ವಿಷಯಕ್ಕೆ ಹೋಗಿ

ಹುಳಿಯಾರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಾಸವಿ ಶಾಲೆಗೆ ಸಮಗ್ರ ಪ್ರಶಸ್ತಿ

                   ಇಲ್ಲಿನ ವಾಸವಿ ಶಾಲಾ ಮೈದಾನದಲ್ಲಿ  ಮೂರು ದಿನಗಳು ನಡೆದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹೋಬಳಿಯ ನಾನಾ ಶಾಲೆಗಳ ಸ್ಪರ್ಧಾಳುಗಳು ಸ್ಪರ್ಧಿಸಿದ್ದು, ಅನೇಕ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದಿವೆ. ಹುಳಿಯಾರಿನ ವಾಸವಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು ಗುಂಪು ಆಟದಲ್ಲಿ 8  ಸ್ಥಾನ ಹಾಗೂ ಅಥ್ಲೆಟಿಕ್ಸ್ ನಲ್ಲಿ 9 ಸ್ಥಾನ ಪಡೆಯುವ ಮೂಲಕ  ಬಹುಮಾನಗಳನ್ನು ಪಡೆದುಕೊಂಡಿದ್ದಲ್ಲದೆ, ಕ್ರೀಡಾಕೂಟದ ಸಮಗ್ರ ಕೀಡಾಪ್ರಶಸ್ತಿಯನ್ನು ಈ ಶಾಲೆ ಪಡೆದುಕೊಂಡಿದೆ.
ಕ್ರೀಡಾಕೂಟದಲ್ಲಿ ಬಹುಮಾನ ಪಡೆದವರು:-
ಬಾಲಕರ ವಿಭಾಗ:- 100 ಮೀ ಓಟ: ಪ್ರಥಮಸ್ಥಾನ ಚಿರಂಜೀವಿ.ಎಲ್.ಆರ್ (ವಾಸವಿಶಾಲೆ). ದ್ವಿತೀಯಸ್ಥಾನ  ಕೆ.ವಿ.ಸುಹಾಸ್ (ವಾಸವಿಶಾಲೆ), 200 ಮೀ ಓಟ: ಪ್ರಥಮಸ್ಥಾನ ಎಸ್.ಮಂಜುನಾಥ್ (ವಾಸವಿಶಾಲೆ), ದ್ವಿತೀಯಸ್ಥಾನ ಕೆ.ಎನ್.ವೆಂಕಟೇಶ್ (ಕನಕದಾಸ ಶಾಲೆ), 400 ಮೀ. ಓಟ: ಪ್ರಥಮಸ್ಥಾನ ಎಸ್.ಡಿ.ಭರತ್(ವಾಸವಿಶಾಲೆ), ದ್ವಿತೀಯಸ್ಥಾನ ಎಸ್.ಕೆ.ಸಂಜಯ್ (ವಾಸವಿಶಾಲೆ), 600 ಮೀ ಓಟ: ಪ್ರಥಮಸ್ಥಾನ ಕೆ.ವಿ.ಸುಹಾಸ್(ವಾಸವಿಶಾಲೆ), ದ್ವಿತೀಯಸ್ಥಾನ ಪ್ರಸನ್ನಕುಮಾರ್(ಯಳನಡು ಎಂಪಿಎಸ್),ಗುಂಡು ಎಸೆತ: ಪ್ರಥಮಸ್ಥಾನ  ಸೈಯದ್ ಮುಖ್ತ್ಯಾರ್(ಹುಳಿಯಾರು ಎಂಪಿಎಸ್),ದ್ವಿತೀಯಸ್ಥಾನ  ನವಾಜ್(ವಾಸವಿಶಾಲೆ),ಚಕ್ರಎಸೆತ: ಪ್ರಥಮಸ್ಥಾನ ಸೈಯದ್ ಮುಖ್ತ್ಯಾರ್ (ಹುಳಿಯಾರು ಎಂಪಿಎಸ್), ದ್ವಿತೀಯಸ್ಥಾನ  ದಾದಾಪೀರ್(ಹುಳಿಯಾರು ಎಂಪಿಎಸ್), ಉದ್ದ ಜಿಗಿತ: ಪ್ರಥಮಸ್ಥಾನ ಎಸ್.