ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗ್ರಾ.ಪಂ. ಸದಸ್ಯರಿಂದ ಡಾಕ್ಟರ್ ವಾಟರ್ ಕುಡಿಯುವ ನೀರಿನ ಘಟಕ್ಕೆ ಬೀಗ:ಸಾರ್ವಜನಿಕರಿಂದ ವಿರೋಧ

ಕ್ಷುಲಕ ಕಾರಣ ನೀಡಿ ಸ್ಥಳೀಯ ಗ್ರಾ.ಪಂ. ಸದಸ್ಯರು ನೀರು ಪೋರೈಕೆ ಘಟಕಕ್ಕೆ ಬೀಗ ಹಾಕಿದ್ದನ್ನು ಪ್ರತಿಭಟಿಸಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರು ರಸ್ತೆ ತಡೆ ನಡೆಸಿದ್ದಲ್ಲದೆ ಸ್ಥಳಕ್ಕೆ ತಹಶೀಲ್ದಾರರನ್ನು ಕರೆಯಿಸಿ ಘಟಕವನ್ನು ಪುನರಾರಂಭ ಮಾಡಿಸಿದ ಘಟನೆ ಸೋಮವಾರ ಜರುಗಿದೆ. ಹಿನ್ನಲೆ: ಹುಳಿಯಾರು ಗ್ರಾ.ಪಂ.ಯ ಸಹಭಾಗಿತ್ವದಲ್ಲಿ ಪೋಲೀಸ್ ಠಾಣೆಯ ಹತ್ತಿರ ಡಾಕ್ಟರ್ ವಾಟರ್ ಘಟಕವನ್ನು ಸ್ಥಾಪಿಸಿದ್ದು, 20ಲೀ ನ ಒಂದು ಕ್ಯಾನ್ ಗೆ ಏಳು ರೂ ನಂತೆ ಅಲ್ಲಿಗೆ ಬಂದು ಕೊಂಡೈಯ್ಯುವ ಆಧಾರದ ಮೇಲೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು.ಶುದ್ದ ನೀರು ಪ್ರತಿಯೊಂದು ಮನೆಗೂ ತಲುಪಿಸುವ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನೀರಿನ ಕ್ಯಾನ್ ನ ವಿತರಣೆಯನ್ನು ಖಾಸಗಿ ವ್ಯಕ್ತಿಯವರಿಗೆ ನೀಡಿದ್ದು, ಅವರು ಪ್ರತಿ ಕ್ಯಾನ್ ಗೆ ರೂ.15ರಂತೆ ಮನೆ ಬಾಗಿಲಿಗೆ ವಿತರಣೆ ಮಾಡುತ್ತಿದ್ದರು.ಖಾಸಗಿ ವ್ಯಕ್ತಿಗೆ ವಿತರಣೆ ನೀಡಿದ್ದನ್ನು ವಿರೋಧಿಸಿ ಕೆಲ ಸದಸ್ಯರುಗಳು ಡಾಕ್ಟರ್ ವಾಟರ್ ಘಟಕಕ್ಕೆ ಬೀಗ ಹಾಕಿದ್ದಲ್ಲದೆ,ಬೋರಿನಿಂದ ಸರಬರಾಜಾಗುತ್ತಿದ್ದ ನೀರಿನ ಪೈಪನ್ನು ಸಹ ಕಿತ್ತುಹಾಕಿದ್ದರು. ಇದರಿಂದಾಗಿ ನಾಲ್ಕೈದು ದಿನಗಳಿಂದ ಈ ಘಟಕ ಸ್ಥಗಿತ ಗೊಂಡು ಜನ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿತ್ತು. ಪ್ರತಿಭಟನೆ ಏಕೆ: ಸದಸ್ಯರ ಕ್ರಮದ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಸಾರ್ವಜನಿಕರು ಘಟಕದ ಬಳಿಯೇ ಏಳು ರೂಗೆ ಕೊಡುತ್ತಿದ್ದ ನೀರನ್

