ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*ಕಂದಿಕೆರೆಯ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಜಾತ್ರೆ ಸಂಪನ್ನ*

ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 22/04 /2022 ರಂದು ಶುಕ್ರವಾರ ಬೆಳಗ್ಗೆ 7.30 ಕ್ಕೆ ಶ್ರೀ ರೇಣುಕಾ ಎಲ್ಲಮ್ಮ ದೇವಿಯವರ ರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ವಾದ್ಯ ಮೇಳದೊಂದಿಗೆ ಸಕಲ ಭಕ್ತಾದಿಗಳ ಸಮ್ಮುಖದಲ್ಲಿ  ವಿದ್ಯುಕ್ತವಾಗಿ ಬೆಳಗ್ಗೆ 7.30 ಕ್ಕೆ ಪ್ರಾರಂಭವಾಗಿ ಊರಿನ ಪ್ರಮುಖ ರಾಜಬೀದಿಗಳಲ್ಲಿ ತಾಯಿಯವರ ರಥೋತ್ಸವವು ವೈಭವದಿಂದ  ನೆರವೇರಿ ಸಂಜೆ 4:30 ಕ್ಕೆ ನೆಲೆ ನಿಂತಿತ್ತು. ಶ್ರೀ ಕರಿಯಮ್ಮದೇವಿ, ಶ್ರೀ ಆಂಜನೇಯಸ್ವಾಮಿ, ಶ್ರೀಪಾತರಾಯ ಸ್ವಾಮಿ ದೇವರುಗಳು  ರಥೋತ್ಸವದಲ್ಲಿ  ಪಾಲ್ಗೊಂಡಿದ್ದವು .  ಸುಮಾರು ಗ್ರಾಮದ ಎರಡರಿಂದ ಮೂರು ಕಿಲೋಮೀಟರ್ ದೂರ  ರಥೋತ್ಸವ ಎಳೆಯುವುದು ಇಲ್ಲಿನ ವಿಶೇಷ. ಈ ಸಂದರ್ಭದಲ್ಲಿ ಗ್ರಾಮದ ಸಕಲ ಭಕ್ತರು ತಮ್ಮ ಹರಕೆ ಸಲ್ಲಿಸಿ ಹಾರ ,ಫಲಹಾರ ಪಾನಕ ಮುಂತಾದ ಮುಂತಾದ ಸೇವೆ ಸಲ್ಲಿಸುತ್ತಾರೆ. ಸಕಲ ಭಕ್ತಾದಿಗಳು ಶ್ರೀದೇವಿಯವರ ರಥೋತ್ಸವ ಕಾರ್ಯದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.  ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ರೇಣುಕಾ ಎಲ್ಲಮ್ಮ ದೇವಿ ಗೆಳೆಯರ ಬಳಗದವರಿಂದ ಶ್ರೀ ರೇಣುಕ ಎಲ್ಲಮ್ಮ ದೇವಾಲಯದ ಮೂಲ ವಿಗ್ರಹಕ್ಕೆ ಹಾಗೂ ದೇವಸ್ಥಾನದಲ್ಲಿ ವಿಶೇಷ ಹಣ್ಣಿನ ಅಲಂಕಾರದ ವ್ಯವಸ್ಥೆ  ಮಾಡಲಾಗಿತ್ತು.

