ಹುಳಿಯಾರಿನ ಬಿ.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು ಘಟಕ-2 ರ ವತಿಯಿಂದ 2021-22ನೆಯ ಸಾಲಿನ "ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ"ವನ್ನು ಗುರುವಾಪುರ ಗ್ರಾಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರಿದು ವೈಯಕ್ತಿಕ ನೆಲೆಯಲ್ಲಿಯೂ, ಸಾಮಾಜಿಕ ನೆಲೆಯಲ್ಲಿಯೂ ಗ್ರಾಮಗಳು ಅಭಿವೃದ್ಧಿ ಹೊಂದಬೇಕಾಗಿದೆ.ಈ ನಿಟ್ಟಿನಲ್ಲಿ ಜಾತಿ - ಧರ್ಮದ ಸಂಕೋಲೆಯನ್ನು ತೊಡೆದು ಹಾಕಬೇಕು ಹಾಗೂ ಗಾಂಧೀಜಿಯವರ ಕನಸಿನಂತೆ. ಗ್ರಾಮ ಸ್ವರಾಜ್ಯವಾಗಬೇಕು ಎಂದು ಅವರು ಕರೆ ನೀಡಿದರು.ಗ್ರಾಮಗಳು. ಸಶಕ್ತವಾಗಲು ಯುವ ಶಕ್ತಿಯ ಒಳಗೊಳ್ಳುವಿಕೆ ಅಗತ್ಯವಿದೆ.ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮಗಳ ಬಗ್ಗೆ ಅನುಭವ ಅಗತ್ಯ. ಶ್ರಮದಾನದ ಸಮಯದಲ್ಲಿ ವಿದ್ಯಾರ್ಥಿಗಳು ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಹಕಾರ ಮತ್ತು ಸುರಕ್ಷತೆ ನೀಡಿ, ಕೃಷಿ ಹಾಗೂ ಇನ್ನಿತರ ಗ್ರಾಮೀಣ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.ಹಲವಾರು ರೋಗ ರುಜಿನಗಳನ್ನು ಕೇವಲ ಸ್ವಚ್ಚತೆಯಿಂದಲೇ ದೂರವಿಡಬಹುದು.ಸ್ವಚ್ಚ,ಸದೃಢ ಗ್ರಾಮಗಳ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದು ಅವರು ಒತ್ತಿ ಹೇಳಿದರು.
ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೀರಣ್ಣ ಎಸ್.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಸೇವಾ ಯೋಜನೆ ಘಟಕ ಒಂದರ ಶಿಬಿರಾಧಿಕಾರಿ ಡಾ||ಮೋಹನ್ ಕುಮಾರ್ ಮಿರ್ಲೆ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಶಿಬಿರದ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಯಕ್ರಮದಲ್ಲಿ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಜೀವ ಸದಸ್ಯರಾದ ಕೆ.ಬಿ.ಮರುಳಸಿದ್ದಪ್ಪ, ಗಾಣಧಾಳು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ನಟರಾಜು,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ.ಕೆ.ಶಿವಕುಮಾರ್,ಪಂಚಾಯತ್ ಸದಸ್ಯರು ಶ್ರೀನಿವಾಸ ಜಿ.ಎಸ್,ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ವಸಂತ ಕುಮಾರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಞಾನ ಮೂರ್ತಿ,ಬಿ.ಎಂ.ಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎಂ.ನವೀನ್ ಕೆಂಕೆರೆ ಸೇರಿದಂತೆ ಮತ್ತಿತವರು ಉಪಸ್ಥಿತರಿದ್ದರು.ರಂಜಿತಾ.ಕೆ ಮತ್ತು ತಂಡದವರು ಪ್ರಾರ್ಥನೆಗೈದರು. ಪ್ರಾಧ್ಯಾಪಕರಾದ ಸೋಮಶೇಖರಪ್ಪ.ಎಂ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ ಎರಡರ ಸಂಯೋಜನಾಧಿಕಾರಿಯಾದ ಡಾ.ಜಯಶ್ರೀ ಬಿ. ವಂದಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