ಉನ್ನತ ವ್ಯಾಸಂಗಕ್ಕೆ ಉತ್ತಮ ಅಂಕಗಳಿಸಬೇಕು

                  ಇಂದಿನ ಆಧುನಿಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರವೂ ಪೈಪೂಟಿಯುತವಾಗಿದ್ದು, ಮಕ್ಕಳು ಯಶಸ್ಸು ಗಳಿಸಬೇಕಾದರೆ ಕೇವಲ ತರಗತಿಯಿಂದ ತರಗತಿಗೆ ಕನಿಷ್ಠ ಅಂಕ ಗಳಿಸಿ ತೇರ್ಗಡೆಯಾದರೆ ಸಾದ್ಯವಿಲ್ಲ, ಹೆಚ್ಚಿನ ಅಂಕಗಳಿಸಿದಾಗ ಮಾತ್ರ ಉನ್ನತ ವ್ಯಾಸಂಗಕ್ಕೆ ಹೆಚ್ಚೆಚ್ಚು ಅವಕಾಶಗಳು ತಾವಾಗಿಯೇ ಒದಗಿ ಬರುತ್ತವೆ ಎಂದು ಮುಖಂಡ ಮಹಮ್ಮದ್ ಸಜ್ಜಾದ್ ತಿಳಿಸಿದರು. ರಂಜಾನ್ ಹಬ್ಬದ ಅಂಗವಾಗಿ ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲಾ ಮಕ್ಕಳಿಗೆ ರಾಜ್ ಮಿನರಲ್ಸ್ ವತಿಯಿಂದ ಉಚಿತವಾಗಿ ನೋಟ್ ಬುಕ್,ಬ್ಯಾಗ್,ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.ರಾಜ್ ಮಿನರಲ್ಸ್ ನ ಷಪಿ ಅಹಮದ್ ,ಮುಖ್ಯಶಿಕ್ಷಕ ಚೆನ್ನಿಗರಾಮಯ್ಯ,ಮಹಮ್ಮದ್ ಸಜ್ಜಾದ್,ಇಮ್ರಾಜ್ ಇದ್ದಾರೆ.                    ರಂಜಾನ್ ಹಬ್ಬದ ಅಂಗವಾಗಿ ರಾಜ್ ಮಿನರಲ್ಸ್ ವತಿಯಿಂದ ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲಾ ಮಕ್ಕಳಿಗೆ ಬುಧವಾರ ಉಚಿತವಾಗಿ ನೋಟ್ ಬುಕ್,ಬ್ಯಾಗ್,ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.                     ಹುಳಿಯಾರಿನ ಉರ್ದುಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ, ಮುಸ್ಲಿಂ ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ನೊಂದಾಯಿಸುವ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವಂತೆ ಮಾಡಬೇಕಿದೆ ಎಂದರು.ಅಲ್ಲದೆ ಈ ಶಾಲೆಯಲ್ಲಿ ಸರ್ಕಾರದಿಂದ ದೊರ

ಹೊಯ್ಸಳ ಇಂಡೇನ್ ಗ್ರಾಮೀಣ್ ವಿತರಕ್ ಏಜೆನ್ಸಿವತಿಯಿಂದ ಹೊಸ ಗ್ಯಾಸ್ ಸಂಪರ್ಕಕ್ಕೆ ಚಾಲನೆ

ಹುಳಿಯಾರಿನಲ್ಲಿ ನೂತನವಾಗಿ ಆರಂಭವಾದ ಹೊಯ್ಸಳ ಇಂಡೇನ್ ಗ್ರಾಮೀಣ್ ವಿತರಕ್ ಏಜೆನ್ಸಿವತಿಯಿಂದ ಹೊಸ ಗ್ಯಾಸ್ ಸಂಪರ್ಕವನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಗ್ರಾಹಕರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.ತಾಪಂ ಸದಸ್ಯ ಕೆಂಕೆರೆ ನವೀನ್,ಗ್ಯಾಸ್ ಏಜೆನ್ಸಿಯ ವದಿಗಪ್ಪ,ಕುಮಾರ್,ಬ್ಯಾಂಕ್ ಮರುಳಪ್ಪ ಇದ್ದಾರೆ.

ಹುಳಿಯಾರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಾಸವಿ ಶಾಲೆಗೆ ಸಮಗ್ರ ಪ್ರಶಸ್ತಿ

                   ಇಲ್ಲಿನ ವಾಸವಿ ಶಾಲಾ ಮೈದಾನದಲ್ಲಿ  ಮೂರು ದಿನಗಳು ನಡೆದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹೋಬಳಿಯ ನಾನಾ ಶಾಲೆಗಳ ಸ್ಪರ್ಧಾಳುಗಳು ಸ್ಪರ್ಧಿಸಿದ್ದು, ಅನೇಕ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದಿವೆ. ಹುಳಿಯಾರಿನ ವಾಸವಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು ಗುಂಪು ಆಟದಲ್ಲಿ 8  ಸ್ಥಾನ ಹಾಗೂ ಅಥ್ಲೆಟಿಕ್ಸ್ ನಲ್ಲಿ 9 ಸ್ಥಾನ ಪಡೆಯುವ ಮೂಲಕ  ಬಹುಮಾನಗಳನ್ನು ಪಡೆದುಕೊಂಡಿದ್ದಲ್ಲದೆ, ಕ್ರೀಡಾಕೂಟದ ಸಮಗ್ರ ಕೀಡಾಪ್ರಶಸ್ತಿಯನ್ನು ಈ ಶಾಲೆ ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ ಬಹುಮಾನ ಪಡೆದವರು:- ಬಾಲಕರ ವಿಭಾಗ:- 100 ಮೀ ಓಟ: ಪ್ರಥಮಸ್ಥಾನ ಚಿರಂಜೀವಿ.ಎಲ್.ಆರ್ (ವಾಸವಿಶಾಲೆ). ದ್ವಿತೀಯಸ್ಥಾನ  ಕೆ.ವಿ.ಸುಹಾಸ್ (ವಾಸವಿಶಾಲೆ), 200 ಮೀ ಓಟ: ಪ್ರಥಮಸ್ಥಾನ ಎಸ್.ಮಂಜುನಾಥ್ (ವಾಸವಿಶಾಲೆ), ದ್ವಿತೀಯಸ್ಥಾನ ಕೆ.ಎನ್.ವೆಂಕಟೇಶ್ (ಕನಕದಾಸ ಶಾಲೆ), 400 ಮೀ. ಓಟ: ಪ್ರಥಮಸ್ಥಾನ ಎಸ್.ಡಿ.ಭರತ್(ವಾಸವಿಶಾಲೆ), ದ್ವಿತೀಯಸ್ಥಾನ ಎಸ್.ಕೆ.ಸಂಜಯ್ (ವಾಸವಿಶಾಲೆ), 600 ಮೀ ಓಟ: ಪ್ರಥಮಸ್ಥಾನ ಕೆ.ವಿ.ಸುಹಾಸ್(ವಾಸವಿಶಾಲೆ), ದ್ವಿತೀಯಸ್ಥಾನ ಪ್ರಸನ್ನಕುಮಾರ್(ಯಳನಡು ಎಂಪಿಎಸ್),ಗುಂಡು ಎಸೆತ: ಪ್ರಥಮಸ್ಥಾನ  ಸೈಯದ್ ಮುಖ್ತ್ಯಾರ್(ಹುಳಿಯಾರು ಎಂಪಿಎಸ್),ದ್ವಿತೀಯಸ್ಥಾನ  ನವಾಜ್(ವಾಸವಿಶಾಲೆ),ಚಕ್ರಎಸೆತ: ಪ್ರಥಮಸ್ಥಾನ ಸೈಯದ್ ಮುಖ್ತ್ಯಾರ್ (ಹುಳಿಯಾರು ಎಂಪಿಎಸ್), ದ್ವಿತೀಯಸ್ಥಾನ  ದಾದಾಪೀರ್(ಹುಳಿಯ

