ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಮ್ಮನವರ ಹತ್ತನೇ ವರ್ಷದ ಜಾತ್ರಾ ಮಹೋತ್ಸವ ಜ.28ರ ಶನಿವಾರದಿಂದ

ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ಹತ್ತನೇ ವರ್ಷದ ಜಾತ್ರಾ ಮಹೋತ್ಸವ ಜ.28 ರ ಶನಿವಾರದಿಂದ ಫೆ.5 ರ ಭಾನುವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಜ.28 ಹಾಗೂ 29 ರಂದು ಕೋಡಿಪಾಳ್ಯ,ಲಿಂಗಪ್ಪನಪಾಳ್ಯ,ಕಾಮಶೆಟ್ಟಿಪಾಳ್ಯ ,ಸೋಮಜ್ಜನಪಾಳ್ಯದಲ್ಲಿ ಮಡಿಲಕ್ಕಿ ಸೇವೆ ನಡೆಯಲಿದೆ. ಜ.30 ರಂದು ಧ್ವಜಾರೋಹಣ, ಅಂಕುರಾರ್ಪಣೆ ಹಾಗೂ ಅಮ್ಮನವರ ಮಧುವಣಗಿತ್ತಿ ಸೇವೆ ನಡೆಯಲಿದೆ. ಜ.31 ರಂದು ಆರತಿ ಬಾನ ಹಾಗೂ ಎಡೆ ಸೇವೆ ನಡೆಯಲಿದೆ. ಫೆ.1 ರಂದು ಹುಳಿಯಾರು ಗ್ರಾಮದೇವತೆ ದುರ್ಗಮ್ಮ, ಕೆಂಚಮ್ಮದೇವಿ, ಕೆಂಕೆರೆ ಗೊಲ್ಲರಹಟ್ಟಿ ಕರಿಯಮ್ಮ ದೇವಿ,ಗೌಡಗೆರೆ ದುರ್ಗಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ಕಾರ್ಯ ನಡೆಯಲಿದೆ. ಸಂಜೆ ದೂತರಾಯನ ಕುಣಿತ ನಡೆಯಲಿದೆ. ಫೆ.2 ರ ಗುರುವಾರದಂದು ಬೆಳಗ್ಗೆ 8.30 ಕ್ಕೆ ಕಳಸ ಮಹೋತ್ಸವ ಹಾಗೂ ಅನ್ನಸಂತರ್ಪಣೆ ,ಫೆ.3 ರ ಶುಕ್ರವಾರದಂದು ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ ನಡೆದು ಫೆ.4 ರ ಶನಿವಾರ ಕಂಕಣವಿಸರ್ಜನೆ ,ಓಕಳಿ ಮತ್ತು ಫೆ.5 ರಂದು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಈ ಬಾರಿ ಕೆರೆಬಾವಿ ಮುಳುಗಡೆ ಆಗಿರುವುದರಿಂದ ಕಳಸದ ದಿನದಂದು ಹುಳಿಯಾರಮ್ಮನವರ ಮೂಲಸ್ಥಾನದಲ್ಲಿ ಕಳಸ ಸ್ಥಾಪಿಸಿ ನಂತರ 8:30 ರಿಂದ ಕಳಸದ ನಡೆಮುಡಿಯೊಂದಿಗೆ ಸನ್ನಿಧಾನಕ್ಕೆ ಕಳಸಗಳ ಆಗಮನವಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಜಾತ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ SSLC ವಿದ್ಯಾರ್ಥಿಗಳಿಗೆ ಟ್ಯೂಷನ್

ಹುಳಿಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಹುಳಿಯಾರು ಹೋಬಳಿಯ ಗಾಣಧಾಳು ವಲಯದ ಹೊಯ್ಸಳಕಟ್ಟೆ ಕಾರ್ಯಕ್ಷೇತ್ರ ಬೋರನಕಣಿವೆ ಪದವಿ ಪೂರ್ವ ಕಾಲೇಜಿನ SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಮೂಲಕ ತರಬೇತಿ ಹಮ್ಮಿಕೊಂಡಿದ್ದು , ತಾಲೂಕು ಯೋಜನಾಧಿಕಾರಿಗಳಾದ ಪ್ರೇಮಾನಂದ ಯಲ್. ಬಿ. ಯವರು ಗಿಡಕ್ಕೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು.  ಕಾರ್ಯಕ್ರಮದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ ಮಾತನಾಡಿದ  ತಾಲೂಕು ಯೋಜನಾಧಿಕಾರಿ ಪ್ರೇಮಾನಂದ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಎಸ್ಸೆಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಹಾಗೂ ಸಂಸ್ಥೆಗೆ ಹೆಸರು ತರುವಂತೆ ಮನವಿ ಮಾಡಿದರು.  ಪತ್ರಕರ್ತರಾದ ಲ.ಪು. ಕರಿಯಪ್ಪರವರು ಕಾರ್ಯಕ್ರಮಕ್ಕೆ ಶುಭ ಕೋರಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರಾದ ರಮೇಶ್ ರವರು ಈ ಟ್ಯೂಷನ್ ನಲ್ಲಿ ಮಕ್ಕಳ ಪಾತ್ರದ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರು, ವಲಯದ ಮೇಲ್ವಿಚಾರಕರಾದ ನರಸಿಂಹ ರಾಜು,ಸೇವಾಪ್ರತಿನಿಧಿ ನಾಗರಾಜ್ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗೌಡಗೆರೆ ದುರ್ಗಮ್ಮನ ದೇವಸ್ಥಾನ ಮುಂಭಾಗ ನಡೆದ ರಂಗೋಲಿ ಸ್ಪರ್ಧೆ