ಇಂದಿನಿಂದ ಕೆಂಕೆರೆ ಗ್ರಾಮದ ಗ್ರಾಮ ದೇವತೆ ಶ್ರೀ ಕಾಳಿಕಾಂಬ ದೇವಿ ಹಾಗೂ ಶ್ರೀಗುರು ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಹುಳಿಯಾರು ಸಮೀಪದ ಕೆಂಕೆರೆಯಲ್ಲಿ ಇಂದಿನಿಂದ ಗ್ರಾಮ ದೇವತೆ ಶ್ರೀ ಕಾಳಿಕಾಂಬ ದೇವಿ ಹಾಗೂ ಶ್ರೀಗುರು ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು ಏಪ್ರಿಲ್ 23ರ ಶನಿವಾರ 24  ಭಾನುವಾರ ಹಾಗೂ 25 ಸೋಮವಾರ ಮೂರು ದಿನ ಅಗ್ನಿ ಕುಂಡ  ಸೇವೆ ನಡೆಯಲಿದೆ. ಏಪ್ರಿಲ್ 26ರ ಮಂಗಳವಾರ ದೊಡ್ಡ ಬಾನ , 11:00 ಗಂಟೆಗೆ ಶ್ರೀ ಕಾಳಿಕಾಂಬ ದೇವಿ- ಶ್ರೀ ಈರ ಬೊಮ್ಮಕ್ಕ ದೇವಿ.-ಶ್ರೀ ದುರ್ಗಮ್ಮ ದೇವಿ.-ಶ್ರೀ ಅಂಬಿಕಾ ದೇವಿಯವರ ಆಗಮನ ಹಾಗೂ ಕೂಡು ಭೇಟಿ ನಡೆಯಲಿದೆ.   ಏ. 27ರ ಬುಧವಾರ ಮಡಿಲಕ್ಕಿ ಸೇವೆ , ಏ.28ರ ಗುರುವಾರ ಬೆಳಗ್ಗೆ ಪಟ್ಟದ ಕಲಶ ಹಾಗೂ ರಾತ್ರಿ ಅಮ್ಮನವರ ಉಯ್ಯಾಲೆ ಉತ್ಸವ ,ಏ. 29ರ ಶುಕ್ರವಾರ ಬೆಳಗ್ಗೆ ಅಮ್ಮನವರ ಉತ್ಸವ ಹಾಗೂ ಇದೇ ದಿನ ಸಿಡಿ ಕಾರ್ಯಕ್ರಮ ಜರುಗಲಿದೆ. ಏ. 30ರ ಶನಿವಾರ ಓಕಳಿ ಸೇವೆ ನಡೆಯಲಿದೆ.  ಗುರು ಚನ್ನಬಸವೇಶ್ವರ ಸ್ವಾಮಿಯವರ ಜಾತ್ರೆ: ಮೇ 1ರಿಂದ 3 ರವರೆಗೆ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರ ಜಾತ್ರೆ ನಡೆಯಲಿದೆ .ಮೇ 1ರಂದು 3:00 ಗಂಟೆಗೆ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಶ್ರೀ ಕಾಳಿಕಾಂಬ ದೇವಿ ಹಾಗೂ ಎಲ್ಲಾ ದೇವರುಗಳು ಮೂಲಸ್ಥಾನ ಪುರದ ಮಠಕ್ಕೆ ದಯಮಾಡಿ ಸುವುದು,ಮೇ 2ರಂದು ಸ್ವಾಮಿಗೆ ಅಭಿಷೇಕ ಬಿಲ್ವಾರ್ಚನೆ ಮಂಗಳಾರತಿ ನಡೆಸಲಾಗುತ್ತದೆ, ನಂತರ ಪ್ರಸಾದ ವಿನಿಯೋಗ ಇರುತ್ತದೆ. ಮೇ 3 ರಂದು ಬೆಳಗ್ಗೆ 6 ಗಂಟೆಗೆ ರಥಕ್ಕೆ ಕಳಸ ಸ್ಥಾಪನೆ ಮಧ್ಯಾಹ್ನ 12 ಗಂಟೆಗೆ  ಶ್ರೀ

ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯವರ ಜಾತ್ರಾ ಮಹೋತ್ಸವ

ಹುಳಿಯಾರು ಸಮೀಪದ ತೊರೆ ಸೂರಗೊಂಡನಹಳ್ಳಿಯ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯವರ ಜಾತ್ರಾ ಮಹೋತ್ಸವ ಏ. 17ರ ಭಾನುವಾರದಿಂದ ಆರಂಭವಾಗಿದ್ದು ಏ. 20ರ ಬುಧವಾರದವ ರೆಗೆ ನಡೆಯಲಿದೆ. ಇಂದು ಏ. 18ರ ಸೋಮವಾರ ಬೆ.9:15ಕ್ಕೆ ಬಸವೇಶ್ವರ ಸ್ವಾಮಿಯವರ ಹೊಳೆಸೇವೆ,ಬೆಳಗ್ಗೆ 11 ಗಂಟೆಗೆ ಅಗ್ನಿಕೊಂಡ,11:30 ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ. ಮ.1:00 ಗಂಟೆಗೆ ಅನ್ನಸಂತರ್ಪಣೆ, ಸಂಜೆ ಶ್ರೀ ಬಸವೇಶ್ವರ ಸ್ವಾಮಿಯವರ ರಥೋತ್ಸವ,ಸಂಜೆ 7.30 ಕ್ಕೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ, 9:00 ಗಂಟೆಗೆ ಆದಿಶಕ್ತಿ ಚೌಡೇಶ್ವರಿ ದೇವಿಯವರ ಮಧುವಣಗಿತ್ತಿಶಾಸ್ತ್ರ ಹಾಗೂ ಮದ್ದಿನಸೇವೆ ನಡೆಯಲಿದೆ. ನಾಳೆ ಏ. 19ರ ಮಂಗಳವಾರ ಬೆ.8:30ಕ್ಕೆ ಆದಿಶಕ್ತಿ ಚೌಡೇಶ್ವರಿ ದೇವಿಯವರ ಹೊಳೆ ಸೇವೆ,ಬೆ.9ಗಂಟೆಗೆ ನಡೆ-ಮುಡಿಯೊಂದಿಗೆ ಕಳಸೋತ್ಸವ,ಸಂಜೆ 8:00 ಗಂಟೆಗೆ ಆರತಿ ಬಾನ, ರಾತ್ರಿ 9:00 ಗಂಟೆಗೆ ಶ್ರೀ ಆದಿಶಕ್ತಿ ಚೌಡೇಶ್ವರಿ ಅಮ್ಮನವರ ಪುಷ್ಪಾಲಂಕಾರ,ಬೆಳ್ಳಿರಥದ ವಾನದ ಉತ್ಸವ ನಡೆಯಲಿದೆ 9:00 ಗಂಟೆಗೆ ಆರ್ಕೆಸ್ಟ್ರಾ ಹಾಗೂ ಮಧ್ಯಾಹ್ನ ಸೇವೆ ನಡೆಯಲಿದೆ. ಏ.20ರ ಬುಧವಾರ ಸಂಜೆ 4:30 ಕ್ಕೆ ಧೂತರಾಯಸ್ವಾಮಿಯ ಅದ್ದೂರಿ ಮಣೇವು, ಓಕಳಿ ಸೇವೆ ನಡೆದು ಕಂಕಣ ವಿಸರ್ಜನೆ ಮೂಲಕ ಜಾತ್ರೆಗೆ ತೆರೆಬೀಳಲಿದೆ.

