ವಸೂಲಾತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಚಾಲ್ತಿ ಸಾಲಿನವರೆಗೆ ಜಮಾ ಖರ್ಚಿನ ಮಾಡದೆ,ಪಾವತಿ ಮಾಡಿರುವ ಹಣವನ್ನು ಜಮಾ ಮಾಡದೆ ನೀವು ರಸೀತಿ ತಂದರಷ್ಟೆ ಜಮಾ ಮಾಡುತ್ತೇವೆ ಎನ್ನುತ್ತಾರೆ. 

          ಪ್ರಸ್ತುತ ವಸೂಲಿ ಮಾಡುತ್ತಿರುವ ಮಳಿಗೆಗಳ ಬಾಡಿಗೆ ದರ ನಿಗದಿಪಡಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇಲ್ಲವೇ ಪ್ರಸ್ತುತ ವಸೂಲಿಯಾಗುತ್ತಿರುವ ಮಳಿಗೆ ಬಾಡಿಗೆ ಬಗ್ಗೆ ಮೇಲಾಧಿಕಾರಿಗಳು ಸಹ ಅನುಮೋದಿಸಿಲ್ಲ.

                 ಸದ್ಯ ಈಗಲಾದರೂ ಪಟ್ಟಣ ಪಂಚಾಯಿತಿ ಕಂದಾಯ ಇಲಾಖೆಯ ಅಧಿಕಾರಿಗಳು ಡಿಸಿಬಿ ರಿಜಿಸ್ಟರ್ ಅನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಆಯಾ ತಿಂಗಳು ಜಮಾ ಖರ್ಚನ್ನು ನಮೂದಿಸಿದಲ್ಲಿ ಪ್ರತಿಯೊಬ್ಬ ಬಾಡಿಗೆದಾರರ ಬಾಡಿಗೆ ಎಷ್ಟಿದೆ ಎಂದು ತಿಳಿಯುತ್ತದೆ ಇದನ್ನು ಆಧರಿಸಿ ವಸೂಲಾತಿ ಮಾಡುವುದರ ಮೂಲಕ ಪಂಚಾಯಿತಿಯ ಬರಬೇಕಾದ ಹಣವನ್ನು ಕ್ರೂಢೀಕರಿಸಿಕೊಳ್ಳಬಹುದಾಗಿದೆ. ಬಾಡಿಗೆ ವಸೂಲಾತಿ ಕುಂಟಿತವಾಗಿದ್ದಲ್ಲಿ ಕ್ರಮವಹಿಸಲು ಅನುಕೂಲವಾಗುತ್ತದೆ.

                  ಒಟ್ಟಾರೆ ಡಿಸಿಬಿ ವಹಿಯಲ್ಲಿ ಸರಿಯಾದ ಬಾಕಿ ವಿವರವನ್ನು ದಾಖಲಿಸದಿರುವುದರಿಂದ  ಸಾಕಷ್ಟು ನ್ಯೂನತೆಗಳಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಮೂಲವಾಗಬೇಕಾದ ವಾಣಿಜ್ಯ ಸಂಕೀರ್ಣಗಳು,ಹೊರೆಯಾಗಿ ಪರಿಣಮಿಸುವಂತಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...