ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ಚೆಕ್ ವಿತರಣೆ

ಹುಳಿಯಾರು ಹೋಬಳಿ ವ್ಯಾಪ್ತಿಯ ಹೊಯ್ಸಳಕಟ್ಟೆ,ದಸೂಡಿ,ಗಾಣದಾಳು,ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಅಭಿವೃದ್ದಿಗೆ ಒಂದು ಲಕ್ಷದ ಇಪ್ಪತೈದು ಸಾವಿರ ಧನ ಸಹಾಯ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ನೀಡಲಾಗಿದೆ ಎಂದು ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ತಿಳಿಸಿದರು ಅವರು ಹೊಯ್ಸಳಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ನೀಡಿ ಮಾತನಾಡಿದರು. ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ನೀಡಿದರು. ಸಂಸ್ಥೆಯು ಗ್ರಾಮೀಣ ಭಾಗದ ಬಡ ಜನರ ಆರ್ಥಿಕ ಸಬಲತೆಗೆ ಹೆಚ್ಚು ಶ್ರಮಿಸುತ್ತಿದ್ದು,ಗ್ರಾಮದಲ್ಲಿ ಹತ್ತು ಜನರ ಗುಂಪು ರಚಿಸಿಕೊಂಡು ಸಂಸ್ಥೆಯಿಂದ ಸಾಲ ಸೌಲಭ್ಯ ಪಡೆಯಬಹುದು ಎಂದು ಸಲಹೆ ನೀಡಿದರು.ಹೊಯ್ಸಳಕಟ್ಟೆಯಲ್ಲಿ ಇನ್ನೊಂದು ವಾರದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಘಾಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ದಾನಿ ರಾಮದಾಸಪ್ಪ, ಹಾ.ಉ.ಸ.ಸ.ಅಧ್ಯಕ್ಷ ಜಯಲಿಂಗರಾಜು,ಕಾರ್ಯದರ್ಶಿ ಚಿದಾನಂದ್ , ಪಿಡಿಒ ರಮೇಶ್ ,ಶಿಕ್ಷಕ ವದ್ದಿಗಯ್ಯ, ಪ್ರಗತಿ ಬಂಧು ಒಕ್ಕೂಟ