ದೊಡ್ಡಬಿದರೆಯಲ್ಲಿ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ, ಪಾತಲಿಂಗೇಶ್ವರ ಸ್ವಾಮಿ, ಲಕ್ಕಮ್ಮದೇವಿ,ಬೇವಿನಳ್ಳಮ್ಮ ದೇವಿಯವರ ಜಾತ್ರಾ ಮಹೋತ್ಸವ ಆರಂಭ

ಹುಳಿಯಾರು ಸಮೀಪದ ದೊಡ್ಡಬಿದರೆಯಲ್ಲಿ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ, ಪಾತಲಿಂಗೇಶ್ವರ ಸ್ವಾಮಿ, ಲಕ್ಕಮ್ಮದೇವಿ,ಬೇವಿನಳ್ಳಮ್ಮ ದೇವಿಯವರ ಜಾತ್ರಾ ಮಹೋತ್ಸವ ಏ.14ರ ಗುರುವಾರ ಮಧುವಣಗಿತ್ತಿ ಶಾಸ್ತ್ರದ ಮೂಲಕ ಚಾಲನೆ ಗೊಂಡಿದ್ದು ಏ. 20ರ ಬುಧವಾರದವರೆಗೂ ನಡೆಯಲಿದೆ. ಏ. 14ರ ಗುರುವಾರ ಮದುವಣಗಿತ್ತಿ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವ ಚಾಲನೆಗೊಂಡಿದ್ದು, ಏ.15ರ ಶುಕ್ರವಾರ ಬಾನ,ರಾತ್ರಿ 8:00 ಗಂಟೆಗೆ ಮಧುವಣಗಿತ್ತಿ ಶಾಸ್ತ್ರ,ಮಡಿಲಕ್ಕಿ ಸೇವೆ, ನಂತರ ಚಿಕ್ಕಬಿದರೆ ಕರಿಯಮ್ಮದೇವಿ ಮತ್ತು ಕೋಡಿಹಳ್ಳಿ ಕೊಲ್ಲಾಪುರದಮ್ಮನವರ ಆಗಮನವಾಗಲಿದೆ. ಏ. 16 ರ ಶನಿವಾರ ಬೆಳಗ್ಗೆ 6:30ಕ್ಕೆ ಆರತಿ ಬಾನ, ಗಂಗಾಪೂಜೆ,ನಡೆಮುಡಿಯೊಂದಿಗೆ ಅಮ್ಮನವರು ಮೂಲಸ್ಥಾನಕ್ಕೆ ಆಗಮಿಸುವರು. ಬೆ.9.30 ಕ್ಕೆ ಅಗ್ನಿಕುಂಡ ,ಮ. 12:00 ಗಂಟೆಗೆ ಅನ್ನಸಂತರ್ಪಣೆ ಸಂಜೆ 6:30ಕ್ಕೆ ಸಿಡಿ ,ರಾತ್ರಿ 10:00 ಗಂಟೆಗೆ ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ. ಏ.17ರ ಭಾನುವಾರ ಬೆಳಿಗ್ಗೆ 8ಗಂಟೆಗೆ ರುದ್ರಾಭಿಷೇಕ, 10 ಗಂಟೆಗೆ ಧ್ವಜಾರೋಹಣ, 11ಗಂಟೆಗೆ ದೋಣಿ ಸೇವೆ , 2:00 ಗಂಟೆಗೆ ಲಕ್ಕಮ್ಮನವರ ಕಳಸ ಸ್ಥಾಪನೆ,ಗಂಗಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ಪಾತಲಿಂಗೇಶ್ವರ ಸ್ವಾಮಿ ಹಾಗೂ ಲಕ್ಕಮ್ಮ ನವರಿಗೆ ಕಂಕಣಧಾರಣೆ.ನಂತರ ಮಡಿಲಕ್ಕಿ ಸೇವೆ ನಡೆದು ಸ್ವಾಮಿಯವರು ಮತ್ತು ಅಮ್ಮನವರು ಮೂಲಸ್ಥಾನಕ್ಕೆ ದಯಮಾಡಿಸುವರು. ಏ. 18ರ ಸೋಮವಾರ ಸಂಜೆ 7.30 ಕ್ಕ

