ಲೇಖನ: ಬ್ರಹ್ಮಕುಮಾರಿ ಗೀತಕ್ಕ
ಆಧ್ಯಾತ್ಮ ಶಿಕ್ಷಕರು
ಪ್ರಜಾಪಿತ ಬ್ಯಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ
ಹುಳಿಯಾರು
ಆಧ್ಯಾತ್ಮ ಶಿಕ್ಷಕರು
ಪ್ರಜಾಪಿತ ಬ್ಯಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ
ಹುಳಿಯಾರು
ಭಾರತ ದೇಶ ಆಧ್ಯಾತ್ಮ ಪ್ರಧಾನ ದೇಶವಾಗಿದೆ. ಇಲ್ಲಿ ಆಚರಿಸುವಷ್ಟು ಹಬ್ಬಗಳನ್ನು ಬಹುಶಃ ಬೇರೆ ಯಾವ ದೇಶಗಳಲ್ಲಿಯೂ ಆಚರಿಸಲಿಕ್ಕಿಲ್ಲ.ಸಮಯ ಪ್ರತಿ ಸಮಯವಾಗಿ ಈ ಹಬ್ಬಗಳು ಆಧ್ಯಾತ್ಮಿಕತೆಯ ರಹಸ್ಯವನ್ನು ಜಾಗೃತ ಮಾಡುತ್ತವೆ. ಇದರಲ್ಲಿ ಶಿವರಾತ್ರಿಯೂ ಸಹ ಒಂದು ವಿಶಿಷ್ಟ ಹಾಗೂ ಮುಖ್ಯವಾದ ಹಬ್ಬವಾಗಿದೆ.
ಮಹಾಶಿವರಾತ್ರಿ ಹೆಸರಿನಂತೆಯೇ ಮಹಾನ್ ಕೂಡಾವಾಗಿದೆ.ಏಕೆಂದರೆ ಈ ಮಹಾನತೆಯಿಂದ ಕೂಡಿದ ಹಬ್ಬ ಸಮಸ್ತ ಸಂಸಾರದ ಸರ್ವಆತ್ಮಗಳಿಗೆ ಪರಮಪಿತ ಪರಮಾತ್ಮ ಶಿವನ ಸ್ಮೃತಿಯನ್ನು ತರಿಸುತ್ತವೆ. ಭಾರತದಲ್ಲಿ ಶಿವಲಿಂಗ ಇರುವಂತಹ ಮಂದಿರಗಳು ಲಕ್ಷಾಂತರ. ಬಹುಶಃ ಎಲ್ಲಿ ಹೋದರೂ ಎಲ್ಲಾ ಮಂದಿರದಲ್ಲಿಯೂ ಅವಶ್ಯ ಶಿವಲಿಂಗವನ್ನು ನೋಡುತ್ತೇವೆ. ಶಿವನ ಗಾಯನ ವಿಲ್ಲದ ಗ್ರಂಥವೇ ಇಲ್ಲಾ, ಆದರೂ ಸಹ ವಿಚಿತ್ರವೇನೆಂದರೆ ಶಿವನ ಪರಿಚಯಕ್ಕೆ ಮನುಷ್ಯಾತ್ಮರು ಅಪರಿಚಿತರಾಗಿದ್ದಾರೆ.
ಭಾರತದ ಮೂಲೆ ಮೂಲೆಗಳಲ್ಲಿ ಶಿವನ ಭಿನ್ನ ಭಿನ್ನ ಹೆಸರುಗಳಲ್ಲಿ ನಿರಾತಾರ ಜ್ಯೋರ್ತಲಿಂಗಾ ಶಿವಪರಮಾತ್ಮನ ಆರಾಧನೆ ನಡೆಯುತ್ತದೆ. ಉದಾಹರಣೆಗೆ ಅಮರನಾಥ, ವಿಶ್ವನಾಥ, ಸೋಮನಾಥ, ಬಬಲನಾಥ, ಪಶುಪತಿನಾಥ ಇತ್ಯಾದಿ ವಾಸ್ತವಿಕವಾಗಿ ಶ್ರೀಕೃಷ್ಣ ಹಾಗೂ ಮರ್ಯಾದ ಪುರುಷೋತ್ತಮ ಶ್ರೀರಾಮನಿಗೂ ಇಷ್ಟವಾದ ದೇವರೆಂದರೆ ಶಿವನೆ ಆಗಿದ್ದಾನೆ.
