ವಿಷಯಕ್ಕೆ ಹೋಗಿ

ಶಿವರಾತ್ರಿ ಶಿವನ ದಿವ್ಯ ಆವತರಣೆ ಹಾಗೂ ದಿವ್ಯ ಕರ್ಮವನ್ನು ನೆನಪಿಸುವ ಹಬ್ಬ

ಶಿವರಾತ್ರಿ ಶಿವನ ದಿವ್ಯ ಆವತರಣೆ ಹಾಗೂ ದಿವ್ಯ ಕರ್ಮವನ್ನು ನೆನಪಿಸುವ ಹಬ್ಬ
ಲೇಖನ: ಬ್ರಹ್ಮಕುಮಾರಿ ಗೀತಕ್ಕ
ಆಧ್ಯಾತ್ಮ ಶಿಕ್ಷಕರು
ಪ್ರಜಾಪಿತ ಬ್ಯಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ
ಹುಳಿಯಾರು

ಭಾರತ ದೇಶ ಆಧ್ಯಾತ್ಮ ಪ್ರಧಾನ ದೇಶವಾಗಿದೆ. ಇಲ್ಲಿ ಆಚರಿಸುವಷ್ಟು ಹಬ್ಬಗಳನ್ನು ಬಹುಶಃ ಬೇರೆ ಯಾವ ದೇಶಗಳಲ್ಲಿಯೂ ಆಚರಿಸಲಿಕ್ಕಿಲ್ಲ.ಸಮಯ ಪ್ರತಿ ಸಮಯವಾಗಿ ಈ ಹಬ್ಬಗಳು ಆಧ್ಯಾತ್ಮಿಕತೆಯ ರಹಸ್ಯವನ್ನು ಜಾಗೃತ ಮಾಡುತ್ತವೆ. ಇದರಲ್ಲಿ ಶಿವರಾತ್ರಿಯೂ ಸಹ ಒಂದು ವಿಶಿಷ್ಟ ಹಾಗೂ ಮುಖ್ಯವಾದ ಹಬ್ಬವಾಗಿದೆ.

ಮಹಾಶಿವರಾತ್ರಿ ಹೆಸರಿನಂತೆಯೇ ಮಹಾನ್ ಕೂಡಾವಾಗಿದೆ.ಏಕೆಂದರೆ ಈ ಮಹಾನತೆಯಿಂದ ಕೂಡಿದ ಹಬ್ಬ ಸಮಸ್ತ ಸಂಸಾರದ ಸರ್ವಆತ್ಮಗಳಿಗೆ ಪರಮಪಿತ ಪರಮಾತ್ಮ ಶಿವನ ಸ್ಮೃತಿಯನ್ನು ತರಿಸುತ್ತವೆ. ಭಾರತದಲ್ಲಿ ಶಿವಲಿಂಗ ಇರುವಂತಹ ಮಂದಿರಗಳು ಲಕ್ಷಾಂತರ. ಬಹುಶಃ ಎಲ್ಲಿ ಹೋದರೂ ಎಲ್ಲಾ ಮಂದಿರದಲ್ಲಿಯೂ ಅವಶ್ಯ ಶಿವಲಿಂಗವನ್ನು ನೋಡುತ್ತೇವೆ. ಶಿವನ ಗಾಯನ ವಿಲ್ಲದ ಗ್ರಂಥವೇ ಇಲ್ಲಾ, ಆದರೂ ಸಹ ವಿಚಿತ್ರವೇನೆಂದರೆ ಶಿವನ ಪರಿಚಯಕ್ಕೆ ಮನುಷ್ಯಾತ್ಮರು ಅಪರಿಚಿತರಾಗಿದ್ದಾರೆ.