ನಾಳೆಯಿಂದ ಹುಳಿಯಾರು ದುರ್ಗಮ್ಮನ ಜಾತ್ರೆ

ಹುಳಿಯಾರು : ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ 50ನೇ ವರ್ಷದ ಸುವರ್ಣ ಮಹೋತ್ಸವದ ಜಾತ್ರಾಮಹೋತ್ಸವ ಏ.16 ರ ಶನಿವಾರದಿಂದ ಪ್ರಾರಂಭಗೊಂಡು 24 ರ ಭಾನುವಾರದವರೆಗೆ ಒಂಬತ್ತು ದಿನಗಳ ಕಾಲ ಜರುಗಲಿದೆ. ಏ.16ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ 17 ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನ ಪಾಳ್ಯದ ಭಕ್ತಾಧಿಗಳಿಂದ ಅಮ್ಮನವರಿಗೆ ಮಡಿಲಕ್ಕಿ ಸೇವೆ ನಡೆಯಲಿದೆ. ಏ.18ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ಹಾಗೂ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ನಡೆಯಲಿದೆ. ಏ.19 ರ ಮಂಗಳವಾರ ಗ್ರಾಮಸ್ಥರಿಂದ ಆರತಿಬಾನ, ಎಡೆಸೇವೆ ನಡೆಯಲಿದೆ. ಏ.20ರ ಬುಧವಾರ ರಾತ್ರಿ ಹುಳಿಯಾರಿನ ಹುಳಿಯಾರಮ್ಮ, ಹೊಸಹಳ್ಳಿಯ ಶ್ರೀ ಕೊಲ್ಲಾಪುರದಮ್ಮ ,ಹೊಸಹಳ್ಳಿ ಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆಯ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಗೊಲ್ಲರಹಟ್ಟಿಯ ಶ್ರೀ ಕರಿಯಮ್ಮ ,ಕೆಸಿ ಪಾಳ್ಯದ ಶ್ರೀ ಅಂತರಘಟ್ಟಮ್ಮ, ದಮ್ಮಡಿಹಟ್ಟಿಯ ಶ್ರೀ ಈರಬೊಮ್ಮಕ್ಕದೇವಿ  ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಕೆರೆಗೆ ದಯಮಾಡಿಸುವುದು. ತಾ.21ರ ಗುರುವಾರ ಮುಂಜಾನೆ 5ಕ್ಕೆ ಕೆರೆಯ ಬಾವಿಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು. ಅದೇ ದಿನ ರಾತ್ರಿ ಉಯ್ಯಾಲೋತ್ಸವ ನಡೆಯಲಿದೆ.

ಚಿಕ್ಕನಾಯಕನಹಳ್ಳಿ - ಹುಳಿಯಾರು ಸೇರಿದಂತೆ ತಾಲ್ಲೂಕಿನ ವಿವಿಧ ಉಪ ಸ್ಥಾವರದಿಂದ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಸರಬರಾಜಾಗುವ ಪೂರಕಗಳ ಈ ವಾರದ ವೇಳಾಪಟ್ಟಿ‌....

ಚಿಕ್ಕನಾಯಕನಹಳ್ಳಿ - ಹುಳಿಯಾರು ಸೇರಿದಂತೆ ತಾಲ್ಲೂಕಿನ ವಿವಿಧ ಉಪ ಸ್ಥಾವರದಿಂದ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಸರಬರಾಜಾಗುವ ಪೂರಕಗಳ ಈ ವಾರದ ವೇಳಾಪಟ್ಟಿ‌....