ಡಿ.ಭರತ್(ವಾಸವಿ ಆಂಗ್ಲಶಾಲೆ), ದ್ವಿತೀಯಸ್ಥಾನ ಎಸ್.ಮಂಜುನಾಥ್(ವಾಸವಿ ಆಂಗ್ಲಶಾಲೆ), ಎತ್ತರ ಜಿಗಿತ: ಪ್ರಥಮಸ್ಥಾನ  ಗುರುಕಿರಣ್(ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್),ದ್ವಿತೀಯಸ್ಥಾನ  ಪ್ರಸನ್ನಕುಮಾರ್(ಯಳನಡು ಜಿ.ಹೆಚ್.ಪಿ.ಎಸ್),ರಿಲೇ 100X4: ಪ್ರಥಮಸ್ಥಾನ ವಾಸವಿ ಆಂಗ್ಲಶಾಲೆ,ದ್ವಿತೀಯಸ್ಥಾನ ಹುಳಿಯಾರು ಕೇಶವ ಹೆಚ್.ಪಿ.ಎಸ್ ಶಾಲೆ
ಬಾಲಕಿಯರ ವಿಭಾಗ:  100ಮೀ ಓಟ: ಪ್ರಥಮಸ್ಥಾನ  ಹೆಚ್.ಎಂ.ಮೇಘ (ವಾಸವಿಶಾಲೆ),ದ್ವಿತೀಯಸ್ಥಾನ  ಹೆಚ್.ಕೆ. ಶಶಿಕಲಾ (ಹುಳಿಯಾರು ಹೆಚ್.ಪಿ.ಚಿ.ಎಸ್),200ಮೀ ಓಟ: ಪ್ರಥಮಸ್ಥಾನ  ಸಂಗೀತ(ಕನಕದಾಸ ಶಾಲೆ), ದ್ವಿತೀಯಸ್ಥಾನ  ಕೆ.ಸ್ನೇಹಾ(ಡಿಂಕನಹಳ್ಳಿ ಹೆಚ್.ಪಿ.ಎಸ್),400ಮೀ. ಓಟ: ಪ್ರಥಮಸ್ಥಾನ ಸುಕನ್ಯ( ಯಳನಡು ಎಂಪಿಎಸ್),ದ್ವಿತೀಯಸ್ಥಾನ ಕಾವ್ಯ (ಹುಳಿಯಾರು ಹೆಚ್.ಪಿ.ಜಿ.ಎಸ್),600ಮೀ ಓಟ: ಪ್ರಥಮಸ್ಥಾನ  ಕೆ.ಚೈತ್ರ(ತಮ್ಮಡಿಹಳ್ಳಿ ಹೆಚ್.ಪಿ.ಎಸ್),ದ್ವಿತೀಯಸ್ಥಾನ  ಹೆಚ್.ಟಿ.ತನುಜ (ಹುಳಿಯಾರು ಹೆಚ್.ಪಿ.ಜಿ.ಎಸ್),ಗುಂಡು ಎಸೆತ: ಪ್ರಥಮಸ್ಥಾನ  ಕವನ (ಡಿಂಕನಹಳ್ಳಿ ಜಿ.ಹೆಚ್.ಪಿ.ಎಸ್),ದ್ವಿತೀಯಸ್ಥಾನ  ಟಿ.ಲಕ್ಷ್ಮೀ(ಹುಳಿಯಾರು ಹೆಚ್.ಪಿ.ಜಿ.ಎಸ್), ಚಕ್ರ ಎಸೆತ: ಪ್ರಥಮಸ್ಥಾನ ನಯನ(ಸೀಗೆಬಾಗಿ ಜಿ.ಹೆಚ್.ಪಿ.ಎಸ್), ದ್ವಿತೀಯಸ್ಥಾನ ಕವನ(ಡಿಂಕನಹಳ್ಳಿ ಜಿ.ಹೆಚ್.ಪಿ.ಎಸ್), 
ಉದ್ದ ಜಿಗಿತ: ಪ್ರಥಮಸ್ಥಾನ  ಹೆಚ್.ಎಂ.ಮೇಘ(ವಾಸವಿಶಾಲೆ),ದ್ವಿತೀಯಸ್ಥಾನ  ವೈ.ಪಿ.ಮೇಘನ (ಹುಳಿಯಾರು ಕೇಶವ ಹೆಚ್.ಪಿ.ಎಸ್),ಎತ್ತರ ಜಿಗಿತ:  ಡಿ.ಎಸ್.ಸಹನ(ವಾಸವಿ ಆಂಗ್ಲಶಾಲೆ),ದ್ವಿತೀಯಸ್ಥಾನ  ಬಿ.ಎಲ್.ಸಹನ(ವಾಸವಿ ಆಂಗ್ಲಶಾಲೆ),ರಿಲೇ: ಪ್ರಥಮಸ್ಥಾನ ಹುಳಿಯಾರು ಹೆಚ್.ಪಿ.ಜಿ.ಎಸ್, ದ್ವಿತೀಯಸ್ಥಾನ ವಾಸವಿ ಆಂಗ್ಲ ಶಾಲೆ.
