ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಶ್ರೀಮಾತ ನವರಾತ್ರಿ ಸಾಂಸ್ಕೃತಿಕ ಉತ್ಸವಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಚಾಲನೆ ನೀಡಿದರು.ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ,ರಂಗಕರ್ಮಿ ಶ್ರೀನಿವಾಸ.ಜಿ.ಕಪ್ಪಣ್ಣ, ವರ್ತಕ ಕೆ.ಬಿ.ಮರುಳ ಸಿದ್ದಪ್ಪ,ಬಾಬು ಹಿರಣ್ಣಯ್ಯ ಇದ್ದರು. ಹುಳಿಯಾರು: ರಂಗಭೂಮಿ ಉಳಿಯಬೇಕು, ರಂಗಭೂಮಿಯ ಮುಖಾಂತರ ನಾಡು-ನುಡಿ- ಭಾಷೆ- ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಅದಕ್ಕೂ ಮೀರಿ ಸ್ಥಳೀಯರ ರಂಗ ಕಲೆ ಗುರುತಿಸುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಈ ರಂಗಭೂಮಿ ಬಳಕೆಯಾಗಬೇಕು ಎಂದು ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಬಾಬು ಹಿರಣ್ಣಯ್ಯ ತಿಳಿಸಿದರು. ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಗುರುವಾರ ಸಂಜೆ ನಡೆದ ಶ್ರೀಮಾತ ನವರಾತ್ರಿ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವ್ಯಕ್ತಿ ಬೆಳೆದಂತೆಲ್ಲ ಸಾಧಕನಾಗಬೇಕು, ಸಮಾಜಮುಖಿಯಾಗಿ ಬದುಕಬೇಕು ಎಂದರು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾದ ರಂಗಮಂದಿರವನ್ನು ಯಾವುದೇ ಫಲಾಪಲ ಅಪೇಕ್ಷೆಯಿಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಿಸಿರುವ ಗಂಗಾಧರ್ ಅವರ ಕಾರ್ಯ ಶ್ಲಾಘನೀಯ.ತನಗಾಗಿ ಏನನ್ನೂ ಬಯಸದೆ ಇಲ್ಲಿನ ಗ್ರಾಮದ ಸಂಸ್ಕೃ
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070