ಕುಮಾರವ್ಯಾಸನ ನಾಡಲ್ಲಿ ಆರಂಭವಾಯ್ತು ಕನ್ನಡಾಂಬೆಯ ಉಘೇ.... ಉಘೇ....
ಗದಗ, 19- ಜಾತ್ರೆ ಎನ್ನಿ. ಪರಿಷೆ ಎನ್ನಿ. ತೇರು ಎನ್ನಿ. ರಥೋತ್ಸವ ಎನ್ನಿ. ಹಬ್ಬ ಎನ್ನಿ. ಅವರವರ ಭಾವಕ್ಕೆ ತಕ್ಕಂತೆ ಏನೇ ಹೆಸರಿಟ್ಟು ಕರೆಯಬಹುದು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕನ್ನಡ ತಾಯಿಯ ಉಘೇ.... ಉಘೇ....
ಅಲ್ಲಿ ಉತ್ತರದ ಆತಿಥೇಯರಿದ್ದರು. ದಕ್ಷಿಣದ ಜನರಿದ್ದರು. ಪಶ್ಚಿಮದ ನಾಗರಿಕರಿದ್ದರು. ಪೂರ್ವದ ಮಂದಿಯಿದ್ದರು. ಎಲ್ಲರೂ ಕನ್ನಡಾಂಬೆಯ ಮಡಿಲ ಮಕ್ಕಳಾಗಿದ್ದರು. ಎಲ್ಲರಿಗೂ ಇದ್ದುದು ಕನ್ನಡ ನುಡಿನಮನದ ತುಡಿತ. ಕನ್ನಡಕ್ಕಾಗಿ ಕೊರಳೆತ್ತು ಎನ್ನುವ ತವಕ.
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಹಾಡಿದ ಕುಮಾರವ್ಯಾಸನ ನಾಡಿನವರು ನಾವು ಎಂಬ ಹೆಮ್ಮೆ ಅಲ್ಲಿ ನೆರೆದಿದ್ದ ಆತಿಥೇಯರ ಕಣ್ಣುಗಳಲ್ಲಿ ತುಂಬಿತುಳುಕುತ್ತಿತ್ತು.
ಪೂರ್ಣಕುಂಭದ ಮೆರವಣಿಗೆ ಬಿರುಬಿಸಿಲಿನಲ್ಲಿ ನಡೆದರೂ, ಬೆವರು ದಳದಳನೆ ಇಳಿಯುತ್ತಿದ್ದರೂ, ಉತ್ಸಾಹ ಮಾತ್ರ ಕೊಂಚವೂ ಕುಗ್ಗದೇ ಇದ್ದುದು ಇಲ್ಲಿನ ಕನ್ನಡಿಗರೆಷ್ಟು ಉತ್ಸಾಹದ ಬುಗ್ಗೆಗಳು ಎಂಬುದನ್ನು ತೆರೆದಿಡುವಂತಿತ್ತು.
ಕನ್ನಡಾಂಬೆಯ ಮಕ್ಕಳ ಉತ್ಸಾಹಕ್ಕೆ ನೀನೇಕೆ ಕುಂದು ತರುತ್ತಿರುವೇ ಎಂಬಂತೆ ಸೂರ್ಯದೇವನ ಪ್ರಖರತೆಗೆ ಛತ್ರಿ ಹಿಡಿದ ಹಾಗೆ ಮೇಘರಾಜ ಆಗಾಗ ಮೋಡಗಳ ಮೆರವಣಿಗೆಯನ್ನು ಹೊರಡಿಸುತ್ತಿದ್ದ.
