ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಪ್ರಕಾಶ್ಮಣಿ ದಾಧೀಜಿಯವರ 18ನೇ ಪುಣ್ಯ ಸ್ಮೃತಿ ದಿನಾಚರಣೆ

ಹುಳಿಯಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಪ್ರಕಾಶ್ಮಣಿ ದಾಧೀಜಿಯವರ 18ನೇ ಪುಣ್ಯ ಸ್ಮೃತಿ ದಿನಾಚರಣೆ ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಪ್ರಕಾಶ್ಮಣಿ ದಾಧೀಜಿಯವರ 18ನೇ ಪುಣ್ಯ ಸ್ಮೃತಿ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಬ್ರಹ್ಮಕುಮಾರಿ ಅಕ್ಕ-ತಂಗಿಯರು ಮತ್ತು ಅಣ್ಣಂದಿರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ಕಡೂರಿನ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿ.ಕೆ. ಜ್ಞಾನೇಶ್ವರಿ ಅಕ್ಕನವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವದ ಬಗ್ಗೆ ವಿವರಿಸಿದರು. ಜೊತೆಗೆ, ಪ್ರಕಾಶಮಣಿ ದಾಧೀಜಿಯವರು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆದು ಬಂದ ಸಫಲತೆಯ ಯಾತ್ರೆಯ ಕುರಿತು ಮಾತನಾಡಿದರು.  ಇದೇ ವೇಳೆ, ಪ್ರೇಮ ಲೀಲಕ್ಕ ಮತ್ತು ಶಿವಗಂಗಮ್ಮಕ್ಕ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಬಾಲ ರಾಧಾ-ಕೃಷ್ಣರನ್ನು ಹೂವು ಮತ್ತು ಪನ್ನೀರು ಸಿಂಪಡಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಬಸವಪಟ್ಟಣದಿಂದ ಆಗಮಿಸಿದ್ದ ಬಿ.ಕೆ. ನೀಲಮಕ್ಕನವರು ಎಲ್ಲ ಬಾಲಕೃಷ್ಣರಿಗೆ ಈಶ್ವರೀಯ ಕಾಣಿಕೆಯನ್ನು ಅರ್ಪಿಸಿದರು.  ಹುಳಿಯಾರಿನ ಬಿ.ಕೆ. ಗೀತಕ್ಕ ಅವರು ಪ್ರಕಾಶ್ಮಣಿ ದಾಧೀಜಿಯವರ 18ನೇ ಪುಣ್ಯ ಸ್ಮೃತಿ ದಿನದ ಕುರಿತು ಮಾತನಾಡಿ, ಅವರ ಆದರ್ಶ ಬದುಕು ಮತ್ತು ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.  ನಂತರ, ಹೊಯ್ಸಳಕಟ್ಟೆಯ ಬಿ.ಕೆ....

ಹುಳಿಯಾರಿನಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸಭೆ

  ಹುಳಿಯಾರಿನಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸಭೆ ಹುಳಿಯಾರು : ಹುಳಿಯಾರು ಪೊಲೀಸ್ ಠಾಣೆಯಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸುವ ಕುರಿತು ಸಾರ್ವಜನಿಕರ ಶಾಂತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಸಿಪಿಐ ನದಾಫ್ ಮತ್ತು ಪಿಎಸ್ಐ ಧರ್ಮಾಂಜಿ ಅವರು ಸಾರ್ವಜನಿಕರಿಗೆ ಹಬ್ಬಗಳ ಆಚರಣೆಯ ಕುರಿತು ಮಾರ್ಗದರ್ಶನ ನೀಡಿದರು. ಸಿಪಿಐ ನದಾಫ್ ಮಾತನಾಡಿ, ಯಾವುದೇ ಹಬ್ಬಗಳ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಸಮುದಾಯದವರು ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸಬೇಕೆಂಬುದು ಪೊಲೀಸ್ ಇಲಾಖೆಯ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಸಮಾಜಘಾತಕ ಶಕ್ತಿಗಳ ಬಗ್ಗೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. *ಪ್ರಮುಖ ನಿರ್ದೇಶನಗಳು:* * *ರಾತ್ರಿ 10 ಗಂಟೆಯ ಗಡುವು:* ರಾಜ್ಯ ಸರ್ಕಾರದ ಆದೇಶದಂತೆ, ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಗೆ ಅವಕಾಶ ಇರುವುದಿಲ್ಲ. ಹಗಲು ಸಮಯದಲ್ಲಿ ಹಬ್ಬದ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು. * *ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆ:* ಡಿಜೆ ಬಳಕೆಗೆ ಅನುಮತಿ ಇಲ್ಲ. ರಾತ್ರಿ 10 ಗಂಟೆಯ ನಂತರ ಯಾವುದೇ ಕಾರಣಕ್ಕೂ ಮೈಕ್ ಅಥವಾ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. * *ಪರವಾನಗಿ ಮತ...