ಸ್ಟೇಟ್ ಬ್ಯಾಂಕ್ ವತಿಯಿಂದ ಉಚಿತವಾಗಿ ಸೀಲೀಂಗ್ ಫ್ಯಾನ್ ವಿತರಣೆ

       ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲೆಗೆ ಪಟ್ಟಣದ ಸ್ಟೇಟ್ ಬ್ಯಾಂಕ್ ವತಿಯಿಂದ ಮ್ಯಾನೇಜರ್ ಮಹಂತೇಶ್ ಉಚಿತವಾಗಿ ಸೀಲೀಂಗ್ ಫ್ಯಾನ್ ವಿತರಿಸಿದರು.ಮುಖ್ಯಶಿಕ್ಷಕ ಚೆನ್ನಿಗರಾಯಪ್ಪ,ಫೀಲ್ಡ್ ಅಫೀಸರ್ ರುದ್ರಮೂರ್ತಿ, ಮುಖಂಡರಾದ ಜಬೀಉಲ್ಲಾ ಸಾಬ್,ಇಮ್ರಾಜ್ ಇದ್ದಾರೆ.

ದೊಡ್ಡಬಿದರೆಯಲ್ಲಿ ಗ್ರಾಮಸ್ಥರಿಂದಲೇ ಮದ್ಯಮಾರಾಟ ನಿಷಿದ್ಧ : ಮದ್ಯ ಮಾರಿದರೆ 25 ಸಾವಿರ ದಂಡ

       ಹೋಬಳಿ ದೊಡ್ಡಬಿದರೆ ಗ್ರಾಮದ ಹಿರಿಯರು,ಊರ ಯಜಮಾನರುಗಳು ಗುರುವಾರದಂದು ಗ್ರಾಮದೇವತೆ ಶ್ರೀಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿ ತಮ್ಮ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟವನ್ನು ತಡೆಗಟ್ಟುವ ಬಗ್ಗೆ ಚಿಂತಿಸಿ, ಗ್ರಾಮದಲ್ಲಿ ಯಾವುದೇ ರೀತಿಯ ಮದ್ಯ ಮಾರುವಂತಿಲ್ಲ ಹಾಗೂ ಗ್ರಾಮದಲ್ಲಿ ಮದ್ಯ ಮಾರಾಟ ನಿಷಿದ್ದ ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.ಇದಕ್ಕೆ ಗ್ರಾಮಸ್ಥರೆಲ್ಲ ಸಹಮತವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದಾರೆ. ಗ್ರಾಮಸ್ಥರ ಈ ನಿರ್ಣಯ್ಯವನ್ನು ಮೀರಿ ಯಾರಾದರು ಊರಲ್ಲಿ ಮದ್ಯಮಾರಿದರೆ ಅವರಿಗೆ 25ಸಾವಿರ ದಂಡ ಹಾಗೂ ಮದ್ಯ ಮಾರುವವರನ್ನು ಪತ್ತೆ ಹಚ್ಚಿ ಕೊಟ್ಟವರಿಗೆ 4 ಸಾವಿರ ಬಹುಮಾನವನ್ನು ನೀಡುವ ತೀರ್ಮಾನವನ್ನು ಕೈಗೊಂಡಿದ್ದಾರೆ.                                          ಹಳ್ಳಿಗಳಲ್ಲಿ ಆಕ್ರಮ ಮದ್ಯದ ಅಂಗಡಿಗಳು ನಾಯಿಕೊಡೆಯಂತೆ ತಲೆಯೆತ್ತಿದ್ದು, ಗ್ರಾಮದ ಪೆಟ್ಟಿಗೆ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದಾರೆ. ಹಳ್ಳಿ ಜನರು ತಾವು ದುಡಿದ ಬಹುಪಾಲು ಹಣವನ್ನು ಕುಡಿತಕ್ಕಾಗಿ ವೆಚ್ಚ ಮಾಡುತ್ತಾ ತಮ್ಮ ಸಂಸಾರದ ಕಡೆ ಅಲಕ್ಷ ತೊರುತ್ತಿದ್ದಾರೆ. ಅಲ್ಲದೆ ಅನೇಕ ಯುವಕರು ಮನೆಯವರಿಗೆ ತಿಳಿಯದಂತೆ ಕದ್ದುಮುಚ್ಚಿ ಕುಡಿತಕ್ಕೆ ಬಲಿಯಾಗುತ್ತಿದ್ದಾರೆ,ಊರಲ್ಲಿ ಜಗಳ ಹೆಚ್ಚಿದ್ದು ಊರಲ್ಲಿ ಶಾಂತಿಯ ವಾತಾವರಣ ಇಲ್ಲದಂತಾಗಿದೆ.ಗ್ರಾಮದಲ್ಲಿ ಮದ್