ಗೋಪೇಶ್ವರದಲ್ಲಿ ಹಾಗೂ ರಾಮೇಶ್ವರದಲ್ಲಿ ವಿಶಾಲವಾದ ಶಿವನಮಂದಿರ ಇಂದಿಗೂ ಮೂಕ ಸಾಕ್ಷಿಯಾಗಿ ನಿಂತಿದೆ. ಇಂತಹ ಶಿವನನ್ನು ಭಾರತದಲ್ಲಿ ಜ್ಯೋರ್ತಲಿಂಗಾ ಶಿವಪರಮಾತ್ಮನೆಂದು ಮೆಕ್ಕಾದಲ್ಲಿ ಸಂಗ್ ಎ. ಅಸ್ವದ್ ಎಂದು, ಮಿಶ್ರದಲ್ಲಿ ಒಸಿರಿಸ್ ಎಂದು, ಬೆಬಲೋನಾದಲ್ಲಿ ಶಿಮಾನ್ ಎಂದು ಹೀಗೆ ಅನೇಕರು ಅನೇಕ ಹೆಸರಿನಲ್ಲಿ ಶಿವನನ್ನು ಪೂಜಿಸುತ್ತಿದ್ದಾರೆ.
@ ಶಿವರಾತ್ರಿ ಎಂದೇ ಏಕೆ ಆಚರಿಸುತ್ತೇವೆ?
ಜಗತ್ತಿನಲ್ಲಿ ಮಾನವನ ಹುಟ್ಟು ಹಬ್ಬವನ್ನು ಆಚರಿಸಬೇಕಾದರೆ ಜನ್ಮದಿನೋತ್ಸವ ಎಂದು ಹೇಳುತ್ತಾರೆ. ಆದರೆ ಶಿವನ ಅವತರಣೆ(ಜನ್ಮ)ಕ್ಕೆ ಮಾತ್ರ ಶಿವರಾತ್ರಿ ಎಂದೇ ಏಕೆ ಕರೆಯುತ್ತೇವೆ, ಶಿವದಿನವೆಂದೂ ಹೇಳುವುದಿಲ್ಲ ಏಕೆ? ಈ ರಾತ್ರಿ ಸ್ಥೂಲ ಅಂಧಕಾರದ ವಾಚಕವಲ್ಲ. ಇದು ಆಧ್ಯಾತ್ಮಿಕ ದೃಷ್ಟಿ ಕೋನದಿಂದ ಕಲ್ಪದ ಅಂತ್ಯದ ಸಮಯ ವ್ಯಾಪ್ತಗೊಂಡ ಘೋರ ಅಜ್ಞಾನ ಹಾಗೂ ತಮೋಪ್ರಧಾನತೆಯ ಪ್ರತೀಕವಾಗಿದೆ. ಯಾವಾಗ ದೃಷ್ಠಿಯಲ್ಲಿ ಅಜ್ಞಾನ, ಅಂಧಕಾರ ಮೊಳಗುತ್ತದೆಯೋ ಆಗ ಕಾಮ, ಕ್ರೋಧ ಮುಂತಾದ ವಿಕಾರಗಳಿಗೆ ವಶೀಭೂತನಾಗಿ ಮಾನವ ದುಃಖಿ ಹಾಗೂ ಅಶಾಂತನಾಗುತ್ತಾನೆ. ಧರ್ಮ ಅಧರ್ಮ ರೂಪ ತಾಳುತ್ತಾದೆ. ಆಗ ಭ್ರಷ್ಟಚಾರ ನಾಲ್ಕು ಕಡೆಯೂ ವ್ಯಾಪಿಸುತ್ತದೆ. ಇಂತಹ ಸಮಯದಲ್ಲಿ ಜ್ಞಾನ ಸೂರ್ಯ ಪರಮಾತ್ಮ ಶಿವ ಅಜ್ಞಾನರೂಪಿ ಅಂಧಕಾರವನ್ನು ವಿನಾಶಮಾಡಲು ಪ್ರಕಟವಾಗುತ್ತಾನೆ. ಇದರ ಪ್ರತೀಕವೇ ಶಿವರಾತ್ರಿ ಹಬ್ಬವಾಗಿದೆ.
@ ಶಿವರಾತ್ರಿ ಎಂದೇ ಏಕೆ ಆಚರಿಸುತ್ತೇವೆ?
