ಶುಕ್ರವಾರ ಬೀಗ ತೆರವು
ಉದ್ಯೋಗಖಾತ್ರಿ ಕಾಮಗಾರಿಗಳ ಹಣ ಬಿಡುಗಡೆ ವಿಳಂಬ ಖಂಡಿಸಿ ಫಲಾನುಭವಿಗಳು ಗ್ರಾ.ಪಂಗೆ
ಬೀಗ ಜಡಿದು ಪ್ರತಿಭಟಿಸಿದ ಘಟನೆ ಹೋಬಳಿಯ ಗಾಣಧಾಳು ಗ್ರಾಮದಲ್ಲಿ ಗುರುವಾರ ನಡೆಯಿತು.
ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಸರಸ್ವತಿಬಾಯಿ ಸಾಮಾನ್ಯ ಸಭೆ ಕರೆದಿದ್ದರು.
ವಿಷಯ ತಿಳಿದ ಗ್ರಾಮಸ್ಥರು ಸಭೆಯ ನಡುವೆಯೇ ಉದ್ಯೋಗ ಖಾತ್ರಿ ಹಣ ಪಾವತಿಗೆ ಒತ್ತಾಯಿಸಿದರು. ‘ಮೊದಲು ನಮ್ಮ ಕೂಲಿ ಹಣ ಕೊಡಿ, ಆಮೇಲೆ ನಿಮ್ಮ ಸಭೆ ನಡೆಸಿ’ ಎಂದಾಗ ಗ್ರಾಪಂ ಸದಸ್ಯರುಗಳು ಅವರುಗಳ ಬೆಂಬಲಕ್ಕೆ ನಿಂತರು. ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಹುದಿ– ಬದು ನಿರ್ಮಾಣ, ಕೊಟ್ಟಿಗೆ ಮನೆ, ಇಂಗುಗುಂಡಿ ಸೇರಿದಂತೆ ಅನೇಕ ಕಾಮಗಾರಿ ಪೂರ್ಣಗೊಂಡು 2 ವರ್ಷ ಕಳೆದರೂ ರೈತರಿಗೆ ಹಣ ಸಂದಾಯವಾಗಿಲ್ಲ ಎಂದು ದೂರಿ ಕಾಮಗಾರಿಯ ಹಣ ಪಾವತಿಗೆ ಪಟ್ಟು ಹಿಡಿದರು. ಗ್ರಾಪಂ ಕಾರ್ಯದರ್ಶಿಯಿಂದ ಸಮಂಜಸವಾದ ಉತ್ತರ ಬಾರದಿದ್ದರಿಂದ ಸದಸ್ಯರೂ ಸಭೆಯಿಂದ ಹೊರಬಂದರಿಂದ ರೊಚಿಗೆದ್ದ ಫಲಾನುಭವಿಗಳು ಕಚೇರಿಗೆ ಬೀಗ ಜಡಿದು ಹಣ ಪಾವತಿ ಆಗುವವರೆಗೂ ಬೀಗ ತೆರೆಯುವುದಿಲ್ಲವೆಂದು ಪಟ್ಟು ಹಿಡಿದರು.