 ಹುಳಿಯಾರು: ಕೆಂಕೆರೆ ಗ್ರಾಮ ಪಂಚಾಯತ್ ವತಿಯಿಂದ ಗೌಡಗೆರೆ ದುರ್ಗಮ್ಮನ ದೇವಸ್ಥಾನ ಮುಂಭಾಗ ಆವರಣದಲ್ಲಿ ಪಂಚಾಯತಿ ವತಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಕೆಂಕೆರೆ,ಗೌಡಗೆರೆ ,ಕೆ ಸಿ ಪಾಳ್ಯ ಮಹಿಳೆಯರು ಹಾಜರಿದ್ದರು. ಪ್ರಥಮ ಬಹುಮಾನ ಗೌಡಗೆರೆ  ಲಕ್ಷ್ಮೀದೇವಮ್ಮ, ದ್ವಿತೀಯ ಬಹುಮಾನ ಲಕ್ಷ್ಮೀದೇವಿ ,ಸಮಾಧಾನಕರ ಬಹುಮಾನವನ್ನು ಜಯಲಕ್ಷ್ಮಿ, ರಂಜಿತಾ, ಪಾರ್ವತಮ್ಮ,ನಾಗವೇಣಿ, ಪುಟ್ಟಮ್ಮ ಇವರು ಪಡೆದುಕೊಂಡರು. ಅಭಿವೃದ್ಧಿ ಅಧಿಕಾರಿ ಎಮ್ ರಮೇಶ್, ಇಂದ್ರಾಣಿ, ಬಿಲ್ ಕಲೆಕ್ಟರ್ ಜಯಣ್ಣ,ವಾಟರ್ ಮ್ಯಾನ್ ಗಳು, ಸಿಬ್ಬಂದಿ ವರ್ಗ ಗ್ರಾಪಂ ಸದಸ್ಯರಾದ ಶೇಕ್ ಗೌಸ್ ಪೀರ್,ಕೆ.ಬಿ.ಮಹಾಲಕ್ಷ್ಮಿ,ಶಾಲಾ ಶಿಕ್ಷಕರಾದ ವರದಪ್ಪ, ಲಾಪು ಕರಿಯಪ್ಪ ,ಓಂಕಾರ್, ಸಂಜೀವಿನಿ ಸಂಘದ ಪದಾಧಿಕಾರಿಗಳಾದ ಎಂಬಿಕೆ ಗಾಯಿತ್ರಿ, ಎಲ್ ಸಿ ಆರ್ ಪಿ ಶಾರದಮ್ಮ ,ಲಕ್ಷ್ಮೀದೇವಿ,ಪಶು ಸಖಿ ಜಯಲಕ್ಷ್ಮಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಹುಳಿಯಾರಿನಲ್ಲಿ ಎಬಿವಿಪಿಯಿಂದ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ ,ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಳಿಯಾರು ವತಿಯಿಂದ ಹುಳಿಯಾರು- ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಪಿಯುಸಿಯ ವಿದ್ಯಾರ್ಥಿಗಳೊಂದಿಗೆ  ಆಚರಿಸಲಾಯಿತು. ನೇತಾಜಿ ಜನ್ಮದಿನವನ್ನು ಪರಾಕ್ರಮ್ ದಿವಸಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಳಿಯಾರು ವಿದ್ಯಾರ್ಥಿಗಳು ಸೇರಿ ಸುಭಾಷ್ ಚಂದ್ರ ಬೋಸ್ ಅವರ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ *ರಾಷ್ಟ್ರೀಯತೆಯ ವಿಚಾರ ಬಂದಾಗ ಎಲ್ಲವನ್ನು ಮರೆತು ಒಗ್ಗೂಡಬೇಕೆಂಬ* ಸಂಕಲ್ಪ ಮಾಡುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಮಾಡಲಾಯಿತು. ಉಪನ್ಯಾಸಕರಾದ ನರೇಂದ್ರಬಾಬು ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಕ್ರಾಂತಿಕಾರಿ ಹೋರಾಟಗಾರರಾಗಿದ್ದ ನೇತಾಜಿ ಅವರ ತ್ಯಾಗ, ನಿಷ್ಠೆ ಎಂದಿಗೂ ಸ್ಮರಣೀಯ. ಅವರ ಜೀವನ, ಕಾರ್ಯವೈಖರಿ, ಅವರು ಕೈಗೊಳ್ಳುತ್ತಿದ್ದ ನಿರ್ಧಾರಗಳು ಸದಾ ಪ್ರೇರಣದಾಯಕ. ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ನೇತಾಜಿ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ ಎಂದರು. ಕ್ರಾಂತಿಕಾರಿ ಹೋರಾಟಗಾರ ನೇತಾಜಿ: ಭಾರತದ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರಾಗಿದ್ದ, ರಾಷ್ಟ್ರಪುರುಷ , ಅಪ್ರತಿಮ ಸ್ವತಂತ್ರ ಹೋರಾಟಗಾರ , ಬ್ರಿಟಿಷರಿಗೆ ಸಿಂಹ ಸ್ವಪ್ನವಾ