ನುಡಿ ಹಬ್ಬದ ಕೇಂದ್ರಬಿಂದು ನಾಡೋಜ ಡಾ. ಗೀತಾ ನಾಗಭೂಷಣ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಪೂರ್ಣ ಕುಂಭ ಮೆರವಣೆಗೆಯಲ್ಲಿ ಕರೆತರಲಾಯಿತು. ಸಮ್ಮೇಳನದ ಪ್ರಧಾನ ವೇದಿಕೆಗೆ ಗಣ್ಯರು ಆಗಮಿಸುತ್ತಿದ್ದಂತೆಯೇ ಸಭಾಂಗಣದಲ್ಲಿ ಕ್ಷಣಕಾಲ ಮಿಂಚಿನ ಸಂಚಾರ. ಕಾರ್ಯಕ್ರಮದ ಆರಂಭಕ್ಕೆ ಮುಂಡರಗಿ ತಾಲೂಕಿನ ನವೋದಯ ಶಾಲೆಯ ಮಕ್ಕಳು ವೇದಿಕೆಯಲ್ಲಿ ಘೇರಾಯಿಸಿದರು. 76ನೇ ಸಮ್ಮೇಳನದ ದ್ಯೋತಕವೆಂಬಂತೆ 76 ಮಕ್ಕಳು ಏಕಧ್ವನಿಯಲ್ಲಿ ನಾಡಗೀತೆ ಹಾಡಿದಾಗ ಸಭಾಂಗಣದಲ್ಲಿ ನೆರೆದ ಶ್ರೋತೃಗಳೆಲ್ಲರಲ್ಲಿ ರೋಮಾಂಚನ.
ಸಮ್ಮೇಳನದ ಸವರ್ಾಧ್ಯಕ್ಷೆ ಡಾ. ಗೀತಾ ನಾಗಭೂಷಣ ಲಿಖಿತ ಭಾಷಣವನ್ನು ಓದಿದರೂ ಅಲ್ಲಲ್ಲಿ ತಮ್ಮ ಮನದಾಳದ ಮಾತು ಆಡುವುದನ್ನು ಮಾತ್ರ ಮರೆಯಲಿಲ್ಲ. ಅವರು ತಮ್ಮನ್ನು ತಾವು ತವರಿನ ಮಗಳೆಂದು ಕರೆದುಕೊಂಡರು. ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದನ್ನು, ಬಿರುಬಿಸಿಲ ನಾಡಿನಿಂದ ಬಿಸಿಲ ನಾಡಿಗೆ ಪ್ರವೇಶಿಸುವ ಮಾರ್ಗದಲ್ಲಿ ದಾರಿಯ ಉದ್ದಕ್ಕೂ ಜನತೆ ನೀಡಿದ ಸ್ವಾಗತವನ್ನು, ತೋರಿದ ಅಭಿಮಾನವನ್ನು ಪ್ರಾಂಜಲ ಮನಸ್ಸಿನಿಂದ ತೆರೆದಿಟ್ಟರು.
ನನಗೆ ಮೊದಲ ಪ್ರಶಸ್ತಿ ಸಿಕ್ಕ ನೆಲ ಗದಗ. ಇಲ್ಲಿ ಭಾರತ ಕಥಾ ಮಂಜರಿ ರಚಿಸಿದ ನಾರಣಪ್ಪ ಓಡಾಡಿದ್ದಾನೆ. ಇಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ಸಂಚರಿಸಿದ್ದಾಳೆ. ಅಂತಹ ನೆಲದಲ್ಲಿ ಓರ್ವ ಸ್ತ್ರೀಯಾಗಿ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಗೌರವ ಸಿಕ್ಕಿರುವುದು ನನ್ನ ಸುಕೃತ ಎಂದು ಎದೆತುಂಬಿ ಹೇಳಿದರು.
ಈಗ ದೊರೆಯುತ್ತಿರುವುದು ಎರಡನೇ ಗೌರವ. ಮೂರಕ್ಕೆ ಮುಕ್ತಿ ಎಂಬುದು ಆಡುನುಡಿ. ಇಲ್ಲಿನ ನೆಲದಲ್ಲಿಯೇ ನನಗೆ ಮೂರನೇ ಗೌರವವೂ ಸಿಕ್ಕುವ ಭರವಸೆ ಇದೆ ಎಂದು ಹೇಳುವಾಗ ತವರಿನಲ್ಲಿ ಸತ್ಕರಿಸಿಕೊಳ್ಳುವುದರ ಹೆಮ್ಮೆಯ ಭಾವ ಅವರಲ್ಲಿ ತುಂಬಿತುಳುಕುತ್ತಿತ್ತು.