ಗುಂಪು ಕ್ರೀಡೆ: ಬಾಲಕರ ವಿಬಾಗ: ಖೋಖೋ: ಪ್ರಥಮಸ್ಥಾನ ವಾಸವಿಶಾಲೆ, ದ್ವಿತೀಯಸ್ಥಾನ ಯಳನಡು ಎಂಪಿಎಸ್, ಥ್ರೋಬಾಲ್:  ಪ್ರಥಮಸ್ಥಾನ ವಾಸವಿಶಾಲೆ, ದ್ವಿತೀಯಸ್ಥಾನ ಹುಳಿಯಾರು ಎಂಪಿಎಸ್,ವಾಲಿಬಾಲ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್,ಷಟಲ್ ಬ್ಯಾಡ್ಮಿಂಟನ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ಯಳನಡು ಜಿ.ಹೆಚ್.ಪಿ.ಎಸ್, ಕಬ್ಬಡಿ : ಪ್ರಥಮಸ್ಥಾನ ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್, ದ್ವಿತೀಯಸ್ಥಾನ ಹುಳಿಯಾರು ಎಂಪಿಎಸ್,
ಬಾಲಕಿಯರ ವಿಭಾಗ: ಖೋಖೋ: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ  ಹುಳಿಯಾರು ಹೆಚ್.ಪಿ.ಜಿ.ಎಸ್,ಥ್ರೋಬಾಲ್: ಪ್ರಥಮಸ್ಥಾನ ವಾಸವಿಶಾಲೆ, ದ್ವಿತೀಯಸ್ಥಾನ ಯಳನಡು ಜಿ.ಹೆಚ್.ಪಿ.ಎಸ್,ವಾಲಿಬಾಲ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್,ಷಟಲ್ ಬ್ಯಾಡ್ಮಿಂಟನ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ಬರಗೀಹಳ್ಳಿ ಜಿ.ಹೆಚ್.ಪಿ.ಎಸ್,ಕಬ್ಬಡಿ : ಪ್ರಥಮಸ್ಥಾನ ಹುಳಿಯಾರು ಕೇಶವಶಾಲೆ, ದ್ವಿತೀಯಸ್ಥಾನ ಸೀಗೇಬಾಗಿ ಜಿ.ಹೆಚ್.ಪಿ.ಎಸ್.
                    ಸಮಗ್ರ ಕ್ರೀಡಾಪ್ರಶಸ್ತಿಗೆ ಬಾಜನರಾಗಿರುವ ವಾಸವಿಶಾಲಾ ಮಕ್ಕಳನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮಿಕಾಂತ್,ಚುರುಮುರಿ ಶ್ರೀನಿವಾಸ್,ಎಲ್.ಆರ್.ಚಂದ್ರಶೇಖರ್,ರಾಮನಾಥ್ ಸೇರಿದಂತೆ ಶಾಲಾ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...