ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಶ್ವತ ಕುಡಿಯುವ ನೀರಿಗಾಗಿ ಬೆಂಗಳೂರಿಗೆ ಪಾದಯಾತ್ರೆ;ಭಾನುವಾರ ಪೂರ್ವಭಾವಿ ಸಭೆ

ಶಾಶ್ವತ ಕುಡಿಯುವ ನೀರಿಗಾಗಿ ಆಗ್ರಹಿಸಿ ಇದುವರೆಗೂ ನಡೆದ ಹೋರಾಟಗಳಿಗೆ ಸಕಾ೯ರ ನೀಡಿದ ಭರವಸೆಗಳು ವರ್ಷಗಳುರುಳಿದರೂ ಅನುಷ್ಠಾನಗೊಳ್ಳದೆ ಕೇವಲ ಭರವಸೆಗಳಾಗಿಯೆ ಉಳಿದಿರುವ ಹಿನ್ನಲೆಯಲ್ಲಿ ಶಾಶ್ವತ ಕುಡಿಯುವ ನೀರು ಹೋರಾಟ ಒಕ್ಕೂಟದ ವತಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಾಗೂ ಮುಖ್ಯಮಂತ್ರಿಗಳ ಮನೆ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.ಈ ಹಿನ್ನಲೆಯಲ್ಲಿ ಇದೇ 29 ರ ಭಾನುವಾರ ಮದ್ಯಾಹ್ನ 2 ಗಂಟೆಗೆ ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಈ ಹಿಂದೆ ನಡೆದ ಧರಣಿ ಸಂದರ್ಭದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದ ಎಲ್ಲಾ ಸಂಘ ಸಂಸ್ಥೆಗಳು,ಹಾಗೂ ತಾಲ್ಲೂಕಿನ ಹೋರಾಟಗಾರರು ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವಂತೆ ಹಾಗೂ ಹೆಚ್ಚಿನ ವಿವರಗಳಿಗೆ ಗಾಣಧಾಳ್ ವೀರಭದ್ರಪ್ಪ ಅಥವಾ ಕೆಂಕೆರೆ ಸತೀಶ್ ಅವರನ್ನು ಸಂಪಕಿ೯ಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಹುಳಿಯಾರಿನಲ್ಲಿ ಆ.29 ರಂದು ಉಚಿತ ನರ ಮತ್ತು ಮನೋರೋಗ ತಪಾಸಣಾ ಶಿಬಿರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ನೇಹ ಮನೋವಿಕಾಸ ಕೇಂದ್ರ ಹಾಗೂ ಸ್ಪಂದನ ನರ್ಸಿಂಗ್ ಹೋಂ, ತಾಲೂಕು ವೈದ್ಯರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆ.29 ರ ಭಾನುವಾರ ಹುಳಿಯಾರಿನ ಸ್ಪಂದನ ನರ್ಸಿಂಗ್ ಹೋಂ ಆವರಣದಲ್ಲಿ ಉಚಿತ ನರ ಮತ್ತು ಮನೋರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಿದೆ. ಸ್ನೇಹ ಮನೋವಿಕಾಸ ಕೇಂದ್ರದ ನರ ಮತ್ತು ಮನೋವೈದ್ಯರಾದ ಡಾ.ಲೋಕೇಶ್ ಬಾಬು ಅವರು ಉದ್ಘಾಟಿಸುವ ಈ ಶಿಬಿರದ ಅಧ್ಯಕ್ಷತೆಯನ್ನು ತಾಲೂಕು ವೈದ್ಯರ ಸಂಘದ ಅಧ್ಯಕ್ಷ ವೈ.ಜಿ.ಸಿದ್ಧರಾಮಯ್ಯ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ನಾಗರಾಜು, ಡಾ.ಶ್ರೀನಿವಾಸ್, ಜಿ.ಮಂಜುನಾಥಗುಪ್ತ, ರವೀಶ್ ಅವರು ಭಾಗವಹಿಸುವರು. ಬಹು ದಿನದ ವಾಸಿಯಾಗದ ತಲೆ, ಬೆನ್ನು, ಎದೆ, ಮೈಕೈ ನೋವು, ನರಸೆಳೆತ, ತಲೆ ತಿರುಗು, ಕೈನಡುಗುವುದು, ಅಂಗೈ ಹೆಚ್ಚಾಗಿ ಬೆವರುವುದು, ಸುಮ್ಮನೆ ಹೆದರಿಕೆ, ಗಾಬರಿಯಾಗುವುದು, ನಿದ್ದೆ ಇಲ್ಲದಿರುವುದು, ಅತಿಯಾದ ಯೋಚನೆ, ಸದಾ ಚಿಂತೆ ಕಾಡುವುದು, ಮೂಛೆ೯ ಬಂದು ಬೀಳುವುದು ಹೀಗೆ ಅನೇಕ ತೊಂದರೆಯಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಾಲನೆ

