ತುಮಕೂರಿನ ಶ್ರೀ ಮಂಜುನಾಥೇಶ್ವರ ಯೋಗ ಪ್ರತಿಷ್ಠಾನ ಸಂಸ್ಥೆಯವರು ಹೋಬಳಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವರ ಸಂಯುಕ್ತಾಶ್ರಯದಲ್ಲಿ ನಾಳೆ (ತಾ.8) ಶುಕ್ರವಾರದಿಂದ ತಾ.17ರ ಭಾನುವಾರದವರೆಗೆ 10 ದಿನಗಳ ಕಾಲ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಹಾಗೂ ಸಂಜೆ 5.30 ರಿಂದ 6.30 ರವರೆಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಮದಲ್ಲಿ ಉಚಿತ ಯೋಗ,ಪ್ರಾಣಾಯಾಮ,ಮುದ್ರಾ ಶಿಬಿರವನ್ನು ಆಯೋಜಿಸಿದ್ದಾರೆ.
ಶಿಬಿರದಲ್ಲಿ ಮಧುಮೇಹ,ರಕ್ತದೊತ್ತಡ,ಥೈರಾಯಿಡ್,ದೇಹತೂಕ ಹೆಚ್ಚಾಗಿರುವುದು,ಕಡಿಮೆ ಇರುವುದು,ಮಾನಸಿಕ ಖಿನ್ನತೆ,ನಿದ್ರಾಕೊರತೆ,ಬೆನ್ನು ನೋವು,ಹಿಮ್ಮಡಿನೋವು,ಆಸ್ತಮಾ,ಗ್ಯಾಸ್ಟ್ರಿಕ್,ಹೊಟ್ಟೆ ಉಬ್ಬರ,ಕೂದಲು ಉದರುವಿಕೆ,ತಲೆನೋವು ಸೇರಿದಂತೆ ಇತರೆ ವಿವಿಧ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ವಿಶೇಷ ಮುದ್ರೆ,ಆಕ್ಯುಪ್ರೆಶರ್ ಬಿಂದು ಹಾಗೂ ಯೋಗ ಚಿಕಿತ್ಸೆ ಮೂಲಕ ಅವರು ಈ ತೊಂದರೆಗಳಿಂದ ಮುಕ್ತವಾಗುವಂತೆ ಮಾಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ 9844010386,8277568538 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