2012-13 ನೇ ಸಾಲಿನ 172 ಮಂದಿಗೆ ಶೌಚಾಲಯದ ಸಪ್ಲೆ ಬಿಲ್ 1199 ರೂ. ಪಾವತಿ ಆಗಿಲ್ಲ. 2012-13 ನೇ ಸಾಲಿನ ಕೆಲವರಿಗೆ ಕಾಮಗಾರಿಯ ಹಣ ಬಂದಿಲ್ಲ.ಕೆಲ ಕಾಮಗಾರಿಗಳ ಎನ್ಎಂಆರ್ ಹಣ ಬಂದಿದೆಯಾದರೂ ಸರಕುಗಳ ಬಿಲ್ ಪಾವತಿಯಾಗಿಲ್ಲ. ಕೆಲ ಬೇಕಾದವರಿಗೆ ಪೂರ್ತಿ ಹಣ ಪಾವತಿಯಾಗಿದ್ದು ಹಣ ನೀಡುವಲ್ಲೂ ತಾರತಮ್ಯ ಮಾಡಲಾಗಿದೆ.ರೈತರ ಕಾಮಗಾರಿಗಳ ಹಣ ಮಂಜೂರಿಗೆ ಮಾತ್ರ ವಿಳಂಬ ಮಾಡುತ್ತಿದ್ದಾರೆ. ಅದರೆ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿರುವ ಗುತ್ತಿಗೆದಾರರಿಗೆ ಹಣ ನೀಡಿದ್ದಾರೆ ಎಂದು ಕೆಲವರು ಆರೋಪಿಸಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಕಾರ್ಯದರ್ಶಿ ಜ್ಞಾನಮೂರ್ತಿ ಕಾಮಗಾರಿ ಬಿಲ್ ಆಧಾರ್ ಕಾರ್ಡ್ ಎಂಟ್ರಿ ಇಲ್ಲದವರಿಗೆ ಪಾವತಿಯಾಗಿಲ್ಲ ಉಳಿದವರಿಗೆ ಪಾವತಿಯಾಗಿದೆ. ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ತೊಂದರೆ ಮಾಡಿಲ್ಲ ಎಂದರಾದರೂ ಇವರ ಉತ್ತರಕ್ಕೆ ಫಲಾನುಭವಿಗಳು ತೃಪ್ತರಾಗದೆ ಮೇಲಧಿಕಾರಿಗಳು ಬಂದು ಸ್ಪಷ್ಟ ಭರವಸೆ ನೀಡದ ವಿನಃ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಮುಖಂಡರಾದ ಎಂ.ಎಸ್.ಶಕ್ತಿಪ್ರಸಾದ್, ಜಿ.ಬಿ.ಪ್ರಕಾಶ್, ಜಿ.ಟಿ.ತಿಮ್ಮಯ್ಯ, ಪರಮೇಶ್, ಪುಟ್ಟರಾಜು ಇತರರು ಇದ್ದರು.
-------------
ಶುಕ್ರವಾರದಂದು ಉದ್ಯೋಗಖಾತ್ರಿ ಉಸ್ತುವಾರಿ ಅಧಿಕಾರಿ ರವೀಂದ್ರ ಗಾಣಧಾಳುವಿಗೆ ಭೇಟಿ ನೀಡಿ ಪ್ರತಿಭಟನ ನಿರತರೊಂದಿಗೆ ಸಮಾಲೋಚಿಸಿ ಎಲ್ಲರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
-------------------
ಹುಳಿಯಾರು ಹೋಬಳಿ ಗಾಣಧಾಳು ಗ್ರಾಮ ಪಂಚಾಯ್ತಿಗೆ ನರೇಗಾ ಕಾಮಗಾರಿ ಬಿಲ್ ಪಾವತಿಸಲು ಒತ್ತಾಯಿಸಿ ಬೀಗಜಡಿದು ಪ್ರತಿಭಟಿಸಿದರು.
|
ಬೀಗ ಜಡಿದು ಪ್ರತಿಭಟಿಸಿದ ಘಟನೆ ಹೋಬಳಿಯ ಗಾಣಧಾಳು ಗ್ರಾಮದಲ್ಲಿ ಗುರುವಾರ ನಡೆಯಿತು.
ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಸರಸ್ವತಿಬಾಯಿ ಸಾಮಾನ್ಯ ಸಭೆ ಕರೆದಿದ್ದರು.
ವಿಷಯ ತಿಳಿದ ಗ್ರಾಮಸ್ಥರು ಸಭೆಯ ನಡುವೆಯೇ ಉದ್ಯೋಗ ಖಾತ್ರಿ ಹಣ ಪಾವತಿಗೆ ಒತ್ತಾಯಿಸಿದರು. ‘ಮೊದಲು ನಮ್ಮ ಕೂಲಿ ಹಣ ಕೊಡಿ, ಆಮೇಲೆ ನಿಮ್ಮ ಸಭೆ ನಡೆಸಿ’ ಎಂದಾಗ ಗ್ರಾಪಂ ಸದಸ್ಯರುಗಳು ಅವರುಗಳ ಬೆಂಬಲಕ್ಕೆ ನಿಂತರು. ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಹುದಿ– ಬದು ನಿರ್ಮಾಣ, ಕೊಟ್ಟಿಗೆ ಮನೆ, ಇಂಗುಗುಂಡಿ ಸೇರಿದಂತೆ ಅನೇಕ ಕಾಮಗಾರಿ ಪೂರ್ಣಗೊಂಡು 2 ವರ್ಷ ಕಳೆದರೂ ರೈತರಿಗೆ ಹಣ ಸಂದಾಯವಾಗಿಲ್ಲ ಎಂದು ದೂರಿ ಕಾಮಗಾರಿಯ ಹಣ ಪಾವತಿಗೆ ಪಟ್ಟು ಹಿಡಿದರು. ಗ್ರಾಪಂ ಕಾರ್ಯದರ್ಶಿಯಿಂದ ಸಮಂಜಸವಾದ ಉತ್ತರ ಬಾರದಿದ್ದರಿಂದ ಸದಸ್ಯರೂ ಸಭೆಯಿಂದ ಹೊರಬಂದರಿಂದ ರೊಚಿಗೆದ್ದ ಫಲಾನುಭವಿಗಳು ಕಚೇರಿಗೆ ಬೀಗ ಜಡಿದು ಹಣ ಪಾವತಿ ಆಗುವವರೆಗೂ ಬೀಗ ತೆರೆಯುವುದಿಲ್ಲವೆಂದು ಪಟ್ಟು ಹಿಡಿದರು.