ಹುಳಿಯಾರು ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆ ಉದ್ಘಾಟನಾ ಸಭೆಯಲ್ಲಿ ತಹಸೀಲ್ದಾರ್ ಟಿ.ಸಿ.ಕಾಂತರಾಜು , ಸೈ.ಮುನೀರ್, ಚನ್ನಬಸವಯ್ಯ,ನಾಗರಾಜು,ನಾಗರತ್ನಮ್ಮ ಭಾಗವಹಿಸಿರುವುದು. ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಾಲನೆ ------------------------------------------- ತಾಲೂಕು ಆಡಳಿತ ವತಿಯಿಂದ ಹಂದನಕೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸಂಪೂರ್ಣ ಮಾಹಿತಿ ಪಡೆಯುವ ಮೂಲಕ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆ ಗಣತಿ ಕಾರ್ಯಕ್ಕೆ ತಹಸೀಲ್ದಾರ್ ಟಿ.ಸಿ.ಕಾಂತರಾಜು ಚಾಲನೆ ನೀಡಿದರು. ಇದಕ್ಕೂ ಮನ್ನ ಗಣತಿ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭಯಲ್ಲಿ ಅವರು ಗಣತಿ ಕಾರ್ಯದ ಉದ್ದೇಶದ ಬಗ್ಗೆ ಮಾಹಿತಿ ನೀಡಿ ಮಾತನಾಡಿ ರಾಜ್ಯ ಸಕಾ೯ರ ಒದಗಿಸಿರುವ ಮೀಸಲಾತಿ ಸೌಲಭ್ಯವು ಪರಿಶಿಷ್ಠ ಜಾತಿಯ ಎಲ್ಲಾ ಕೋಮು, ಜಾತಿ, ವರ್ಗಗಳಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲದಿದ್ದರೆ ಇದಕ್ಕೆ ಶೈಕ್ಷಣಿಕ, ಆಥಿ೯ಕ, ಸಾಮಾಜಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಇರುವ ಕಾರಣಗಳು ಏನು? ಈ ತಾರತಮ್ಯವನ್ನು ನಿವಾರಿಸಲು ಕೈಗೊಳ್ಳಬೇಕಾದ ಮುಂದಿನ ಕ್ರಮಗಳು ಏನು ಎಂದು ಅರಿಯುವ ಸಲುವಾಗಿ ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಸಮೀಕ್ಷೆಯಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ, ಶೈಕ್ಷಣ

