ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಡಿದರು. ಪ್ರಸ್ತುತ ಸಮಾದಲ್ಲಿನ ಆಡಳಿತಯಂತ್ರ ಸುಗಮವಾಗಿ ಸಾಗಬೇಕಾದರೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಾಗ ಮಾತ್ರ ಸಾಧ್ಯ,ಜನತೆ ತಮ್ಮ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದು ಅವುಗಳ ಪರಿಹಾರಕ್ಕೆ ಆಗ್ರಹಿಸುವುದು ಸಹಜ ಆದರೆ ಸಮಸ್ಯೆಳಿಗೆ ಪರಿಹಾರ ಕಂಡುಕೊಳ್ಳಲು ಕೆಲಸಮಯ ತೆಗೆದು ಕೊಳ್ಳುತ್ತದೆ ಇದನ್ನು ತಿಳಿದ ಜನರು ಅಧಿಕಾರಿಗಳ ನಡುವೆ ಸ್ಪಂದನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿದರು. ಇಂದು ನಾವೆಲ್ಲಾ ಗಮನಿಸಿದಂತೆ ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸುವ ಬದಲು ತಮ್ಮತಮ್ಮಲ್ಲೇ ಕಿತ್ತಾಟವನ್ನು ಮಾಡುತ್ತಾ ಕುರ್ಚಿಯ ವ್ಯಾಮೋಹದಲ್ಲಿ ಸಿಲುಕಿದ್ದು,ರಾಜ್ಯ್ದ ಅಭಿವೃದ್ದಿಯನ್ನೇ ಮರೆತು ಕುಳಿತಿದೆ.ಈರೀತಿಯ ಬೆಳವಣಿಗೆ ಮುಂದುವರೆದರೆ ರಾಜ್ಯದ ಅಭಿವೃದ್ದಿಗೆ ತೊಡಕಾಗಿ ಪರಿಣಮಿಸುತ್ತದೆ ಎಂದರು. ತಾಲ್ಲೂಕಿನಾದ್ಯಂತ ಬರಗಾಲ ಅವರಿಸಿದ್ದು ಕುಡಿಯುವ ನೀರಿಗಾಗಿ ಬೋರ್ ವೆಲ್ ಗಳನ್ನು,ಜಾನುವಾರುಗಳಿಗೆ ಮೇವು,ನೀರಿನ ವ್ಯವಸ್ಥೆಗಾಗಿ ಗೋಶಾಲೆಗಳನ್ನು ತೆರೆಯುವ ಕಾರ್ಯಗಳು ನಡೆಯುತ್ತಿದ್ದು,ಜನರು ಸಹ ತಮ್ಮ ಪ್ರದೇಶಗಳ...