ದಸೂಡಿಯ ಶ್ರೀ ಕ್ಷೇತ್ರ ಮಲಕಾಪುರದಲ್ಲಿ ಜಾತ್ರೆ

ಹುಳಿಯಾರು: ಹೋಬಳಿಯ ದಸೂಡಿ ಸಮೀಪದ ಶ್ರೀ ಕ್ಷೇತ್ರ ಮಲಕಾಪುರದಲ್ಲಿ ನೂತನ ವರ್ಷವಾದ ಜನವರಿ ಒಂದರಂದು ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವ ಜರುಗಲಿದೆ.ಮುಂಜಾನೆಯಿಂದ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು ಮಹಾಮಂಗಳಾರತಿ ನಂತರ ಪ್ರಸಾದವಿನಿಯೋಗ ನಡೆಯಲಿದೆ. ಆ ನಂತರ ದೇವಸ್ಥಾನದ ಸ್ಥಳ ಪುರಾಣ,ಕ್ಷೇತ್ರದ ಮಾಹಿತಿ, ಮುಂತಾದ ವಿವರವುಳ್ಳ ಸಾಮಾಜಿಕ ಜಾಲತಾಣಕ್ ಹಾಗೂ ವೆಬ್ ಸೈಟ್ಗೆ ಚಾಲನೇ ನೀಡಲಾಗುವುದು. ಸ್ಥಳ ಮಹಿಮೆ: ಶ್ರೀ ಕ್ಷೇತ್ರ ದಸೂಡಿ ಗ್ರಾಮದಿಂದ 3 ಮೈಲಿಗಳ ದೂರದಲ್ಲಿರುವ ಮಲಕಾಪುರ ಕ್ಷೇತ್ರವು ಭವ್ಯವಾದ ಇತಿಹಾಸವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ.ಹಿರಿಯರು ಹೇಳುವ ಪ್ರಕಾರ ರಾಮಾಯಣದಲ್ಲಿ ಬರುವ ಶ್ರೀ ರಾಮಚಂದ್ರನು ರಾವಣಾಸುರನನ್ನು ಸಂಹಾರ ಮಾಡಲು ತನಗೆ ಯುದ್ಧದಲ್ಲಿ ಸಹಾಯ ನೀಡಿದ್ದ ಸುಗ್ರೀವನಿಗೆ ಒಂದು ನೆಲೆಯನ್ನು ಸೂಚಿಸಲು ಈ ಬೆಟ್ಟದ ಮೇಲೆ ನಿಂತು ಬಾಣ ಹೂಡಿದನು ಎಂಬ ಪುರಾಣ ಐತಿಹ್ಯ ಈ ಜಾಗಕ್ಕಿದೆ. ಇಂತಹ ಪುರಾಣದ ಹಿನ್ನೆಲೆ ಹಾಗೂ ಭವ್ಯ ಪರಂಪರೆಯನ್ನು ಹೊಂದಿರುವ ಶ್ರೀ ಮಲಕಾಪುರವು ಪುಣ್ಯಕ್ಷೇತ್ರದ ಜಾತ್ರೆಗೆ ಸಮಸ್ತರು ಆಗಮಿಸಿ ಸ್ವಾಮಿಯ ದರ್ಶನದೊಂದಿಗೆ ಕೃತಾರ್ಥರಾಗಬೇಕೆಂದು ಶ್ರೀ ಸೇನೆ, ದಸೂಡಿ ಸಮಿತಿಯವರು ಕೋರಿದ್ದಾರೆ.

ವಿದ್ಯಾವಾರಿಧಿಯಲ್ಲಿ ವಿಶ್ವಮಾನವ ದಿನಾಚರಣೆ

ಹುಳಿಯಾರು :ಪಟ್ಟಣದ ವಿದ್ಯಾವಾರಿಧಿಶಾಲೆಯಲ್ಲಿ ಜ್ಞಾನಪೀಠ ಪುರಷ್ಕೃತ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಮಕ್ಕಳಿಂದ ಕುವೆಂಪು ಅವರು ಬರೆದ ಗೀತೆಗಳ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಹುಳಿಯಾರಿನ ವಿದ್ಯಾವಾರಿಧಿಶಾಲೆಯಲ್ಲಿ ಮಂಗಳವಾರದಂದು ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್,ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಮಾತನಾಡಿ ಕುವೆಂಪುರವರು ಅಪೂರ್ವ ಲೇಖಕರಾಗಿದ್ದು ಅವರ ಕೃತಿಗಳು ಭಾರತೀಯ ಸಾಹಿತ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಕುವೆಂಪುರವರು ಮಾಡಿರುವ ಸಾಧನೆ ಅವಿಸ್ಮರಣೀಯವಾಗ್ಗಿದ್ದು ಅವರಾಗಲೀ, ಅವರ ಸಾಹಿತ್ಯವಾಗಲೀ ಜನಮಾನಸದಿಂದ ಮರೆಯಾಗಿಲ್ಲ. ಪಂಪ- ಕುಮಾರವ್ಯಾಸರಂತೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕುವೆಂಪುರವರ ಹೆಸರು ಮತ್ತು ಅವರು ನೀಡಿದ ಕೊಡುಗೆ ಚಿರಸ್ಥಾಯಿಯಾಗಿದೆ ಎಂದರು.  ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.

