ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜಯಚಂದ್ರರಿಂದ ಕುಲದೇವತೆಗೆ ಪೂಜೆ

: ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ದಂಪತಿಗಳು ತಮ್ಮ ಕುಲದೇವತೆ ಹುಳಿಯಾರಿನ ಕೆಂಚಮ್ಮನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಇವರ ಆಗಮನದ ಸುದ್ದಿ ಅರಿತ ವಿವಿಧ ಪಕ್ಷಗಳಿಗೆ ಹರಿದು ಹಂಚುಹೋಗಿರುವ ಜಯಚಂದ್ರ ಅಭಿಮಾನಿಗಳು ಹಾಗೂ ಬೆಂಬಲಿಗರು ಪಕ್ಷಬೇಧ ಮರೆತು ದೇವಾಲಯಕ್ಕೆ ಆಗಮಿಸಿ ಇವರೊಂದಿಗೆ ಪೂಜಾಕೈಂಕರ್ಯದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಮಾತಾನಾಡಿದ ಅವರು ತಾವು ಶಾಸಕರು ಹಾಗೂ ಸಚಿವನಾಗಿದ್ದ ಸಂದರ್ಭದಲ್ಲಿ ಹುಳಿಯಾರಿಗೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ನೆನೆಪಿಸಿಕೊಂಡು ತಾವೂ ಈಗಲೂ ಈ ಭಾಗದ ಜನತೆಯನ್ನು ಮರೆತಿಲ್ಲ,ಕ್ಷೇತ್ರದೊಡಗಿನ ಸಂಬಂಧ ಕಡಿದುಕೊಂಡಿಲ್ಲ ಎಂದರು.   ಚಿನಾಹಳ್ಳಿ ಕ್ಷೇತ್ರಕ್ಕೆ ತಮ್ಮ ಮಗ ಸಂತೋಷ್ ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರಚಾರಮಾಡಿರುವುದು ಅಭಿಮಾನಿಗಳು ನಮ್ಮ ಮೇಲೆಇಟ್ಟಿರುವ ವಿಶ್ವಾಸವಾಗಿದೆ ಹೊರತು ಈ ಬಗ್ಗೆ ನಾನು ಯಾವುದೆ ಪ್ರಯತ್ನವಾಗಲಿ,ಹೈಕಮಾಂಡಿನ ಮೇಲೆ ಒತ್ತಡವನ್ನಾಗಲಿ ಹಾಕಿಲ್ಲ ಎಂದರು.ಚಿನಾ ಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿ ಸಾಸಲು ಸತೀಶ್ ಸ್ಪರ್ಧಿಸಲಿದ್ದು ಎಲ್ಲಾ ಕಾರ್ಯಕರ್ತರುಗಳು ಅವರಿಗೆ ಬೆಂಬಲ ಸೂಚಿಸುವಂತೆ ಕರೆ ನೀಡಿದರು.ಇದೇ 17ರಂದು ತಾವು ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮ ಪತ್ರಸಲ್ಲಿಸಲ್ಲಿದ್ದು ತಾಯಿ ಕೆಂಚಮ್ಮನ ಆಶೀರ್ವಾದ ಹಾಗೂ ಅಭಿಮಾನಿಗಳ ಬೆಂಬಲಿದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದ...

ಜೆ.ಸಿ.ಮಾಧುಸ್ವಾಮಿ ಮತಯಾಚನೆ

ಹುಳಿಯಾರು ಸಮೀಪದ ಯಾಕೂಬ್ ಸಾಬ್ ಪಾಳ್ಯದಲ್ಲಿ ಕೆಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಬೆಂಬಲಿಗರೊಂದಿಗೆ ಮತಪ್ರಚಾರದಲ್ಲಿ ತೊಡಗಿದ್ದರು.

ದಾಖಲೆಗಾಗಿ ಚುನಾವಣಾ ಕಣಕ್ಕೆ:ಇವನದು 146 ನೇ ಚುನಾವಣೆ.