ಸ್ವಾತಂತ್ರ್ಯ ಹೋರಾಟಗಾರ ಟಿ.ಎಲ್.ಬಾಲಸುಂದರರಾಜಶೆಟ್ಟಿ ನಿಧನ

ಕಳೆದ 4 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹುಳಿಯಾರಿನ ಸ್ವಾತಂತ್ರ್ಯ ಹೋರಾಟಗಾರ ಟಿ.ಎಲ್.ಬಾಲಸುಂದರರಾಜಶೆಟ್ಟಿ(80) ಅವರು ಶುಕ್ರವಾರ ಮುಂಜಾನೆ ಹುಳಿಯಾರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಕರೆಗೆ ಓಗೊಟ್ಟು ಅನೇಕ ಚಳುವಳಿಯಲ್ಲಿ ಭಾಗವಹಿಸಿ ಕಾರಾಗೃಹ ಸೆರೆವಾಸ ಅನುಭವಿಸಿದ್ದರು. ಅಲ್ಲಿಂದ ಐದಾರು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಇವರು ಕನ್ನಿಕಾಪರಮೇಶ್ವರಿ ಸಹಕಾರ ಸಂಘದಲ್ಲಿ 20 ವರ್ಷಗಳ ಕಾಲ ಕಾರ್ಯದಶಿ೯ಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದಶಿ೯ಯಾಗಿ, ಆರ್ಯವೈಶ್ಯ ಮಂಡಳಿ ನಿದೇ೯ಶಕರಾಗಿ ಹಾಗೂ ಸೇವಾದಳದಲ್ಲಿಯೂ ಸಹ ಸೇವೆ ಸಲ್ಲಿಸಿದ್ದರು. ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಸಕಾ೯ರದ ಪರವಾಗಿ ಅಂತಿಮ ದರ್ಶನ ಪಡೆದು ಕುಟುಂಬವರ್ಗದವರಿಗೆ ಸಾಂತ್ವಾನ ಹೇಳಿ ಅಂತ್ಯ ಸಂಸ್ಕಾರಕ್ಕೆ 2 ಸಾವಿರ ರು. ನೀಡಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಉಪತಹಸೀಲ್ದಾರ್ ಅಂಜಿನಪ್ಪ, ಕಂದಾಯ ತನಿಖಾಧಿಕಾರಿ ಬಸವರಾಜು, ಎಎಸ್ಐ ಸಿದ್ಧರಾಮಯ್ಯ, ಗ್ರಾಮ ಲೆಕ್ಕಿಗ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಗಂಗಾಧರ್, ಆರ್ಯವೈಶ್ಯ ಮಂಡಳಿ ಅದ್ಯಕ್ಷ ಟಿ.ಆರ್.ರಂಗನಾಥ್, ಕಾರ್ಯದಶಿ೯ ಎಲ್.ಆರ್.ಚಂದ್ರಶೇಖರ್, ಎಂ.ಎಸ್.ನಟರಾಜ್ ಸೇರಿದಂತೆ ಆರ್ಯವೈಶ್ಯ ಬಾಂಧವರು, ಸ್ವಾತಂತ್ರ್ಯ ಹೋರಾಟಗಾರರು ಅಂತಿಮ ದರ್ಶನ ಪಡೆದರು. ಮೃತರು ಪತ್ನಿ, 3 ಮಂದಿ ಮಕ್ಕಳು ಹಾಗೂ 4 ಮಂದಿ ಮೊಮ್ಮಕ್ಕಳಲ

