ಚಿಕ್ಕನಾಯಕನಹಳ್ಳಿ ನೆಹರೂ ಸರ್ಕಲ್ನಲ್ಲಿ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಮತ್ತು ಪ್ರಗತಿಪರ ಚಿಂತಕರಿಂದ ಮಹಾ ಮಾನವತಾವಾದಿಗೆ ಭವ್ಯ ನುಡಿ ನಮನ!
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 70ನೇ ಪರಿನಿಬ್ಬಾಣ ದಿನವನ್ನು (ಮಹಾಪರಿನಿರ್ವಾಣ ದಿನ) ಚಿಕ್ಕನಾಯಕನಹಳ್ಳಿಯ ನೆಹರೂ ಸರ್ಕಲ್ನಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ, ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕ್ಯಾಂಡಲ್ ಹಚ್ಚುವ ಮೂಲಕ ಮಹಾನ್ ನಾಯಕನಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸಿ. ಡಿ. ಚಂದ್ರಶೇಖರ್, ಡಿ.ಎಸ್.ಎಸ್ ಸಂಚಾಲಕರಾದ ರಮೇಶ್, ಬೇವಿನಹಳ್ಳಿ ಚನ್ನಬಸವಯ್ಯ, ತರಬೇನಹಳ್ಳಿ ಷಡಕ್ಷರಿ ಶಂಕರಲಿಂಗಪ್ಪ, ಅಗಸರಹಳ್ಳಿ ನರಸಿಂಮೂರ್ತಿ, ಅಶ್ರಿಹಾಲ್ ಆನಂದ್, ಸಿ. ಬಿ ರೇಣುಕಾಸ್ವಾಮಿ, ಜಕನಹಳ್ಳಿ ಮಂಜುನಾಥ, ಕಂಟಲಗೆರೆ ಮಂಜುನಾಥ್, ಕೃಷ್ಣೆಗೌಡರು, ಜಾಕಿರ್, ಪಾಂಡು, ನಿoಗರಾಜು, ಕರಿಯಪ್ಪ, ಹನುಮಯ್ಯ ಹಾಗೂ ದೊಂಬಿದಾಸರ ಮುಖಂಡರು ರಂಗನಾಥ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿ ಡಾ. ಅಂಬೇಡ್ಕರ್ ಅವರಿಗೆ ನುಡಿ ನಮನ ಸಲ್ಲಿಸಿದರು.
ಡಾ. ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ಸಮಾನತೆಯ ಸಂದೇಶವನ್ನು ಮುಂದುವರೆಸುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಎಲ್ಲರೂ ಕೈಗೊಂಡರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