ಜ.24ರ ಪ್ರಜಾ ಧ್ವನಿ ಯಾತ್ರೆ ಯಶಸ್ವಿಗೊಳಿಸಲು ಡಾ|| ಪರಮೇಶ್ವರಪ್ಪ ಕರೆ

ಇದೇ ತಿಂಗಳ 24ರಂದು ತುಮಕೂರಿನಲ್ಲಿ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆ ನಡೆಯಲಿದ್ದು ಕಾರ್ಯಕರ್ತರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಈ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿರುವ , ಜನರ ಹಿತವನ್ನು ಮರೆತು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿರುವ, ನಿರಂತರ ಬೆಲೆ ಏರಿಕೆ ಮುಖಾಂತರ ದುರಾಡಳಿತದಲ್ಲಿ ತೊಡಗಿರುವ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕೆಂದು ಕೆಪಿಸಿಸಿ ಸದಸ್ಯ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ತುಮಕೂರಿನ ಹೆಸರಾಂತ ವೈದ್ಯರಾದ ಡಾ|| ಪರಮೇಶ್ವರಪ್ಪ ಮನವಿ ಮಾಡಿದ್ದಾರೆ. ⬆️ಪ್ರಜಾಧ್ವನಿ ಯಾತ್ರೆಯ ಬಗ್ಗೆ ಡಾ|| ಪರಮೇಶ್ವರಪ್ಪ ಮಾತನಾಡಿದ್ದರ ಬಗ್ಗೆ ವಿಡೀಯೋ ವೀಕ್ಷಿಸಿ ಹುಳಿಯಾರಿನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷೆಗಳಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದ ವೈಫಲ್ಯವನ್ನು ಖಂಡಿಸಲು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿರುವ ಬಗ್ಗೆ ಜನರಿಗೆ ತಿಳಿ ಹೇಳಲು, ಜನರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಪ್ರಜಾಧ್ವನಿ ಯಾತ್ರೆ ಮಹತ್ವದ್ದಾಗಿದ್ದು, ಡಿಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್

ಹುಳಿಯಾರಿನಲ್ಲಿಂದು ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚಾರಣೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಳಿಯಾರು ಘಟಕದಿಂದ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚಾರಣೆಯನ್ನು ಹುಳಿಯಾರು- ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇಂದು 18-01-2023 ರ ಬುಧವಾರ ಬೆಳಗ್ಗೆ 11-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಮ.ನಿ.ಪ್ರ ಡಾ|| ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಉಪನ್ಯಾಸಕರು & ಸಾಮಾಜಿಕ ಕಾರ್ಯಕರ್ತರಾದ ಬೆಂಗಳೂರಿನ‌ ಶ್ರೀ ರಾಜೇಶ್ ಪದ್ಮಾರ್ , (ಅ.ಭಾ.ವಿ.ಪ) ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿಯಾದ ಕುಮಾರಿ ಪ್ರೇಮಶ್ರೀ , ಹುಳಿಯಾರು ಕೆಂಕೆರೆ  ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ ಎನ್.ಜಿ. ಕೃಷ್ಣಮೂರ್ತಿ , ತುರುವೇಕೆರೆ ಸ.ಪ್ರ.ಪ, ಕಾಲೇಜು  ಉಪನ್ಯಾಸಕರಾದ ಶ್ರೀ ನರೇಂದ್ರ ಬಾಬು ಪಾಲ್ಗೊಳ್ಳಲಿದ್ದಾರೆ. ಸಮಯ : ಬೆಳಗ್ಗೆ 11-00 ಗಂಟೆ ಸ್ಥಳ : ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ , ಹುಳಿಯಾರು -ಕೆಂಕೆರೆ

ಇಂದು ಮತ್ತು ನಾಳೆ ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ VASAVI ANNUAL UTSAV-2023 ನಡೆಯಲಿದೆ

ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ MAG Nursery, Vasavi English HPS,Vasavi English High School, T.R.S.R. High School ವಿಭಾಗಗಳಿಂದ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಜನವರಿ 18 ಹಾಗೂ ನಾಳೆ ಜನವರಿ 19 ರಂದು ಶಾಲಾ ಆವರಣದಲ್ಲಿ VASAVI ANNUAL UTSAV-2023( ವಾಸವಿ ವಾರ್ಷಿಕೋತ್ಸವ-2023) ಹಮ್ಮಿಕೊಳ್ಳಲಾಗಿದೆ. ಸಂಜೆ ಆರು ಗಂಟೆಗೆ ಉದ್ಘಾಟನಾ ಸಮಾರಂಭ, ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ, ತದನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಗುವುದು. ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

ನಾಳೆ ಹುಳಿಯಾರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ಬನಹಣ್ಣಿಮೆ ಹಾಗೂ ಶ್ರೀ ಬನಶಂಕರಿ ಕಲ್ಯಾಣ ಮಂಟಪದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ

ಹುಳಿಯಾರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ನಾಳೆ ಶುಕ್ರವಾರ ಜನವರಿ 6ನೇ ತಾರೀಖು ಬನದಹುಣ್ಣಿಮೆ ಕಾರ್ಯಕ್ರಮ ಹಾಗೂ ಶ್ರೀ ಬನಶಂಕರಿ ಕಲ್ಯಾಣ ಮಂಟಪದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಇಂದು ಜ.5ರ ಗುರುವಾರ ಸಂಜೆ ಬನಶಂಕರಿ ಅಮ್ಮನವರ ಗಂಗಾಭಾಗಿರತಿ ಪೂಜೆ, ನಂತರ ಗಣಪತಿ ಹೋಮ ,ವಾಸ್ತು ಹೋಮ,ಮಹಾಲಕ್ಷ್ಮಿ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ನಾಳೆ ಮುಂಜಾನೆ ಬನಶಂಕರಿ ಅಮ್ಮನವರಿಗೆ ವಿಶೇಷ ಅಲಂಕಾರ 10 ಗಂಟೆಗೆ ಮಡ್ಲಕ್ಕಿ ಸೇವೆ, 11:00 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ ಅಮ್ಮನವರ ಉಯ್ಯಾಲೋತ್ಸವ ನಡೆಯಲಿದೆ .

ಹುಳಿಯಾರಿನ ವಿದ್ಯಾವಾರಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಗುಣಮಟ್ಟದ NEET ತರಬೇತಿ

ಹುಳಿಯಾರು ಜ.4 : ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ, ಹುಳಿಯಾರಿನ ವಿದ್ಯಾವಾರಿಧಿ ಪದವಿ ಪೂರ್ವ ಕಾಲೇಜು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ NEET, IIT- JEE KVPY ಹಾಗೂ KCET ಪರೀಕ್ಷೆಗಳಿಗೆ, ಇಂಟಿಗ್ರೇಟೆಡ್ ಕೋಚಿಂಗ್ ಮೂಲಕ ಗುಣಮಟ್ಟದ ತರಬೇತಿಯನ್ನು ನೀಡಲಾಗುತ್ತಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ತರಬೇತಿಯನ್ನು ಪಡೆದು, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದು, ಇವರುಗಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿ ,ದೇಶದ ಪ್ರತಿಷ್ಠಿತ ಶೈಕ್ಷಣಿಕ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವಂತೆ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್‌. ಕಿರಣ್ ಕುಮಾರ್‌ರವರು ಶುಭ ಹಾರೈಸಿದರು. ವಿದ್ಯಾವಾರಿಧಿ ಪಿಯು ಕಾಲೇಜಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ಜಾಗತೀಕ ಮಟ್ಟದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಕ್ರಾಂತಿಯಲ್ಲಿ ಸ್ಪರ್ಧಿಸಲು ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಉನ್ನತ ತರಬೇತಿಯನ್ನು ನೀಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹದಾಯಕವಾಗಿ ಸಜ್ಜುಗೊಳಿಸುತ್ತಿದ್ದು, ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಪರಿಶ್ರಮದೊಂದಿಗೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಉಚಿತ ಪ್ರವೇಶವನ್ನು ಪಡ

ಧರಣಿ ಸ್ಥಳದಲ್ಲಿ ಹುಳಿಯಾರು ಹೋಬಳಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಜಯಂತಿ ಆಚರಣೆ