ಪೋಟೊ ಕ್ಯಾಪ್ಷನ್

ಪರಿಶಿಷ್ಠ ಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಿನಾಹಳ್ಳಿ ತಹಸಿಲ್ದಾರ್ ಟಿ.ಸಿ.ಕಾಂತರಾಜು ಬೇವಿನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದರು. ಹುಳಿಯಾರಿನಲ್ಲಿ ಕಾಣಿಸಿಕೊಂಡ 10 ರೂ ನೋಟಿಗಿಂತಲೂ ದೊಡ್ಡದಾದ ಅರಿಶಿನ ಬಣ್ಣದ ಆಕರ್ಷಕ ಚಿಟ್ಟೆಯನ್ನು ಅಂಬಿಕಾ ಸ್ಟುಡಿಯೋದ ಎ.ಡಿ.ಸುದರ್ಶನಾಚಾರ್ ಸೆರೆಹಿಡಿದು ಪತ್ರಿಕೆಗೆ ನೀಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ -------------------------------------------- ಡಿಎಸ್ಎಸ್ ನಿಂದ ಇಂದು(ಆ.26 ರಂದು) ಪ್ರತಿಭಟನೆ: --------------------------------------- ಹುಳಿಯಾರು: ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೊವನ್ನು ಕಿಡಿಗೇಡಿಗಳು ಅಲ್ಲಿನ ಶೌಚಾಲಯದಲ್ಲಿಟ್ಟು ಅಪಮಾನ ಮಾಡಿರುವುದಕ್ಕೆ ಸಂಭಂದಿಸಿದಂತೆ ಕನಾ೯ಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕಿನ ಎಲ್ಲಾ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆ.26 ರ ಗುರುವಾರದಂದು ಹುಳಿಯಾರಿನಲ್ಲಿ ಧರಣಿ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಕೇವಲ ಒಂದು ಜಾತಿಗೆ ಸೀಮಿತವಾಗಿರದ ಅಂಬೇಡ್ಕರ್ ಅವರು ಶೋಷಿತ ವರ್ಗಗಳ ಆಶಾಕಿರಣವಾಗಿದ್ದರು. ಇಂತಹ ಮೇರು ವ್ಯಕ್ತಿಯ ಭಾವಚಿತ್ರವನ್ನು ಶೌಚಾಲಯದಲ್ಲಿಟ್ಟು ಅವಮಾನ ಮಾಡಿರುವುದು ಘೋರ ಅಪರಾಧವಾಗಿದ್ದು ತಾಲೂಕಿನ ಎಲ್ಲಾ ದಲಿತ ಸಂಘಟನೆಗಳು ಈ ಕೃತ್ಯವನ್ನು ಉಗ್ರವಾಗಿ ಖಂಡಿಸಿ ಸಲುವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಕರೆ ನೀಡಿರುವುದಾಗಿ ದಲಿತ ಮುಖಂಡರು ತಿಳಿಸಿದ್ದಾರೆ. ಒತ್ತಾಯ: ಸಂವಿಧಾನ ರಚಿಸಿದ ರಾಷ್ಟ್ರನಾಯಕನನ್ನು ಶೌಚಾಲಯದಲ್ಲಿ ಇಟ್ಟು ಅಕ್ಷಮ್ಯ ಅಪರಾಧ ಎಸಗಿರುವ ದುರುಳರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಭವನ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ತ

