ವಿಷಯಕ್ಕೆ ಹೋಗಿ

ಕುಮಾರವ್ಯಾಸನ ನಾಡಲ್ಲಿ ಆರಂಭವಾಯ್ತು ಕನ್ನಡಾಂಬೆಯ ಉಘೇ.... ಉಘೇ....

ಕುಮಾರವ್ಯಾಸನ ನಾಡಲ್ಲಿ ಆರಂಭವಾಯ್ತು ಕನ್ನಡಾಂಬೆಯ ಉಘೇ.... ಉಘೇ....
ಗದಗ, 19- ಜಾತ್ರೆ ಎನ್ನಿ. ಪರಿಷೆ ಎನ್ನಿ. ತೇರು ಎನ್ನಿ. ರಥೋತ್ಸವ ಎನ್ನಿ. ಹಬ್ಬ ಎನ್ನಿ. ಅವರವರ ಭಾವಕ್ಕೆ ತಕ್ಕಂತೆ ಏನೇ ಹೆಸರಿಟ್ಟು ಕರೆಯಬಹುದು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕನ್ನಡ ತಾಯಿಯ ಉಘೇ.... ಉಘೇ....
ಅಲ್ಲಿ ಉತ್ತರದ ಆತಿಥೇಯರಿದ್ದರು. ದಕ್ಷಿಣದ ಜನರಿದ್ದರು. ಪಶ್ಚಿಮದ ನಾಗರಿಕರಿದ್ದರು. ಪೂರ್ವದ ಮಂದಿಯಿದ್ದರು. ಎಲ್ಲರೂ ಕನ್ನಡಾಂಬೆಯ ಮಡಿಲ ಮಕ್ಕಳಾಗಿದ್ದರು. ಎಲ್ಲರಿಗೂ ಇದ್ದುದು ಕನ್ನಡ ನುಡಿನಮನದ ತುಡಿತ. ಕನ್ನಡಕ್ಕಾಗಿ ಕೊರಳೆತ್ತು ಎನ್ನುವ ತವಕ.
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಹಾಡಿದ ಕುಮಾರವ್ಯಾಸನ ನಾಡಿನವರು ನಾವು ಎಂಬ ಹೆಮ್ಮೆ ಅಲ್ಲಿ ನೆರೆದಿದ್ದ ಆತಿಥೇಯರ ಕಣ್ಣುಗಳಲ್ಲಿ ತುಂಬಿತುಳುಕುತ್ತಿತ್ತು.
ಪೂರ್ಣಕುಂಭದ ಮೆರವಣಿಗೆ ಬಿರುಬಿಸಿಲಿನಲ್ಲಿ ನಡೆದರೂ, ಬೆವರು ದಳದಳನೆ ಇಳಿಯುತ್ತಿದ್ದರೂ, ಉತ್ಸಾಹ ಮಾತ್ರ ಕೊಂಚವೂ ಕುಗ್ಗದೇ ಇದ್ದುದು ಇಲ್ಲಿನ ಕನ್ನಡಿಗರೆಷ್ಟು ಉತ್ಸಾಹದ ಬುಗ್ಗೆಗಳು ಎಂಬುದನ್ನು ತೆರೆದಿಡುವಂತಿತ್ತು.
ಕನ್ನಡಾಂಬೆಯ ಮಕ್ಕಳ ಉತ್ಸಾಹಕ್ಕೆ ನೀನೇಕೆ ಕುಂದು ತರುತ್ತಿರುವೇ ಎಂಬಂತೆ ಸೂರ್ಯದೇವನ ಪ್ರಖರತೆಗೆ ಛತ್ರಿ ಹಿಡಿದ ಹಾಗೆ ಮೇಘರಾಜ ಆಗಾಗ ಮೋಡಗಳ ಮೆರವಣಿಗೆಯನ್ನು ಹೊರಡಿಸುತ್ತಿದ್ದ.