ಉದಯವಾಣಿ-13.04.2013 ಪುಟ 6 ವಿಜಯವಾಣಿ 13 ಏಪ್ರಿಲ್ 2013

ತಾಲ್ಲೂಕಿನ 26 ಕೆರೆಗಳಿಗೆ ಹೇಮಾವತಿ ನೀರು: ಕಾಮಗಾರಿಗೆ ಚಾಲನೆ:ಕೆ.ಎಸ್.ಕೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದ ತಾಲ್ಲೂಕಿನ 26 ಕೆರೆಗಳಿಗೆ ಹೇಮಾವತಿ ನೀರು ಹರಿಸುವ 102ಕೋಟಿ ರೂಗಳ ಕಾಮಗಾರಿ ಶನಿವಾರ ವಿದ್ಯುಕ್ತವಾಗಿ ಚಾಲನೆಗೊಂಡಿರುವುದು ಬಿಜೆಪಿ ಸರ್ಕಾರವು ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಿ.ನಾ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು. ಹುಳಿಯಾರಿನ ತಮ್ಮ ನಿವಾಸಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಅವರು ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸರ್ಕಾರಿ ಜಾಗಗಳಲ್ಲಿ ಮಾತ್ರ ಕಾಮಗಾರಿ ನಡೆಯಲಿದ್ದು ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ನಡೆಯುತ್ತದೆ ಎಂದರು.ಕ್ಷೇತ್ರದಲ್ಲಿ ವಿರೋಧ ಪಕ್ಷ ಅಧಿಕಾರದಲ್ಲಿದರೂ ಸಹ ಕ್ಷೇತ್ರದ ಅಭಿವೃದ್ದಿಯನ್ನು ಮನಗಂಡು ಬಿಜೆಪಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ ,ಆದರೆ ಹಾಲಿ ಶಾಸಕರು ತಮ್ಮ ಕ್ಷೇತ್ರದಲ್ಲಿನ ಆಗಬೇಕಿರುವ ಅಭಿವೃದ್ದಿ ಕಾರ್ಯಗಳು,ಇರುವ ಸಮಸ್ಯೆಗಳ ಬಗ್ಗೆ ಯಾವುದೇ ಕರಡುಗಳು ಸರ್ಕಾರದ ಮುಂದಿಟ್ಟಿರುವ ನಿದರ್ಶನಗಳಿಲ್ಲ,ಆದರೂ ಕ್ಷೇತ್ರದಲ್ಲಿ ಮೂರಾರ್ಜಿ ವಸತಿ ಶಾಲಾ ಕಟ್ಟಡ ನಿರ್ಮಾಣ,ಅಗ್ನಿಶಾಮಕ ಠಾಣೆ,ಶಾಲೆಲಾಕಟ್ಟಡಗಳು ಮಂಜೂರಾಗಿವೆ,...

ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯವಹಿಸುವರನ್ನು ಸೋಲಿಸಿ:ಕೆ.ಎಸ್.ಕೆ

ಬೆಂಗಳೂರು ಸೇರಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯವಹಿಸಿರುವ ಹಾಲಿ ಶಾಸಕ ಮತ್ತು ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಹಾಗೂ ಅಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡುವ ಮಾಜಿ ಶಾಸಕ ಜೆ.ಸಿ.ಎಂ ಬಗ್ಗೆ ಬಿಜೆಪಿ ಚುನಾವಣ ಪ್ರಚಾರದಲ್ಲಿ ಬಿಜೆಪಿಯ ಕಿರಣ್ ಕುಮಾರ್ ಚೌಳಕಟ್ಟೆಯಲ್ಲಿ ಹೇಳಿದ್ದು.ಪತ್ರಕರ್ತ ಕಿರಣ್ ಸಂಯುಕ್ತ ಕರ್ನಾಟಕದಲ್ಲಿ ಹೀಗೆ ಬರೆದಿದ್ದಾ ರೆ. ಸಂಯುಕ್ತ ಕರ್ನಾಟಕ 13 ಏಪ್ರಿಲ್ 2013