ಹುಳಿಯಾರು ಕೆಂಕೆರೆಯಲ್ಲಿ *ಜನ ಸುರಕ್ಷಾ ಶಿಬಿರ* ಯಶಸ್ವಿ : 20 ರೂ.ಗೆ 2 ಲಕ್ಷದ ಅಪಘಾತ ವಿಮೆ

ಹುಳಿಯಾರು : ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮತ್ತು ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ಕೆಂಕೆರೆ ಗ್ರಾಮದ ಓಂಕಾರ ಸಂಜೀವಿನಿ ಒಕ್ಕೂಟದ ಆವರಣದಲ್ಲಿ ಜನ ಸುರಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸ್ವಸಹಾಯ ಗುಂಪುಗಳಿಗೆ ₹20 ಲಕ್ಷದವರೆಗಿನ ಜಾಮೀನುರಹಿತ ಸಾಲ ಸೌಲಭ್ಯ ಹಾಗೂ ಕೇವಲ ₹20 ವಾರ್ಷಿಕ ಕಂತಿನಲ್ಲಿ ₹2 ಲಕ್ಷದ ಅಪಘಾತ ವಿಮೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಹುಳಿಯಾರು ಎಸ್‌ಬಿಐ ವ್ಯವಸ್ಥಾಪಕ ವೈ. ಸುರೇಶ್ ಬಾಬು , ಸ್ವಸಹಾಯ ಸಂಘಗಳಿಗೆ ನಮ್ಮ ಬ್ಯಾಂಕ್‌ನಲ್ಲಿ ಯಾವುದೇ ಜಾಮೀನು ಇಲ್ಲದೆ ₹20 ಲಕ್ಷದವರೆಗೆ ಸಾಲ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ಇದೇ ವೇಳೆ ಬ್ಯಾಂಕ್‌ನ ಕ್ಷೇತ್ರ ಮೇಲ್ವಿಚಾರಕ ಸತೀಶ್ ಮಾತನಾಡಿ, ಎಸ್‌ಬಿಐ ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಮೊಬೈಲ್ ಮೂಲಕವೇ ಬ್ಯಾಲೆನ್ಸ್ ಪರಿಶೀಲನೆ, ಸ್ಟೇಟ್‌ಮೆಂಟ್ ಪಡೆಯುವುದು, ವಿಳಾಸ ಬದಲಾವಣೆ, ಹಣ ವರ್ಗಾವಣೆ ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಸಂಜೀವಿನಿ ಒಕ್ಕೂಟದ ಕಾರ್ಯಕ್ರಮ ವ್ಯವಸ್ಥಾಪಕ ರವಿ, ಸಂಜೀವಿನಿ ಒಕ್ಕೂಟಗಳು ಇಂದು ಮಿನಿ ಬ್ಯಾಂಕ್‌ಗಳಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ ಎಂದ...