ನುಡಿ ಹಬ್ಬದ ಕೇಂದ್ರಬಿಂದು ನಾಡೋಜ ಡಾ. ಗೀತಾ ನಾಗಭೂಷಣ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಪೂರ್ಣ ಕುಂಭ ಮೆರವಣೆಗೆಯಲ್ಲಿ ಕರೆತರಲಾಯಿತು. ಸಮ್ಮೇಳನದ ಪ್ರಧಾನ ವೇದಿಕೆಗೆ ಗಣ್ಯರು ಆಗಮಿಸುತ್ತಿದ್ದಂತೆಯೇ ಸಭಾಂಗಣದಲ್ಲಿ ಕ್ಷಣಕಾಲ ಮಿಂಚಿನ ಸಂಚಾರ. ಕಾರ್ಯಕ್ರಮದ ಆರಂಭಕ್ಕೆ ಮುಂಡರಗಿ ತಾಲೂಕಿನ ನವೋದಯ ಶಾಲೆಯ ಮಕ್ಕಳು ವೇದಿಕೆಯಲ್ಲಿ ಘೇರಾಯಿಸಿದರು. 76ನೇ ಸಮ್ಮೇಳನದ ದ್ಯೋತಕವೆಂಬಂತೆ 76 ಮಕ್ಕಳು ಏಕಧ್ವನಿಯಲ್ಲಿ ನಾಡಗೀತೆ ಹಾಡಿದಾಗ ಸಭಾಂಗಣದಲ್ಲಿ ನೆರೆದ ಶ್ರೋತೃಗಳೆಲ್ಲರಲ್ಲಿ ರೋಮಾಂಚನ.
ಸಮ್ಮೇಳನದ ಸವರ್ಾಧ್ಯಕ್ಷೆ ಡಾ. ಗೀತಾ ನಾಗಭೂಷಣ ಲಿಖಿತ ಭಾಷಣವನ್ನು ಓದಿದರೂ ಅಲ್ಲಲ್ಲಿ ತಮ್ಮ ಮನದಾಳದ ಮಾತು ಆಡುವುದನ್ನು ಮಾತ್ರ ಮರೆಯಲಿಲ್ಲ. ಅವರು ತಮ್ಮನ್ನು ತಾವು ತವರಿನ ಮಗಳೆಂದು ಕರೆದುಕೊಂಡರು. ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದನ್ನು, ಬಿರುಬಿಸಿಲ ನಾಡಿನಿಂದ ಬಿಸಿಲ ನಾಡಿಗೆ ಪ್ರವೇಶಿಸುವ ಮಾರ್ಗದಲ್ಲಿ ದಾರಿಯ ಉದ್ದಕ್ಕೂ ಜನತೆ ನೀಡಿದ ಸ್ವಾಗತವನ್ನು, ತೋರಿದ ಅಭಿಮಾನವನ್ನು ಪ್ರಾಂಜಲ ಮನಸ್ಸಿನಿಂದ ತೆರೆದಿಟ್ಟರು.
ನನಗೆ ಮೊದಲ ಪ್ರಶಸ್ತಿ ಸಿಕ್ಕ ನೆಲ ಗದಗ. ಇಲ್ಲಿ ಭಾರತ ಕಥಾ ಮಂಜರಿ ರಚಿಸಿದ ನಾರಣಪ್ಪ ಓಡಾಡಿದ್ದಾನೆ. ಇಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ಸಂಚರಿಸಿದ್ದಾಳೆ. ಅಂತಹ ನೆಲದಲ್ಲಿ ಓರ್ವ ಸ್ತ್ರೀಯಾಗಿ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಗೌರವ ಸಿಕ್ಕಿರುವುದು ನನ್ನ ಸುಕೃತ ಎಂದು ಎದೆತುಂಬಿ ಹೇಳಿದರು.
ಈಗ ದೊರೆಯುತ್ತಿರುವುದು ಎರಡನೇ ಗೌರವ. ಮೂರಕ್ಕೆ ಮುಕ್ತಿ ಎಂಬುದು ಆಡುನುಡಿ. ಇಲ್ಲಿನ ನೆಲದಲ್ಲಿಯೇ ನನಗೆ ಮೂರನೇ ಗೌರವವೂ ಸಿಕ್ಕುವ ಭರವಸೆ ಇದೆ ಎಂದು ಹೇಳುವಾಗ ತವರಿನಲ್ಲಿ ಸತ್ಕರಿಸಿಕೊಳ್ಳುವುದರ ಹೆಮ್ಮೆಯ ಭಾವ ಅವರಲ್ಲಿ ತುಂಬಿತುಳುಕುತ್ತಿತ್ತು.
