ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನಿಧನ ವಾರ್ತೆ

ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮದ ಜಿ.ಎಸ್.ಜಬ್ಬರ್ ಸಾಬ್(90ವರ್ಷ) ಬುಧವಾರದಂದು ನಿಧನರಾಗಿದ್ದಾರೆ. ಇವರು ಸಮಾಜ ಸೇವಕರಾಗಿ, ಮುಸ್ಲಿಂ ಸಮುದಾಯದ ಖಾಜಿಸಾಬ್ ಆಗಿದ್ದರು. ಅಲ್ಲದೆ ಖುರಾನ್ ಮತ್ತು ಅರಬ್ ಭಾಷೆಯನ್ನು ಮಕ್ಕಳಿಗೆ ಪಠಣ ಮಾಡುತ್ತಿದ್ದರು. ಗ್ರೂಪ್ ಪಂಚಾಯ್ತಿಯ(ಇಂದಿನ ಗ್ರಾಮಪಂಚಾಯ್ತಿ) ಸದಸ್ಯರಾಗಿ, ಸೇವಾಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರಿಗೆ 6 ಗಂಡು,5 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವಿತ್ತು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲಾಯಿತು.

ಹುಳಿಯಾರ್ ಗೆ ಬಿ.ಎಸ್.ವೈ

ಅಣೇಪಾಳ್ಯದಲ್ಲಿ ಹಾಲು ಶೇಕರಣಾ ಕೇಂದ್ರ,ಗೀತಗಾಯನ ಸ್ಪರ್ಧೆ

ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ನಡೆದ ಗೀತಗಾಯನ ಸ್ಪರ್ಧೆಯ ಉದ್ಘಾಟನೆಯನ್ನು ತಾ.ಪಂ.ಸದಸ್ಯ ಜಿ.ಸೀತಾರಾಮಯ್ಯ ನೆರವೇರಿಸಿದರು.ಜೊತೆಯಲ್ಲಿ ಕೆಂಕೆರೆ ಸತೀಶ್,ಮಲ್ಲೇಶ್,ಲ.ಪು.ಕರಿಯಪ್ಪ ಮತ್ತಿತರಿದ್ದಾರೆ. ಹುಳಿಯಾರು ಹೋಬಳಿ ಅಣೇಪಾಳ್ಯ ಗ್ರಾಮದಲ್ಲಿ ಆರಂಭಗೊಂಡ ಹಾಲು ಶೇಕರಣಾ ಕೇಂದ್ರದ ಉದ್ಘಾಡನೆಯನ್ನು ಹಾಲು ಒಕ್ಕೂಟದ ಅಧ್ಯಕ್ಷ ಹಳೆ ಮನೆ ಶಿವನಂಜಪ್ಪ ನೆರವೇರಿಸಿದರು,ಜೊತೆಯಲ್ಲಿ ಗಂಗಣ್ಣ,ವಿಜಯ ಲಕ್ಷ್ಮಿ,ಸುಬ್ಬರಾಯ ಭಟ್,ದೀಪಕ್ ಇದ್ದಾರೆ.

ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಿದಾಗ ದೇಶದ ಅಭಿವೃದ್ದಿ ಸಾಧ್ಯ

ಗ್ರಾಮೀಣ ಭಾಗದ ಅಭಿವೃದ್ದಿ ಹಾಗೂ ಔದ್ಯೋಗಿಕ ಸಮಸ್ಯೆ ನಿವಾರಿಸಲು ಕೃಷಿಯ ಜೊತೆ ಜೊತೆಗೆ ಗುಡಿಕೈಗಾರಿಕೆಗೆ ಒತ್ತು ನೀಡಿದಾಗ ಮಾತ್ರ ಸಾಧ್ಯವೆಂದು ಜಿ.ಪಂ.ಕೈಗಾರಿಕ ವಿಭಾಗದ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಜಿ.ಪಂ,ಜಿಲ್ಲಾ ಕೈಗಾರಿಕ ಕೇಂದ್ರ ಹಾಗೂ ಬಾಷ್ ಕಂಪನಿಯ ಸಂಯುಕ್ತಾಶ್ರಯದಲ್ಲಿ ಕುಶಲಕರ್ಮಿಗಳು ಮತ್ತು ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉದ್ಯಮಶೀಲತ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿ ಭಾರತವು ಕೃಷಿ ಆಧಾರಿತ ದೇಶವಾಗಿದ್ದರೂ ಸಹ ಸಾಕಷ್ಟು ಮಂದಿ ಗುಡಿ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಗುಡಿ ಕೈಗಾರಿಕೆಗೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಗುಡಿಕೈಗಾರಿಕಾ ಉಪಕರಣಗಳ ಖರೀದಿಗೆ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಬೇಕು ಎಂದರು. ಶಿಬಿರ ಉದ್ಘಾಟಿಸಿದ ಜಿ.ಪಂ.ಸದಸ್ಯೆ ಮಂಜುಳಾ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಅನೇಕ ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಪಟ್ಟಣಗಳತ್ತ ವಲಸೆ ಹೋಗಿತ್ತಿದ್ದು ,ಇದನ್ನು ತಡೆಯುವ ನಿಟ್ಟಿನಲ್ಲಿ ಪಿ.ಎಂ.ಆರ್.ವೈ, ಮತ್ತು ಆರ್.ಇ.ಜಿ.ಪಿ. ಯೋಜನೆಗಳನ್ನು ಒಗ್ಗೂಡಿಸಿ ಜಾರಿಗೆ ತಂದಿರುವ ಪಿ.ಎಂ.ಇ.ಜಿ.ಪಿ ಎಂಬ ಹೊಸ ಯೋಜನೆ ಗ್ರಾಮೀಣ ಜನತೆಗೆ ತುಂಬಾ ಸಹಕಾರಿಯಾಗಿದೆ ಎಂದರು. ಶಿಬಿರದಲ್ಲಿ ಗ್ರಾ,ಪಂ,ಅಧ್ಯಕ್ಷ ಸಯ್ಯದ್ ಅನ್ಸರ್ ಆಲಿ,ತಾ.ಪಂ.ಸದಸ್ಯ ನ...

ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ತಂಡ ಪ್ರಥಮ

ಹುಳಿಯಾರಿನ ಕ್ರಿಯಾಶೀಲ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆವತಿಯಿಂದ ನಡೆದ ಬಾಲ್ ಬ್ಯಾಡ್ಮಿಂಟನ್ ಪಂದ್ಯದ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಆಳ್ವಾಸ್ ತಂಡದ ಆಟಗಾರ್ತಿಯರು.

ಹುಳಿಯಾರು:ಜೂ.10 ರಿಂದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಪುಟ್ಟಸ್ವಾಮಿಗೌಡ ಪಟ್ಟಣದ ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಪತ್ರಕರ್ತ ದಿವಂಗತ ಡಿ.ಎಸ್.ರಾಜಪ್ಪನವರ ಸ್ಮರಣಾರ್ಥ ರಾಜ್ಯ ಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಇಂದಿನಿಂದ( ಜೂ.10) ರಿಂದ 12ರ ವರೆಗೆ ಒಟ್ಟು ಮೂರು ದಿನಗಳ ಕಾಲ ಹುಳಿಯಾರಿನ ಎಂ.ಪಿ.ಎಸ್. ಆವರಣದಲ್ಲಿ ನಡೆಯಲಿದೆ. ಸಂಘ ಸ್ಥಾಪನೆಯ ಉದ್ದೇಶ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ಗ್ರಾಮಾಂತರ ಪ್ರದೇಶಗಳಲ್ಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿಯ ಹಲವಾರು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೂ.10 ರ ಬೆಳಿಗ್ಗೆ 10 ಗಂಟೆಗೆ ತುಮಕೂರು ಜಿಲ್ಲಾಧಿಕಾರಿ ಡಾಸಿ.ಸೋಮಶೇಖರ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ ಬಾಬು ಪತ್ರಕರ್ತ ದಿವಂಗತ ಡಿ.ಎಸ್.ರಾಜಪ್ಪನವರ ಕುರಿತ ಸ್ಮರಣಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ರಾಷ್ತ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಹೆಚ್.ಎಲ್.ಸತೀಶ್ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ.ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮಹಾಪೋಷಕರಾದ ಸುಶೀಲಮ್ಮ,ತಹ...

ಸಾಮೊಹಿಕ ವಿವಾಹದಲ್ಲಿ ಮದುವೆಯಾದ ಜೋಡಿಗಳು

ಹುಳಿಯಾರಿನ ರೋಟರಿ ಸಂಸ್ಥೆ, ಕಮ್ಯೂನಿಟಿ ಕಾರ್ಪ್ಸ್ ಹಾಗೂ ಬೆಂಗಳೂರು ರೋಟರಿ ಮಿಡ್ಟೌನ್ ಸಹಯೋಗದಲ್ಲಿ ನಡೆ ವಿವಾಹ ಮಹೋತ್ಸವದಲ್ಲಿ ಮೇ.೨೯ ರ ಭಾನುವಾರ ವಿವಾಹ ಬಂಧನಕೊಳಗಾದ ಜೋಡಿಗಳು.