ತೀರ್ಥಪುರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧರ್ಮಸ್ಥಳ ಗ್ರಾಮೀಣ ಯೋಜನೆಯಿಂದ ಜನ ಸುರಕ್ಷಾ ಶಿಬಿರ

  ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ಆರ್ಥಿಕವಾಗಿ ಸದೃಢರಾಗಿ: ಮಹೇಂದ್ರ ತೀರ್ಥಪುರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧರ್ಮಸ್ಥಳ ಗ್ರಾಮೀಣ ಯೋಜನೆಯಿಂದ ಜನ ಸುರಕ್ಷಾ ಶಿಬಿರ ಹುಳಿಯಾರು : ರೈತರು ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದು ತೀರ್ಥಪುರ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮಹೇಂದ್ರ ಕರೆ ನೀಡಿದರು.  ಆರ್ಥಿಕ ಸಾಕ್ಷರತಾ ಕೇಂದ್ರ (ಚಿಕ್ಕನಾಯಕನಹಳ್ಳಿ) ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಬಿಸಿ ಟ್ರಸ್ಟ್ (ತೀರ್ಥಪುರ) ಜಂಟಿಯಾಗಿ ತೀರ್ಥಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವರ್ಷವೂ ಸಾಲವನ್ನು ಅವಧಿಗೆ ಮುನ್ನ ನವೀಕರಿಸಿದರೆ ಕೇವಲ ಶೇ.4ರಷ್ಟು ಬಡ್ಡಿ ವಿಧಿಸಲಾಗುವುದು ಎಂದ ಅವರು ಇದು ರೈತರಿಗೆ ಕಡಿಮೆ ವೆಚ್ಚದಲ್ಲಿ ಹಣಕಾಸಿನ ನೆರವು ಪಡೆಯಲು ಉತ್ತಮ ಅವಕಾಶವಾಗಿದ್ದು ಇದನ್ನು ಸಧ್ಬಳಕೆ ಮಾಡಿಕೊಳ್ಳಿ ಎಂದರು. ಪ್ರಧಾನಮಂತ್ರಿ ಸುರಕ್ಷಾ ವಿಮಾ ನೊಂದಾಯಿಸಿ : ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಮಾತನಾಡಿ ವಾರ್ಷಿಕ ಕೇವಲ 20 ರೂ.ಗಳ ವಿಮಾ ಕಂತು ಪಾವತಿಸಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ಬ್ಯಾಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು. ಇದರಿಂದ, ಸಾವು ಸಂಭವಿಸಿದರೆ ನಾಮನಿರ್ದೇಶಿತರಿಗೆ 2 ಲಕ್ಷ ರೂ. ವಿಮಾ ಮೊತ್ತ ದೊರೆಯುತ್ತದೆ. ಅ...

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ 20 ಲಕ್ಷ ರೂ. ಸಾಲ ವಿತರಣೆ

  ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ 20 ಲಕ್ಷ ರೂ. ಸಾಲ ವಿತರಣೆ *ಮತ್ತಿಘಟ್ಟದಲ್ಲಿ ಜನ ಸುರಕ್ಷಾ ಶಿಬಿರ ಹಾಗೂ ಸಾಲ ವಿತರಣಾ ಸಮಾರಂಭ ಯಶಸ್ವಿ* ಹುಳಿಯಾರು : ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತಿಘಟ್ಟದ ಶಾಖೆಯಿಂದ ಮತ್ತಿಘಟ್ಟ ಅಮೃತಬಿಂದು ಸಂಜೀವಿನಿ ಒಕ್ಕೂಟದ ಸಭಾಂಗಣದಲ್ಲಿ ಇತ್ತೀಚೆಗೆ, ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲ ವಿತರಣಾ ಸಮಾರಂಭ ಮತ್ತು ಜನ ಸುರಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿದ್ಧಿ ವಿನಾಯಕ, ಫಾತಿಮಾಭೀ, ಪಾರ್ವತಿ ಮತ್ತು ಶಂಕರಿ ಸ್ವಸಹಾಯ ಸಂಘಗಳಿಗೆ ಒಟ್ಟು 20 ಲಕ್ಷ ರೂ.ಗಳಷ್ಟು ಸಾಲ ಮಂಜೂರು ಮಾಡಲಾಯಿತು. ಸಾಲ ಸದ್ಬಳಕೆಯ ಮಹತ್ವದ ಕುರಿತು ಮಂಜುನಾಥ್ ಸಲಹೆ : ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮತ್ತಿಘಟ್ಟ ಶಾಖೆಯ ವ್ಯವಸ್ಥಾಪಕ ಮಂಜುನಾಥ್, ಸ್ವಸಹಾಯ ಸಂಘಗಳ ಸದಸ್ಯರು ಪ್ರತಿ ವಾರವೂ ನಿಯಮಿತವಾಗಿ ಸಭೆ ಸೇರಿ ಹಣಕಾಸು ನಿರ್ವಹಣೆ, ಸಾಲದ ಸದ್ಬಳಕೆ, ಸದಸ್ಯರ ಸೇರ್ಪಡೆ ಹಾಗೂ ಬದಲಾವಣೆಗಳ ಬಗ್ಗೆ ನಡಾವಳಿ ಪುಸ್ತಕದಲ್ಲಿ ನಮೂದಿಸಬೇಕು ಎಂದು ತಿಳಿಸಿದರು. ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ತಮ್ಮ ಮೊಬೈಲ್ ಮತ್ತು ಆಧಾರ್ ಕಾರ್ಡ್‌ಗಳ ಮಾಹಿತಿಯನ್ನು ಗೌಪ್ಯವಾಗಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು. *ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಲು ಕರೆ* : ಆರ್ಥಿಕ ಸಾಕ್...

