ವಿಷಯಕ್ಕೆ ಹೋಗಿ











ರೈತರು ನಡೆಸಿದ ಬೆಸ್ಕಾಂ ವಿರುದ್ಧ ಪತ್ರಿಭಟನೆಗೆ ಬೆಂಬಲ ಸೂಚಿಸಿ ತಿಮ್ಮನಹಳ್ಳಿಯಲ್ಲಿ ಅವಮಾನಕ್ಕೀಡಾದ ಶಾಸಕ ಸಿ.ಬಿ.ಸುರೇಶ್ ಬಾಬು!
------------------------------------------------------------------------------------

@ ಅವಾಚ್ಯ ಶಬ್ಧಗಳ ಬಳಕೆ @ ಬೆಸ್ಕಾಂ ಕಾಂಪೌಂಡಿನಲ್ಲಿ ದಿಗ್ಬಂಧನ @ ಕಾರಿಗೆ ಅಡ್ಡ ಮಲಗಿ ಅಸಭ್ಯ ವರ್ತನೆ
ಬೆಸ್ಕಾಂನ ಸೆಕ್ಷನ್ ಆಫೀಸರ್ ನ ಅನುಚಿತ ವರ್ತನೆ, ಆತನ ಲಂಚಗುಳಿತನ ಹಾಗೂ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಡೆ ಘಳಿಗೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶಾಸಕ ಸಿ.ಬಿ.ಸುರೇಶ್ ಬಾಭು ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ಧಗಳ ಬಳಕೆ ಹಾಗೂ ಕಾರಿಗೆ ಅಡ್ಡ ಮಲಗಿ ಅಸಭ್ಯ ರೀತಿಯಿಂದ ವರ್ತಿಸಿ ಅವಮಾನಿಸಿದ ಹೀನ ಘಟನೆ ಹುಳಿಯರು ಸಮೀಪದ ತಿಮ್ಮನಹಳ್ಳಿಯಲ್ಲಿ ಭಾನುವಾರ ಜರುಗಿದೆ.

ತಿಮ್ಮನಹಳ್ಳಿಯ ಬೆಸ್ಕಾಂ ಕಛೇರಿಯ ಸೆಕ್ಷನ್ ಆಫೀಸರ್ ಬಸವರಾಜು ಅವರು ಹಗಲಿನ ವೇಳೆಯಲ್ಲಿಯೇ ಮದ್ಯ ಸೇವಿಸಿ ಕೆಲಸ ನಿರ್ವಯಿಸುತ್ತಿದ್ದು ಗ್ರಾಹಕರ ಜೊತೆ ಅಶ್ಲೀಲ ಪದ ಬಳಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ಟಿ.ಸಿ ಅಳವಡಿಸಲು ಸಾವಿರಾರು ರು. ಹಣ ಪಡೆಯುತ್ತಿದ್ದಾರೆ ಹಾಗೂ ಸರ್ಕಾರ ನಿಗಧಿ ಮಾಡಿರುವ ಅನುಸಾರ 6 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯತ್ ನೀಡುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಭಾನುವಾರ ಭಾರಿ ಪ್ರತಿಭಟನೆ ಏರ್ಪಡಿಸಲಾಗಿತ್ತು.
ಚಿ.ನಾ.ಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ವಿಷಯ ತಿಳಿದು ತಮ್ಮ ಬೆಂಬಲಿಗರೊಂದಿಗೆ ಗ್ರಾಮಕ್ಕೆ ಆಗಮಿಸಿದರು. ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಪರೂಪಕ್ಕೆ ಹಸಿರು ಶಾಲು ಹೊದ್ದು ತಿಮ್ಮನಹಳ್ಳಿಯಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೆಸ್ಕಾಂ ಪವರ್ ಸ್ಟೇಷನ್ಗೆ ಪ್ರತಿಭಟನಕಾರರೊಂದಿಗೆ ಕಾಲ್ನೆಡಿಗೆಯಲ್ಲಿ ಆಗಮಿಸಿ ರಸ್ತೆಯಲ್ಲಿ ಸಾಮಾನ್ಯರಂತೆ ಧರಣಿ ಕುಳಿತರು. ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಸರ್ಕಾರದ ವಿದ್ಯುತ್ ನೀತಿಯ ವಿರುದ್ಧ ಹರಿಹಾಯ್ದರಲ್ಲದೆ ನಾಲಾಯಕ್ ಎಸ್ಒ ಬಸವರಾಜು ಅವರನ್ನು ವರ್ಗಾಯಿಸುವಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಯಾಗಿ ಸ್ಥಳಕ್ಕೆ ಆಗಮಿಸಿದ್ದ ಬೆಸ್ಕಾಂನ ಎಸ್ಇ ಚಂದ್ರಶೇಖರ್ ಅವರು ಎಸ್ಒ ಬಸವರಾಜು ಅವರನ್ನು ಇಂದೇ ವರ್ಗಾಯಿಸುವುದಾಗಿಯೂ, ರಾತ್ರಿ 3 ಗಂಟೆ ಹಾಗೂ ಹಗಲು 3 ಗಂಟೆ ತ್ರೀಫೇಸ್ ವಿದ್ಯುತ್ ನೀಡುವುದಾಗಿಯೂ ಸುಟ್ಟಿರುವ ಟಿಸಿಗಳನ್ನು ಕೂಡಲೇ ಬದಲಾಯಿಸುವುದಾಗಿಯೂ ಭರವಸೆ ನೀಡಿದರೂ ತೃಪ್ತರಾಗದ ಪ್ರತಿಭಟನಾಕಾರರು ಅಸಭ್ಯವಾಗಿ ವರ್ತಿಸುತ್ತಿರುವ ಎಸ್ಒ ಬಸವರಾಜು ಅವರನ್ನು ಸ್ಥಳಕ್ಕೆ ಕರೆಸಿಯೇ ತೀರಬೇಕು ಎಂದು ಬಿಗಿ ಪಟ್ಟು ಹಿಡಿದರು.