ಕ್ರೀಡಾಕೂಟದಲ್ಲಿ ದ್ವೇಷ,ಅಸೂಯೆ ಬೇಡ : ಎಲ್.ಆರ್.ಸಿ

          ಶಾಲಾ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿರುವ ಕ್ರಿಡಾಕೂಟದಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು,ಪ್ರತಿಯೊಂದು ಆಟದಲ್ಲಿ ಉತ್ಸಾಹದಿಂದ ಆಡುತ್ತಾ ಸೋಲು,ಗೆಲುವನ್ನು ಸರಿಸಮನಾಗಿ ತೆಗೆದುಕೊಳ್ಳಬೇಕೆ ಹೊರತು ಸಣ್ಣಪುಟ್ಟ ಕಾರಣಗಳಿಂದಾಗಿ ಕ್ರಿಡಾಪಟುಗಳಾಗಲಿ,ತರಬೇತುದಾರರಾಗಲಿ ದ್ವೇಷ,ಅಸೂಯೆಯ ಭಾವನೆಯನ್ನು ಬೆಳೆಸಿಕೊಳ್ಳಬಾರದೆಂದು ವಾಸವಿ ವಿದ್ಯಾಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಕಿವಿಮಾತು ಹೇಳಿದರು. ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಮಂಗಳವಾರ ಪ್ರಾರಂಭವಾದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರಿಡಾಕೂಟದಲ್ಲಿ ಕ್ರಿಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ,ಅವರು ಮಾತನಾಡಿದರು , ಹುಳಿಯಾರಿನ ವಾಸವಿಶಾಲಾ ಮೈದಾನದಲ್ಲಿ ಪ್ರಾರಂಭಗೊಂಡ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು.                ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಒಂದು ವೇದಿಕೆಯಾಗಿ ಕ್ರೀಡಾಕೂಟ ಬಿಂಬಿತವಾಗಬೇಕು ಹಾಗೂ ಶಿಕ್ಷಕರು ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹದ ಮನೋಭಾವ ಮೂಡಿಸಿ ಪ್ರತಿಯೊಂದು ಮಗು ತನಗಿಷ್ಟವಾದ ಒಂದು ಆಟದಲ್ಲಾದರೂ ಸ್ಪರ್ಧಿಸುವಂತೆ ಮಾಡಬೇಕು ಎಂದರು.ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿವಿಧ ಶಾಲೆಯ ಮಕ್ಕಳು ತಾವೆಲ್ಲಾ ಒಂದೇ ಶಾಲಾ ಮಕ್ಕಳು ಎಂದು ಭಾವಿಸಿ ಆಟಗಳನ್ನು ಆಡುತ್ತಾ ತಮ್ಮ ಸ