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ 32 ವಿದ್ಯಾಥಿ೯ಗಳು ಆಯ್ಕೆ

ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ 32 ವಿದ್ಯಾಥಿ೯ಗಳು ಆಯ್ಕೆ ------------------------------------------------------------------------------------- ಹುಳಿಯಾರು-ಕೆಂಕೆರೆ ಸಕಾ೯ರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 32 ವಿದ್ಯಾಥಿ೯ಗಳು 2010-11 ನೇ ಸಾಲಿನ ಪ್ರೌಢಶಾಲಾ ವಿದ್ಯಾಥಿ೯ಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಪ್ರದಶಿ೯ಸಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಭಾಜನರಾಗಿದ್ದಾರೆ. ಗಂಡು ಮಕ್ಕಳ ವಿಭಾಗದಲ್ಲಿ ಮಹಮದ್ ವಾಸೀಮ್(100 ಮತ್ತು 800 ಮೀ.ಓಟ ಹಾಗೂ ರೀಲೆ), ಡಿ.ಹರ್ಷ(ಜಾವಲಿನ್ ಥ್ರೋ), ಎಚ್.ಎಸ್.ಬಸವರಾಜು(1500 ಮೀ.ಓಟ), ವೈ.ಪಿ.ಅರುಣ್(ನಡಿಗೆ), ಅಬ್ದುಲ್ ರಹಮಾನ್, ದುರ್ಗರಾಜು, ಸಿದ್ಧಲಿಂಗಯ್ಯ(ರೀಲೆ), ಎನ್.ಸುರೇಶ್(ಲಾಂಗ್ ಮತ್ತು ಹೈ ಜಂಪ್), ಎಚ್.ಮಂಜುನಾಥ್(ನಡಿಗೆ), ಎಚ್.ಎನ್.ವಿಜಯಕಾಂತ್ (ಹೈ ಜಂಪ್), ಎಲ್.ಲೋಹಿತ್(ಲಾಂಗ್ ಜಂಪ್), ಬಿ.ನಂದೀಶ್, ವೈ.ಎಸ್.ಹಷಿ೯ತ್, ಕೆ.ಎಲ್.ಸಂದೀಪ್, ಕೆ.ಆರ್.ಚರಣ್ ರಾಜ್, ಕೆ.ಬಿ.ಅನೂಫ್(ಶಟಲ್ ಕಾಕ್) ಆಯ್ಕೆಯಾಗಿದ್ದಾರೆ. ಹೆಣ್ಣು ಮಕ್ಕಳ ವಿಭಾಗದಲ್ಲಿ ಎಲ್.ಎಸ್.ತ್ರಿವೇಣಿ, ಎಲ್.ಎಸ್.ತುಂಗಾ, ಬಿ.ಆರ್.ದಿವ್ಯಶ್ರೀ, ಕೆ.ವಿ.ಅಶ್ವಿನಿ(ರೀಲೆ), ಟಿ.ಎಸ್.ಲಾವಣ್ಯ(ಶಾಟ್ ಫುಟ್-ವಾಲಿಬಾಲ್), ಪಿ.ಅನುಪಮ, ಆರ್.ತನುಜ, ಆರ್.ಲಾವಣ್ಯ, ಹೇಮಾ ಮಂಜುಶ್ರೀ,ಬಿ.ಎನ್.ಸುಮಾ, ಆರ್.ಎಂ.ಮಹಾಲಕ್ಷ್ಮಿ(ವಾಲಿಬಾಲ್), ಆರ್.ಪುಷ

ವಾಲಿಬಾಲ್ ನಲ್ಲಿ ಪ್ರಥಮ

ಹುಳಿಯಾರು ಹೋಬಳಿ ಬರಕನಹಾಲ್ ಗ್ರಾಮದ ಶ್ರೀವಿಶ್ವಭಾರತಿ ಪ್ರೌಢಶಾಲೆಯ ವಿದ್ಯಾಥಿ೯ಗಳು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ .

ಕೆ.ಸಿ.ಪಾಳ್ಯದಲ್ಲಿ ಮಳೆಗಾಳಿಗೆ ವಿದ್ಯುತ್ ಕಂಬಗಳು ಧರೆಗೆ

ಹುಳಿಯಾರು ಸಮೀಪದ ಕೆ.ಸಿ.ಪಾಳ್ಯದಲ್ಲಿ ಭಾರಿ ಮಳೆಗಾಳಿಯಿಂದ ವಿದ್ಯುತ್ ಕಂಬಗಳು ಧರೆಗುರುಳಿದರೆ ಆರೇಳು ಮನೆಗಳ ಹೆಂಚುಗಳು ಹಾರಿಹೋಗಿದ್ದಲ್ಲದೆ ಸುಮಾರು ತೆಂಗಿನ ಮರ ಸೇರಿದಂತೆ ಅನೇಕ ಬಗೆಯ ಮರಗಳು ನೆಲಕ್ಕುರುಳಿದೆ. ಶನಿವಾರ ಸಂಜೆ ಮಳೆ ಸಹಿತ ಭಾರಿ ಬಿರುಗಾಳಿ ಬೀಸಿದ್ದು ಸೋಮಜ್ಜನ ಪಾಳ್ಯದಿಂದ ಕೆ.ಸಿಪಾಳ್ಯಕ್ಕೆ ವಿದ್ಯುತ್ ಸಂಪರ್ಕ ಒದಗಿಸಿದ್ದ ಐದಾರು ವಿದ್ಯತ್ ಕಂಬಗಳು ಬಿದ್ದು ವೈರ್ ಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ದಿನಗಳಿಂದ ಅಲ್ಲಿನ ನಿವಾಸಿಗಳು ಕತ್ತಲಲ್ಲಿ ಕಾಲಕಳೆಯುವಂತಾಗಿದೆ.