2012-13 ನೇ ಸಾಲಿನ 172 ಮಂದಿಗೆ ಶೌಚಾಲಯದ ಸಪ್ಲೆ ಬಿಲ್ 1199 ರೂ. ಪಾವತಿ ಆಗಿಲ್ಲ. 2012-13 ನೇ ಸಾಲಿನ ಕೆಲವರಿಗೆ ಕಾಮಗಾರಿಯ ಹಣ ಬಂದಿಲ್ಲ.ಕೆಲ ಕಾಮಗಾರಿಗಳ ಎನ್ಎಂಆರ್ ಹಣ ಬಂದಿದೆಯಾದರೂ ಸರಕುಗಳ ಬಿಲ್ ಪಾವತಿಯಾಗಿಲ್ಲ. ಕೆಲ ಬೇಕಾದವರಿಗೆ ಪೂರ್ತಿ ಹಣ ಪಾವತಿಯಾಗಿದ್ದು ಹಣ ನೀಡುವಲ್ಲೂ ತಾರತಮ್ಯ ಮಾಡಲಾಗಿದೆ.ರೈತರ ಕಾಮಗಾರಿಗಳ ಹಣ ಮಂಜೂರಿಗೆ ಮಾತ್ರ ವಿಳಂಬ ಮಾಡುತ್ತಿದ್ದಾರೆ. ಅದರೆ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿರುವ ಗುತ್ತಿಗೆದಾರರಿಗೆ ಹಣ ನೀಡಿದ್ದಾರೆ ಎಂದು ಕೆಲವರು ಆರೋಪಿಸಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಕಾರ್ಯದರ್ಶಿ ಜ್ಞಾನಮೂರ್ತಿ ಕಾಮಗಾರಿ ಬಿಲ್ ಆಧಾರ್ ಕಾರ್ಡ್ ಎಂಟ್ರಿ ಇಲ್ಲದವರಿಗೆ ಪಾವತಿಯಾಗಿಲ್ಲ ಉಳಿದವರಿಗೆ ಪಾವತಿಯಾಗಿದೆ. ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ತೊಂದರೆ ಮಾಡಿಲ್ಲ ಎಂದರಾದರೂ ಇವರ ಉತ್ತರಕ್ಕೆ ಫಲಾನುಭವಿಗಳು ತೃಪ್ತರಾಗದೆ ಮೇಲಧಿಕಾರಿಗಳು ಬಂದು ಸ್ಪಷ್ಟ ಭರವಸೆ ನೀಡದ ವಿನಃ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಮುಖಂಡರಾದ ಎಂ.ಎಸ್.ಶಕ್ತಿಪ್ರಸಾದ್, ಜಿ.ಬಿ.ಪ್ರಕಾಶ್, ಜಿ.ಟಿ.ತಿಮ್ಮಯ್ಯ, ಪರಮೇಶ್, ಪುಟ್ಟರಾಜು ಇತರರು ಇದ್ದರು.
-------------
ಶುಕ್ರವಾರದಂದು ಉದ್ಯೋಗಖಾತ್ರಿ ಉಸ್ತುವಾರಿ ಅಧಿಕಾರಿ ರವೀಂದ್ರ ಗಾಣಧಾಳುವಿಗೆ ಭೇಟಿ ನೀಡಿ ಪ್ರತಿಭಟನ ನಿರತರೊಂದಿಗೆ ಸಮಾಲೋಚಿಸಿ ಎಲ್ಲರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
-------------------
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