ಮಹಿಳೆಯರು ಮೈಕ್ರೋ ಫೈನಾನ್ಸ್‌ನಿಂದ ದೂರವಿದ್ದು, ಬ್ಯಾಂಕ್ ಸಾಲ ಬಳಸಬೇಕು: ಗಂಗೇಶ್ ಗುಂಜನ್

  ಮಹಿಳೆಯರು ಮೈಕ್ರೋ ಫೈನಾನ್ಸ್‌ನಿಂದ ದೂರವಿದ್ದು, ಬ್ಯಾಂಕ್ ಸಾಲ ಬಳಸಬೇಕು: ಗಂಗೇಶ್ ಗುಂಜನ್ ಹುಳಿಯಾರು : ಹೆಚ್ಚಿನ ಬಡ್ಡಿ ವಿಧಿಸುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬದಲಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ತುಮಕೂರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗೇಶ್ ಗುಂಜನ್ ಕರೆ ನೀಡಿದರು. ಕುಪ್ಪೂರು ಗ್ರಾಮ ಪಂಚಾಯಿತಿ ಮಟ್ಟದ ಅಕ್ಷಯ ಸಂಜೀವಿನಿ ಒಕ್ಕೂಟದ ಆವರಣದಲ್ಲಿ ನಡೆದ ಜನ ಸುರಕ್ಷಾ ಶಿಬಿರದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ, ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮತ್ತು ಜನಧನ ಖಾತೆಯಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬ್ಯಾಂಕುಗಳ ಮೂಲಕ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಈ ಶಿಬಿರವನ್ನು ಕೆನರಾ ಬ್ಯಾಂಕ್, ಚಿಕ್ಕನಾಯಕನಹಳ್ಳಿ ಮತ್ತು ಆರ್ಥಿಕ ಸಾಕ್ಷರತಾ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದವು. ಕೆನರಾ ಬ್ಯಾಂಕ್ ಚಿಕ್ಕನಾಯಕನಹಳ್ಳಿಯ ಮುಖ್ಯ ವ್ಯವಸ್ಥಾಪಕ ಶ್ರೀಕಾಂತ್ ಕುಮಾರ್ ಸೇತಿ ಮಾತನಾಡಿ ಗ್ರಾಹಕರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಕೆವೈಸಿ (KYC) ನವೀಕರಿಸಿಕೊಳ್ಳಬೇಕೆಂದು ತಿಳಿಸಿದರು. ಕೆನರಾ ಬ್ಯಾಂಕಿನ ಕೃಷಿ ಸಹಾಯಕ ಅಧಿಕಾರಿ ಮಧುಸೂದನ್ ಎನ್.ಜಿ. ಮಾತನಾಡಿ ಮಹಿಳೆಯರಿಗಾಗಿ ಬ...

