ವಿಷಯಕ್ಕೆ ಹೋಗಿ

ನಮ್ಮೂರು ಶಾಲೆಯಲ್ಲಿ ನಡೆದ ಗಾಯನ ಕಾರ್ಯಕ್ರಮ

ಹಾಡೋದ ಕಲಿತರು ಆಡೋ ಹಳ್ಳಿ ಮಕ್ಕಳು
ಈ ಲೇಖನ ಬರೆದಿದ್ದು ನನ್ನ ಸ್ನೇಹಿತ : ಎಚ್.ಬಿ.ಕಿರಣ್ಕುಮಾರ್ ಶಾಲಾ ಮಕ್ಕಳು ಒಟ್ಟಾಗಿ ಹಾಡಿದ್ದು ಇದನ್ನು ಬರೆಯಲು ಸ್ಪೂಥರ್ಿ
ಹಳ್ಳಿ ಮಕ್ಕಳಲ್ಲಿ ಹಾಡುಗಾರಿಕೆಗೆ ಹೇಳಿ ಮಾಡಿಸಿದ ಕಂಠ ಇರುತ್ತದೆ. ಆದರೆ ಅವಶ್ಯಕ ತರಬೇತಿ, ಸೂಕ್ತ ವೇದಿಕೆಯ ಕೊರತೆಯಿಂದ ಪ್ರತಿಭೆ ಸ್ಪೋಟಗೊಂಡು ಪ್ರಖ್ಯಾತಿಯಾಗದೆ ತನ್ನಲ್ಲಿಯೇ ಹುದುಗಿ ಹೋಗುತ್ತವೆ. ಕೆಲವರು ಪಟ್ಟಣಕ್ಕೆ ತೆರಳಿ ಸಮರ್ಪಕ ತರಬೇತಿ ಪಡೆದು ಸಾಧನೆ ಮಾಡಿದವರೂ ಇದ್ದಾರೆ. ಆದರೂ ದೈವದತ್ತವಾಗಿ ಬಂದ ಕಂಠ ಮಾಧುರ್ಯವನ್ನು ಸಮರ್ಪಕವಾಗಿ ಬಳಕೆಯಾಗದೆ ಕೇವಲ 'ಬಾತ್ರೂಂ ಸಿಂಗರ್' ಆಗಿಯೆ ಕೊನೆಯವರಿಗೂ ಉಳಿಯುವವರ ಸಂಖ್ಯೆಯೇ ಹೆಚ್ಚು. ಹಳ್ಳಿಗಳಲ್ಲಿ ಪ್ರೋತ್ಸಾಹ ಹಾಗೂ ತರಬೇತಿಯ ಕೊರತೆಯಿಂದ ಅಪ್ರತಿಮ ಪ್ರತಿಭೆಗಳು ಬೆಳಕಿಗೆ ಬರುವ ಮುಂಚೆಯೆ ಕಮರಿ ಹೋಗುತ್ತಿರುವುದನ್ನು ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದಶರ್ಿ ಶ್ರೀಮತಿ ಕವಿತಾಕಿರಣ್ ಅವರು ಮನಗಂಡಿರುವಂತೆ ಕಾಣುತ್ತದೆ. ಹಾಗಾಗಿಯೇ ತಮ್ಮ ಶಾಲೆಗೆ ಸೇರಿದ ಮಕ್ಕಳು ಕೇವಲ ಪಠ್ಯದ ಅಭ್ಯಾಸಕ್ಕೆ ಮಾತ್ರ ಸೀಮಿತಗೊಳಿಸದೆ 'ಇಂಗೀಷ್ ಸ್ಪೀಕಿಂಗ್' 'ಕ್ಲೇ ವಕ್ಸ್' 'ರಂಗಗೀತೆ' 'ಪೈಂಟಿಂಗ್' ಹೀಗೆ ಹತ್ತು ಹಲವು ಪಠ್ಯೇತರ ಚಟುವಟಿಕೆಗಳ ಕಲಿಕಾ ವೇದಿಕೆ ನಿಮರ್ಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಮಕ್ಕಳು ವಿದ್ಯಾಥರ್ಿ ಜೀವನವನ್ನು ಅರ್ಥಪೂರ್ಣವಾಗಿ ಸರ್ವತೋಮುಖ ಬೆಳವಣಿಗೆಯೊಂದಿಗೆ ಪೂರೈಸಿ ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಲಿ ಎಂಬ ಆಶಯ, ಕಾಳಜಿ ಅಡಗಿದೆ. ಇದರ ಮುಂದುವರಿದ ಭಾಗವಾಗಿ ಸುಗಮ ಸಂಗೀತದ ಪ್ರಕಾರಗಳನ್ನು ರಾಜ್ಯದಾದ್ಯಂತ ಹರಡಿ ಜನಮಾನಸಕ್ಕೆ ಮುಟ್ಟಿಸಲು ಪಣತೊಟ್ಟು ಈಗಾಗಲೇ ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಭದ್ರಾವತಿ, ಶಿವಮೊಗ್ಗ, ಮಂಡ್ಯ, ದಾವಣಗೆರೆ, ಶೃಂಗೇರಿ, ಕನಕಪುರ ಮುಂತಾದ ಜಿಲ್ಲಾ ಕೇಂದ್ರದಲ್ಲಿನ 1800 ಕ್ಕೂ ಹೆಚ್ಚು ಮಕ್ಕಳಿಗೆ ಭಾವಗೀತೆಯ ತರಬೇತಿ ನೀಡುತ್ತಿರುವ ಬೆಂಗಳೂರಿನ ಸ್ವರಸುರಭಿ ಸಂಸ್ಥೆಯ ನುರಿತ ಹಾಡುಗಾರರನ್ನು ಇದೇ ಪ್ರಪ್ರಥಮ ಎಂಬಂತೆ ಗ್ರಾಮೀಣ ಪ್ರದೇಶಕ್ಕೆ ಕರೆಸಿ ಇಲ್ಲಿನ ಆಡೋ ಮಕ್ಕಳಿಗೆ ಹಾಡುವುದ ಕಲಿಸುವ ಸಲುವಾಗಿ ಇತ್ತೀಚೆಗಷ್ಟೆ ಭಾವಗೀತೆಗಳ ಕಲಿಕಾ ಶಿಬಿರ ಆಯೋಜಿಸುವ ಮೂಲಕ ದಿಟ್ಟ ಹೆಜ್ಜೆಹಿಟ್ಟರು. ತಮ್ಮ ಶಾಲೆಯ ಮಕ್ಕಳಲ್ಲದೆ ಅಕ್ಕ-ಪಕ್ಕದ ಊರುಗಳ ಮಕ್ಕಳಿಗೂ ಶಿಬಿರದಲ್ಲಿ ಪಾಲ್ಗೊಳ್ಳುವ ಮುಕ್ತ ಅವಕಾಶ ಕಲ್ಪಿಸಿ, ಮ್ಯೂಸಿಕ್ ಟ್ರ್ಯಾಕ್ ನೊಂದಿಗೆ ಶಿವರುದ್ರಪ್ಪನವರ 'ಜೋಕಾಲಿ ಆಡೋಣ ಬನ್ನಿರೋ' ಅಡಿಗರ 'ಹಣತೆಗಳಿವು ಹಣತೆಗಳಿವು' ಲಕ್ಷ್ಮೀನಾರಾಯಣ ಭಟ್ಟರ 'ಬಾ ಬಾ ಓ ಬೆಳಕೆ' ಹೀಗೆ ಹತ್ತಾರು ಹೆಸರಾಂತ ಕವಿವರ್ಯರ ಭಾವಗೀತೆಗಳನ್ನು ಆಕಾಶವಾಣಿ ಸಂಯೋಜಕ, ಗಾಯಕ, ಸುಗಮ ಸಂಗೀತ ಇತಿಹಾಸದಲ್ಲೇ ಪ್ರಪ್ರಥಮವಾಗಿ 100 ಭಾವಗೀತೆಗಳ ಟ್ರ್ಯಾಕ್ ಹೊರತಂದ ಹೆಗ್ಗಳಿಕೆ ವೊಂದಿರುವ ಉಪಾಸನಾ ಮೋಹನ್ ಅವರು ಇಲ್ಲಿನ 100 ಕ್ಕೂ ಹೆಚ್ಚು ಹಳ್ಳಿ ಮಕ್ಕಳಿಗೆ ಲಯಬದ್ದವಾಗಿಯೂ, ಸ್ವರಬದ್ದವಾಗಿಯೂ, ಶೃತಿಬದ್ದವಾಗಿಯೂ ಹಾಡುವುದ ಕಲಿಸಿ ಕೊಟ್ಟರು. ಬೆರಳೆಣಿಕೆ ದಿನಗಳಷ್ಟು ಈ ಕಲಿಕಾ ಯಾತ್ರೆ ನಡೆದಿದ್ದರೂ ಕೂಡ ಎಂತಹವರಿಗೂ ಆಶ್ಚರ್ಯವಾಗಬಹುದು ಮುಕ್ತಾಯ ಸಮಾರಂಭದಲ್ಲಿ ಶಿಬಿರಾಥರ್ಿಗಳೇ ಸಂಗೀತ ಸಂಜೆಯನ್ನು ಯಾವುದೇ ಲೋಪ ಹಾಗೂ ಕಳಂಕ ಬಾರದಿದ್ದ ರೀತಿ ನಡೆಸಿಕೊಟ್ಟರು. ಎಂದೂ ವೇದಿಕೆಯಲ್ಲಿ ಮಾತಾಡುವುದು, ಹಾಡುವುದು ಹಾಗಿರಲಿ ನಿಲ್ಲೂವುದಕ್ಕೂ ಹೆದರುವ ಮಕ್ಕಳು ಅಂದು ಸುಶ್ರ್ಯಾವವಾಗಿ, ಸುಲಲಿತವಾಗಿ, ನಿರ್ಭಯವಾಗಿ ಹಾಡಿ ಪೋಷಕರು, ಶಿಕ್ಷಕರು, ಸಾರ್ವಜನಿಕರನ್ನು ಬೆಕ್ಕಸ ಬೆರಗಾಗುವಂತೆ ಮಾಡಿ ಚಪ್ಪಾಳೆ, ಪ್ರಶಂಸೆಯನ್ನು ಪಡೆದುಕೊಂಡರು. ಹಾಗಂದ ಮಾತ್ರಕ್ಕೆ ಈಗಾಗಲೇ ಇವರೆಲ್ಲ ಸ್ಟಾರ್ ಸಿಂಗರ್ಸ್ ಆಗಿ ಹೊರಹೊಮ್ಮಿದರು ಎಂದರ್ಥವಲ್ಲ. ಸಿನಿಮಾ ಗೀತೆಗಳ ಕಡೆ ಆಕಷರ್ಿತರಾಗಿರುವವರನ್ನು ಸುಗಮ ಸಂಗೀತದೆಡೆ ಆಸಕ್ತಿ, ಕುತೂಹಲ ಕೆರಳಿಸುವ ಹಾಗೂ ಇರುವ ಕಂಠವನ್ನು ಟ್ಯೂನಪ್ ಮಾಡಿದಾದಲ್ಲಿ ತಾವೂ ಯಶಸ್ವಿಯಾಗಿ ಹಾಡಬಲ್ಲೆವು ಎಂಬ ಛಲ ಕುಡಿಯೊಡೆಸುವ ಕಿರು ಪ್ರಯತ್ನ ಇದಾಗಿದೆ. ಕಠಿಣ ಅಭ್ಯಾಸ, ತಜ್ಞರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ನಿರಂತರವಾಗಿದ್ದರೆ ಸುಗಮ ಸಂಗೀತ ಕ್ಷೇತಕ್ಕ್ರೆ ಸಿ.ಅಶ್ವಥ್, ರಾಜು ಅನಂತಸ್ವಾಮಿ ಅವರ ಅಗಲಿಕೆಯಿಂದಾಗಿರುವ ನಷ್ಟವನ್ನು ಸತ್ಯವಾಗಲೂ ತುಂಬಿಕೊಡಬಲ್ಲರು. ಸಂಬಂಧಿಸಿದ ಪೋಟೊಗಳು ಸಹ ಇದೆೆ1 : ಭಾವಗೀತೆಯ ಕಲಿಕಾ ಯತ್ರೆಯ ಉದ್ಘಾಟನೆ2 :ತರಬೇತಿಯಲ್ಲಿ ತೊಡಗಿರುವ ವಿದ್ಯಾಥರ್ಿಗಳು3 : ಉಪಾಸನ ಮೋಹನ್ ತರಬೇತಿ ನೀಡುತ್ತಿರುವುದು.4 : ಮುಕ್ತಾಯ ಸಮಾರಂಭದಲ್ಲಿ ಶಿಬಿರಾಥರ್ಿಗಳು ಹಾಡುತ್ತಿರುವುದು 5 : ಸ್ವರಸುರಭಿ ಅಧ್ಯಕ್ಷ ಶ್ರೀಧರ್ ಅವರನ್ನು ಶ್ರೀಮತಿ ಕವಿತಾ ಅವರು ಸನ್ಮಾನಿಸುತ್ತಿರುವುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...