ಹುಳಿಯಾರು:ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ಆಡಳಿತದ ಸಮಯದಲ್ಲಿ ಮಹಿಳೆಯರ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿ ಸಮಾಜದಲ್ಲಿ ಮಹಿಳೆಗೂ ತನ್ನ ಗುರಿಯನ್ನು ಸಾಧಿಸಲು ಅವಕಾಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಅವರಾಗಿದ್ದು,ಆಕೆಯ ಹೆಸರು ಭಾರತದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಉಪನ್ಯಾಸಕ ನರೇಂದ್ರಬಾಬು ಬಣ್ಣಿಸಿದರು. ಹುಳಿಯಾರಿನ ನಾಡಕಚೇರಿ ಮುಂದೆ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿಯ ಧರಣಿಯಲ್ಲಿ, ಧರಣಿ ನಿರತರೊಂದಿಗೆ ಜ್ಯೋತಿರಾವ್ ಫುಲೆ ಜಯಂತಿ ಆಚರಿಸಿ ಉಪನ್ಯಾಸ ನೀಡಿದರು . ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆಅಪಾರವಾಗಿ ಇಂಬು ನೀಡಿದವರು.ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಈ ಧ್ಯೇಯೋದ್ಧೇಶಕ್ಕಾಗಿ ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ನಿರಂತರ ಶ್ರಮಿಸಿದ ಮಹಾನ್ ತಾಯಿ ಈಕೆ ಎಂದರು. ಸ್ವಂತ ಮಕ್ಕಳನ್ನು ಹೊಂದದೆಯೇ ಈ ದಂಪತಿಗಳು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು. ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದ ‘ಸತ್ಯಶೋಧಕ ಚಳವಳಿ' ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿ

ಹುಳಿಯಾರಿನಲ್ಲಿ ಅಗಲಿದ ಸಿದ್ದೇಶ್ವರ ಶ್ರೀ ಗಳಿಗೆ ಭಕ್ತಿ ಪ್ರಣವಾಂಜಲಿ

ನಾಡು ಕಂಡ ಅಪರೂಪದ ತತ್ವಜ್ಞಾನಿ,ಭಕ್ತರ ಪಾಲಿನ ನಡೆದಾಡವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಹುಳಿಯಾರಿನಲ್ಲಿ ಮಂಗಳವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು ಹುಳಿಯರಿನ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸರ್ಕಲ್ ನಲ್ಲಿ ಶ್ರೀಗಳ ಭಕ್ತಗಣ ಅಗಲಿದ ಸ್ವಾಮೀಜಿಗಳಿಗೆ ಭಕ್ತಿ ಪ್ರಣವಾಂಜಲಿ ಅರ್ಪಿಸಿದರು. ಶ್ರೀಗಳು ಅತ್ಯಂತ ಸರಳಭಾಷೆಯಲ್ಲಿ ಶ್ರೀಸಾಮಾನ್ಯರಿಗೆ ತಮ್ಮ ಪ್ರವಚನ ಮೂಲಕ ಜ್ಞಾನಾರ್ಜನೆಯನ್ನು ಎರೆದು, ಅವರ ಹೃದಯದೊಳಗೆ ಸ್ಥಾಪಿತರಾಗಿದ್ದ, ಪ್ರವಚನ ಸಂತ ಎಂದೇ ಖ್ಯಾತರಾಗಿದ್ದ ಸಿದ್ದೇಶ್ವರ ಶ್ರೀಗಳು ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಬಾಳಿ ಬದುಕಿ,ತಮ್ಮ ಸರಳತೆಯ ಮೂಲಕವೇ ಆದರ್ಶಪ್ರಾಯರಾಗಿದ್ದರು, ಅವರು ಕರ್ನಾಟಕದ ಅಮೂಲ್ಯ ರತ್ನ ಎಂದು ಎಂದು ಭಕ್ತರು ಭಾವುಕರಾಗಿ ನುಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಈಶ್ವರಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕ ಭರತ್ ಹುಳಿಯಾರು,ಬ್ಯಾಂಕ್ ಶ್ರೀಧರ್,ಗಂಗಣ್ಣ, ಎಲ್ಐಸಿ ಚಂದ್ರಪ್ಪ, ಕೈಲಾಸ್ ಮೂರ್ತಿ, ಕರುಣಾಕರ್, ಸಜ್ಜಾದ್, ಬಸವರಾಜು ಮತ್ತಿತರರಿದ್ದರು.