ಹುಳಿಯಾರಿನಲ್ಲಿ ಜೆಡಿಎಸ್ ಗೆಲುವಿಗೆ ಸಂಭ್ರಮಾಚರಣೆ

ಹುಳಿಯಾರು:   ಸ್ಥಳಿಯ ಜೆಡಿಎಸ್ ಶಾಸಕ ಸುರೇಶ್ ಬಾಬುಗೆ ಹಾಗೂ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದ್ದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಗೆಲುವಿಗೆ ಪಕ್ಷದ ಮುಖಂಡರುಗಳು,ಕಾರ್ಯಕರ್ತರುಗಳು ಹಾಗೂ ಗ್ರಾಮಪಂಚಾಯ್ತಿ ಬಹುತೇಕ ಸದಸ್ಯರುಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ತಾಲ್ಲೂಕ್ ಯುವ ಜೆಡಿಎಸ್ ಅಧ್ಯಕ್ಷ ಗೌಡಿ ಮಾತನಾಡಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಜೆಡಿಎಸ್ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ ಮತ ಚಲಾವಣೆ ನಡೆದಿದ್ದು ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿರುವುದು ಸಂತಸ ತಂದಿದೆ ಎಂದರು. ಅಭಿಮಾನಿಗಳು ಪರಸ್ಪರ ಸಿಹಿ ಹಂಚಿದರು, ಕಾರ್ಯಕರ್ತರುಗಳು ಬೈಕ್ ಗಳಲ್ಲಿ ಪಟ್ಟಣದ ತುಂಬಾ ಸಂಚರಿಸಿ ಶಾಸಕ ಸುರೇಶ್ ಬಾಬು ಹಾಗೂ ಗೆದ್ದ ಬೆಮೆಲ್ ಕಾಂತರಾಜು ಪರ ಜಯಘೋಷ ಹಾಕಿ ಗೆಲುವಿಗೆ ಖಷಿಪಟ್ಟರು. ಸಂಭ್ರಮಾಚರಣೆಯಲ್ಲಿ ಜಿಪಂ ಸದಸ್ಯೆ ಮಂಜುಳಾ,ಗ್ರಾ.ಪಂ.ಅಧ್ಯಕ್ಷೆ ಗೀತಾ, ಸದಸ್ಯರುಗಳಾದ ದಯಾನಂದ್,ಸಿದ್ದಗಂಗಮ್ಮ,ಗೀತಾ ಅಶೋಕ್ ಬಾಬು,ಬಾಲರಾಜು,ಅಹ್ಮದ್ ಖಾನ್,ಜಬೀಉಲ್ಲಾ ಇಮ್ರಾಜ್ ,ಶಿವನಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭಾಷೆ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ :ನಟರಾಜು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲೀಷು ನಿಘಂಟು ವಿತರಿಸಲಾಯಿತು. ಪ್ರಾಂಶುಪಾಲ ನಟರಾಜು ಹಾಗೂ ಉಪನ್ಯಾಸಕರುಗಳಾದ ಹೆಚ್.ಎಸ್.ನಾರಾಯಣ,ರಮೇಶ್,ರೇವಣ್ಣ,ಎನ್.ಕವಿತ ಇನ್ನಿತರರಿದ್ದರು.    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲೀಷ್ ಪದಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ತಮ್ಮ ನಿತ್ಯಜೀವನದಲ್ಲಿ ಬಳಸುವಂತಾದಾಗ ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಟರಾಜು ಅಭಿಪ್ರಾಯಪಟ್ಟರು.    ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಹುಳಿಯಾರು ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲೀಷು ನಿಘಂಟು ವಿತರಿಸಿ ಅವರು ಮಾತನಾಡಿದರು.ನಿಘಂಟು ಇಂಗ್ಲೀಷ್ ಕಲಿಯುವವರಿಗೆ ಅನೇಕ ವಿವರವಾದ ಉದಾಹರಣೆಗಳು ಮತ್ತು ಆ ಮೂಲಕ ನಮ್ಮ ಭಾಷೆ ಮತ್ತು ವ್ಯಾಕರಣ ಕೌಶಲ್ಯ ಸುಧಾರಿಸಲು ಪರಿಪೂರ್ಣ ಸಾಧನವಾಗಿದೆ ಎಂದರು.       ಉಪನ್ಯಾಸಕರುಗಳಾದ ಹೆಚ್.ಎಸ್.ನಾರಾಯಣ,ರಮೇಶ್,ರೇವಣ್ಣ,ಎನ್.ಕವಿತ ಇನ್ನಿತರರಿದ್ದರು.

