ಹುಳಿಯಾರು ಅಭಿಮಾನಿಗಳಿಂದ ವಿಷ್ಣು ಪುಣ್ಯ ತಿಥಿ -------------------------------- ಹುಳಿಯಾರು: ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರು ಇಹ ಲೋಕ ತ್ಯಜಿಸಿ ಜನವರಿ 30 ಕ್ಕೆ ತಿಂಗಳಾಯಿತು. ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಅನಭಿಶಕ್ತ ದೊರೆಯಾಗಿ ಇಂದಿಗೂ ನೆಲೆಸಿದ್ದಾರೆ. ಹಾಗಾಗಿಯೇ ಅಭಿಮಾನಿಗಳ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಹುಳಿಯಾರಿನಲ್ಲಿ ವಿಷ್ಣು ಅಭಿಮಾನಿ ಬಳಗ ವಿಷ್ಣು ಅವರ ತಿಂಗಳ ಪುಣ್ಯ ತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಿತು. ಮುಂಜಾನೆ 9 ಗಂಟೆಯಿಂದಲೆ ಇಲ್ಲಿನ ವಿನಾಯಕ ನಗರದ ದ್ವಾರ ಬಾಗಿಲಿನ ಬಳಿ ಶಾಮಿಯಾನ ನೆಟ್ಟು ವಿಷ್ಣುವರ್ಧನ್ ಅವರ ಆಕರ್ಷಕ ಭಾವಚಿತ್ರವನ್ನು ವಿದ್ಯುತ್ ದೀಪ, ಬಣ್ಣ ಬಣ್ಣದ ಪುಷ್ಪಗಳೊಂದಿಗೆ ಸಿಂಗಾರಗೊಂಡ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಪನಸ್ಕಾರಗಳನ್ನು ನೆರವೇರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಎತ್ತರದ ವಿಷ್ಣು ಭಾವಚಿತ್ರವನ್ನು ವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆಯೂ ಕೂಡ ಮಾಡಿ ನಂತರ ಇಡೀ ರಾತ್ರಿ ವಿಷ್ಣು ಭಾವಚಿತ್ರದ ಮುಂದೆ ಅಭಿಮಾನಿಗಳಿಂದ ಭಜನಾ ಕಾರ್ಯಕ್ರಮ ಸಹ ಜರುಗಿತು. ಎಂ .ರಾಘವೇಂದ್ರ, ಎಚ್.ಎಸ್.ನಟರಾಜ್, ಬಾಳೆಕಾಯಿ ಮೂರ್ತಣ್ಣ, ಎಚ್.ಬಿ.ದುರ್ಗರಾಜ್, ಅಂಜುಮಣಿ, ಕೆ.ಪಿ.ಮಂಜುನಾಥ್, ಎಚ್.ಜಿ.ರಾಘವೇಂದ್ರ, ಜಗದೀಶ್, ...