ತಾವು ಬರೆದಿದ್ದೆಲ್ಲ ಸಾಮಾನ್ಯರ ಬದುಕಿಗೆ ಸಂಬಂಧಿಸಿದ್ದನ್ನು, ಹೆಣ್ಣುಮಕ್ಕಳ ಗೋಳು, ಅವರ ಯಾತನೆ, ಜೋಪಡಪಟ್ಟಿಗಳಲ್ಲಿನ ಜನರ ಜೀವನವನ್ನು. ಅವರೇ ನನ್ನ ಕೃತಿಗಳ ಜೀವಧಾತು. ಅವರ ಜೀವನವನ್ನು ತೆರೆದಿಟ್ಟು ನಾಡಿನ ಜನರ ಗಮನ ಸೆಳೆಯುವುದೇ ನನ್ನ ಕಾಯಕ ಎಂದು ಹೇಳುವಾಗ ಧ್ವನಿ ಆದ್ರ್ರವಾಯಿತು.
ಬರದ ನಾಡಲ್ಲಿ ಇದ್ದರೆ ಸಾಯುತ್ತೇವೆ ಎಂದು ನನ್ನ ಜಿಲ್ಲೆಯ ಜನ ಪಕ್ಕದ ಮಹಾರಾಷ್ಟ್ರಕ್ಕೆ ವಲಸೆ ಹೋಗುವಾಗ ಇತ್ತೀಚೆಗಷ್ಟೇ ರಸ್ತೆಯಲ್ಲಿಯೇ ಹೆಣವಾದರು. ಬದುಕು ಕಟ್ಟಿಕೊಳ್ಳಲು ಹೊರಟು ಹೆಣಗಳಾಗಿ ಬಂದರು. ಇಂತಹ ದಯನೀಯ ಸ್ಥಿತಿ ಇಂದಿಗೂ ನಾಡಿನಲ್ಲಿದೆ. ಇದನ್ನು ಅಕ್ಷರ ಮಿತ್ರರಾದ ಸಾಹಿತಿಗಳು ಗಂಭೀರವಾಗಿ ಪರಿಗಣಿಸಿ ಕೃತಿಗಳನ್ನು ರಚಿಸಬೇಕಾಗಿದೆ ಎಂದು ಹೇಳುವಾಗ ಮನುಕುಲದ ಮಾತುಗಾರಳಂತೆ ಗೋಚರಿಸಿದರು.
ಹೆಣ್ಣು ಭ್ರೂಣ ಹತ್ಯೆಯನ್ನು ಪ್ರಸ್ತಾಪಿಸಿದ ಡಾ. ಗೀತಾ ನಾಗಭೂಸಣ, ಗಾಂಧಿ ರಾಮರಾಜ್ಯದ ಕನಸನ್ನು ಕಂಡಿದ್ದರು. ಆದರೆ ಇಂದು ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪಾಂಡವರ ರಾಜ್ಯ ಬಂದರೂ ಬರಬಹುದು. ಆಗ ಒಂದು ಹೆಣ್ಣನ್ನು ಐವರು ವರಿಸುವ ಕಾಲ ಬಂದರೂ ಬರಬಹುದು. ರಾಮರಾಜ್ಯದಲ್ಲಿ ಇದ್ದುದೂ ಸ್ತ್ರೀಶೋಷಣೆ, ಪಾಂಡವರ ರಾಜ್ಯದಲ್ಲಿ ಇರುವುದೂ ಸ್ತ್ರೀ ಶೋಷಣೆಯೇ ಎನ್ನುವಾಗ ಹೆಣ್ಣುಮಕ್ಕಳ ಸ್ಥಿತಿ ಅವರ ಮನದ ಮೇಲೆ ಮಾಡಿರುವ ಅಗಾಧವಾದ ದುಷ್ಪರಿಣಾಮದ ಛಾಯೆ ಢಾಳುಢಾಳಾಗಿ ಗೋಚರಿಸಿತು.
