ಹುಳಿಯಾರು: "ರಾಷ್ಟ್ರೀಕೃತ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಇವು ಜನರಿಂದ ಜನರಿಗಾಗಿ ಜನರ ಅಭಿವೃದ್ಧಿಗೋಸ್ಕರ ನಿರಂತರವಾಗಿ ಶ್ರಮಿಸುತ್ತಿವೆ," ಎಂದು ಹಂದನಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಟಿ. ಎಂ. ಶಿವಣ್ಣ ಅವರು ಹೇಳಿದರು.
ಅವರು ಇತ್ತೀಚೆಗೆ ಹಂದನಕೆರೆ ಸರಕಾರಿ ಪಿಯು ಕಾಲೇಜಿನ ಆವರಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರತಾ ಸಲಹಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ 'ಜನ ಸುರಕ್ಷಾ ಶಿಬಿರ' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ಆರ್. ಎಮ್. ಕುಮಾರಸ್ವಾಮಿ ಮಾತನಾಡಿ "ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳಡಿಯಲ್ಲಿ ಜನರು ಬ್ಯಾಂಕುಗಳ ಮುಖಾಂತರ ನೋಂದಾಯಿಸಿಕೊಂಡಲ್ಲಿ, ಸಹಜ ಅಥವಾ ಅಪಘಾತದ ಮರಣದ ಸಂದರ್ಭದಲ್ಲಿಯೂ ₹2 ಲಕ್ಷದ ವಿಮಾ ಪರಿಹಾರ ದೊರೆಯುತ್ತದೆ," ಎಂದು ವಿವರಿಸಿದರು. ಈ ಯೋಜನೆಗಳಿಂದ ಈಗಾಗಲೇ ಲಕ್ಷಾಂತರ ಜನರು ಲಾಭ ಪಡೆದಿರುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು ರಂಗನಾಥ, ಶಶಿಕುಮಾರ್, ಮಣಿಕಂಠಸ್ವಾಮಿ, ಸಿಬ್ಬಂದಿ ಚನ್ನಬಸಪ್ಪ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ತಮ್ಮಣ್ಣ ಅವರು ಪಾಲ್ಗೊಂಡಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