ಭಾರತದ ಮೂಲೆ ಮೂಲೆಗಳಲ್ಲಿ ಶಿವನ ಭಿನ್ನ ಭಿನ್ನ ಹೆಸರುಗಳಲ್ಲಿ ನಿರಾತಾರ ಜ್ಯೋರ್ತಲಿಂಗಾ ಶಿವಪರಮಾತ್ಮನ ಆರಾಧನೆ ನಡೆಯುತ್ತದೆ. ಉದಾಹರಣೆಗೆ ಅಮರನಾಥ, ವಿಶ್ವನಾಥ, ಸೋಮನಾಥ, ಬಬಲನಾಥ, ಪಶುಪತಿನಾಥ ಇತ್ಯಾದಿ ವಾಸ್ತವಿಕವಾಗಿ ಶ್ರೀಕೃಷ್ಣ ಹಾಗೂ ಮರ್ಯಾದ ಪುರುಷೋತ್ತಮ ಶ್ರೀರಾಮನಿಗೂ ಇಷ್ಟವಾದ ದೇವರೆಂದರೆ ಶಿವನೆ ಆಗಿದ್ದಾನೆ.
ಗೋಪೇಶ್ವರದಲ್ಲಿ ಹಾಗೂ ರಾಮೇಶ್ವರದಲ್ಲಿ ವಿಶಾಲವಾದ ಶಿವನಮಂದಿರ ಇಂದಿಗೂ ಮೂಕ ಸಾಕ್ಷಿಯಾಗಿ ನಿಂತಿದೆ. ಇಂತಹ ಶಿವನನ್ನು ಭಾರತದಲ್ಲಿ ಜ್ಯೋರ್ತಲಿಂಗಾ ಶಿವಪರಮಾತ್ಮನೆಂದು ಮೆಕ್ಕಾದಲ್ಲಿ ಸಂಗ್ ಎ. ಅಸ್ವದ್ ಎಂದು, ಮಿಶ್ರದಲ್ಲಿ ಒಸಿರಿಸ್ ಎಂದು, ಬೆಬಲೋನಾದಲ್ಲಿ ಶಿಮಾನ್ ಎಂದು ಹೀಗೆ ಅನೇಕರು ಅನೇಕ ಹೆಸರಿನಲ್ಲಿ ಶಿವನನ್ನು ಪೂಜಿಸುತ್ತಿದ್ದಾರೆ.
@ ಶಿವರಾತ್ರಿ ಎಂದೇ ಏಕೆ ಆಚರಿಸುತ್ತೇವೆ?
ಜಗತ್ತಿನಲ್ಲಿ ಮಾನವನ ಹುಟ್ಟು ಹಬ್ಬವನ್ನು ಆಚರಿಸಬೇಕಾದರೆ ಜನ್ಮದಿನೋತ್ಸವ ಎಂದು ಹೇಳುತ್ತಾರೆ. ಆದರೆ ಶಿವನ ಅವತರಣೆ(ಜನ್ಮ)ಕ್ಕೆ ಮಾತ್ರ ಶಿವರಾತ್ರಿ ಎಂದೇ ಏಕೆ ಕರೆಯುತ್ತೇವೆ, ಶಿವದಿನವೆಂದೂ ಹೇಳುವುದಿಲ್ಲ ಏಕೆ? ಈ ರಾತ್ರಿ ಸ್ಥೂಲ ಅಂಧಕಾರದ ವಾಚಕವಲ್ಲ. ಇದು ಆಧ್ಯಾತ್ಮಿಕ ದೃಷ್ಟಿ ಕೋನದಿಂದ ಕಲ್ಪದ ಅಂತ್ಯದ ಸಮಯ ವ್ಯಾಪ್ತಗೊಂಡ ಘೋರ ಅಜ್ಞಾನ ಹಾಗೂ ತಮೋಪ್ರಧಾನತೆಯ ಪ್ರತೀಕವಾಗಿದೆ. ಯಾವಾಗ ದೃಷ್ಠಿಯಲ್ಲಿ ಅಜ್ಞಾನ, ಅಂಧಕಾರ ಮೊಳಗುತ್ತದೆಯೋ ಆಗ ಕಾಮ, ಕ್ರೋಧ ಮುಂತಾದ ವಿಕಾರಗಳಿಗೆ ವಶೀಭೂತನಾಗಿ ಮಾನವ ದುಃಖಿ ಹಾಗೂ ಅಶಾಂತನಾಗುತ್ತಾನೆ. ಧರ್ಮ ಅಧರ್ಮ ರೂಪ ತಾಳುತ್ತಾದೆ. ಆಗ ಭ್ರಷ್ಟಚಾರ ನಾಲ್ಕು ಕಡೆಯೂ ವ್ಯಾಪಿಸುತ್ತದೆ. ಇಂತಹ ಸಮಯದಲ್ಲಿ ಜ್ಞಾನ ಸೂರ್ಯ ಪರಮಾತ್ಮ ಶಿವ ಅಜ್ಞಾನರೂಪಿ ಅಂಧಕಾರವನ್ನು ವಿನಾಶಮಾಡಲು ಪ್ರಕಟವಾಗುತ್ತಾನೆ. ಇದರ ಪ್ರತೀಕವೇ ಶಿವರಾತ್ರಿ ಹಬ್ಬವಾಗಿದೆ.

@ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ
ಪರಮಪಿತ ಶಿವಪರಮಾತ್ಮ ಒಂದು ರೂಪದಲ್ಲಿದ್ದಾರೆ. ಆದ್ದರಿಂದ ಭಕ್ತ ಜನ ಶಿವಲಿಂಗದ ರೂಪಕ್ಕೆ ಆರಾಧನೆ ಮಾಡುತ್ತಾರೆ. ಅರ ಮೇಲೆ ಹಾಲು ಮಿಶ್ರಿತ ಮಜ್ಜಿಗೆ, ಬಿಲ್ವಪತ್ರೆ, ಎಕ್ಕೆಹೂವನ್ನು ಅಪರ್ಿಸುತ್ತಾರೆ. ಇದರ ರಹಸ್ಯ ತಮ್ಮಲ್ಲಿಯ ವಿಕಾರಗಳನ್ನು ಶಿವನಿಗೆ ಅರ್ಪಿಸಿ ನಿರ್ವಿಕಾರಿಗಳಾಗಿ ಪವಿತ್ರತೆಯ ವ್ರತವನ್ನು ಮಾಡುತ್ತಾರೆ. ಬ್ರಹ್ಮಚಾರ್ಯ ವೃತವೇ ಸತ್ಯ ಉಪವಾಸ. ಏಕೆಂದರೆ ಇದರ ಪಾಲನೆಯಿಂದಲೇ ಮನುಷ್ಯ ಆತ್ಮನು ಪರಮಾತ್ಮನ ಸಾಮಿಪ್ಯ ಪಡೆಯಲು ಸಾಧ್ಯ.
ಹೀಗೆ ಒಂದು ದಿನದ ಜಾಗರಣೆಯಿಂದ ಅವಿನಾಶಿ ಪ್ರಾಪ್ತಿಯಾಗುವುದಿಲ್ಲ. ಆದರೆ ಈ ಕಲಿರೂಪ ಕತ್ತಲೆಯಿಂದ ಆತ್ಮನನ್ನು ಜಾಗೃತ ಮಾಡಲು ಜ್ಞಾನರೂಪಿ ತೈಲವನ್ನು ಹಾಕುತ್ತಾ ಸ್ವಯಂನನ್ನು ಸ್ವಯಂನೇ ಜಾಗೃತ ಮಾಡಿಕೊಳ್ಳಬೇಕು. ಇದುವೇ ಸತ್ಯ ಜಾಗರಣೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.