ರೈತರ ಬೆಳೆಗೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು: ಚಂಪಾ ------------------------------- ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಅನ್ನದಾತ ದೇಶದ ಬೆನ್ನೆಲುಬು ಎನ್ನಲಾಗುವ ಈ ನಾಡಿನಲ್ಲಿ ರೈತ ಇಂದು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬರುತ್ತಿರುವುದು ದುರಾದೃಷ್ಟ .''ರೈತ ದೇಶದ ಬೆನ್ನೆಲುಬು ಎಂಬ ಮಾತು ಸತ್ಯವಾಗಬೇಕಾದಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಆಗಷ್ಟೆ ರೈತರ ಬದುಕು ಹಸನಾಗಲು ಸಾಧ್ಯ'' ಎಂದು ಕವಿ,ನಾಟಕಕರಾದ ಪ್ರೋ.ಚಂದ್ರಶೇಖರ ಪಾಟೀಲ್ ಹೇಳಿದರು. ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರದಂದುನಡೆದ ಸಾಂಸ್ಕೃತಿಕ , ಕ್ರೀಡಾ, ಎನ್.ಎಸ್.ಎಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯಿಲ್ಲದೆ, ಮಾಡಿರುವ ಸಾಲಗಳನ್ನು ಸಂದಾಯ ಮಾಡಲಾರದೆ ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುಃಖದ ವಿಷಯ. ಬಿತ್ತನೆ ನಂತರ ಬೆಳೆ ಬರಬೇಕು,ಬೆಳೆದಿದ್ದು ಮಾರಾಟವಾಗಬೇಕು,ದುಡಿತಕ್ಕೆ ತಕ್ಕ ಪ್ರತಿಫಲ ದೊರೆತಾಗ ಮಾತ್ರ ಕೃಷಿಯನ್ನು ನಂಬಿ ಬದುಕಬಹುದು.ಇಂದು ಬೆಂಕಿಪೊಟ್ಟಣಕ್ಕೂ ಬೆಲೆ ನಿಗದಿಯಾಗಿದ್ದರೆ ರೈ...