ಪಟ್ಟುಹಿಡಿದ ಪ್ರತಿಭಟನಾಕಾರರನ್ನು ಶಾಸಕರು ಹಾಗೂ ರೈತ ಮುಖಂಡರು ಎಸ್ಒ ವರ್ಗಾವಣೆಯಾಗಿರುವುದು ತಮ್ಮ ಹೋರಾಟಕ್ಕೆ ಸಂದ ಜಯ ಈ ರೀತಿ ಪಟ್ಟು ಹಿಡಿಯುವುದು ತರವಲ್ಲ ಎಂದು ಸಮಾಧಾನ ಪಡಿಸಿ ಕರೆಂಟ್ ಚಾರ್ಜ್ ಮಾಡಿಸಲು ಕಛೇರಿಗೆ ತೆರಳಿದರು. ಅವರು ಕರೆಂಟ್ ಚಾರ್ಜ್ ಮಾಡಿಸಿ ಹಿಂದಿರುಗುವ ವೇಳೆಗಾಗಲೇ ಹೋರಾಟಗಾರರ ಹೋರಾಟದ ಸ್ವರೂಪ ಬದಲಾಗಿ ತಮ್ಮ ಹೋರಾಟದ ಬೆಂಬಲಕ್ಕೆ ನಿಂತ ಶಾಸಕರ ವಿರುದ್ಧವೇ ತಿರುಗಿಬಿದ್ದರು.

ಪವರ್ ಸ್ಟೇಷನ್ಗೆ ಸುತ್ತುವರಿದು ಶಾಸಕರನ್ನು ಅಲ್ಲಿಂದ ಹೊರ ಬರದಂತೆ ಗೇಟ್ ಮುಂದೆ ಜಮಾಯಿಸಿ ಒಬ್ಬ ಸೆಕ್ಷನ್ ಆಫೀಸರ್ನನ್ನು ಸ್ಥಳಕ್ಕೆ ಕರೆಯಿಸಲು ಸಾಧ್ಯವಾಗದ ಅಸಮರ್ಥ ಶಾಸಕ ಎಂದು ದಿಕ್ಕಾರ ಕೂಗಿದರು. ಪೊಲೀಸರು ಹರಸಾಹಸ ಪಟ್ಟು ಶಾಸಕರನ್ನು ಬಂಧಮುಕ್ತರನ್ನಾಗಿಸಿದರಾದೂ ಶಾಸಕರು ಅಧಿಕಾರಿಗಳಿಗೆ ತೊಂದರೆಯಾಗಬಹುದೆಂದು ಮನಗಂಡು ತಮ್ಮೊಂದಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು.

