ಹುಳಿಯಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಪ್ರಕಾಶ್ಮಣಿ ದಾಧೀಜಿಯವರ 18ನೇ ಪುಣ್ಯ ಸ್ಮೃತಿ ದಿನಾಚರಣೆ ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಪ್ರಕಾಶ್ಮಣಿ ದಾಧೀಜಿಯವರ 18ನೇ ಪುಣ್ಯ ಸ್ಮೃತಿ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಬ್ರಹ್ಮಕುಮಾರಿ ಅಕ್ಕ-ತಂಗಿಯರು ಮತ್ತು ಅಣ್ಣಂದಿರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ಕಡೂರಿನ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿ.ಕೆ. ಜ್ಞಾನೇಶ್ವರಿ ಅಕ್ಕನವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವದ ಬಗ್ಗೆ ವಿವರಿಸಿದರು. ಜೊತೆಗೆ, ಪ್ರಕಾಶಮಣಿ ದಾಧೀಜಿಯವರು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆದು ಬಂದ ಸಫಲತೆಯ ಯಾತ್ರೆಯ ಕುರಿತು ಮಾತನಾಡಿದರು. ಇದೇ ವೇಳೆ, ಪ್ರೇಮ ಲೀಲಕ್ಕ ಮತ್ತು ಶಿವಗಂಗಮ್ಮಕ್ಕ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಬಾಲ ರಾಧಾ-ಕೃಷ್ಣರನ್ನು ಹೂವು ಮತ್ತು ಪನ್ನೀರು ಸಿಂಪಡಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಬಸವಪಟ್ಟಣದಿಂದ ಆಗಮಿಸಿದ್ದ ಬಿ.ಕೆ. ನೀಲಮಕ್ಕನವರು ಎಲ್ಲ ಬಾಲಕೃಷ್ಣರಿಗೆ ಈಶ್ವರೀಯ ಕಾಣಿಕೆಯನ್ನು ಅರ್ಪಿಸಿದರು. ಹುಳಿಯಾರಿನ ಬಿ.ಕೆ. ಗೀತಕ್ಕ ಅವರು ಪ್ರಕಾಶ್ಮಣಿ ದಾಧೀಜಿಯವರ 18ನೇ ಪುಣ್ಯ ಸ್ಮೃತಿ ದಿನದ ಕುರಿತು ಮಾತನಾಡಿ, ಅವರ ಆದರ್ಶ ಬದುಕು ಮತ್ತು ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. ನಂತರ, ಹೊಯ್ಸಳಕಟ್ಟೆಯ ಬಿ.ಕೆ....
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070