ತಾಯಂದಿರು ಎದೆ ಹಾಲು ಕುಡಿಸುವುದರಿಂದ ಮಗುವಿಗೆ ಉತ್ತಮ ಆರೋಗ್ಯದ ಜೋತೆಗೆ ತಾಯಿಯ ಬೊಜ್ಜು ಕಡಿಮೆಯಾಗಿ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹೊಯ್ಸಳಕಟ್ಟೆಯ ವೈದ್ಯಾಧಿಕಾರಿ ರಜನೀಶ್ ಬಾಬು ತಿಳಿಸಿದರು.
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ವಿಶ್ವ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹುಟ್ಟಿದ ಮೊದಲ ಮೂರು ದಿನ ತಾಯಂದಿರು ಮಗುವಿಗೆ ಎದೆ ಹಾಲು ಕುಡಿಸುವುದು ಅತ್ಯಾವಶ್ಯಕವಾಗಿದ್ದು ಮೂಢನಂಬಿಕೆಯಿಂದ ಕೆಲವು ಗ್ರಾಮೀಣ ತಾಯಂದಿರು ಹೆರಿಗೆ ಆದ ಮಗುವಿಗೆ ತಾಯಿ ಹಾಲು ಬಿಟ್ಟು ಬೇರೆ ಹಾಲು ಕುಡಿಸುವುದು ವಾಡಿಕೆಯಾಗಿದ್ದು ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.
ಅಂಗನವಾಡಿ ಮೇಲ್ವಿಚಾರಕಿ ಲಕ್ಷೀಮೂರ್ತಿ ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಭಾಗ್ಯಲಕ್ಷಿ ಬಾಂಡ್ ವಿತರಿಸಿದರು.ತಾಪಂ ಸದಸ್ಯೆ ಕವಿತಾಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿದರು.ಪ್ರಾಂಶುಪಾಲೆ ಉಮಾ,ಗ್ರಾಪಂ ಸದಸ್ಯ ಗಿರೀಶ್,ಮುಖ್ಯಶಿಕ್ಷಕ ಮೈಲಾರಪ್ಪ ,ಮಂಜುಳ,ಎಪಿಎಂಸಿ ಸದಸ್ಯ ರುದ್ರೇಶ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಚಂದ್ರಶೇಖರ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು.ಆಶಾ ಕಾರ್ಯಕರ್ತೆಯರು.ಸ್ತ್ರೀ ಶಕ್ತಿ ಸದಸ್ಯರು ಹಾಜರಿದ್ದರು.ಮುಖ್ಯ ಶಿಕ್ಷಕ ಮೈಲಾರಪ್ಪ ಸ್ವಾಗತಿಸಿ ಶಿಕ್ಷಕ ಚಂದ್ರು ವಂದಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