ಹುಳಿಯಾರು ಅಮಾನಿಕೆರೆಯಲ್ಲಿರುವ ಅಲೆಮಾರಿ ನಿರ್ಗತಿಕರಿಗೆ ತುರ್ತು ಶಾಶ್ವತ ವಸತಿ ಕಲ್ಪಿಸಿ ಕೆರೆ ಅಂಗಳದಿಂದ ತೆರವುಗೊಳಿಸಿ ಜೀವ ಕಾಪಾಡುವಂತೆ ಮನವಿ
🖋🖊ವರದಿ : ಮಲ್ಲಿಕಾರ್ಜುನ ಭಟ್ಟರಹಳ್ಳಿ.
ತುಮಕೂರು ಜಿಲ್ಲೆˌಚಿಕ್ಕನಾಯಕನಹಳ್ಳಿ ತಾಲ್ಲೂಕ್ ಹುಳಿಯಾರು ಪಟ್ಟಣಪಂಚಾಯ್ತಿಗೆ ಹೊಂದಿಕೊಂಡಿರುವ ಸಣ್ಣನೀರಾವರಿ ಇಲಾಖೆಯ ನಿರ್ವಹಣೆಯಲ್ಲಿರುವ ಹುಳಿಯಾರು ಅಮಾನಿಕೆರೆಗೆ ಈ ಭಾಗದಲ್ಲಿ ವ್ಶಾಪಕ ಮಳೆಯಾಗುತ್ತಿರುವುದರಿಂದ ಯಥೇಚ್ಛ ನೀರು ಹರಿದುಬರುತ್ತಿದ್ದು ಸಂತಸದ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದಾಗಿ ಆತಂಕಕ್ಕೂ ಕಾರಣವಾಗಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ದೂರಿದ್ದಾರೆ.
ಈ ಬಗ್ಗೆ ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ದೂರು ಸಲ್ಲಿಸಿರುವ ಅವರು ಸಮಸ್ಯೆ ಬಗ್ಗೆ ವಿವರಣೆ ನೀಡಿದ್ದಾರೆ.
ಸಾರಾಂಶ: ಮೇಲ್ಕಂಡ ಕೆರೆಯಂಗಳದಲ್ಲಿ ಹಲವಾರು ವರ್ಷಗಳಿಂದ ಸುಮಾರು 50ಕ್ಕೂ ಹೆಚ್ಚು ನಿರ್ಗತಿಕ ಅಲೆಮಾರಿ ಕುಟುಂಬಗಳು ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ತಾವೂ ಸಹ ಎಲ್ಲರಂತೆ ಗೌರವದಿಂದ ಬದುಕಲು ಸರ್ಕಾರ ಮೂಲಭೂತ(ನಿವೇಶನˌಮನೆˌವ್ಶವಸಾಯಕ್ಕಾಗಿ ಭೂಮಿ) ಅವಶ್ಶಕತೆಗಳನ್ನು ಕಲ್ಪಿಸಿಕೊಂಡಬೇಕೆಂದು ಹಲವಾರು ವರ್ಷಗಳಿಂದ ನಿರಂತರ ಧ್ವನಿ ಎತ್ತಿ ಅಹೋರಾತ್ರಿ ಧರಣಿ ಸೇರಿದಂತೆ ಸಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯಿಂದ ಎಲ್ಲಾ ರೀತಿಯ ಪ್ರತಿಭಟನೆ ˌಮನವಿ ಸಲ್ಲಿಸಿದ್ದಾರೆ. ಹುಳಿಯಾರಿನ ಧರಣಿ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ಮತ್ತು ಹಾಲೀ ರಾಜ್ಶ ಸಮಾಜಕಲ್ಶಾಣ ಇಲಾಖೆ ಆಯುಕ್ತರಾದ ಡಾ.ರಾಕೇಶ್ ಕುಮಾರ್ ಒಂದು ತಿಂಗಳೊಳಗೆ ಸೂಕ್ತ ಜಾಗ ಗುರುತಿಸಿ ಪರ್ಯಾಯ ಎಲ್ಲಾ ವ್ಶವಸ್ಥೆ ಕಲ್ಪಿಸಿ ನೀವೂ ಸಹ ಗೌರವದಿಂದ ಮನುಷ್ಶರಂತೆ ಬದುಕುವ ಸಂವಿಧಾನ ಬದ್ಧ ಹಕ್ಕನ್ನು ಜಿಲ್ಲಾಡಳಿತ ನೀಡುತ್ತದೆ ಎಂದು ಹೇಳಿ 5ವರ್ಷವಾಗುತ್ತಾ ಬಂದಿದ್ದರೂ ಸಹ ಯಾವುದೇ ರೀತಿಯ ಭರವಸೆ ಈಡೇರಿಸಿಲ್ಲ.
IAS ಸೇರಿದಂತೆ ಕೆಳಹಂತದ ಅಧಿಕಾರಿಗಳೂ ಸಹ ಜನಪ್ರತಿನಿಧಿಗಳ ರೀತಿ ಸುಳ್ಳು ಭರವರಸೆ ನೀಡುವ ಚಾಳಿ ಬೆಳೆಸಿಕೊಂಡಿರುವುದು ಈ ಸಂವಿಧಾನಕ್ಕೆ ಮತ್ತು ಜನರ ವಿಶ್ವಾಸಕ್ಕೆ ಮಾಡುವ ಘಾತುಕತನ ನಿಜಕ್ಕೂ ಅತ್ಶಂತ ಖಂಡನೀಯ ಮತ್ತು ದಂಡನಾರ್ಹವಾದ ಕರ್ತವ್ಶಲೋಪ.
ಕಂದಾಯˌ ಸರ್ವೆˌನಗರಾಭಿವೃದ್ಧಿˌಸಮಾಜಕಲ್ಶಾಣˌಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಮನ್ವಯತೆ ಇಲ್ಲದ ಬೇಜವಾಬ್ದಾರಿಯಿಂದ ಇಂದಿಗೂ ಸಹ ಈ ಅಲೆಮಾರಿ ಕುಟುಂಬಗಳು ಹುಳಿಯಾರು ಅಮಾನಿಕೆರೆಯಲ್ಲೇ ಜೀವ ಭಯದಿಂದ ಬದುಕುವ ವಾತಾವರಣ ಇದೆ.
ವ್ಶಾಪಕ ಮಳೆಯಿಂದ ಹುಳಿಯಾರು ಕೆರೆ ಯಾವಾಗ ಬೇಕಾದರೂ ಸಹ ತುಂಬಬಹುದು. ನೀರಿಲ್ಲದ ಕೆರೆಯಲ್ಲಿದ್ದ ವಿಷಕಾರಿ ಜಂತುಗಳು ಈಗ ಈ ಅಲೆಮಾರಿ ಕುಟುಂಬಗಳ ಗುಡಿಸಲುಗಳನ್ನು ವಾಸಕ್ಕಾಗಿ ಆಶ್ರಯಿಸಿದಾಗ ಆಗುವ ಮನುಷ್ಶರ ಪ್ರಾಣಹಾನಿಗೆ ಯಾರು ಹೊಣೆ..? ಮುಂದಾಲೋಚನೆ ˌಮುಂಜಾಗ್ರತೆಯ ಜವಾಬ್ದಾರಿಯಿಲ್ಲದ ತಾಲ್ಲೋಕು ಮತ್ತು ಜಿಲ್ಲಾಡಳಿತಕ್ಕೆ ಅಮಾಯಕ ಜನರ ಬಲಿಬೇಕಾ..?
ಈ ಅಲೆಮಾರಿಕುಟುಂಬಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ಮೀಸಲಾದ ಹಣ ವೆಚ್ಚಮಾಡಿ ತಮ್ಮ ಕರ್ತವ್ಶ ನಿರ್ವಹಿಸಲು ಯೋಗ್ಯತೆಇಲ್ಲದ ˌಮಾನವೀಯ ಸಂವೇದನೆಗಳಿಲ್ಲದ ಅಧಿಕಾರಿಗಳಿಗೆ ಇನ್ನೂ ಸರ್ಕಾರಿ ಸೇವೆಯಲ್ಲಿ ಮುಂದುವರೆಯಲು ಯಾವ ಅರ್ಹತೆ ಇದೆ..?
ಇಡೀ ತುಮಕೂರು ಜಿಲ್ಲೆಯಲ್ಲಿ ಅಲೆಮಾರಿಗಳು ˌನಿರ್ಗತಿಕರು ˌಭೂರಹಿತರಿಗೆ ಭೂಮಿ-ವಸತಿ ನೀಡುವ ವಿಷಯದಲ್ಲಿ ಜಿಲ್ಲೆ ಮತ್ತು ತಾಲ್ಲೋಕು ಆಡಳಿತ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಇಡೀ ನಾಗರೀಕಸಮಾಜ ತಲೆತಗ್ಗಿಸುವಂತಿದೆ.
"ಸಂಬಳ ನನ್ನ ಹಕ್ಕು-ಗಿಂಬಳ ನನ್ನ ತಾಕತ್ತು-ಕೆಲಸ ನನ್ನ ಮರ್ಜಿ" ಎನ್ನುವ ಧೋರಣೆಯಿಂದ ಅಧಿಕಾರಿಗಳು ಹೊರಬಂದು ತಕ್ಷಣವೇ ಹುಳಿಯಾರು ಕೆರೆಯಲ್ಲಿ ವಾಸವಿರುವ ಅಲೆಮಾರಿ ಕುಟುಂಬಗಳನ್ನು ಶಾಶ್ವತ ವ್ಶವಸ್ಥೆಗೆ ಸ್ಥಳಾಂತರಿಸಿ ಜನರ ಜೀವ ಕಾಪಾಡಬೇಕು ಹಾಗೂ ಈ ಪ್ರಕರಣದಲ್ಲಿ ಕರ್ತವ್ಶಲೋಪ ಎಸಗಿರುವ ಜಿಲ್ಲಾಡಳಿತದ ಸಂಭಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳ ವಿರುದ್ಧ ಮೊಕದ್ದೊಮ್ಮೆ ದಾಖಲಿಸಿ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಗೌರವದಿಂದ ಈ ವ್ಶವಸ್ಥೆಯಲ್ಲಿ ಬದುಕಲು ನ್ಶಾಯ ದೊರಕಿಸಿಕೊಡುವಂತೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ(ರಿ) ಅಧ್ಶಕ್ಷರಾದ ಮಲ್ಲಿಕಾರ್ಜುನ ಭಟ್ಟರಹಳ್ಳಿ (9880665397) ಸರ್ಕಾರದ ಮುಖ್ಯ ಕಾರ್ಯದರ್ಶಿ,ಜಿಲ್ಲಾಧಿಕಾರಿ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳಲ್ಲೂ, ಲೋಕಾಯುಕ್ತ ಅಧಿಕಾರಿಗಳಲ್ಲೂ ಮನವಿ ಮಾಡಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