ಇದರಿಂದ ರೊಚ್ಚಿಗೆದ್ದ ಜನತೆ ಶಾಸಕರು ರೈತರ ಪರವಿಲ್ಲದೆ ಅಧಿಕಾರಿಗಳ ಪರವಿದ್ದಾರೆ ಎಂದು ಆರೋಪಿಸಿ ಅವಾಚ್ಯ ಶಬ್ಧಗಳಿಂದ ಮೂದಲಿಸಿದರು. ಪದೇ ಪದೇ ಶಾಸಕರ ತಾಳ್ಮೆ ಕೆಣಕುವ ರೀತಿ ಬೈಗುಳಗಳ ಬಾಣ ಬೀಸುತ್ತಿದ್ದರು. ಇದರಿಂದ ಸೌಮ್ಯ ಸ್ವಭಾವಕ್ಕೆ ಹೆಸರಾದ ಎಂದೂ ತಾಳ್ಮೆ ಕಳೆದುಕೊಳ್ಳದ ಶಾಸಕರು ತಮ್ಮ ಮೇಲೆ ಟೀಕೆ ಮಾಡಿದರ ಮೇಲೆ ವಾಗ್ಯುದ್ಧಕ್ಕೆ ನಿಂತರು. ಸತತ ಮೂರು ಭಾರಿ ಕಾರಿನೊಳಗೆ ಕುಳಿತು ಇಳಿದು ಮಾತಿನ ಚಕಮಕಿ ನಡೆಸಿದರು.

ನಂತರ ಜನರ ಈ ವರ್ತನೆಯಿಂದ ಬೇಸತ್ತು ಅಲ್ಲಿಂದ ತೆರಳಲು ಪ್ರಯತ್ನಿಸಿದರಾದರೂ ಕೆಲವರು ಅವರ ಕಾರಿಗೆ ಅಡ್ಡಲಾಗಿ ಮಲಗಿ, ಕಾರಿಗೆ ಘೇರಾವ್ ಮಾಡಿ ಅಡ್ಡಿ ಪಡಿಸಿದರು. ಸರ್ಕಲ್ ಇನ್ಸ್ಫೆಕ್ಟರ್ ರವಿಪ್ರಸಾದ್ ಅವರ ನೇತೃತ್ವ ಪೊಲೀಸ್ ಸಿಬ್ಬಂಧಿ ಕಾರನ್ನು ಸುತ್ತುವರಿದು ಅಡ್ಡಲಾಗಿ ಮಲಗಿದ್ದವರನ್ನು ಪಕ್ಕಕ್ಕೆ ಎಳೆದು ಶಾಸಕರ ಕಾರಿನ ದಾರಿ ಸುಗಮವಾಗಿಸಿದರು.
ಈ ಸುದ್ಧಿಗೆ ಸಂಬಂಧಿಸಿದ ಪೋಟೊಗಳು ಹೀಗಿದೆ
1 : ಶಾಸಕ ಸಿಬಿಎಸ್ ಪ್ರತಿಭಟನಾಕಾರರೊಂದಿಗೆ ಕಾಲ್ನೆಡಿಗೆಯಲ್ಲಿ ಆಗಮಿಸುತ್ತಿರುವುದು.
2 & 2ಎ: ಹಸಿರು ಶಾಲು ಹೊದ್ದು ಭಾಷಣ ಮಾಡುತ್ತಿರುವ ಶಾಸಕ ಸಿಬಿಎಸ್
3: ಶಾಸಕರು ತಮ್ಮನ್ನು ನಿಂಧಿಸಿದವರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು.
4 : ಕಾರಿಗೆ ಅಡ್ಡಲಾಗಿ ಮಲಗಿದವರನ್ನು ಪೊಲೀಸರು ಎತ್ತುತ್ತಿರುವುದು
5 : ಪೊಲೀಸರ ಸರ್ಪಗಾವಲಿನಲ್ಲಿ ನಿರ್ಗಮಿಸುತ್ತಿರುವ ಶಾಸಕರು.
6 : ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುತ್ತಿರುವುದು

ಕನ್ನದಪ್ರಭ ಪತ್ರಿಕೆಯಲ್ಲಿ ದಿನಾಂಕ 15.02.2010 ಪ್ರಕಟವಾಗಿರುವುದು ಕಳಗಿನ ಕೊಂಡಿಯಲ್ಲಿ ವೀಕ್ಷಣೆ ಮಾಡಬಹುದು.
http://www.kannadaprabha.com/NewsItems.asp?ID=KPD20100215022708&Title=District+News&lTitle=%C1%DBd%C0+%C8%DB%7D%E6%25&Topic=0&ndate=2/15/2010&dName=%7D%DA%DF%C8%DA%DFO%DA%E0%C1%DA%DF&Dist=4



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.