ಕಣ್ಣೀರ ಕಥೆ : ಸೌಲಭ್ಯಗಳ ಕೊರತೆಯಿಂದ ನಲುಗಿದ 70ರ ಹರೆಯದ ಕರಿಯಮ್ಮ ಅಜ್ಜಿ

  ಕಣ್ಣೀರ ಕಥೆ: ಸೌಲಭ್ಯಗಳ ಕೊರತೆಯಿಂದ ನಲುಗಿದ 70ರ ಹರೆಯದ ಕರಿಯಮ್ಮ ಅಜ್ಜಿ ------------------------ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮನಹಳ್ಳಿ ಎಸ್.ಸಿ. ಕಾಲೋನಿಯ ಕರಿಯಮ್ಮ ಅಜ್ಜಿ (70) ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಅಜ್ಜಿಯ ಕಣ್ಣೀರಿನ ಕಥೆ, ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.  ಅಧಿಕಾರಿಗಳ ನಿರ್ಲಕ್ಷ್ಯ : ಈ ವೃದ್ಧಾಪ್ಯದಲ್ಲಿ ಅಜ್ಜಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳು ದೊರೆತಿಲ್ಲ ಎನ್ನಲಾಗಿದ್ದು ಮತದಾನದ ಹಕ್ಕು ಮಾತ್ರ ದೊರೆತಿದ್ದು, ಜೀವನಕ್ಕೆ ಅಗತ್ಯವಾದ ಇತರೆ ಎಲ್ಲಾ ಹಕ್ಕುಗಳನ್ನು ಪಡೆಯಲು ಅಧಿಕಾರಿಗಳು ನಿರ್ಲಕ್ಷ್ಯದಿಂದ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಸತಿ, ಶುದ್ಧ ಕುಡಿಯುವ ನೀರು, ವಯೋವೃದ್ಧ ಪಿಂಚಣಿ ಅಥವಾ ವಿಧವಾ ವೇತನ, ಶೌಚಾಲಯ ಮತ್ತು ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ನಾರಿಶಕ್ತಿ ಮುಂತಾದ ಪ್ರಮುಖ ಯೋಜನೆಗಳಿಂದ ಈ ಅಜ್ಜಿ ವಂಚಿತರಾಗಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ದಾಖಲೆಗಳ ಕೊರತೆಯೇ ಸಮಸ್ಯೆಯೇ : ಅಜ್ಜಿಯ ಬಳಿ ಗುರುತಿನ ಚೀಟಿಗಳಾದ ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್‌ಗಳೂ ಇಲ್ಲ. ಅವರ ಗಂಡ ನಿಧನರಾದ ನಂತರ ರೇಷನ್ ಕಾರ್ಡ್ ರದ್ದುಗೊಂಡಿದೆ. ಮಕ್ಕಳು ಇಲ್ಲದ ಅಜ್ಜಿ, ನೆರೆಹೊರೆಯವರ ಸಹಾಯದಿಂದ ದಿನ ದೂ...

ಹುಳಿಯಾರಿನಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ

**ರಕ್ಷಾಬಂಧನ: ಮಾನಸಿಕ ಶಾಂತಿಯ ಸಂಕಲ್ಪ** ಹುಳಿಯಾರು : ಇಲ್ಲಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಬಿ.ಕೆ. ಗೀತಕ್ಕನವರ ನೇತೃತ್ವದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು . ಈ ಪವಿತ್ರ ಹಬ್ಬದ ಪ್ರಯುಕ್ತ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ರಾಖಿ ಕಟ್ಟಿ ಶುಭ ಕೋರಲಾಯಿತು. ಈ ವೇಳೆ ಆಶ್ರಮದ ಸಂಚಾಲಕರಾದ ಬ್ರಹ್ಮಕುಮಾರಿ ಗೀತಕ್ಕ ಮಾತನಾಡಿ, ರಕ್ಷಾಬಂಧನ ಕೇವಲ ಸಹೋದರ ಸಂಬಂಧದ ಸಂಕೇತವಲ್ಲ, ಇದು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಗಳ ದ್ಯೋತಕ ಎಂದರು.   ಹಬ್ಬದ ಆಚರಣೆಯ ಭಾಗವಾಗಿ ಪಟ್ಟಣ ಪಂಚಾಯಿತಿ, ಎಸ್.ಬಿ.ಐ. ಬ್ಯಾಂಕ್, ಶಿರಾ ಟೌನ್ ಕೋ ಆಪರೇಟಿವ್ ಬ್ಯಾಂಕ್, ಕೆನರಾ ಬ್ಯಾಂಕ್, ಮೈಸೂರು ಬ್ಯಾಂಕ್ ಹಾಗೂ ಧರ್ಮಸ್ಥಳ ಮಂಜುನಾಥ ಕಚೇರಿ ಸೇರಿದಂತೆ ಹಲವೆಡೆಗೆ ತೆರಳಿ ಎಲ್ಲರಿಗೂ ರಾಖಿ ಕಟ್ಟಿ, ಸಿಹಿ ಹಂಚಿ ಶುಭ ಕೋರುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಬಿ.ಕೆ. ಗೀತಕ್ಕನವರು ಮಾತನಾಡುತ್ತಾ , ರಕ್ಷಾ ಬಂಧನ ಕೇವಲ ಒಂದು ದಾರ ಕಟ್ಟುವ ಹಬ್ಬವಲ್ಲ. ಇದು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಮತ್ತು ಪರಸ್ಪರ ರಕ್ಷಣೆಯ ಸಂಕಲ್ಪದ ಪ್ರತೀಕವಾಗಿದೆ. ರಕ್ಷಾ ಬಂಧನದ ಮೂಲ ಉದ್ದೇಶ ಪರಮಾತ್ಮನ ಶ್ರೀರಕ್ಷೆಯು ಸದಾ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ. ಈ ದಿನ ನಾವು ಸಮಾಜದ ಶಾಂತಿ ಮತ್ತು ಸೌಹಾರ್ದತೆಗಾಗಿ ಒಗ್ಗಟ್ಟಿನಿಂದ ದುಡಿಯುವ ಸಂಕ...

ಸಾಮಾಜಿಕ ಭದ್ರತಾ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿ: ಚೈತನ್ಯ ಕಂಚಿಬೈಲು

ಸಾಮಾಜಿಕ ಭದ್ರತಾ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿ: ಚೈತನ್ಯ ಕಂಚಿಬೈಲು ----------------------- ಹುಳಿಯಾರು : ಕೇಂದ್ರ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಜನಧನ ಖಾತೆ ಯೋಜನೆ ಮುಂತಾದವುಗಳು ಆರ್ಥಿಕ ಸೇರ್ಪಡೆಗಾಗುವ ದಿಕ್ಕಿನಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಎಲ್ಲ ನಾಗರಿಕರು ಬ್ಯಾಂಕುಗಳ ಮೂಲಕ ಇದರಲ್ಲಿ ನೊಂದಾಯಿಸಿಕೊಳ್ಳಬೇಕೆಂದು ತುಮಕೂರಿನ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ಚೈತನ್ಯ ಕಂಚಿಬೈಲು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಕಂದಿಕೆರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸಾದರಹಳ್ಳಿ ಗ್ರಾಮದಲ್ಲಿ ನಡೆದ ಜನ ಸುರಕ್ಷಾ ಶಿಬಿರದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದರು. ಈ ಯೋಜನೆಗಳು ಬಡವ, ಬಲ್ಲಿದ, ಶ್ರಿಮಂತ ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಲಾಭದಾಯಕವಾಗಿವೆ ಎಂದು ಅವರು ಹೇಳಿದರು. ಶಿಬಿರದ ಮುಖ್ಯ ಪ್ರಾಯೋಜಕರಾದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಂದಿಕೆರೆ ಶಾಖೆಯ ವ್ಯವಸ್ಥಾಪಕ ಆರ್. ತಿಪ್ಪೇಸ್ವಾಮಿ ಮಾತನಾಡುತ್ತ, ರೈತರು ಹಾಗೂ ಸ್ವಸಹಾಯ/ಸ್ತ್ರೀ ಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡಿದಲ್ಲಿ ಅವರು ಬೆಳೆಯುವುದರ ಜೊತೆಗೆ ಬ್ಯಾಂಕುಗಳು ಹಾಗೂ ದೇಶದ ಆರ್ಥಿಕತೆಗೂ ಸಹ ಬೆಂಬಲ ದೊರೆಯುತ್ತದೆ ಎಂದರು. ...