ಸಂಸ್ಕೃತಿ ಇಲಾಖೆ ವಿದ್ಯಾರ್ಥಿಗಳಿಗೆ ಸಂಗೀತದ ತರಬೇತಿ ನೀಡಲಿ
-------------------------------------
ಹುಳಿಯಾರು: ತಾಲೂಕಿನ ಬಹುತೇಕ ಸಕರ್ಾರಿ ಶಾಲೆಗಳಲ್ಲಿ ಸಂಗೀತದ ಶಿಕ್ಷಕರ ಸಮಸ್ಯೆಯಿದ್ದು ಸಕರ್ಾರ ಸಂಗೀತದ ಶಿಕ್ಷಕರನ್ನು ನೇಮಕ ಮಾಡುವವರೆವಿಗೂ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ, ಬೆಳಸಿ, ಪ್ರೋತ್ಸಹಿಸುವ ಸಲುವಾಗಿಯೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಜೆಡಿಎಸ್ ಮುಖಂಡ ಸೈಯದ್ ಜಲಾಲ್ ಅವರು ಸಲಹೆ ನೀಡಿದ್ದಾರೆ.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2009-10 ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಹಣದ ಕೊರತೆಯಿಂದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ತರಬೇತಿ ಕೊಡಿಸುವುದು ಸಾಧ್ಯವಿಲ್ಲದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ಕೆ ಮುಂದಾಗಬೇಕು ಎಂದರು. ಆರೋಗ್ಯ ಮತ್ತು ಸಂತೋಷವನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಾತ್ರ ಇವುಗಳನ್ನು ಪಡೆಯಲು ಸಾಧ್ಯವಿದ್ದು ಮಕ್ಕಳು ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದು ಒಳ್ಳೆಯದು ಎಂದರಲ್ಲದೆ ರಾಜ ಮಹಾರಾಜರು ಈ ಸತ್ಯವನ್ನು ಅರಿತಿದ್ದ ಕಾರಣದಿಂದಾಗಿಯೇ ಸಾಂಸ್ಕೃತಿಕ ತಂಡಗಳನ್ನು ಪೋಷಿಸಿ ಬೆಳೆಸಿ ಅಗತ್ಯ ಬಿದ್ದಾಗಲೆಲ್ಲ ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ನಟರಾಜು ಅವರು ವಹಿಸಿದ್ದರು. ತಾಲೂಕು ಪಂಚಾಯ್ತಿ ಸದಸ್ಯ ಶಿವನಂಜಪ್ಪ, ಗುತ್ತಿದಾರ ನಂದಿಹಳ್ಳಿ ಶಿವಣ್ಣ, ಉಪನ್ಯಾಸಕರಾದ ಚಿಕ್ಕಣ್ಣ, ಹಾಲಪ್ಪ ಮತ್ತಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