ದೊಡ್ಡಬಿದರೆಯಲ್ಲಿ ನೂತನ ದೇವಾಲಯಗಳ ಪ್ರವೇಶಮಹೋತ್ಸವ

ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದಲ್ಲಿ ನೂತನವಾಗಿ ನಿಮಿ೯ಸಿರುವ ಶ್ರೀಕರಿಯಮ್ಮದೇವಿ ಮತ್ತು ಶ್ರೀಆಂಜನೇಯಸ್ವಾಮಿಯವರ ದೇವಾಲಯಗಳ ಪ್ರವೇಶಮಹೋತ್ಸವವು ಭಕ್ತಸ್ತೋಮದೊಂದಿಗೆ ವೈಭವದಿಂದ ನೆರವೇರಿತು. ಚಿಕ್ಕಬಿದರೆ ಶ್ರೀಕರಿಯಮ್ಮದೇವಿ, ಕಲ್ಲಹಳ್ಳಿ ಶ್ರೀರಾಮದೇವರು, ದೊಡ್ಡಬಿದರೆ ಶ್ರೀ ಪಾತಲಿಂಗೇಶ್ವರ, ಶ್ರೀಲಕ್ಕಮ್ಮ ದೇವರುಗಳ ಆಗಮನದಿಂದ ಆರಂಭವಾದ ಪ್ರವೇಶಮಹೋತ್ಸವದಲ್ಲಿ ಪುಣ್ಯಾಹ, ಪಂಚಗವ್ಯ, ನಾಂದಿ ಮೊದಲ್ಗೊಂಡು ವಾಸ್ತು ಶಾಂತಿ, ನವಗ್ರಹ ಹೋಮ, ರಾಕ್ಷೊಘ್ನ ಹೋಮ, ಗಂಗಾಪ್ರಜೆ, ಗಣಪತಿ ಹೋಮ, ಮಹಾಲಕ್ಷ್ಮಿ ಹೋಮ, ದುಗಾ೯ಹೋಮ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ,ಅನ್ನಸಂತರ್ಪಣೆಯೊಂದಿಗೆ ಕೊನೆಗೊಂಡಿತು.ಸತ್ಯನಾರಾಯಣ್,ಹೆಚ್.ಕೆ.ಗುಂಡಣ್ಣ ಹಾಗೂ ಗಣೇಶ್ ಅವರ ಪೌರೋಹಿತ್ಯ ವಹಿಸಿದ್ದರು. ದೇವಸ್ಥಾನ ಕಮಿಟಿಯ ಅಧ್ಯಕ್ಷ ಹೊಸಮನೆ ಸಣ್ಣನಿಂಗಯ್ಯ, ಖಜಾಂಜಿ ಸಿದ್ದಜ್ಜರನಿಂಗಜ್ಜ, ಡಿ.ಕೆ.ಮಂಜುನಾಥ್, ಅಯ್ಯಣ್ಣರಬಸವಣ್ಣ, ಮಹಾದೇವಪ್ಪ, ಗ್ರಾ.ಪಂ.ಸದಸ್ಯರುಗಳಾದ ಡಿ.ಜಿ.ಕುಮಾರ್, ಡಿ.ಪಿ.ಅರುಣ್ಕುಮಾರ್, ಭೈರಣ್ಣ, ಲಕ್ಷ್ಮಯ್ಯ ಸೇರಿದಂತೆ ಶ್ರೀ ಪಾತಲಿಂಗೇಶ್ವರ ಸ್ವಾಮಿ ಭಕ್ತಾಧಿಗಳು, ದೊಡ್ಡಬಿದರೆ, ಹಳೇಲಂಬಾಣಿ ತಾಂಡ್ಯ, ಹೊಸಲಂಬಾಣಿ ತಾಂಡ್ಯ, ಕೋಡಿಹಳ್ಳಿ, ದಾಸಣ್ಣನಹಟ್ಟಿ ಮತ್ತು ಆಜುಬಾಜಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.