ಗದಗ, 19- ಜಾತ್ರೆ ಎನ್ನಿ. ಪರಿಷೆ ಎನ್ನಿ. ತೇರು ಎನ್ನಿ. ರಥೋತ್ಸವ ಎನ್ನಿ. ಹಬ್ಬ ಎನ್ನಿ. ಅವರವರ ಭಾವಕ್ಕೆ ತಕ್ಕಂತೆ ಏನೇ ಹೆಸರಿಟ್ಟು ಕರೆಯಬಹುದು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕನ್ನಡ ತಾಯಿಯ ಉಘೇ.... ಉಘೇ....
ಅಲ್ಲಿ ಉತ್ತರದ ಆತಿಥೇಯರಿದ್ದರು. ದಕ್ಷಿಣದ ಜನರಿದ್ದರು. ಪಶ್ಚಿಮದ ನಾಗರಿಕರಿದ್ದರು. ಪೂರ್ವದ ಮಂದಿಯಿದ್ದರು. ಎಲ್ಲರೂ ಕನ್ನಡಾಂಬೆಯ ಮಡಿಲ ಮಕ್ಕಳಾಗಿದ್ದರು. ಎಲ್ಲರಿಗೂ ಇದ್ದುದು ಕನ್ನಡ ನುಡಿನಮನದ ತುಡಿತ. ಕನ್ನಡಕ್ಕಾಗಿ ಕೊರಳೆತ್ತು ಎನ್ನುವ ತವಕ.
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಹಾಡಿದ ಕುಮಾರವ್ಯಾಸನ ನಾಡಿನವರು ನಾವು ಎಂಬ ಹೆಮ್ಮೆ ಅಲ್ಲಿ ನೆರೆದಿದ್ದ ಆತಿಥೇಯರ ಕಣ್ಣುಗಳಲ್ಲಿ ತುಂಬಿತುಳುಕುತ್ತಿತ್ತು.
ಪೂರ್ಣಕುಂಭದ ಮೆರವಣಿಗೆ ಬಿರುಬಿಸಿಲಿನಲ್ಲಿ ನಡೆದರೂ, ಬೆವರು ದಳದಳನೆ ಇಳಿಯುತ್ತಿದ್ದರೂ, ಉತ್ಸಾಹ ಮಾತ್ರ ಕೊಂಚವೂ ಕುಗ್ಗದೇ ಇದ್ದುದು ಇಲ್ಲಿನ ಕನ್ನಡಿಗರೆಷ್ಟು ಉತ್ಸಾಹದ ಬುಗ್ಗೆಗಳು ಎಂಬುದನ್ನು ತೆರೆದಿಡುವಂತಿತ್ತು.
ಕನ್ನಡಾಂಬೆಯ ಮಕ್ಕಳ ಉತ್ಸಾಹಕ್ಕೆ ನೀನೇಕೆ ಕುಂದು ತರುತ್ತಿರುವೇ ಎಂಬಂತೆ ಸೂರ್ಯದೇವನ ಪ್ರಖರತೆಗೆ ಛತ್ರಿ ಹಿಡಿದ ಹಾಗೆ ಮೇಘರಾಜ ಆಗಾಗ ಮೋಡಗಳ ಮೆರವಣಿಗೆಯನ್ನು ಹೊರಡಿಸುತ್ತಿದ್ದ.
