ಹುಳಿಯಾರು: ಇಮಾಕ್ಯೂಲೇಟ್(ಮೇರಿ )ಮೇಡಂ ಅವರಿಗೆ ಬೀಳ್ಕೊಡುಗೆ ಹಾಗೂ *ಗಾಯಿತ್ರಿದೇವಿ* ಯವರಿಗೆ ವಯೋ ನಿವೃತ್ತಿ ಕಾರ್ಯಕ್ರಮವನ್ನು ಗ್ರಾಮದ ಯುವಕರು, ಗ್ರಾಮಸ್ಥರು, sdmc ಅಧ್ಯಕ್ಷರು,ಶಾಲಾ ಶಿಕ್ಷಕರು, crp ಯವರು ಜೊತೆಗೂಡಿ ತಮ್ಮಡಿಹಳ್ಳಿ ಬಿಳಿಕಲ್ಲುಗೊಲ್ಲರಹಟ್ಟಿಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು,ಶಾಲಾ ಶಿಕ್ಷಕರನ್ನು ಗೌರವಾನ್ವಿತವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ *ಹುಳಿಯಾರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ತಮ್ಮಡಿಹಳ್ಳಿ ದೇವರಾಜ್* ಮಾತನಾಡಿ ಗಾಯತ್ರೀ ದೇವಿಯವರು ಬಿಳಿಕಲ್ಲು ಗೊಲ್ಲರಹಟ್ಟಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಅತಿ ಹೆಚ್ಚು ಪ್ರೀತಿ ವಿಶ್ವಾಸ ತೋರಿ, ಒಳ್ಳೆಯ ವಿದ್ಯಾಭ್ಯಾಸ ಕಲಿಸಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಹಾಗೆಯೇ*ಮೇರಿ ಮೇಡಂ* ಇವರು ತಮ್ಮ ಸೃಜನಶೀಲತೆ ಪ್ರಾಮಾಣಿಕತೆ, ಸರಳತೆ ಹೊಂದಾಣಿಕೆ, ದೂರದೃಷ್ಟಿ, ಏಕಾಗ್ರತೆ, ವೃತ್ತಿಪರತೆ ವೃತ್ತಿಶ್ರೇಷ್ಟತೆಗಳಿಂದ ಎಲ್ಲರ ಮನಸೆಳೆದವರು. ಇವರ ಕಾರ್ಯವೈಖರಿ ಪಾದರಸದಷ್ಟೆ ಆಕರ್ಷಕ.ತಮ್ಮ ಸೇವಾವಧಿಯಲ್ಲಿ ಸುಮಾರು ಹತ್ತು ಹಲವು ಕೆಲಸ ಮಾಡಿ ಆಡಳಿತ ವರ್ಗದಿಂದ ಹಿಡಿದು ವಿದ್ಯಾರ್ಥಿ ಪೋಷಕ ವರ್ಗದವರೆಗೆ ಎಲ್ಲರ ಪ್ರೀತಿ, ವಿಶ್ವಾಸ, ಸ್ನೇಹ, ನಂಬಿಕೆಗಳಿಗೆ ಪಾತ್ರರಾಗಿರುವ ಹೆಗ್ಗಳಿಕೆ ಇವರದು ಎಂದರು.
ಮುಖ್ಯ ಶಿಕ್ಷಕರಾದ N B ಬಸವರಾಜ್ ಮಾತನಾಡಿ ತಮ್ಮ ನಿಸ್ವಾರ್ಥ ಸೇವೆಯಿಂದ, ಶ್ರದ್ದೆ ಭಕ್ತಿಯಿಂದ ತನ್ನ ಬದುಕಿನ ಕರ್ತವ್ಯದ ಪಯಣವನ್ನು ಮಧುರವಾಗಿ ಕಳೆದ ಕೀರ್ತಿಗೆ ಇವರುಗಳು ಭಾಜನರು ಎಂದರು.
ಇವರ ಅಮೋಘವಾದ ಸೇವೆಯನ್ನು ಪರಿಗಣಿಸಿ ಊರಿನ ಜನ, ಶಾಲೆಯ ಮುಖ್ಯ ಶಿಕ್ಷಕರು ಇವರನ್ನು ಶಾಲು ಹೊದಿಸಿ ಹಾರ ಹಾಕಿ ಫಲಪುಷ್ವ ಹಾಗೂ ಉಡುಗೊರೆಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಗ್ರಾಮಸ್ಥರು ಊರಿನ ಯುವಕರು sdmc ಅಧ್ಯಕ್ಷರು ಸಮಾರಂಭಕ್ಕೆ ಸಾಕ್ಷಿಯಾದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