ಬೋರನಕಣಿವೆ ಜಲಾಶಯಕ್ಕೆ ನದಿ ನೀರು ಹರಿಸಲು ಒತ್ತಾಯಿಸಿ ಫೆಬ್ರವರಿ 15 ರಂದು ಹುಳಿಯಾರ್ ಬಂದ್
------------------------- ---------------------------------------------------------
ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಕೆರೆಗಳ ಮೂಲಕ ನೈಸರ್ಗಿಕವಾಗಿ ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯಕ್ಕೆ ನದಿ ಮೂಲದ ನೀರು ಹರಿಸಲು ಒತ್ತಾಯಿಸಿ ಹುಳಿಯಾರ್ ಬಂದ್ಗೆ ಕರೆ ನೀಡಲು ರೈತ ಸಂಘ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ನಿರ್ಧರಿಸಿವೆ.
ಹುಳಿಯಾರಿನ ಪ್ರವಾಸಿ ಮಂದಿರಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಈ ಸಂಬಂಧ ಕರೆಯಲಾಗಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ಬಂದ್ ನ ಭಾರಿ ಪ್ರತಿಭಟನಾ ಮೆರವಣಿಗೆಯಲ್ಲಿ ಸರ್ಕಾರ ತಮ್ಮ ನಿಲುವು ಪ್ರಕಟಿಸದಿದ್ದಲ್ಲಿ ತಾಲೂಕು ಕಛೇರಿಗೆ ಪಾದಯಾತ್ರೆ, ವಿಧಾನಸೌಧಕ್ಕೆ ಬೈಕ್ ರಾಲಿ ಹಾಗೂ ಇಲ್ಲಿನ ನಾಡ ಕಛೇರಿ ಮುಂದೆ ಆಹೋರಾತ್ರಿ ಧರಣಿ ನಡೆಸುವ ಮೂಲಕ ಸರ್ಕಾರದ ಮೇಲೆ ಮತ್ತೊಷ್ಟು ಒತ್ತಡ ತರಲು ತೀರ್ಮಾನಿಸಲಾಯಿತು.
ಚಿಕ್ಕನಾಯಕನಹಳ್ಳಿ ತಾಲೂಕಿಗೆ ಯಾವುದೇ ನೀರಾವರಿ ಸೌಲಭ್ಯ ಇಲ್ಲದೆ ಮಳೆ ಹಾಗೂ ಅಂತರ್ಜಲ ನಂಬಿ ಜೀವನ ಸಾಗಿಸುವ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಿಲ್ಲ, ಅಂತರ್ಜಲವೂ ಸಹ ಕುಸಿತವಾಗಿ ಸಾವಿರ ಅಡಿ ಕೊರೆದರೂ ನೀರು ಸಿಗದಂತಾಗಿದೆ ಇಲ್ಲಿನ ಜನಜೀವನದ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಈ ಭಾಗಕ್ಕೆ ನದಿ ಮೂಲದ ನೀರು ಹರಿಯುವ ಹೊರತು ಉಳಿಗಾಲವಿಲ್ಲ ಎಂದು ನಿರ್ಧರಿಸಿ ಹಲವು ವರ್ಷಗಳಿಂದ ಹೋರಾಟ ಮಾಡಲಾಗಿದ್ದರೂ ಹಿಂದಿನ ಸರ್ಕಾರಗಳು ಈ ಭಾಗವನ್ನು ನಿರ್ಲಕ್ಷ್ಯವಹಿಸಿದ್ದವು.