ನುಡಿ ಹಬ್ಬದ ಕೇಂದ್ರಬಿಂದು ನಾಡೋಜ ಡಾ. ಗೀತಾ ನಾಗಭೂಷಣ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಪೂರ್ಣ ಕುಂಭ ಮೆರವಣೆಗೆಯಲ್ಲಿ ಕರೆತರಲಾಯಿತು. ಸಮ್ಮೇಳನದ ಪ್ರಧಾನ ವೇದಿಕೆಗೆ ಗಣ್ಯರು ಆಗಮಿಸುತ್ತಿದ್ದಂತೆಯೇ ಸಭಾಂಗಣದಲ್ಲಿ ಕ್ಷಣಕಾಲ ಮಿಂಚಿನ ಸಂಚಾರ. ಕಾರ್ಯಕ್ರಮದ ಆರಂಭಕ್ಕೆ ಮುಂಡರಗಿ ತಾಲೂಕಿನ ನವೋದಯ ಶಾಲೆಯ ಮಕ್ಕಳು ವೇದಿಕೆಯಲ್ಲಿ ಘೇರಾಯಿಸಿದರು. 76ನೇ ಸಮ್ಮೇಳನದ ದ್ಯೋತಕವೆಂಬಂತೆ 76 ಮಕ್ಕಳು ಏಕಧ್ವನಿಯಲ್ಲಿ ನಾಡಗೀತೆ ಹಾಡಿದಾಗ ಸಭಾಂಗಣದಲ್ಲಿ ನೆರೆದ ಶ್ರೋತೃಗಳೆಲ್ಲರಲ್ಲಿ ರೋಮಾಂಚನ.
ಸಮ್ಮೇಳನದ ಸವರ್ಾಧ್ಯಕ್ಷೆ ಡಾ. ಗೀತಾ ನಾಗಭೂಷಣ ಲಿಖಿತ ಭಾಷಣವನ್ನು ಓದಿದರೂ ಅಲ್ಲಲ್ಲಿ ತಮ್ಮ ಮನದಾಳದ ಮಾತು ಆಡುವುದನ್ನು ಮಾತ್ರ ಮರೆಯಲಿಲ್ಲ. ಅವರು ತಮ್ಮನ್ನು ತಾವು ತವರಿನ ಮಗಳೆಂದು ಕರೆದುಕೊಂಡರು. ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದನ್ನು, ಬಿರುಬಿಸಿಲ ನಾಡಿನಿಂದ ಬಿಸಿಲ ನಾಡಿಗೆ ಪ್ರವೇಶಿಸುವ ಮಾರ್ಗದಲ್ಲಿ ದಾರಿಯ ಉದ್ದಕ್ಕೂ ಜನತೆ ನೀಡಿದ ಸ್ವಾಗತವನ್ನು, ತೋರಿದ ಅಭಿಮಾನವನ್ನು ಪ್ರಾಂಜಲ ಮನಸ್ಸಿನಿಂದ ತೆರೆದಿಟ್ಟರು.
ನನಗೆ ಮೊದಲ ಪ್ರಶಸ್ತಿ ಸಿಕ್ಕ ನೆಲ ಗದಗ. ಇಲ್ಲಿ ಭಾರತ ಕಥಾ ಮಂಜರಿ ರಚಿಸಿದ ನಾರಣಪ್ಪ ಓಡಾಡಿದ್ದಾನೆ. ಇಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ಸಂಚರಿಸಿದ್ದಾಳೆ. ಅಂತಹ ನೆಲದಲ್ಲಿ ಓರ್ವ ಸ್ತ್ರೀಯಾಗಿ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಗೌರವ ಸಿಕ್ಕಿರುವುದು ನನ್ನ ಸುಕೃತ ಎಂದು ಎದೆತುಂಬಿ ಹೇಳಿದರು.
ಈಗ ದೊರೆಯುತ್ತಿರುವುದು ಎರಡನೇ ಗೌರವ. ಮೂರಕ್ಕೆ ಮುಕ್ತಿ ಎಂಬುದು ಆಡುನುಡಿ. ಇಲ್ಲಿನ ನೆಲದಲ್ಲಿಯೇ ನನಗೆ ಮೂರನೇ ಗೌರವವೂ ಸಿಕ್ಕುವ ಭರವಸೆ ಇದೆ ಎಂದು ಹೇಳುವಾಗ ತವರಿನಲ್ಲಿ ಸತ್ಕರಿಸಿಕೊಳ್ಳುವುದರ ಹೆಮ್ಮೆಯ ಭಾವ ಅವರಲ್ಲಿ ತುಂಬಿತುಳುಕುತ್ತಿತ್ತು.