ಕೆಂಕೆರೆ ಕಾಳಿಕಾಂಬದೇವಿ ಜಾತ್ರೆಗೆ ಚಾಲನೆ

ಹೋಬಳಿ ಕೆಂಕೆರೆ ಗ್ರಾಮದ ಗ್ರಾಮದೇವತೆ ಶ್ರೀ ಕಾಳಿಕಾಂಬದೇವಿಯ ಜಾತ್ರಾ ಮಹೋತ್ಸವವು ಶನಿವಾರದಂದು ಉಪ್ಪರಿಗಯ್ಯನ ಬಸಯ್ಯನ ಮನೆಯವರಿಂದ ನಡೆದ ಅಗ್ನಿಕೊಂಡಸೇವಾ ಕಾರ್ಯದದೊಂದಿಗೆ ಚಾಲನೆಗೊಂಡಿದ್ದು ತಾ.20ರ ಶನಿವಾರದವರೆಗೆ ಎಂಟು ದಿನಗಳ ಕಾಲ ನಡೆಯಲಿದೆ.           ತಾ.14ರ ಭಾನುವಾರ ವೇ.ಚನ್ನಬಸವಯ್ಯ ಮತ್ತು ಮಕ್ಕಳಿಂದ ಅಗ್ನಿಕೊಂಡಸೇವೆ,ತಾ.15ರ ಸೋಮವಾರ ಕರೇಸಿದ್ದಯ್ಯನ ಚನ್ನವೀರಮ್ಮ ಮತ್ತು ಮಕ್ಕಳಿಂದ ಅಗ್ನಿಕೊಂಡಸೇವೆ ಕಾರ್ಯ, ತಾ.16ರ ಮಂಗಳವಾರ ದಮ್ಮಡಿಹಟ್ಟಿ ಹಾಗೂ ಕಂಪನಹಳ್ಳಿ ಗ್ರಾಮಸ್ಥರಿಂದ ಅಮ್ಮನವರ ಕಂಕಣ ಧಾರಣೆ, ಮದುವಣಗಿತ್ತಿ ಸೇವೆ,ಆರತಿಬಾನ ಕಾರ್ಯ ಹಾಗೂ ಇದೇ ದಿನ ರಾತ್ರಿ ಗೌಡಗೆರೆ ಶ್ರೀದುರ್ಗಮ್ಮದೇವಿ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಹುಳಿಯಾರು ದುರ್ಗಮ್ಮದೇವಿಯವರ ಆಗಮನದೊಂದಿಗೆ ಕೂಡುಭೇಟಿ ನಡೆಯಲಿದೆ.ತಾ.17ರ ಬುಧವಾರ ಬೆಳಿಗ್ಗೆ ಮಡಲಕ್ಕಿಸೇವೆ ರಾತ್ರಿ ಕೆ.ಬಿ.ರಮೇಶಣ್ಣ ಹಾಗೂ ಅಂಗಡಿಕೊಡಪ್ಪ ಮತ್ತು ಗ್ರಾಮಸ್ಥರಿಂದ ಅಮ್ಮನವರ ಉಯ್ಯಾಲೆ ಉತ್ಸವ ನಡೆಯಲಿದೆ.ತಾ.18ರ ಗುರುವಾರ ಬೆಳಿಗ್ಗೆ ಕಲಶ ಮಹೋತ್ಸವ,ರಾತ್ರಿ ಬರದಲೇಪಾಳ್ಯದ ಅಂಬಿಕಾ ಕೃಪಾಪೋಷಿತ ನಾಟಕ ಮಂಡಳಿಯವರಿಂದ ದೇವಿಮಹಾತ್ಮೆ ನಾಟಕ ಪ್ರದರ್ಶನ,ತಾ.19 ಶುಕ್ರವಾರ ಸಿಡಿ ಕಾರ್ಯಕ್ರಮ,ತಾ.20ರ ಶನಿವಾರ ಓಕಳಿ ಭಂಡಾರ ಸೇವೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ಅಮ್ಮನವರ ಕೃಪೆಗೆ ಪಾತ...

ಮದ್ಯವ್ಯಸನಿಗಳೇ ಮನಸ್ಸನು ಪಕ್ವವಾಗಿಸಿಕೊಂಡು ಕುಡಿತವನ್ನು ಬಿಡಿ : ಸ್ವಾಮೀಜಿ

                ಹುಳಿಯಾರಿನ ಸೀತಾರಾಮ ಕಲ್ಯಾಣಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯವರು ಆಯೋಜಿಸಿದ್ದ 577ನೇ ಮದ್ಯವರ್ಜನ  ಶಿಬಿರದ ಉದ್ಘಾಟನೆಯಲ್ಲಿ ಅಧ್ಯಕ್ಷ ಎಂಎಸ್ ಆರ್ ನಟರಾಜ್ ಗುಪ್ತ, ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿ, ಪುರುಷೋತ್ತಮ್, ಹೆಚ್.ಎಸ್.ಲಕ್ಷ್ಮಿನರಸಿಂಹಯ್ಯ, ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್ ಇದ್ದಾರೆ.     ಕುಡಿತಕ್ಕೆ ದಾಸರಾಗಿ ಜೀವನದಲ್ಲಿ ತಾವು ನೆಮ್ಮದಿಯಿಂದಿರದೆ ತಮ್ಮ ಸಂಸಾರದಲ್ಲಿನ ನೆಮ್ಮದೆಯನ್ನು ಹಾಳುಮಾಡಿಕೊಂಡು,ಸಮಾಜದ ಜನರಿಂದ ದಿನ ನಿತ್ಯ ಹಿಡಿಶಾಪ ಹಾಕಿಸಿಕೊಳ್ಳುತ್ತಾ, ಜೀವನವನ್ನು ನರಕದತ್ತ ಕೊಂಡೈಯುತ್ತಿರುವ ಮದ್ಯವ್ಯಸನಿಗಳೇ ತಮ್ಮ ಮನಸ್ಸನ್ನು ಪರಿಪಕ್ವವಾಗಿಸಿಕೊಂಡು ಕುಡಿತವನ್ನು ಬಿಟ್ಟು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಅರಸೀಕೆರೆ ಮಹಾಸಂಸ್ಥಾನದ ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.                  ಹುಳಿಯಾರಿನ ಸೀತಾರಾಮ ಕಲ್ಯಾಣಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಗ್ರಾಮಾಭಿವೃದ್ದಿ ಯೋಜನೆಯಡಿ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ,ವಿಪ್ರಪ್ರತಿಷ್ಠಾನ,ಮದ್ಯವರ...