ಗುರುವಾರದಂದು ಹುಳಿಯಾರಿಗೆ ಮುಖ್ಯಮಂತ್ರಿ :ಸಿಂಗಾರಗೊಂಡ ಪಟ್ಟಣ

ವರದಿ: ಡಿ.ಆರ್.ನರೇಂದ್ರಬಾಬು ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು. ಹುಳಿಯಾರು : ಪರಿಷತ್ ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯನವರು ಇಂದು(ಗುರುವಾರ) ಪಟ್ಟಣಕ್ಕಾಗಮಿಸುತ್ತಿರುವ ಹಿನ್ನಲೆಯಲ್ಲಿ ಅವರು ಸಂಚರಿಸುವ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ತೇಪೆ ಹಚ್ಚಿ,ಕಸಕಡ್ಡಿ ತೆರವುಗೊಳಿಸಿ ಪಟ್ಟಣವನ್ನು ಸಿಂಗಾರಗೊಳಿಸಲಾಗಿದೆ.ಇದೇ ವೇಳೆ ರಸ್ತೆ ಗುಂಡಿಯ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದ ಲೋಕೋಪಯೋಗಿ ಇಲಾಖೆ ಇದೀಗ ಎಚ್ಚೆತ್ತು ಗುಂಡಿ ಮುಚ್ಚಲು ಮುಂದಾಗಿದ್ದು ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಕಳೆದೆರಡು ವರ್ಷಗಳಿಂದ ಅಪಘಾತಕ್ಕೆ ಕಾರಣವಾಗಿದ್ದ ಈ ರಸ್ತೆಗುಂಡಿ ಮುಚ್ಚಲು ನಡೆದ ಹೋರಾಟಗಳು ಸಫಲವಾಗದಿದ್ದು ಇದೀಗ ಮುಖ್ಯಮಂತ್ರಿಗಳ ಆಗಮನದ ಉದ್ದೇಶದಿಂದ ಗುಂಡಿಮುಕ್ತ ರಸ್ತೆಯಾಗಿಸಲು ಹೊರಟಿರುವ ಇಲಾಖೆಗೆ ಇದುವರೆಗೂ ಶ್ರೀಸಾಮಾನ್ಯರ ಸಾರ್ವಜನಿಕರ ಸಮಸ್ಯೆ ಕಾಡಿರಲಿಲ್ಲವೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬಂದಿದೆ. ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು. ಹೌದು ಪಟ್ಟಣದಿಂದ ಹಾದುಹೋಗಿರುವ ಹೆದ್ದಾರಿಯ ಸಮಸ್ಯೆ ಇಂದುನಿನ್ನೆಯದಲ್ಲ.ಭಾರಿಗುಂಡಿಗಳಿಂದ ತುಂಬಿದ್ದ ಈ ರಸ್ತೆಯು ಬಳಸಲು ಯೋಗ್ಯವಾಗಿಲ್ಲದೆ ಇದಕ್ಕಾಗಿ ನಡೆ