ತಾವು ಬರೆದಿದ್ದೆಲ್ಲ ಸಾಮಾನ್ಯರ ಬದುಕಿಗೆ ಸಂಬಂಧಿಸಿದ್ದನ್ನು, ಹೆಣ್ಣುಮಕ್ಕಳ ಗೋಳು, ಅವರ ಯಾತನೆ, ಜೋಪಡಪಟ್ಟಿಗಳಲ್ಲಿನ ಜನರ ಜೀವನವನ್ನು. ಅವರೇ ನನ್ನ ಕೃತಿಗಳ ಜೀವಧಾತು. ಅವರ ಜೀವನವನ್ನು ತೆರೆದಿಟ್ಟು ನಾಡಿನ ಜನರ ಗಮನ ಸೆಳೆಯುವುದೇ ನನ್ನ ಕಾಯಕ ಎಂದು ಹೇಳುವಾಗ ಧ್ವನಿ ಆದ್ರ್ರವಾಯಿತು.
ಬರದ ನಾಡಲ್ಲಿ ಇದ್ದರೆ ಸಾಯುತ್ತೇವೆ ಎಂದು ನನ್ನ ಜಿಲ್ಲೆಯ ಜನ ಪಕ್ಕದ ಮಹಾರಾಷ್ಟ್ರಕ್ಕೆ ವಲಸೆ ಹೋಗುವಾಗ ಇತ್ತೀಚೆಗಷ್ಟೇ ರಸ್ತೆಯಲ್ಲಿಯೇ ಹೆಣವಾದರು. ಬದುಕು ಕಟ್ಟಿಕೊಳ್ಳಲು ಹೊರಟು ಹೆಣಗಳಾಗಿ ಬಂದರು. ಇಂತಹ ದಯನೀಯ ಸ್ಥಿತಿ ಇಂದಿಗೂ ನಾಡಿನಲ್ಲಿದೆ. ಇದನ್ನು ಅಕ್ಷರ ಮಿತ್ರರಾದ ಸಾಹಿತಿಗಳು ಗಂಭೀರವಾಗಿ ಪರಿಗಣಿಸಿ ಕೃತಿಗಳನ್ನು ರಚಿಸಬೇಕಾಗಿದೆ ಎಂದು ಹೇಳುವಾಗ ಮನುಕುಲದ ಮಾತುಗಾರಳಂತೆ ಗೋಚರಿಸಿದರು.
ಹೆಣ್ಣು ಭ್ರೂಣ ಹತ್ಯೆಯನ್ನು ಪ್ರಸ್ತಾಪಿಸಿದ ಡಾ. ಗೀತಾ ನಾಗಭೂಸಣ, ಗಾಂಧಿ ರಾಮರಾಜ್ಯದ ಕನಸನ್ನು ಕಂಡಿದ್ದರು. ಆದರೆ ಇಂದು ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪಾಂಡವರ ರಾಜ್ಯ ಬಂದರೂ ಬರಬಹುದು. ಆಗ ಒಂದು ಹೆಣ್ಣನ್ನು ಐವರು ವರಿಸುವ ಕಾಲ ಬಂದರೂ ಬರಬಹುದು. ರಾಮರಾಜ್ಯದಲ್ಲಿ ಇದ್ದುದೂ ಸ್ತ್ರೀಶೋಷಣೆ, ಪಾಂಡವರ ರಾಜ್ಯದಲ್ಲಿ ಇರುವುದೂ ಸ್ತ್ರೀ ಶೋಷಣೆಯೇ ಎನ್ನುವಾಗ ಹೆಣ್ಣುಮಕ್ಕಳ ಸ್ಥಿತಿ ಅವರ ಮನದ ಮೇಲೆ ಮಾಡಿರುವ ಅಗಾಧವಾದ ದುಷ್ಪರಿಣಾಮದ ಛಾಯೆ ಢಾಳುಢಾಳಾಗಿ ಗೋಚರಿಸಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