(ಹುಳಿಯಾರು ಸಮೀಪದ ಬರದಲೇಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಲಿನ ಗುಣಮಟ್ಟ ಪರೀಕ್ಷಿಸುವ ಮೂಲಕ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಉದ್ಘಾಟಿಸಿದರು. ಎನ್.ಗೌಡಯ್ಯ, ಧನಂಜಯ್ಯ, ಕೆ.ಸಿ.ಕೇಶವಮೂರ್ತಿ, ಕೆಂಕೆರೆ ಸತೀಶ್ ಇದ್ದಾರೆ.)
ನವೆಂಬರ್ 24 ರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ ಏರಿಕೆ:ಹಳೆಮನೆ ಶಿವನಂಜಪ್ಪ
--------------------------------------------------------------------
ವಿಸ್ತರಣಾಧಿಕಾರಿ ಯರಗುಂಟಪ್ಪ ಅವರು ಮಾತನಾಡಿ ಷೇರುದಾರರು, ಕಾರ್ಯಕಾರಿ ಮಂಡಲಿ ಸದಸ್ಯರು ಹಾಗೂ ಸಿಬ್ಬಂಧಿವರ್ಗದವರು ಸಹಕಾರ ಸಂಘದ ಆಧಾರ ಸ್ತಂಭಗಳಾಗಿದ್ದು ಜಾತಿ ಮತ್ತು ರಾಜಕೀಯ ನುಸುಳಿಸದೆ ಒಂದಾಣಿಕೆಯಿಂದ ತಮ್ಮತಮ್ಮ ಕರ್ತವ್ಯ ನಿರ್ವಹಿಸಿದರೆ ಏಳಿಗೆ ಸಾಧ್ಯ ಎಂದರಲ್ಲದೆ, ಉತ್ಪಾದನೆಯಾಗುವ ಊರಿನಲ್ಲೇ ಮಾರುಕಟ್ಟೆ ವ್ಯವಸ್ಥೆ, ಉತ್ತಮ ಬೆಲೆ ಹಾಗೂ ಬಟವಾಡೆಯ ಏಕೈಕ ಉಪಕಸುಬು ಹೈನುಗಾರಿಕೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬರದಲೇಪಾಳ್ಯ ಹಾಲಿನ ಸೊಸೈಟಿಯ ಆರ್.ಗುರುಸಿದ್ಧಯ್ಯ ವಹಿಸಿದ್ದರು. ಸಮಾಲೋಚಕರಾದ ಬುದ್ಧಿಪ್ರಸಾದ್, ಗ್ರಾ.ಪಂ.ಅಧ್ಯಕ್ಷ ಎನ್.ಗೌಡಯ್ಯ, ಗ್ರಾ.ಪಂ.ಸದಸ್ಯ ಧನಂಜಯ್ಯ, ಕೆಂಕೆರೆ ಹಾಲಿನ ಸೊಸೈಟಿ ಅಧ್ಯಕ್ಷ ಕೆ.ಸಿ.ಕೇಶವಮೂರ್ತಿ, ಹಸಿರುಸೇನೆ ಸಂಚಾಲಕ ಕೆಂಕೆರೆ ಸತೀಶ್, ಮರುಳಯ್ಯ, ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.
ನೀಲಕಂಠಮೂರ್ತಿ ಪ್ರಾರ್ಥಿಸಿ ಮರುಳಸಿದ್ಧಪ್ಪ ಸ್ವಾಗತಿಸಿ ಶಾಂತಕುಮಾರ್ ನಿರೂಪಿಸಿ ಪಿ.ನಾಗರಾಜು ವಂದಿಸಿದರು.
ನವೆಂಬರ್ 24 ರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ ಏರಿಕೆ:ಹಳೆಮನೆ ಶಿವನಂಜಪ್ಪ
--------------------------------------------------------------------
ನವೆಂಬರ್ 24 ರಿಂದ ತುಮಕೂರು ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಿರುವ ರೈತರಿಗೆ ಇಲ್ಲಿಯವರೆವಿಗೆ ಸರ್ಕಾರದ ಪ್ರೋತ್ಸಾಹ ಧನ ಸೇರಿ ನೀಡಲಾಗಿತ್ತಿದ್ದ ಹದಿನಾರುವರೆ ರು. ಬದಲಿಗೆ ಎಪ್ಪತೈದು ಪೈಸೆ ಹೆಚ್ಚಳ ಮಾಡಿ ಹದಿನೇಳುಕಾಲು ರು. ನೀಡಲು ನಿರ್ಧರಿಸಿರುವುದಾಗಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅವರು ತಿಳಿಸಿದರು.