ವಿ.ಪ ಚುನಾವಣೆ :ಪಕ್ಷೇತರ ಅಭ್ಯರ್ಥಿ ನಟರಾಜು ಪ್ರಚಾರ

ವಿಧಾನ ಪರಿಷತ್ ಚುನಾವಣೆ ತುಮಕೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಮಕೂರಿನ ಹೆಚ್.ಆರ್.ನಟರಾಜು ಗುರುವಾರ ಸಂಜೆ ಹುಳಿಯಾರಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು. ವಿಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಮಕೂರಿನ ಹೆಚ್.ಆರ್.ನಟರಾಜು ಹುಳಿಯಾರಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡರು.ಗ್ರಾಪಂ ಸದಸ್ಯರುಗಳು,ರೈತಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು. ಕಳೆದ ಹಲವಾರು ದಿನಗಳಿಂದ ಚುನಾವಣೆ ಸಿದ್ದತೆ ಮಾಡಿಕೊಂಡಿರುವ ತಾವು ಈಗಾಗಲೆ ಜಿಲ್ಲೆಯ ಶಿರಾ ,ಪಾವಗಡ ಹೊರತುಪಡಿಸಿ ಎಲ್ಲಡೆ ಒಂದು ಸುತ್ತಿನ ಪ್ರಚಾರ ನಡೆಸಿರುವುದಾಗಿ ತಿಳಿಸಿದರು.ಎಲ್ಲಡೆ ತಮಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಕಾರ್ಯಕರ್ತರ ,ಬೆಂಬಲಿಗರ ಪರಿಪೂರ್ಣ ಪರಿಶ್ರಮದಿಂದಾಗಿ ತಮಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ರೈತಸಂಘ,ರಕ್ಷಣ ವೇದಿಕೆ ಸೇರಿದಂತೆ ಹತ್ತುಹಲವಾರು ಕನ್ನಡಪರ ಸಂಘಟನೆಗಳು ತಮಗೆ ಬೆಂಬಲ ಸೂಚಿಸಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಸಂಘಟನೆಗಳ ಮೂಲಕ ಗ್ರಾಮಪಂಚಾಯ್ತಿ ಸದಸ್ಯರಾಗಿರುವವರ ಮತ ಕೊಡಿಸಲಿದ್ದಾರೆ ಎಂದರು.ಡಿ.೭ ರಂದು ತಾವು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದ ಅವರು ಜಿಲ್ಲೆಯ ೪೩೦೦ ಗ್ರಾಮಪಂಚಾಯ್ತಿ ಸದಸ್ಯರುಗಳ ಪೈಕಿ ೧೩೦೦ ಗ್ರಾಮಪಂಚಾಯ್ತಿ ಸದಸ್ಯರುಗಳು ಬೇಷರತ್ ಬೆಂಬಲ ಸೂಚಿಸಿದ್ದು ಉಳಿದವರುಗಳನ್ನು ಶೀಘ್ರ ಭೇಟಿಯಾಗಿ ಮತಯಾಚನೆ ಮಾಡಲಿರುವುದಾಗಿ ತಿಳಿಸಿದರು.

ಮುಕ್ತಿಧಾಮಕ್ಕೆ ೭ ಲಕ್ಷ ಅನುದಾನ ಹಾಗೂ ಶವವಾಹನದ ಭರವಸೆ

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಅವರೊಂದಿಗೆ ಹುಳಿಯಾರಿನ ಮುಕ್ತಿಧಾಮ ಅಭಿವೃದ್ಧಿ ಸಮಿತಿ ಸದಸ್ಯರು. ಪಟ್ಟಣದಲ್ಲಿರುವ ಮುಕ್ತಿಧಾಮಕ್ಕೆ ಅಗತ್ಯ ಸೌಲಭ್ಯವುಳ್ಳ ಚಿತಾಗಾರಕ್ಕೆ ೭ ಲಕ್ಷದ ಅನುದಾನ ಹಾಗೂ ಶವ ಸಾಗಿಸಲು ವಾಹನ ಸೌಕರ್ಯ ಕಲ್ಪಿಸಿಕೊಡುವುದಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಭರವಸೆಯಿತ್ತರು. ಪಟ್ಟಣದಲ್ಲಿನ ಮುಕ್ತಿಧಾಮದಲ್ಲಿ ದಹನ ಕಾರ್ಯಕ್ಕೆ ಕೆಲವೊಂದು ಮೂಲಸೌಕರ್ಯವಿಲ್ಲದೆ ಅಂತ್ಯಕ್ರಿಯೆ ನಡೆಸುವುದು ಕಷ್ಟಕರವಾಗಿ ಪರಿಣಮಿಸಿದ್ದು ಅಲ್ಲದೆ ರುದ್ರಭೂಮಿಯು ಪಟ್ಟಣದಿಂದ ಎರಡು ಕಿಮೀ ದೂರವಿದ್ದು ಶವ ಸಾಗಿಸಲು ವಾಹನವೊಂದರ ಅವಶ್ಯಕತೆಯಿದ್ದು ಸಮಿತಿಯ ಸದಸ್ಯರುಗಳು ಧಾರ್ಮಿಕ ದತ್ತಿ ಇಲಾಖೆಯ ಮೊರೆಹೊಕ್ಕಿದ್ದರು. ರುದ್ರಭೂಮಿ ಅಭಿವೃದ್ಧಿ / ನವೀಕರಣ ಯೋಜನೆಯಡಿಯಲ್ಲಿ ಇಲಾಖೆಯು ಅನುದಾನ ನೀಡಬೇಕೆಂದು ಮನವಿ ಮಾಡಿದ್ದರು. ಇಲ್ಲಿಯ ಸಮಸ್ಯೆ ಮನಗಂಡ ಜಿಲ್ಲಾ ಉಸ್ತುವಾರಿ ಸಚಿವರು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ರುದ್ರಭೂಮಿ ಅಭಿವೃದ್ಧಿಗಾಗಿ ತಾವೀಗಾಗಲೆ ೭ ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಹಾಗೂ ಶೀಘ್ರವೇ ಶವ ಸಾಗಿಸುವ ವಾಹನದ ಸೌಕರ್ಯ ಕೂಡ ಕಲ್ಪಿಸಿಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಕ್ತಿಧಾಮ ಸಮಿತಿಯ ಅಧ್ಯಕ್ಷ