ಜಗತ್ತಿನಲ್ಲಿ ಮಾನವನ ಹುಟ್ಟು ಹಬ್ಬವನ್ನು ಆಚರಿಸಬೇಕಾದರೆ ಜನ್ಮದಿನೋತ್ಸವ ಎಂದು ಹೇಳುತ್ತಾರೆ. ಆದರೆ ಶಿವನ ಅವತರಣೆ(ಜನ್ಮ)ಕ್ಕೆ ಮಾತ್ರ ಶಿವರಾತ್ರಿ ಎಂದೇ ಏಕೆ ಕರೆಯುತ್ತೇವೆ, ಶಿವದಿನವೆಂದೂ ಹೇಳುವುದಿಲ್ಲ ಏಕೆ? ಈ ರಾತ್ರಿ ಸ್ಥೂಲ ಅಂಧಕಾರದ ವಾಚಕವಲ್ಲ. ಇದು ಆಧ್ಯಾತ್ಮಿಕ ದೃಷ್ಟಿ ಕೋನದಿಂದ ಕಲ್ಪದ ಅಂತ್ಯದ ಸಮಯ ವ್ಯಾಪ್ತಗೊಂಡ ಘೋರ ಅಜ್ಞಾನ ಹಾಗೂ ತಮೋಪ್ರಧಾನತೆಯ ಪ್ರತೀಕವಾಗಿದೆ. ಯಾವಾಗ ದೃಷ್ಠಿಯಲ್ಲಿ ಅಜ್ಞಾನ, ಅಂಧಕಾರ ಮೊಳಗುತ್ತದೆಯೋ ಆಗ ಕಾಮ, ಕ್ರೋಧ ಮುಂತಾದ ವಿಕಾರಗಳಿಗೆ ವಶೀಭೂತನಾಗಿ ಮಾನವ ದುಃಖಿ ಹಾಗೂ ಅಶಾಂತನಾಗುತ್ತಾನೆ. ಧರ್ಮ ಅಧರ್ಮ ರೂಪ ತಾಳುತ್ತಾದೆ. ಆಗ ಭ್ರಷ್ಟಚಾರ ನಾಲ್ಕು ಕಡೆಯೂ ವ್ಯಾಪಿಸುತ್ತದೆ. ಇಂತಹ ಸಮಯದಲ್ಲಿ ಜ್ಞಾನ ಸೂರ್ಯ ಪರಮಾತ್ಮ ಶಿವ ಅಜ್ಞಾನರೂಪಿ ಅಂಧಕಾರವನ್ನು ವಿನಾಶಮಾಡಲು ಪ್ರಕಟವಾಗುತ್ತಾನೆ. ಇದರ ಪ್ರತೀಕವೇ ಶಿವರಾತ್ರಿ ಹಬ್ಬವಾಗಿದೆ.
@ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ
ಪರಮಪಿತ ಶಿವಪರಮಾತ್ಮ ಒಂದು ರೂಪದಲ್ಲಿದ್ದಾರೆ. ಆದ್ದರಿಂದ ಭಕ್ತ ಜನ ಶಿವಲಿಂಗದ ರೂಪಕ್ಕೆ ಆರಾಧನೆ ಮಾಡುತ್ತಾರೆ. ಅರ ಮೇಲೆ ಹಾಲು ಮಿಶ್ರಿತ ಮಜ್ಜಿಗೆ, ಬಿಲ್ವಪತ್ರೆ, ಎಕ್ಕೆಹೂವನ್ನು ಅಪರ್ಿಸುತ್ತಾರೆ. ಇದರ ರಹಸ್ಯ ತಮ್ಮಲ್ಲಿಯ ವಿಕಾರಗಳನ್ನು ಶಿವನಿಗೆ ಅರ್ಪಿಸಿ ನಿರ್ವಿಕಾರಿಗಳಾಗಿ ಪವಿತ್ರತೆಯ ವ್ರತವನ್ನು ಮಾಡುತ್ತಾರೆ. ಬ್ರಹ್ಮಚಾರ್ಯ ವೃತವೇ ಸತ್ಯ ಉಪವಾಸ. ಏಕೆಂದರೆ ಇದರ ಪಾಲನೆಯಿಂದಲೇ ಮನುಷ್ಯ ಆತ್ಮನು ಪರಮಾತ್ಮನ ಸಾಮಿಪ್ಯ ಪಡೆಯಲು ಸಾಧ್ಯ.
ಹೀಗೆ ಒಂದು ದಿನದ ಜಾಗರಣೆಯಿಂದ ಅವಿನಾಶಿ ಪ್ರಾಪ್ತಿಯಾಗುವುದಿಲ್ಲ. ಆದರೆ ಈ ಕಲಿರೂಪ ಕತ್ತಲೆಯಿಂದ ಆತ್ಮನನ್ನು ಜಾಗೃತ ಮಾಡಲು ಜ್ಞಾನರೂಪಿ ತೈಲವನ್ನು ಹಾಕುತ್ತಾ ಸ್ವಯಂನನ್ನು ಸ್ವಯಂನೇ ಜಾಗೃತ ಮಾಡಿಕೊಳ್ಳಬೇಕು. ಇದುವೇ ಸತ್ಯ ಜಾಗರಣೆ.
Hi' dis sanjay frm cn halli i saw u r blog it's comin good :-):-):-):-) innu hechinna janapriyate galisali . . . Chikkanayakanahalli talokina samagra mahiti bandare innu chennagiruttae shubashayagolendige sanjay.c
ಪ್ರತ್ಯುತ್ತರಅಳಿಸಿ