ತಾವು ಬರೆದಿದ್ದೆಲ್ಲ ಸಾಮಾನ್ಯರ ಬದುಕಿಗೆ ಸಂಬಂಧಿಸಿದ್ದನ್ನು, ಹೆಣ್ಣುಮಕ್ಕಳ ಗೋಳು, ಅವರ ಯಾತನೆ, ಜೋಪಡಪಟ್ಟಿಗಳಲ್ಲಿನ ಜನರ ಜೀವನವನ್ನು. ಅವರೇ ನನ್ನ ಕೃತಿಗಳ ಜೀವಧಾತು. ಅವರ ಜೀವನವನ್ನು ತೆರೆದಿಟ್ಟು ನಾಡಿನ ಜನರ ಗಮನ ಸೆಳೆಯುವುದೇ ನನ್ನ ಕಾಯಕ ಎಂದು ಹೇಳುವಾಗ ಧ್ವನಿ ಆದ್ರ್ರವಾಯಿತು.
ಬರದ ನಾಡಲ್ಲಿ ಇದ್ದರೆ ಸಾಯುತ್ತೇವೆ ಎಂದು ನನ್ನ ಜಿಲ್ಲೆಯ ಜನ ಪಕ್ಕದ ಮಹಾರಾಷ್ಟ್ರಕ್ಕೆ ವಲಸೆ ಹೋಗುವಾಗ ಇತ್ತೀಚೆಗಷ್ಟೇ ರಸ್ತೆಯಲ್ಲಿಯೇ ಹೆಣವಾದರು. ಬದುಕು ಕಟ್ಟಿಕೊಳ್ಳಲು ಹೊರಟು ಹೆಣಗಳಾಗಿ ಬಂದರು. ಇಂತಹ ದಯನೀಯ ಸ್ಥಿತಿ ಇಂದಿಗೂ ನಾಡಿನಲ್ಲಿದೆ. ಇದನ್ನು ಅಕ್ಷರ ಮಿತ್ರರಾದ ಸಾಹಿತಿಗಳು ಗಂಭೀರವಾಗಿ ಪರಿಗಣಿಸಿ ಕೃತಿಗಳನ್ನು ರಚಿಸಬೇಕಾಗಿದೆ ಎಂದು ಹೇಳುವಾಗ ಮನುಕುಲದ ಮಾತುಗಾರಳಂತೆ ಗೋಚರಿಸಿದರು.
ಹೆಣ್ಣು ಭ್ರೂಣ ಹತ್ಯೆಯನ್ನು ಪ್ರಸ್ತಾಪಿಸಿದ ಡಾ. ಗೀತಾ ನಾಗಭೂಸಣ, ಗಾಂಧಿ ರಾಮರಾಜ್ಯದ ಕನಸನ್ನು ಕಂಡಿದ್ದರು. ಆದರೆ ಇಂದು ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪಾಂಡವರ ರಾಜ್ಯ ಬಂದರೂ ಬರಬಹುದು. ಆಗ ಒಂದು ಹೆಣ್ಣನ್ನು ಐವರು ವರಿಸುವ ಕಾಲ ಬಂದರೂ ಬರಬಹುದು. ರಾಮರಾಜ್ಯದಲ್ಲಿ ಇದ್ದುದೂ ಸ್ತ್ರೀಶೋಷಣೆ, ಪಾಂಡವರ ರಾಜ್ಯದಲ್ಲಿ ಇರುವುದೂ ಸ್ತ್ರೀ ಶೋಷಣೆಯೇ ಎನ್ನುವಾಗ ಹೆಣ್ಣುಮಕ್ಕಳ ಸ್ಥಿತಿ ಅವರ ಮನದ ಮೇಲೆ ಮಾಡಿರುವ ಅಗಾಧವಾದ ದುಷ್ಪರಿಣಾಮದ ಛಾಯೆ ಢಾಳುಢಾಳಾಗಿ ಗೋಚರಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.