ಕನ್ನಡ ಭಾಷಾ ಬೋಧಕರ ಪುನಶ್ಚೇತನ ಕಾರ್ಯಾಗಾರ ೭ ರಂದು

ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಹುಳಿಯಾರಿನ ಕನಕದಾಸ ಪ್ರೌಢಶಾಲೆಯಲ್ಲಿ ದಿನಾಂಕ ೭ ರಂದು ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦.೩೦ರಿಂದ ೧.೩೦ರವರೆಗೆ ೮,೯ ನೇ ತರಗತಿಯ ಹಳಗನ್ನಡ ಗದ್ಯ ಮತ್ತು ಪದ್ಯಗಳ ರಸಗ್ರಹಣ ಮತ್ತು ವಿಶ್ಲೇಷಣೆ ಹಾಗೂ ಮ.೨.೩೦ ರಿಂದ ೪.೩೦ ರವರೆಗೆ ೧೦ ನೇ ತರಗತಿಯ ಹಳೆಗನ್ನಡ ಗದ್ಯ ಮತ್ತು ಪದ್ಯಗಳ ರಸಗ್ರಹಣ ಮತ್ತು ವಿಶ್ಲೇಷಣೆ ನಡೆಯಲಿದೆ. ತಿಪಟೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಮುರಳಿಧರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.  ಕಾರ್ಯಾಗಾರಕ್ಕೆ ಆಗಮಿಸುವ ಶಿಕ್ಷಕರು ತರಗತಿಯ ಕನ್ನಡ ಪುಸ್ತಕದೊಂದಿಗೆ ಆಗಮಿಸಬೇಕು ಹಾಗೂ ತಾಲ್ಲೂಕಿನ ಎಲ್ಲಾ ಕನ್ನಡ ಭಾಷಾ ಬೋಧಕರು ತಪ್ಪದೇ ಹಾಜರಾಗಬೇಕೆಂದು ಬೋಧಕರ ಸಂಘದ ಅಧ್ಯಕ್ಷ ಕೆ.ವೀರಣ್ಣ ಮನವಿ ಮಾಡಿದ್ದಾರೆ.

ಮೈಲಾರಲಿಂಗೇಶ್ವರ ಜಾತ್ರ ಮಹೋತ್ಸವ

ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರ ಸ್ವಾಮಿಯವರ ೨೩ ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರದಂದು ಗ್ರಾಮದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮ, ಕೆಂಕೆರೆ ಕಾಳಮ್ಮ ಹಾಗೂ ಗೌಡಗೆರೆ ದುರ್ಗಮ್ಮ ದೇವತೆಗಳ ಕೂಡೂಭೇಟಿಯೊಂದಿಗೆ ಆರಂಭವಾಗಿದೆ.ಭಾನುವಾರದಂದು ಮುಂಜಾನೆ ಗಂಗಾಸ್ನಾನದ ನಂತರ ನಡೆಮುಡಿಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಗುವುದು.ನಂತರ ಹುಳಿಯಾರು ಬುಡಕಟ್ಟು ಜನಾಂಗದವರಿಂದ ದೋಣಿಸೇವೆ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರೆವೇರಿಸಲಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯ ಸಮಿತಿಯವರು ಕೋರಿದ್ದಾರೆ.