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೋರಾಟವನ್ನು ತೀವ್ರ ಗೊಳಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ, ವಿವಿಧ ಪಕ್ಷಗಳ ಹಾಗೂ ರಾಜಕಾಣಿಗಳ ನಾಯಕತ್ವದಲ್ಲಿ, ರೈತ ಸಂಘ ಹಾಗೂ ಮೂವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಹೀಗೆ ಅನೇಕ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ ಹಾಗೂ ಪಟ್ಟಣ ಬಂದ್ ಸಹ ಮಾಡಲಾಗಿತ್ತಲ್ಲದೆ ಇಲ್ಲಿನ ನಾಡಕಛೇರಿ ಬಳಿ ಬರೋಬರಿ ನಲ್ವತಕ್ಕೂ ಹೆಚ್ಚು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸುವ ಮೂಲಕ ಸಕರ್ಾರದ ಮೇಲೆ ಮತ್ತೊಷ್ಟು ಒತ್ತಡ ತರಲಾಯಿತು.
ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವರೆ ಖುದ್ದು ಧರಣಿ ಸ್ಥಳಕ್ಕೆ ಆಗಮಿಸಿ ನೀರು ಹರಿಸುವ ಭರವಸೆ ನೀಡಿದರಲ್ಲದೆ ಧರಣಿ ನಿರತ ಮುಖ್ಯಸ್ಥರನ್ನು ವಿಧಾನಸೌಧಕ್ಕೆ ಆಹ್ವಾನಿಸಿ ನೀರಾವರಿ ಸಚಿವ ಬಸವರಾಜ ಬೊಮ್ಮಯಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೋರನಕಣಿವೆ ಜಲಾಶಯಕ್ಕೆ ಹೇಮಾವತಿ ನೀರು ಹರಿಸುವ ಸಲುವಾಗಿ 3 ದಿಂಗಳ ಕಾಲಾವಕಾಶ ಕೋರಿ ಸವರ್ೆ ಕಾರ್ಯಕ್ಕೆ ಸ್ಥಳದಲ್ಲಿಯೇ ಆದೇಶ ನೀಡಿದರು.
ಆದರಂತೆ ಈಗಾಗಲೇ ಸರ್ವೆ ಕಾರ್ಯ ಮುಗಿದಿರುವುದು ಹೋರಾಟಕ್ಕೆ ಸಂದ ಜಯವಾಗಿದ್ದರೂ ಕೂಡ ಸಕರ್ಾರ ಪಡೆದಿದ್ದ 3 ತಿಂಗಳ ಕಾಲಾವಕಾಶ ಮೀರಿಹೋಗಿದೆ. ಆದರೂ ನೀರು ಹರಿಸುವ ಸಂಬಂಧ ಈ ಭಾಗಕ್ಕೆ ನಿಗಧಿ ಪಡಿಸಿದ ನೀರಿನ ಪ್ರಮಾಣ, ಯೋಜನ ವೆಚ್ಚ ಹಾಗೂ ಮಾದರಿಯನ್ನು ಘೋಷಿಸಿ ಕಾಮಕಾರಿಗೆ ಟೆಂಡರ್ ಕರೆಯದೆ ಮತ್ತೊಮ್ಮೆ ನಿರ್ಲಕ್ಷ್ಯ ಧೋರಣೆ ತಾಳಿರುವ ಪರಿಣಾಮ ಎಚ್ಚರಗೊಳಿಸುವ ಸಲುವಾಗಿ ಅನಿವಾರ್ಯವಾಗಿ ಹುಳಿಯಾರ್ ಬಂದ್ ಕರೆ ನೀಡಲಾಗಿದೆ ಎಂದು ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು.
ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತಿಶ್, ಜಿಲ್ಲೆಯ ಹೆಸರಾಂತ ಹೃದಯ ತಜ್ಞ ಹಾಗೂ ನೀರಾವರಿ ಹೋರಾಟಗಾರ ಡಾ.ಪರಮೇಶ್ವರಪ್ಪ, ರೈತ ಸಂಘದ ಕೆ.ಪಿ.ಮಲ್ಲೇಶ್, ಚಿಕ್ಕನಾಯಕನಹಳ್ಳಿ ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂರ್ತಿ, ವರ್ತಕರ ಸಂಘದ ನಟರಾಜ್, ಏಜೆಂಟರ ಸಂಘದ ಲೋಕೇಶ್, ಹುಳಿಯಾರು ಕರವೇಯ ರಂಗಸ್ವಾಮಿ, ಕೋಳಿ ಶ್ರೀನಿವಾಸ್, ವಿಪ್ರ ಸಂಘದ ವಿಶ್ವನಾಥ್, ಟಿಪ್ಪು ಸಂಘದ ಅಪ್ಸರ್, ಜಯಕನರ್ಾಟಕದ ಎಚ್.ಎನ್.ವೆಂಕಟೇಶ್, ಛಾಯಾಗ್ರಹಕರ ಸಂಘದ ಎ.ಡಿ.ತಂಡವಾಚಾರ್, ದುರ್ಗಾ ಪರಮೇಶ್ವರಿ ಸಂಘದ ಪೈಲ್ವಾನ್ ಜಯಣ್ಣ, ಜಯಲಕ್ಷ್ಮಮ್ಮ, ಬೈರಮ್ಮ, ಸಿದ್ರಾಮಕ್ಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.
ಈ ಸುದ್ಧಿಗೆ ಸಂಬಂಧಿಸಿದ ಪೋಟೊ ಕೂಡ ಇದೆ
ಫೋಟೊ ವಿವರ : ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯಕ್ಕೆ ನದಿ ಮೂಲದ ನೀರು ಹರಿಸಲು ಒತ್ತಾಯಿಸಿ ಹುಳಿಯಾರ್ ಬಂದ್ಗೆ ಕರೆ ನೀಡುವ ಸಲುವಾಗಿ ಪ್ರತಿಕಾಗೋಷ್ಠಿ ನಡೆಸಿದರು. ಕೆಂಕೆರೆ ಸತಿಶ್, ಡಾ.ಪರಮೇಶ್ವರಪ್ಪ, ಸಿ.ಡಿ.ಚಂದ್ರಶೇಖರ್, ಸಿ.ಟಿ.ಗುರುಮೂರ್ತಿ, ನಟರಾಜ್, ಲೋಕೇಶ್ ಮತ್ತಿತರರಿದ್ದಾರೆ.
------------------------- ---------------------------------------------------------
ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಕೆರೆಗಳ ಮೂಲಕ ನೈಸರ್ಗಿಕವಾಗಿ ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯಕ್ಕೆ ನದಿ ಮೂಲದ ನೀರು ಹರಿಸಲು ಒತ್ತಾಯಿಸಿ ಹುಳಿಯಾರ್ ಬಂದ್ಗೆ ಕರೆ ನೀಡಲು ರೈತ ಸಂಘ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ನಿರ್ಧರಿಸಿವೆ.
ಹುಳಿಯಾರಿನ ಪ್ರವಾಸಿ ಮಂದಿರಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಈ ಸಂಬಂಧ ಕರೆಯಲಾಗಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ಬಂದ್ ನ ಭಾರಿ ಪ್ರತಿಭಟನಾ ಮೆರವಣಿಗೆಯಲ್ಲಿ ಸರ್ಕಾರ ತಮ್ಮ ನಿಲುವು ಪ್ರಕಟಿಸದಿದ್ದಲ್ಲಿ ತಾಲೂಕು ಕಛೇರಿಗೆ ಪಾದಯಾತ್ರೆ, ವಿಧಾನಸೌಧಕ್ಕೆ ಬೈಕ್ ರಾಲಿ ಹಾಗೂ ಇಲ್ಲಿನ ನಾಡ ಕಛೇರಿ ಮುಂದೆ ಆಹೋರಾತ್ರಿ ಧರಣಿ ನಡೆಸುವ ಮೂಲಕ ಸರ್ಕಾರದ ಮೇಲೆ ಮತ್ತೊಷ್ಟು ಒತ್ತಡ ತರಲು ತೀರ್ಮಾನಿಸಲಾಯಿತು.