ಹುಳಿಯಾರು ಸಮೀಪದ ಬರದಲೇಪಾಳ್ಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರು ಸಮೀಪದ ಬರದಲೇಪಾಳ್ಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ತುಮಕೂರು ಒಕ್ಕೂಟ ಹಾಲು ಪೌಡರಿಗೆ ಹೋಗಿ ಬಹಳ ನಷ್ಟದಲ್ಲಿತ್ತು. ಆದರೆ ಈಗ ಕೇರಳ, ಬಳ್ಳಾರಿ, ಮುಂಬೈಗಳಿಗೆ ಹೋಗುತ್ತಿದ್ದು ಲಾಭದಲ್ಲಿ ನಡೆಯುತ್ತಿದೆ ಎಂದರಲ್ಲದೆ, ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಮೊದಲು ದಿನಕ್ಕೆ 6 ಸಾವಿರ ಲೀ. ಹಾಲು ಒಕ್ಕೂಟಕ್ಕೆ ಹೋಗುತ್ತಿತ್ತು. ಈಗ 40 ಸಾವಿರ ಲೀ. ಹೋಗುತ್ತಿದೆ. ಇದನ್ನು 1 ಲಕ್ಷಕ್ಕೆ ಮುಟ್ಟಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ವಿಸ್ತರಣಾಧಿಕಾರಿ ಯರಗುಂಟಪ್ಪ ಅವರು ಮಾತನಾಡಿ ಷೇರುದಾರರು, ಕಾರ್ಯಕಾರಿ ಮಂಡಲಿ ಸದಸ್ಯರು ಹಾಗೂ ಸಿಬ್ಬಂಧಿವರ್ಗದವರು ಸಹಕಾರ ಸಂಘದ ಆಧಾರ ಸ್ತಂಭಗಳಾಗಿದ್ದು ಜಾತಿ ಮತ್ತು ರಾಜಕೀಯ ನುಸುಳಿಸದೆ ಒಂದಾಣಿಕೆಯಿಂದ ತಮ್ಮತಮ್ಮ ಕರ್ತವ್ಯ ನಿರ್ವಹಿಸಿದರೆ ಏಳಿಗೆ ಸಾಧ್ಯ ಎಂದರಲ್ಲದೆ, ಉತ್ಪಾದನೆಯಾಗುವ ಊರಿನಲ್ಲೇ ಮಾರುಕಟ್ಟೆ ವ್ಯವಸ್ಥೆ, ಉತ್ತಮ ಬೆಲೆ ಹಾಗೂ ಬಟವಾಡೆಯ ಏಕೈಕ ಉಪಕಸುಬು ಹೈನುಗಾರಿಕೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬರದಲೇಪಾಳ್ಯ ಹಾಲಿನ ಸೊಸೈಟಿಯ ಆರ್.ಗುರುಸಿದ್ಧಯ್ಯ ವಹಿಸಿದ್ದರು. ಸಮಾಲೋಚಕರಾದ ಬುದ್ಧಿಪ್ರಸಾದ್, ಗ್ರಾ.ಪಂ.ಅಧ್ಯಕ್ಷ ಎನ್.ಗೌಡಯ್ಯ, ಗ್ರಾ.ಪಂ.ಸದಸ್ಯ ಧನಂಜಯ್ಯ, ಕೆಂಕೆರೆ ಹಾಲಿನ ಸೊಸೈಟಿ ಅಧ್ಯಕ್ಷ ಕೆ.ಸಿ.ಕೇಶವಮೂರ್ತಿ, ಹಸಿರುಸೇನೆ ಸಂಚಾಲಕ ಕೆಂಕೆರೆ ಸತೀಶ್, ಮರುಳಯ್ಯ, ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.
ನೀಲಕಂಠಮೂರ್ತಿ ಪ್ರಾರ್ಥಿಸಿ ಮರುಳಸಿದ್ಧಪ್ಪ ಸ್ವಾಗತಿಸಿ ಶಾಂತಕುಮಾರ್ ನಿರೂಪಿಸಿ ಪಿ.ನಾಗರಾಜು ವಂದಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