ಪಂಚಾಯ್ತಿ ಕಾರ್ಯವೈಖರಿಗೆ ಬೇಸತ್ತು ಸದಸ್ಯನಿಂದಲೇ ಪ್ರತಿಭಟನೆ

ಏಕಾಂಗಿ ಹೋರಾಟಕ್ಕೆ ತಾರ್ಕಿಕ ಅಂತ್ಯ -------------------- ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ಅಭಿವೃದ್ಧಿ ವಿಚಾರವಾಗಿ ಸದಸ್ಯ ನಾಗರಾಜು ನಡೆಸಿದ ಧರಣಿ ಸ್ಥಳದಲ್ಲಿ ಇಓ ಕೃಷ್ಣಮೂರ್ತಿ ಆಗಮಿಸಿ ಸಮಸ್ಯೆ ಆಲಿಸಿ ಪಿಏಇಓ ಮೂಲಕ ಪಟ್ಟಿ ಮಾಡಿಸಿದರು.ರಾಜ್ಯರೈತಸಂಘದ ಸತೀಶ್,ಮೆಹಬೂಬ್ ಸಾಬ್ ಚಿತ್ರದಲ್ಲಿದ್ದಾರೆ. ಹುಳಿಯಾರು ಸಮೀಪದ ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ಜನರ ನಿರೀಕ್ಷೆಗೆ ತಕ್ಕ ಕೆಲಸವಾಗುತ್ತಿಲ್ಲ,ಹೊಸ ಸದಸ್ಯರು ಆಯ್ಕೆಯಾಗಿ ಆರು ತಿಂಗಳಾಗುತ್ತಾ ಬಂದಿದ್ದು ಕಳೆದ ಆರು ತಿಂಗಳ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಮೌಲ್ಯಮಾಪನ ಸಾರ್ವಜನಿಕರ ಎದುರಲ್ಲೆ ಆಗಲಿ ಎಂದು ಗ್ರಾಪಂ ಸದಸ್ಯ ಎಂ.ನಾಗರಾಜು(ಕಾಡಿನರಾಜ) ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದ ಘಟನೆ ಕೆಂಕೆರೆ ಪಂಚಾಯ್ತಿ ಆವರಣದಲ್ಲಿ ನಡೆಯಿತು. ಈ ಬಗ್ಗೆ ಮಾತನಾಡಿದ ಅವರು ಕೆಂಕೆರೆ ಗ್ರಾಪಂನಲ್ಲಿ ಹಿರಿಯ ಪಂಚಾಯ್ತಿ ಸದಸ್ಯರಾಗಿರುವ ನಾನು ಈ ಹಿಂದೆ ಕೂಡ ಎರಡು ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೆ.ನಯಾಪೈಸೆ ಖರ್ಚಿಲ್ಲದೆ ಈ ಬಾರಿ ಕೂಡ ಗೆದ್ದು ಬಂದಿರುವ ನನಗೆ ಸಾರ್ವಜನಿಕರ ಆಶೋತ್ತರಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ,ಯಾವುದೇ ಕೆಲಸಗಳಿಗೂ ಪಂಚಾಯ್ತಿಯಲ್ಲಿ ಸಹಕಾರ ದೊರೆಯದ ಕಾರಣ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದು ಈ ಬಗ್ಗೆ ಸಾರ್ವಜನಿಕರ ಎದುರಿನಲ್ಲೆ ಸಮಸ್ಯೆ ಪರಿಹಾರಕ್ಕೆ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ತಿಳಿಸಿದರು. ಆರೋಪ ಏನು: