ಮೊದಲಿಗೆ ರಾಷ್ಟ್ರಗೀತೆ, ನಾಡಗೀತೆಯನ್ನು ಹಾಡಿ, ನಂತರ ಕನ್ನಡ ಮಾತೆ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ತದನಂತರ ಕನ್ನಡದ ಪ್ರಸಿದ್ಧ ಕವಿಗಳಾದ ಹುಯಿಲಗೋಳ ನಾರಾಯಣರಾಯರು, ಕುವೆಂಪು, ದ.ರಾ.ಬೇಂದ್ರೆ, ಸಿದ್ದಯ್ಯ ಪುರಾಣಿಕ ಮತ್ತು ಚನ್ನವೀರ ಕಣವಿಯವರು ರಚಿಸಿರುವ, ಸರ್ಕಾರ ನಿಗದಿಪಡಿಸಿರುವ, ಒಟ್ಟು 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿನಮನವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ. ವೀರಣ್ಣ ಎಸ್.ಸಿ. ಅವರು ಮಾತನಾಡಿ ನಮ್ಮ ನಮ್ಮ ಕಾರ್ಯವನ್ನು ಭಾರ ಎಂದು ಭಾವಿಸದೆ ವಚನಕಾರರ “ಕಾಯಕವೇ ಕೈಲಾಸ” ಎಂಬ ನುಡಿಯಂತೆ ಮನಃಪೂರ್ವಕವಾಗಿ ಮಾಡಿದರೆ, ಅದೇ ನಾವು ನಮ್ಮ ನಾಡಿಗೆ ಸಲ್ಲಿಸಬಹುದಾದ ಸೇವೆ ಎಂದು ಅಭಿಪ್ರಾಯಪಟ್ಟರು.
ಅದಕ್ಕೂ ಮೊದಲು ಪ್ರಾಸ್ತಾವಿಕ ನುಡಿಗಳನ್ನು ಆಡಿದ ಕನ್ನಡ ಉಪನ್ಯಾಸಕರಾದ ಶ್ರೀ ಚಂದ್ರಹಾಸ್ ಬಿ.ಆರ್. ಅವರು ಕನ್ನಡ ರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ಕುರಿತು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಕರ್ನಾಟಕ ಏಕೀಕರಣದ ಹಿನ್ನೆಲೆ, ಕನ್ನಡ ನಾಡು-ನುಡಿ ಅಭಿಮಾನ, ಕನ್ನಡದ ಅಸ್ಮಿತೆ ಮತ್ತು ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಕುರಿತು ಮಾತನಾಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಲ್ಲಿಕಾರ್ಜುನ ಅವರು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕನ್ನಡ ಉಳಿಯಬೇಕಾದರೆ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಯೋಗೀಶ್ ಬಿ. ಮಾತನಾಡಿ ಕನ್ನಡಾಭಿಮಾನಕ್ಕಾಗಿ ಕನ್ನಡ ಬಳಸುವುದರ ಜೊತೆಗೆ ಈ ಸ್ಪರ್ಧಾತ್ಮಕ ಯುಗದಲ್ಲಿ ಹೊರ ಜಗತ್ತಿನೊಂದಿಗೆ ವ್ಯವಹರಿಸಲು ನಿಮಗೆ ಅಗತ್ಯವಾದ ಮತ್ತೊಂದು ಭಾಷೆಯನ್ನೂ ಕಲಿಯಬೇಕು. ಆ ಮೂಲಕ ಕನ್ನಡವನ್ನು ಹೊರಜಗತ್ತಿಗೂ ಹಬ್ಬಿಸಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ತಿಪ್ಪೇಸ್ವಾಮಿ ಅವರು ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು’ ಎಂಬ ಕವಿವಾಣಿಯಂತೆ ಯುವಕರು ಕನ್ನಡ ಚಳುವಳಿಗಳೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿನಿಯರಾದ ರೂಪ ಕೆ.ಇ., ಪ್ರಥಮ ಬಿ.ಎ., ಮತ್ತು ರಕ್ಷಿತ, ಪ್ರಥಮ ಬಿ.ಕಾಂ., ಇವರು ಕನ್ನಡ ರಾಜ್ಯೋತ್ಸವವನ್ನು ಕುರಿತು ಭಾಷಣ ಮಾಡಿದರು. ಲಾವಣ್ಯ ಮತ್ತು ಸಾನಿಯಾ – ಈ ಎರಡೂ ತಂಡದವರು ಸಾಮೂಹಿಕ ಕನ್ನಡ ಗೀತೆಗಳನ್ನು ಹಾಡಿದರು. ರಂಜಿತ ಆರ್. ಕನ್ನಡ ನಾಡನ್ನು ಕುರಿತ ತಮ್ಮ ಸ್ವರಚಿತ ಕವಿತೆಯನ್ನು ವಾಚಿಸಿದರು. ರಕ್ಷಿತ ಮತ್ತು ತಂಡದವರು ಆರಂಭಗೀತೆಯನ್ನು ಹಾಡಿದರು. ಕೋಮಲ ಎನ್. ಸ್ವಾಗತಿಸಿದರು. ದಿವ್ಯ ಆರ್. ವಂದಿಸಿದರು. ದಿವ್ಯ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು.
ಐ.ಕ್ಯೂ.ಎ.ಸಿ. ಸಂಚಾಲಕಾದ ಪ್ರೊ. ಮಂಜುನಾಥ ಕೆ.ಎಸ್., ಆಂಗ್ಲ ಭಾಷಾ ವಿಭಾಗದ ಡಾ. ಜಯಶ್ರೀ ಬಿ. ಕದ್ರಿ ಮತ್ತು ಡಾ. ಸುಷ್ಮಾ ಎಲ್. ಬಿರಾದಾರ್, ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ಸಂಗೀತ ಪಿ. ಮತ್ತು ಶ್ರೀಮತಿ ಲಾವಣ್ಯ ಪಿ., ಇತಿಹಾಸ ವಿಭಾಗದ ಶ್ರೀ ಕುಮಾರಸ್ವಾಮಿ ಕೆ.ಸಿ. ಮತ್ತು ಅರ್ಥಶಾಸ್ತ್ರ ವಿಭಾಗದ ಶ್ರೀ ಶಂಕರ್ ಕೆ.ಎಂ., ಕಾಲೇಜಿನ ದ್ವಿತೀಯ ದರ್ಜೆ ಸಹಾಯಕಾದ ಶ್ರೀ ರಮೇಶ್ ಆರ್.ಡಿ. ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