ಅಖಿಲ ಭಾರತ ಬಣಜಾರರ ಯಾತ್ರಾಸ್ಥಳವಾದ ದೊಡ್ಡೆಣ್ಣೇಗೆರೆಯಲ್ಲಿ ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವ ಮಾ.14ರ ಗುರುವಾರದಿಂದ ಮಾ.17 ರ ಭಾನುವಾರದವರೆಗೆ
✍️ ನರೇಂದ್ರಬಾಬು-ಹುಳಿಯಾರು- 9448760070
ಹುಳಿಯಾರು:ಅಖಿಲ ಭಾರತ ಬಣಜಾರರ ಯಾತ್ರಾಸ್ಥಳವಾದ ತುಮಕೂರು ಜಿಲ್ಲೆಯ ಹಂದನಕೆರೆ ಹೋಬಳಿಯ ದೊಡ್ಡೆಣ್ಣೇಗೆರೆಯಲ್ಲಿ ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವವು ದಿನಾಂಕ 14-03-2024 ನೇ ಗುರುವಾರದಿಂದ 17-03-2024 ರ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಬಗ್ಗೆ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿ ಜಿ ರಘುನಾಥ್ ಕೆಳಕಂಡಂತೆ ಮಾಹಿತಿ ನೀಡಿದರು.
*ಪ್ರತಿದಿನ ನಡೆಯುವ ಪೂಜಾ ಕಾರ್ಯಕ್ರಮಗಳು ಹೀಗಿದೆ.*
*ದಿನಾಂಕ 14-03-2024 ನೇ ಗುರುವಾರದ ಪೂಜಾ ಕಾರ್ಯಕ್ರಮಗಳು*
-------------------------
ಶ್ರೀ ಕರಿಯಮ್ಮದೇವರ ಪುಣ್ಯಾರ್ಚನೆ, ಶ್ರೀ ಗಣಪತಿ ಪುಣ್ಯಾರ್ಚನೆ, ಝಾಂಡೇವು, ಧ್ವಜಾರೋಹಣ ಗರುಡಗಂಬ ಪೂಜೆ, ನಂದಾದೀಪ ಬೆಳಗಿಸುವುದು, ಕಳಸಧಾರಣೆ, ದೇವತೆಗಳಿಗೆ ಅಭಿಷೇಕ
*ದಿನಾಂಕ 15-03-2024 ನೇ ಶುಕ್ರವಾರದ ಪೂಜಾ ಕಾರ್ಯಕ್ರಮಗಳು*
-----------------------------
ಗಂಗಾಪೂಜೆ ಮತ್ತು ಒಳಂಗ್, ಪಂಚಾಮೃತ ಅಭಿಷೇಕ, ಶ್ರೀ ದೇವತೆಗಳಿಗೆ ಪುಣ್ಯಾರ್ಚನೆ, ದೇವತೆಗಳಿಗೆ ಕವಚಧಾರಣೆ, ಸಾತ್ ಸತ್ತಿಮಾತೆಯರಿಗೆ ಪುಣ್ಯಾರ್ಚನೆ, ಶ್ರೀ ತೀಥಾರಾಜಸ್ವಾಮಿಯವರ ಪುಣ್ಯಾರ್ಚನೆ, ರಸಾಯನ, ಪಾನಕ ಪನಿವಾರ
ಬೆಳಿಗ್ಗೆ 10-00 ಘಂಟೆಯ ನಂತರ ಭಕ್ತಾದಿಗಳಿಗೆ ಪೂಜಾ ಮತ್ತು ದೇವರ ದರ್ಶನ ಪ್ರಾರಂಭ
*ದಿನಾಂಕ 16-03-2024 ನೇ ಶನಿವಾರದ ಪೂಜಾ ಕಾರ್ಯಕ್ರಮಗಳು*
-----------------------------
ಗಂಗಾ ಪೂಜೆ ಮತ್ತು ಕುಂಬಾಭಿಷೇಕ, ಶ್ರೀ ದೇವತೆಗಳಿಗೆ ಕ್ಷೀರಾಭೀಷೇಕ, ಪಂಚಾಮೃತ ಅಭಿಷೇಕ ದೇವತೆಗಳಿಗೆ ಬೆಳ್ಳಿ ಕವಚಧಾರಣೆ ಪೂಜೆ, ರಾತ್ರಿ ದುಗ್ಲಾಸೇವೆ, ಅಂಕುರಾರ್ಪಣೆ (ತೀಜ್)
ಮಧ್ಯಾಹ್ನ 4-00 ರಿಂದ 3ನೇ ವರ್ಷದ ಅದ್ಧೂರಿ ರಥೋತ್ಸವವನ್ನು ನಡೆಸಲಾಗುವುದು
ಸಂಜೆ 6-00 ಕ್ಕೆ ಧಾರ್ಮಿಕ ಮತ್ತು ಸನ್ಮಾನ ಸಮಾರಂಭ
ಸಂಜೆ 8-00 ಘಂಟೆಯಿಂದ ಶ್ರೀ ಕರಿಯಮ್ಮ ದೇವಿ, ಶ್ರೀ ಭೀಮಾಸತಿ, ಶ್ರೀ ತೀಥಾರಾಜಸ್ವಾಮಿಯವರ ಉತ್ಸವ
*ದಿನಾಂಕ 17-03-2024 ನೇ ಭಾನುವಾರ ಪೂಜಾ ಕಾರ್ಯಕ್ರಮಗಳು*
---------------------------
ಶ್ರೀ ದೇವತೆಗಳಿಗೆ ಭಕ್ತಾದಿಗಳಿಂದ ಪೂಜಾ ಕಾರ್ಯಕ್ರಮಗಳು
ಬೆಳಿಗ್ಗೆ 9-00 ಗಂಟೆಯ ನಂತರ ಶ್ರೀ ತೀಥಾರಾಜಸ್ವಾಮಿಗೆ ವಿಶೇಷ ಪೂಜೆ
*ಶ್ರೀ ಭೀಮಾಸತಿ ಜಾನಪದ ರಂಗಮಂದಿರದಲ್ಲಿ ಪ್ರತಿದಿನ ಬಂಜಾರರ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.*
*ಜಾತ್ರೆ ಹೊರತುಪಡಿಸಿ ಪ್ರತಿ ದಿನ ಬರುವ ಭಕ್ತಾದಿಗಳಿಗೆ “ದಾಸೋಹ" ವ್ಯವಸ್ಥೆ ಮಾಡಲಾಗಿದ್ದು ಭಕ್ತಾದಿಗಳು ದವಸ-ಧಾನ್ಯ ಹಾಗೂ ಧನ ಸಹಾಯವನ್ನು ಅರ್ಪಿಸಲು ಕೋರಿದೆ.*
ಶ್ರೀ ದೇವತೆಗಳ ತಿಂಗಳ ಜಾತ್ರೆ ದಿ॥ 12-04-2024 ಶುಕ್ರವಾರದಿಂದ ದಿ।। 14-04-2024 ನೇ ಭಾನುವಾರದವರೆಗೆ
ವಿ.ಸೂ. : ಶ್ರೀ ಕರಿಯಮ್ಮದೇವಿಯವರ ನೂತನ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಭಕ್ತಾಧಿಗಳು ತಮ್ಮ ತನು ಮನ ಧನ ಇತ್ಯಾದಿಗಳನ್ನು ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