ಜಾನುವಾರು ಮೇವಿಗಾಗಿ ರೈತರಿಗೆ ಉಚಿತ ಬಿತ್ತನೆ ಬೀಜದ ಜೋಳ ವಿತರಣೆ

ಸರ್ಕಾರದ ಬರಪರಿಹಾರ ಯೋಜನೆಯಡಿ ಪಟ್ಟಣದ ಪಶು ಆರೋಗ್ಯಕೇಂದ್ರದಲ್ಲಿ ಹುಳಿಯಾರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ಜಾನುವಾರುಗಳ ಮೇವಿಗಾಗಿ ಬಿತ್ತನೆ ಬೀಜದ ಜೋಳನ್ನು ಉಚಿತ ವಿತರಣೆ ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ಶನಿವಾರ ಚಾಲನೆ ನೀಡಿದರು. ಬರಪರಿಹಾರ ಯೋಜನೆಯಡಿ ಜಾನುವಾರುಗಳ ಮೇವಿಗಾಗಿ ಬಿತ್ತನೆ ಬೀಜದ ಜೋಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಯಿತು.ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ,ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್,ಜಯಣ್ಣ ಪಶು ವೈಧ್ಯಾಧಿಕಾರಿ ಡಾ||ಮಂಜುನಾಥ್ ಇದ್ದಾರೆ.  ಈ ಸಂಧರ್ಭದಲ್ಲಿ ಪಶು ವೈಧ್ಯಾಧಿಕಾರಿ ಡಾ||ಮಂಜುನಾಥ್ ಮಾತನಾಡಿ,ಸರ್ಕಾರದವತಿಯಿಂದ ರೈತರಿಗಾಗಿ ಸಾಕಷ್ಟು ಸೌಲಭ್ಯಗಳಿವೆ ಅಂತೆಯೇ ತಮ್ಮ ಪಶು ಇಲಾಖೆವತಿಯಿಂದ ಉಚಿತ ಬಿತ್ತನೆ ಬೀಜ,ರಾಸುಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ,ಗೊಬ್ಬರ ವಿತರಣೆಯನ್ನು ಮಾಡಲಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ಈ ಭಾಗದಲ್ಲಿ ಬರಗಾಲ ವ್ಯಾಪಿಸಿದ್ದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ,ಮೇವಿಲ್ಲದೆ ರೈತರು ದನಕರುಗಳನ್ನು ಖಾಸಾಯಿ ಖಾನೆಗೆ ದೂಡುತ್ತಿದ್ದಾರೆ.ಇದನ್ನು ಅರಿತ ಸರ್ಕಾರ ಜಾನುವಾರುಗಳಿಗೆ ಅಗತ್ಯವಾಗಿ ಬೇಕಾಗಿರುವ ಮೇವನ್ನು ಬೇಳೆದುಕೊಳ್ಳಲು ರೈತರಿಗೆ ಉಚಿತವಾಗಿ ಮೇವಿಗೆ ಯೋಗ್ಯವಾದ ಜೋಳವನ್ನು ನೀಡುತ್ತಿದೆ.ಈ ಜೋಳವನ್ನು ಭಿತ್ತಿ ಕಟಾವು ಮಾಡಿದ ನಂತರ ಸ್ವಲ್ಪ ನೀರು ಹಾಯಿಸಿದರೆ ಪುನ: ಚಿಗುರುತ್ತದೆ ಎಂದರು. ರಾಸುಗಳಿಗೆ ಬರುವ ಕಲುಬಾಯಿ ರೋಗಕ್ಕೆ ಲಸ

ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಿ: ಕೃಷ್ಣಪ್ಪ

ನಗರ ಪ್ರದೇಶಗಳ ಶಾಲೆಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಅಭ್ಯಾಸಿಸುತ್ತಿರುವ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಓದು,ಕ್ರೀಡೆ,ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಕೊಂಡಿರುತ್ತಾರೆ.ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ,ಪ್ರೋತ್ಸಾಹಿಸಿ,ಬೆಳೆಸುವ ಕಾರ್ಯವನ್ನು ಹಿರಿಯರಾದ ನಾವು ಮಾಡಬೇಕಿದೆ ಎಂದು ಕನಕದಾಸ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ ಅಭಿಪ್ರಾಯಪಟ್ಟರು. ಹುಳಿಯಾರಿನ ಶ್ರೀಕನಕದಾಸ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಹಾಗೂ 2013-14ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷೆತವಹಿಸಿ ಮಾತನಾಡಿದರು. ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರವನ್ನು ಹಾಗೂ ಸಂಘದ ಕಾರ್ಯದರ್ಶಿ ಶಂಕರ್ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ಎಂದಿಗೂ ಮರೆಯದೇ, ಓದು ಮುಗಿದು ಯಾವುದೋ ಕೆಲಸಕ್ಕೆ ಸೇರಿ ಸಂಬಳ ಪಡೆಯುವ ಹಂತ ತಲುಪಿದಾಗ ತಾನು ಈ ಸ್ಥಾನ ಪಡೆಯಲು ಕಾರಣವಾದ ಶಾಲೆಯ ಬಗ್ಗೆ ಯೋಚಿಸಿ, ತಮ್ಮ ದುಡಿಮೆಯಲ್ಲಿನ ಸ್ವಲ್ಪಭಾಗವನ್ನು ಆ ಶಾಲೆಗೆ ಸಹಾಯ ಮಾಡುವ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದರು.ಪ್ರತಿಭೆ ಎ

ಶಾಲೆಗೆ ಗೈರುಹಾಜರಾದ ಹಿಂದಿ ಶಿಕ್ಷಕನ ವಿರುದ್ದ ಪ್ರತಿಭಟನೆ

        ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ಸರಿಯಾಗಿ ಬಾರದೆ ಗೈರುಹಾಜರಾಗುತ್ತಿದ್ದ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕ ಆರ್. ಪರಶಿವಮೂರ್ತಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹೊಯ್ಸಲಕಟ್ಟೆ ಕರ್ನಾಟಕ ರಕ್ಷಣಾ ವೇದಿಕೆಯವರು ಹಾಗೂ ಗ್ರಾಮಸ್ಥರು ಶಾಲೆ ಮುಖ್ಯ ದ್ವಾರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟಿಸಿದ್ದಾರೆ.   ಹೊಯ್ಸಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕ ಆರ್. ಪರಶಿವಮೂರ್ತಿ ಶಾಲೆಗೆ ಗೈರುಹಾಜರಾಗಿದ್ದಾರೆಂದು ಆರೋಪಿಸಿ,ಕರ್ನಾಟಕ ರಕ್ಷಣಾ ವೇದಿಕೆಯವರು ಹಾಗೂ ಗ್ರಾಮಸ್ಥರು ಶಾಲೆ ಮುಖ್ಯ ದ್ವಾರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟಿಸಿದ್ದಾರೆ.         ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಆರ್. ಪರಶಿವಮೂರ್ತಿ ಶಾಲೆಗೆ ಸರಿಯಾಗಿ ಬಾರದೇ ತಿಂಗಳಿಗೊಮ್ಮೆ ಬಂದು ಹಾಜರಾತಿ ಹಾಕಿ ಸಂಬಳ ಪಡೆಯುತ್ತಿದ್ದಾರೆ,ಅಲ್ಲದೆ ತನ್ನ ಪ್ರಭಾವದಿಂದ ಮುಖ್ಯಶಿಕ್ಷಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ತನಗೆ ಬೇಕಾದ ಶಾಲೆಗೆ ಬಂದು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರಾದ ಬಾದೇಗೌಡ ದೂರಿದ್ದಾರೆ. ಅತಿಯಾದ ರಾಜಕೀಯ ಆಸಕ್ತಿ ಹೊಂದಿರುವ ಈತ ಈ ಬಾರಿಯ ರಾಜ್ಯ ಸರ್ಕಾರಿ ನೌಕರರ ಸಂಗದ ಚುನಾವಣೆಯಲ್ಲಿ ಸ್ವರ್ಧಿಸಿದ್ದಾರೆ,ಅಲ್ಲದೆ