ಚಿಕ್ಕನಾಯಕನಹಳ್ಳಿ ತಾಲೂಕಿಗೆ ಯಾವುದೇ ನೀರಾವರಿ ಸೌಲಭ್ಯ ಇಲ್ಲದೆ ಮಳೆ ಹಾಗೂ ಅಂತರ್ಜಲ ನಂಬಿ ಜೀವನ ಸಾಗಿಸುವ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಿಲ್ಲ, ಅಂತರ್ಜಲವೂ ಸಹ ಕುಸಿತವಾಗಿ ಸಾವಿರ ಅಡಿ ಕೊರೆದರೂ ನೀರು ಸಿಗದಂತಾಗಿದೆ ಇಲ್ಲಿನ ಜನಜೀವನದ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಈ ಭಾಗಕ್ಕೆ ನದಿ ಮೂಲದ ನೀರು ಹರಿಯುವ ಹೊರತು ಉಳಿಗಾಲವಿಲ್ಲ ಎಂದು ನಿರ್ಧರಿಸಿ ಹಲವು ವರ್ಷಗಳಿಂದ ಹೋರಾಟ ಮಾಡಲಾಗಿದ್ದರೂ ಹಿಂದಿನ ಸರ್ಕಾರಗಳು ಈ ಭಾಗವನ್ನು ನಿರ್ಲಕ್ಷ್ಯವಹಿಸಿದ್ದವು.
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೋರಾಟವನ್ನು ತೀವ್ರ ಗೊಳಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ, ವಿವಿಧ ಪಕ್ಷಗಳ ಹಾಗೂ ರಾಜಕಾಣಿಗಳ ನಾಯಕತ್ವದಲ್ಲಿ, ರೈತ ಸಂಘ ಹಾಗೂ ಮೂವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಹೀಗೆ ಅನೇಕ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ ಹಾಗೂ ಪಟ್ಟಣ ಬಂದ್ ಸಹ ಮಾಡಲಾಗಿತ್ತಲ್ಲದೆ ಇಲ್ಲಿನ ನಾಡಕಛೇರಿ ಬಳಿ ಬರೋಬರಿ ನಲ್ವತಕ್ಕೂ ಹೆಚ್ಚು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸುವ ಮೂಲಕ ಸಕರ್ಾರದ ಮೇಲೆ ಮತ್ತೊಷ್ಟು ಒತ್ತಡ ತರಲಾಯಿತು.
ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವರೆ ಖುದ್ದು ಧರಣಿ ಸ್ಥಳಕ್ಕೆ ಆಗಮಿಸಿ ನೀರು ಹರಿಸುವ ಭರವಸೆ ನೀಡಿದರಲ್ಲದೆ ಧರಣಿ ನಿರತ ಮುಖ್ಯಸ್ಥರನ್ನು ವಿಧಾನಸೌಧಕ್ಕೆ ಆಹ್ವಾನಿಸಿ ನೀರಾವರಿ ಸಚಿವ ಬಸವರಾಜ ಬೊಮ್ಮಯಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೋರನಕಣಿವೆ ಜಲಾಶಯಕ್ಕೆ ಹೇಮಾವತಿ ನೀರು ಹರಿಸುವ ಸಲುವಾಗಿ 3 ದಿಂಗಳ ಕಾಲಾವಕಾಶ ಕೋರಿ ಸವರ್ೆ ಕಾರ್ಯಕ್ಕೆ ಸ್ಥಳದಲ್ಲಿಯೇ ಆದೇಶ ನೀಡಿದರು.
