ಹುಳಿಯಾರು: ಹುಳಿಯಾರು ಹಿರಿಯೂರು ರಸ್ತೆಯ ಕೋಡಿಪಾಳ್ಯದ ಸರ್ಕಾರಿ ಶಾಲಾಕಾಲೇಜು ಬಳಿ ಸೂಚನಾ ಫಲಕ ಹಾಗೂ ರಸ್ತೆ ಉಬ್ಬು ಹಾಕುವಂತೆ ಎಬಿವಿಪಿ ಕಾರ್ಯಕರ್ತರು ಹೈವೆ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹೆಚ್.ಆರ್.ಗುರುಪ್ರಸಾದ್ ಹಾಗೂ ಮತ್ತಿತರರು ಹುಳಿಯಾರು ಹಿರಿಯೂರು ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಇದೇ ಮಾರ್ಗವಾಗಿ ಹಾಸನಕ್ಕೆ ನೂರಾರು ಪೆಟ್ರೋಲ್ ಟ್ಯಾಂಕರ್ಗಳು ಸೇರಿದಂತೆ ನಿತ್ಯ ಸಾವಿರಾರೂ ವಾಹನಗಳು ಓಡಾಡುತ್ತವೆ. ಈ ವಾಹನಗಳ ಚಾಲಕರೆಲ್ಲರೂ ಪರಸ್ಥಳದವರಾಗಿರುವುದರಿಂದ ಕೋಡಿಪಾಳ್ಯದ ಬಳಿ ಶಾಲೆ ಕಾಲೇಜು ಇದೆ ಎನ್ನುವ ಅರಿವಿಲ್ಲದೆ ಸಿಕ್ಕಾ ಪಟ್ಟೆ ಹಾರನ್ ಮಾಡುತ್ತಾರೆ.ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.
ಅಲ್ಲದೆ ಬೆಳಗ್ಗೆಯಿಂದ ಸಂಜೆಯವರೆವಿಗೂ ಇಲ್ಲಿನ ಹೌಸ್ಕೂಲ್, ಪಿಯು ಕಾಲೇಜು, ಪದವಿ ಕಾಲೇಜಿಗೆ ಸುಮಾರು 2500 ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಆದರೆ ವಾಹನಗಳು ಅತೀ ವೇಗದಲ್ಲಿ ಓಡಾಡುತ್ತಿರುವುದರಿಂದ ವಿದ್ಯಾರ್ಥಿಗಳು ಅಂಗೈಯಲ್ಲಿ ಜೀವ ಹಿಡಿದಿಟ್ಟುಕೊಂಡು ಓಡಾಡುವಂತ್ತಾಗಿದೆ. ಹಾಗಾಗಿ ತಕ್ಷಣ ಸೂಚನ ಫಲಕಾ ಹಾಗೂ ರಸ್ತೆ ಉಬ್ಬು ನಿರ್ಮಿಸುವಂತೆ ಪಟ್ಟಣ ಪಂಚಾಯ್ತಿ ಮೂಲಕ ಹೈವೆ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಎ.ಪಿ.ಬಿ.ಪಿ. ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರು ಪ್ರಸಾದ್,ತಾಲೂಕು ಸಂಚಾಲಕರಾದ ದೀಪಕ್ , ಹುಳಿಯಾರು ಕಾರ್ಯದರ್ಶಿ ಕಿರಣ್ ಎಂ .ಆರ್, ವಿದ್ಯಾರ್ಥಿ ಮುಖಂಡರಾದ ಅಭಿಲಾಷ್, ಶಾಂತಕುಮಾರ್, ಸಿದ್ದೇಶ್,ಆಕಾಶ,ಆನಂದ್ ಕೆ.ಎಲ್, ರಾಜ್.ಎನ್.ಎಸ್,ಸಂಜಯ್, ಅಪ್ಪು ಕುಮಾರ್, ರಕ್ಷಿತಾ,ರಮ್ಯಾ, ಕಾವ್ಯ, ಕಾರ್ಯಕರ್ತರಾದ ರಾಕೇಶ್ ಕೆಂಕೆರೆ, ಹರೀಶ್, ಗಿರೀಶ್, ಹಾಗೂ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