ಆದರಂತೆ ಈಗಾಗಲೇ ಸರ್ವೆ ಕಾರ್ಯ ಮುಗಿದಿರುವುದು ಹೋರಾಟಕ್ಕೆ ಸಂದ ಜಯವಾಗಿದ್ದರೂ ಕೂಡ ಸಕರ್ಾರ ಪಡೆದಿದ್ದ 3 ತಿಂಗಳ ಕಾಲಾವಕಾಶ ಮೀರಿಹೋಗಿದೆ. ಆದರೂ ನೀರು ಹರಿಸುವ ಸಂಬಂಧ ಈ ಭಾಗಕ್ಕೆ ನಿಗಧಿ ಪಡಿಸಿದ ನೀರಿನ ಪ್ರಮಾಣ, ಯೋಜನ ವೆಚ್ಚ ಹಾಗೂ ಮಾದರಿಯನ್ನು ಘೋಷಿಸಿ ಕಾಮಕಾರಿಗೆ ಟೆಂಡರ್ ಕರೆಯದೆ ಮತ್ತೊಮ್ಮೆ ನಿರ್ಲಕ್ಷ್ಯ ಧೋರಣೆ ತಾಳಿರುವ ಪರಿಣಾಮ ಎಚ್ಚರಗೊಳಿಸುವ ಸಲುವಾಗಿ ಅನಿವಾರ್ಯವಾಗಿ ಹುಳಿಯಾರ್ ಬಂದ್ ಕರೆ ನೀಡಲಾಗಿದೆ ಎಂದು ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು.
ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತಿಶ್, ಜಿಲ್ಲೆಯ ಹೆಸರಾಂತ ಹೃದಯ ತಜ್ಞ ಹಾಗೂ ನೀರಾವರಿ ಹೋರಾಟಗಾರ ಡಾ.ಪರಮೇಶ್ವರಪ್ಪ, ರೈತ ಸಂಘದ ಕೆ.ಪಿ.ಮಲ್ಲೇಶ್, ಚಿಕ್ಕನಾಯಕನಹಳ್ಳಿ ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂರ್ತಿ, ವರ್ತಕರ ಸಂಘದ ನಟರಾಜ್, ಏಜೆಂಟರ ಸಂಘದ ಲೋಕೇಶ್, ಹುಳಿಯಾರು ಕರವೇಯ ರಂಗಸ್ವಾಮಿ, ಕೋಳಿ ಶ್ರೀನಿವಾಸ್, ವಿಪ್ರ ಸಂಘದ ವಿಶ್ವನಾಥ್, ಟಿಪ್ಪು ಸಂಘದ ಅಪ್ಸರ್, ಜಯಕನರ್ಾಟಕದ ಎಚ್.ಎನ್.ವೆಂಕಟೇಶ್, ಛಾಯಾಗ್ರಹಕರ ಸಂಘದ ಎ.ಡಿ.ತಂಡವಾಚಾರ್, ದುರ್ಗಾ ಪರಮೇಶ್ವರಿ ಸಂಘದ ಪೈಲ್ವಾನ್ ಜಯಣ್ಣ, ಜಯಲಕ್ಷ್ಮಮ್ಮ, ಬೈರಮ್ಮ, ಸಿದ್ರಾಮಕ್ಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.
ಈ ಸುದ್ಧಿಗೆ ಸಂಬಂಧಿಸಿದ ಪೋಟೊ ಕೂಡ ಇದೆ
ಫೋಟೊ ವಿವರ : ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯಕ್ಕೆ ನದಿ ಮೂಲದ ನೀರು ಹರಿಸಲು ಒತ್ತಾಯಿಸಿ ಹುಳಿಯಾರ್ ಬಂದ್ಗೆ ಕರೆ ನೀಡುವ ಸಲುವಾಗಿ ಪ್ರತಿಕಾಗೋಷ್ಠಿ ನಡೆಸಿದರು. ಕೆಂಕೆರೆ ಸತಿಶ್, ಡಾ.ಪರಮೇಶ್ವರಪ್ಪ, ಸಿ.ಡಿ.ಚಂದ್ರಶೇಖರ್, ಸಿ.ಟಿ.ಗುರುಮೂರ್ತಿ, ನಟರಾಜ್, ಲೋಕೇಶ್ ಮತ್ತಿತರರಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